ಕೇರಳದಲ್ಲಿ ಭೂಮಿ ಕುಸಿದು 8 ಸಾವು

    

Last Updated : Jun 15, 2018, 08:32 PM IST
ಕೇರಳದಲ್ಲಿ ಭೂಮಿ ಕುಸಿದು 8 ಸಾವು  title=
Photo courtesy: ANI

ಕೊಚ್ಚಿ: ಕೇರಳದ ಕಟ್ಟಿಪಾರದಲ್ಲಿ ಭೂಕುಸಿತದ ಪರಿಣಾಮವಾಗಿ ಸುಮಾರು ಎಂಟು ಮಂದಿ ಮೃತಪಟ್ಟಿದ್ದಾರೆ. ಎಂದು ಹೇಳಲಾಗಿದೆ 

ಕರಿಂಕೋಲಾ, ಪುಲ್ಲುರಾನ್ಪಾರ ಮತ್ತು ಚಾಮಲ್ ಪ್ರದೇಶಗಳಲ್ಲಿ ಭೂಕುಸಿತಗಳು ಉಂಟಾಗಿದ್ದರಿಂದಾಗಿ ಸಾವು ನೋವು ಸಂಭವಿಸಿದೆ. ಈಗಾಗಲೇ ಹುಡುಕಾಟ ಕಾರ್ಯಾಚರಣೆ ನಡೆದಿದ್ದು ಇನ್ನು ಆರು ಜನರಿಗಾಗಿ ಶೋಧನೆ ಮುಂದುವರೆದಿದೆ ಎಂದು ತಿಳಿದುಬಂದಿದೆ.

ಮಾನ್ಸೂನ್ ಆರಂಭವಾದಾಗಿನಿಂದ ಕೇರಳದಲ್ಲಿ ಸಾಕಷ್ಟು ಹಾನಿ ಸಂಭವಿಸಿತ್ತು ಅಲ್ಲದೆ ವಿಪರೀತ ಪ್ರವಾಹದ ಕಾರಣದಿಂದಾಗಿ ಇಲ್ಲಿನ ಸಾಕಷ್ಟು ಜನರನ್ನು ಪರಿಹಾರ ಶಿಬಿರಗಳಿಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿದು ಬಂದಿದೆ.

ಕಳೆದ ವಾರದಂದು ಭೀಕರ ಮಳೆಯ ಕಾರಣದಿಂದಾಗಿ ಹದಿಮೂರಕ್ಕೂ ಅಧಿಕ ಜನರು ಸಾವನ್ನಪ್ಪಿದ್ದರು. ಅಲ್ಲದೆ ಇಡುಕ್ಕಿ ಹಾಗೂ ಇನ್ನಿತರ ಭಾಗಗಳಲ್ಲಿ  ಪ್ರವಾಹದಿಂದಾಗಿ ಸಾಕಷ್ಟು  ಬೆಳೆಹಾನಿ ಸಂಭವಿಸಿತ್ತು ಎಂದು ತಿಳಿದುಬಂದಿದೆ.

Trending News