ಅಯೋಧ್ಯೆ ತೀರ್ಪಿನ ಬಳಿಕ ಇಂದು ಸುನ್ನಿ ವಕ್ಫ್ ಮಂಡಳಿಯ ಮಹತ್ವದ ಸಭೆ

ಸುನ್ನಿ ವಕ್ಫ್ ಮಂಡಳಿಯ ಈ ಸಭೆಯನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಬೆಳಿಗ್ಗೆ 11 ಗಂಟೆಗೆ ಆರಂಭವಾಗಲಿರುವ ಸುನ್ನಿ ವಕ್ಫ್ ಮಂಡಳಿ ಸಭೆಯಲ್ಲಿ, ಮಂಡಳಿಯು ಸುಪ್ರೀಂ ಕೋರ್ಟ್‌ನ ತೀರ್ಪಿನ ಕುರಿತು ತನ್ನ ಮುಂದಿನ ಕಾರ್ಯತಂತ್ರವನ್ನು ಚರ್ಚಿಸುತ್ತದೆ ಎಂದು ಹೇಳಲಾಗುತ್ತಿದೆ.  

Last Updated : Nov 26, 2019, 09:22 AM IST
ಅಯೋಧ್ಯೆ ತೀರ್ಪಿನ ಬಳಿಕ ಇಂದು ಸುನ್ನಿ ವಕ್ಫ್ ಮಂಡಳಿಯ ಮಹತ್ವದ ಸಭೆ  title=

ಲಕ್ನೋ: ಅಯೋಧ್ಯೆ ಪ್ರಕರಣ(Ayodhya case)ದಲ್ಲಿ ಸುಪ್ರೀಂ ಕೋರ್ಟ್(Supreme Court) ನೀಡಿದ ತೀರ್ಪಿನ ನಂತರ ಅಯೋಧ್ಯೆಯ ವಾತಾವರಣ ತಿಳಿಯಾಗಿದೆ. ಆದರೆ ನಿರ್ಧಾರದ ನಂತರ, ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ(All India Muslim Personal Law Board) , ಅಲ್ಲಿ ಮರುಪರಿಶೀಲನಾ ಅರ್ಜಿ ಸಲ್ಲಿಸಲು ಮುಂದಾಗಿದೆ. ಏತನ್ಮಧ್ಯೆ, ಸುನ್ನಿ ವಕ್ಫ್ ಮಂಡಳಿ(Sunni Central Waqf Board)ಯ ಮಹತ್ವದ ಸಭೆ ಮಂಗಳವಾರ (ನವೆಂಬರ್ 26) ನಡೆಯಲಿದೆ.

ಅಯೋಧ್ಯೆ ಪ್ರಕರಣದ ಐತಿಹಾಸಿಕ ತೀರ್ಪು ಪ್ರಕಟಿಸಿದ 'ಪಂಚ' ನ್ಯಾಯಮೂರ್ತಿಗಳ ಬಗ್ಗೆ ನಿಮಗೆಷ್ಟು ಗೊತ್ತು!

ಸುನ್ನಿ ವಕ್ಫ್ ಮಂಡಳಿಯ ಈ ಸಭೆಯನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಬೆಳಿಗ್ಗೆ 11 ಗಂಟೆಗೆ ಆರಂಭವಾಗಲಿರುವ ಸುನ್ನಿ ವಕ್ಫ್ ಮಂಡಳಿ ಸಭೆಯಲ್ಲಿ, ಮಂಡಳಿಯು ಸುಪ್ರೀಂ ಕೋರ್ಟ್‌ನ ತೀರ್ಪಿನ ಕುರಿತು ತನ್ನ ಮುಂದಿನ ಕಾರ್ಯತಂತ್ರವನ್ನು ಚರ್ಚಿಸುತ್ತದೆ ಎಂದು ಹೇಳಲಾಗುತ್ತಿದೆ.

ಈ ಸಭೆಯ ನಂತರ ಅಯೋಧ್ಯೆಯ ವಿಷಯದಲ್ಲಿ ಸುನ್ನಿ ವಕ್ಫ್ ಮಂಡಳಿ ಮುಂದಿನ ಹೆಜ್ಜೆ ಏನೆಂದು ನಿರ್ಧರಿಸುವ ಸಾಧ್ಯತೆ ಇರುವುದರಿಂದ ಈ ಸಭೆಯನ್ನು ವಿಶೇಷ ಎಂದು ಹೇಳಲಾಗುತ್ತಿದೆ. ಆದರೆ, ಈ ಸಭೆಯಲ್ಲಿ ಮರುಪರಿಶೀಲನೆ ಅರ್ಜಿಯೊಂದಿಗೆ ಮಸೀದಿ ಭೂಮಿಯನ್ನು ತೆಗೆದುಕೊಳ್ಳಬೇಕೇ? 5 ಎಕರೆ ಭೂಮಿಯಲ್ಲಿ ಮಸೀದಿ ನಿರ್ಮಾಣ ಮತ್ತು 5 ಎಕರೆ ಜಮೀನನ್ನು ಎಲ್ಲಿ ಪಡೆಯಬೇಕು ಎಂಬ ಎಲ್ಲಾ ವಿಚಾರಗಳ ಬಗ್ಗೆ ಚರ್ಚಿಸುವ ಸಾಧ್ಯತೆಯಿದೆ.

ಅಯೋಧ್ಯೆ ತೀರ್ಪಿನ ಹೈಲೈಟ್ಸ್

ಅಯೋಧ್ಯೆಯ ವಿವಾದಿತ ಸ್ಥಳದಲ್ಲಿ ಶಿಯಾ ವಕ್ಫ್ ಮಂಡಳಿ, ನಿರ್ಮೋಹಿ ಅಖಾಡದ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್, ನಿರ್ಮೋಹಿ ಅಖಾಡದ ವಾದಕ್ಕೆ ಇತಿಮಿತಿ ಇದೆ ಎಂದು ತಿಳಿಸಿತ್ತು. ರಾಮಲಲ್ಲಾ ಪ್ರಮುಖ ಅರ್ಜಿದಾರ ಎಂದು ಪರಿಗಣಿಸಿದ್ದ ನ್ಯಾಯಾಲಯವು, ವಿವಾದಿತ 2.77 ಎಕರೆ ಭೂಮಿಯ ಸಂಪೂರ್ಣ ಹಕ್ಕು ರಾಮ ಲಲ್ಲಾ ಹಕ್ಕು ಎಂದು ಆದೇಶ ನೀಡಿದೆ. ಜೊತೆಗೆ ಅಯೋಧ್ಯೆಯಲ್ಲಿಯೇ ಬೇರೆ ಸ್ಥಳದಲ್ಲಿ ಮಸೀದಿ ನಿರ್ಮಿಸಲು ಐದು ಎಕರೆ ಭೂಮಿಯನ್ನು ನೀಡುವಂತೆ ಆದೇಶಿಸಿದೆ. 

Trending News