ಕೇರಳ ಪ್ರವಾಹಕ್ಕೆ ಕಾಣಿಕೆ ನೀಡಿ ಸಿಎಂ ಪಿನರಾಯಿ ವಿಜಯನ್ ಗೆ ಪತ್ರ ಬರೆದ ಬಂಗಾಳಿ ಬಾಲೆ

ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯ ಕೇಂದ್ರೀಯ ವಿದ್ಯಾಲಯದಲ್ಲಿ ಎಂಟನೆ ತರಗತಿಯಲ್ಲಿ ಓದುತ್ತಿರುವ  ಸುಲಗ್ನಾ ಸೆನ್ ಎನ್ನುವ ಬಾಲಕಿ ಈಗ  ತನ್ನ ಹುಟ್ಟುಹಬ್ಬಕ್ಕೆ  ಎಂದು ಕೂಡಿಟ್ಟ 3280 ರೂಗಳನ್ನು  ಕೇರಳ ಮುಖ್ಯಮಂತ್ರಿಗೆ ಪಿನರಾಯಿ ವಿಜಯನ್ ಅವರಿಗೆ ತಲುಪಿಸಿದ್ದಾಳೆ.

Last Updated : Sep 11, 2018, 01:19 PM IST
ಕೇರಳ ಪ್ರವಾಹಕ್ಕೆ ಕಾಣಿಕೆ ನೀಡಿ ಸಿಎಂ ಪಿನರಾಯಿ ವಿಜಯನ್ ಗೆ ಪತ್ರ ಬರೆದ ಬಂಗಾಳಿ ಬಾಲೆ title=

ನವದೆಹಲಿ: ಪಶ್ಚಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯ ಕೇಂದ್ರೀಯ ವಿದ್ಯಾಲಯದಲ್ಲಿ ಎಂಟನೆ ತರಗತಿಯಲ್ಲಿ ಓದುತ್ತಿರುವ ಸುಲಗ್ನಾ ಸೆನ್ ಎನ್ನುವ ಬಾಲಕಿ ಈಗ ತನ್ನ ಹುಟ್ಟುಹಬ್ಬಕ್ಕೆ ಎಂದು ಕೂಡಿಟ್ಟ 3280 ರೂಗಳನ್ನು ಕೇರಳ ಪ್ರವಾಹ ನಿಧಿಗೆ ಮುಖ್ಯಮಂತ್ರಿಗೆ ಪಿನರಾಯಿ ವಿಜಯನ್ ಅವರಿಗೆ ತಲುಪಿಸಿದ್ದಾಳೆ.ಈಗ ಆಕೆ ಬರೆದ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. 

ಈ ಕುರಿತಾಗಿ ಮುಖ್ಯಮಂತ್ರಿ ಪಿನರಾಯಿ ವಿಜಯನ್ ಅವರಿಗೆ ಪತ್ರ ಬರೆದಿರುವ ಬಾಲಕಿ" 

ಗೌರವಾನ್ವಿತ ವಿಜಯನ್ ಅಂಕಲ್ 
ಕೇರಳ ಮುಖ್ಯಮಂತ್ರಿಗಳು

"ನಾನು 13 ವರ್ಷದ  ಬಾಲಕಿ ಎಂಟನೆ ತರಗತಿಯಲ್ಲಿ ಓದುತ್ತಿದ್ದೇನೆ. ಇಂದು ನನ್ನ ಹುಟ್ಟುಹಬ್ಬ(ಅಗಸ್ಟ್ 29). ನಾನು 3280 ರೂಗಳನ್ನು ಒಳ್ಳೆಯ ಉದ್ದೇಶಕ್ಕಾಗಿ ಉಪಯೋಗಿಸುವ ನಿಟ್ಟಿನಲ್ಲಿ ಖರ್ಚು ಕಡಿತ ಮಾಡಿ ಕೂಡಿಟ್ಟಿದ್ದೇನೆ.ಟಿವಿಯಲ್ಲಿ ನಾನು ಕೇರಳ ಪ್ರವಾಹದ ಭೀಕರ ಸ್ಥಿತಿಯನ್ನು ನೋಡಿದ್ದೇನೆ.ಇದು ನನ್ನ ಹೃದಯಯವನ್ನು ಕಲಕಿದೆ.ಆದ್ದರಿಂದ ನಾನು ಈಗ ಎಲ್ಲ ಕೂಡಿಟ್ಟ ಹಣವನ್ನು ಕೇರಳ ಪ್ರವಾಹ ನಿಧಿಗೆ ನೀಡಲು ನಿರ್ಧರಿಸಿದ್ದೇನೆ. ಇಂದು ನಾನು ಇಎಂಓ ಮೂಲಕ 3280 ರೂಗಳನ್ನು ಕಳಿಸಿದ್ದೇನೆ. ದಯವಿಟ್ಟು ಈ ನನ್ನ ಪುಟ್ಟ ಕಾಣಿಕೆಯನ್ನು ಸ್ವೀಕರಿಸಿ ನನ್ನನ್ನು ಹರಸಿ.

ಧನ್ಯವಾದಗಳು 
ಸುಲಗ್ನಾ ಸೇನ್
ತರಗತಿ 8

 

Trending News