ಗನ್ ಮಿಸ್‌ಫೈರ್ ಆಗಿ ದುರಂತ ಸಾವಿಗೀಡಾದ ಸೇನಾ ಜವಾನ್

ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಪಾಪಿನೆನಿಪಲ್ಲಿ ಗ್ರಾಮದವರಾದ ತಮ್ಮಿನೆನಿ ಅಶೋಕ್ ಕುಮಾರ್ ಮೃತ ದುರ್ದೈವಿ.

Last Updated : Jul 9, 2019, 11:16 AM IST
ಗನ್ ಮಿಸ್‌ಫೈರ್ ಆಗಿ ದುರಂತ ಸಾವಿಗೀಡಾದ ಸೇನಾ ಜವಾನ್  title=
Pic Courtesy: ANI

ಆಂಧ್ರಪ್ರದೇಶ: ಜಮ್ಮುವಿನಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸೇನಾ ಜವಾನ್ ಗನ್ ಮಿಸ್‌ಫೈರ್ ಆಗಿ ಮೃತಪಟ್ಟಿರುವ ದುರಂತ ಘಟನೆ ಸೋಮವಾರ ಸಂಭವಿಸಿದೆ.

ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಪಾಪಿನೆನಿಪಲ್ಲಿ ಗ್ರಾಮದವರಾದ ತಮ್ಮಿನೆನಿ ಅಶೋಕ್ ಕುಮಾರ್ ಮೃತ ದುರ್ದೈವಿ ಆಗಿದ್ದು, ಅವರು ಅವಿವಾಹಿತರಾಗಿದ್ದರು ಎಂದು ತಿಳಿದುಬಂದಿದೆ. 

ಅಶೋಕ್ ಅವರ ತಂದೆ ನರಸಿಂಹ ರಾವ್ ಮತ್ತು ತಾಯಿ ಕಸಮ್ಮ ತಮ್ಮ ಮಗನ ದುರಂತ ಸಾವಿನ ಬಗ್ಗೆ ಮಾಹಿತಿ ನೀಡಿದ್ದಾರೆ.

ಮೃತ ಅಶೋಕ್ ಕುಮಾರ್ ಅವರಿಗೆ ಭಾರತೀಯ ಸೇನೆಯಲ್ಲಿ ಕೆಲಸ ಮಾಡುತ್ತಿರುವ ಸುರೇಶ್ ಬಾಬು ಎಂಬ ಸಹೋದರ ಕೂಡ ಇದ್ದರು ಎಂದು ತಿಳಿದುಬಂದಿದೆ.

ಎರಡು ಅಥವಾ ಮೂರು ದಿನಗಳಲ್ಲಿ ತಮ್ಮ ಮಗನ ದೇಹವು ತಮ್ಮ ಮನೆಗೆ ತಲುಪಲಿದೆ ಎಂದು ಸೇನಾಧಿಕಾರಿಗಳು ತಿಳಿಸಿರುವುದಾಗಿ ಮೃತ ಜವಾನ್ ಪೋಷಕರು ಸುದ್ದಿ ಸಂಸ್ಥೆ ಎಎನ್ಐಗೆ ತಿಳಿಸಿದ್ದಾರೆ. 

Trending News