2ಜಿ ಹಗರಣ: ಇದರಲ್ಲಿ ಯಾವುದೇ ಹುರುಳಿಲ್ಲ ಎಂಬ ನನ್ನ ವಾದ ಸಾಬೀತಾಗಿದೆ- ಕಪಿಲ್ ಸಿಬಲ್

ಮಾಜಿ ಕೇಂದ್ರ ಸಚಿವ ಪಿ.ಚಿದಂಬರಂ ಅವರು ಈ ಹಗರಣದ ವಿಷಯ ತಪ್ಪಾಗಿದೆ ಎಂದು ಹೇಳಿದ್ದೆ, ಈಗ ಅದು ಸಾಬೀತಾಗಿದೆ.

Last Updated : Dec 21, 2017, 12:12 PM IST
2ಜಿ ಹಗರಣ: ಇದರಲ್ಲಿ ಯಾವುದೇ ಹುರುಳಿಲ್ಲ ಎಂಬ ನನ್ನ ವಾದ ಸಾಬೀತಾಗಿದೆ- ಕಪಿಲ್ ಸಿಬಲ್ title=

ನವ ದೆಹಲಿ: 2 ಜಿ ಸ್ಪೆಕ್ಟ್ರಂ ಹಂಚಿಕೆ ಹಗರಣದಲ್ಲಿ, ವಿಶೇಷ ನ್ಯಾಯಾಲಯದ ಪಟಿಯಾಲಾ ಹೌಸ್ ಗುರುವಾರ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿತು. ಸಿಬಿಐ ವಿಶೇಷ ನ್ಯಾಯಾಮೂರ್ತಿ ಒ.ಪಿ. ಸೈನಿ ಎಲ್ಲ ಆರೋಪಿಗಳನ್ನು 1.76 ಲಕ್ಷ ಕೋಟಿ ರೂ.ಗಳ ಹಗರಣದಲ್ಲಿ ಖುಲಾಸೆಗೊಳಿಸಿದ್ದು, ಈ ಆರೋಪಗಳನ್ನು ಸಾಬೀತುಪಡಿಸಲು ವಿಫಲವಾಗಿದೆ ಎಂದು ತಿಳಿಸಿದ್ದಾರೆ. ನ್ಯಾಯಾಲಯದ ನಿರ್ಧಾರದ ನಂತರ, ಮಾಜಿ ಕೇಂದ್ರ ಸಚಿವ ಮತ್ತು ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್ ಅವರ ಪ್ರತಿಕ್ರಿಯೆ ಬಂದಿದ್ದು, "ನನ್ನ ವಾದವು ಸರಿಯಾಗಿ ಸಾಬೀತಾಗಿದೆ. 2ಜಿ ಹಗರಣದಲ್ಲಿ ಯಾವುದೇ ಹುರುಳಿಲ್ಲ ಎಂದು ನಾನು ಈಗಾಗಲೇ ಹೇಳಿದ್ದೆ ಎಂದು ತಿಳಿಸಿದ್ದಾರೆ.

2 ಜಿ ಸ್ಪೆಕ್ಟ್ರಮ್ ಹಂಚಿಕೆಗೆ ಸಂಬಂಧಿಸಿದಂತೆ ಯಾವುದೇ ಹಗರಣವಿಲ್ಲ ಎಂದು ನಾನು ಈಗಾಗಲೇ ಹೇಳಿದ್ದೇನೆ ಎಂದು ಸಿಬಲ್ ಹೇಳಿದರು. ನನ್ನ ಶೂನ್ಯ ಲೂಸ್ ಥಿಯರಿ ಸಾಬೀತಾಗಿದೆ ಎಂದು ಹೇಳಿದ ಅವರು 'ನಂತರ ಸಿಎಜಿ ವಿನೋದ್ ರಾಯ್ ಕ್ಷಮೆ ಯಾಚಿಸಿದ್ದಾರೆ'.

ಅದೇ ಸಮಯದಲ್ಲಿ ಮಾಜಿ ಕೇಂದ್ರ ಸಚಿವ ಪಿ. ಚಿದಂಬರಂ ಅವರು ಈ ಹಗರಣವು ತಪ್ಪು ಎಂದು ಹೇಳಿದ್ದೆ, ಇಂದು ಅದು ಸಾಬೀತಾಗಿದೆ ಎಂದು ಹೇಳಿದ್ದಾರೆ.

1.76 ಲಕ್ಷ ಕೋಟಿ ರೂ. 2 ಜಿ ಸ್ಪೆಕ್ಟ್ರಂ ಹಗರಣದ ಆರು ವರ್ಷಗಳ ನಂತರ ವಿಶೇಷ ಸಿಬಿಐ ನ್ಯಾಯಾಲಯವು ಎಲ್ಲ ಆರೋಪಿಗಳನ್ನು ಗುರುವಾರ ಖುಲಾಸೆಗೊಳಿಸಿದೆ ಎಂದು ಹೇಳಿದೆ. ಈ ಪ್ರಕರಣದಲ್ಲಿ ಡಿಎಂಕೆ ನಾಯಕ ಎ. ರಾಜಾ ಮತ್ತು ಡಿಎಂಕೆ ಸಂಸದೆ ಕನಿಮೋಳಿ ಸೇರಿದಂತೆ 17 ಆರೋಪಿಗಳಿದ್ದರು. ನ್ಯಾಯಾಲಯದ ನಿರ್ಧಾರದ ನಂತರ, ರಕ್ಷಣಾ ವಕೀಲ ಹರಿಹರನ್ ಅವರು ಇಡೀ ಪ್ರಕರಣವು ಗ್ರಹಿಕೆಯನ್ನು ಆಧರಿಸಿದೆ ಎಂದು ಹೇಳಿದರು. ಈ ನಿಟ್ಟಿನಲ್ಲಿ ಯಾವುದೇ ಪುರಾವೆಗಳನ್ನು ನೀಡಲಾಗುವುದಿಲ್ಲ ಎಂದು ನ್ಯಾಯಾಲಯವು ಕಂಡುಹಿಡಿದಿದೆ. ಆದ್ದರಿಂದ, ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಲಾಗಿದೆ. ನ್ಯಾಯಾಲಯದಲ್ಲಿ ಈ ತೀರ್ಮಾನಕ್ಕೆ ಮುಂಚಿತವಾಗಿನ್ಯಾಯಾಲಯದ ಮುಂದೆ ಒಂದು ದೊಡ್ಡ ಗುಂಪಿನ ಜನರ ಸಮೂಹವೇ ನೆರೆದಿತ್ತು. ತೀರ್ಪು ಹೊರಬಂದ ನಂತರ ಅವರ ಬೆಂಬಲಿಗರು ನ್ಯಾಯಾಲಯದ ಮುಂದೆಯೇ ಸಂಭ್ರಮಾಚರಣೆ ನಡೆಸಿದರು.

ಯುಪಿಎ ಸರ್ಕಾರದ ಅವಧಿಯಲ್ಲಿ ಈ ಹಗರಣ ಸಂಭವಿಸಿದೆ. 2 ಜಿ ಹಗರಣದಲ್ಲಿ ಸಿಬಿಐ ಮತ್ತು ಇಡಿ ಸಲ್ಲಿಸಿದ ವಿವಿಧ ಪ್ರಕರಣಗಳ ಕುರಿತು ವಿಚಾರಣೆ ನಡೆಸಿದ್ದ ವಿಶೇಷ ಸಿಬಿಐ ನ್ಯಾಯಾಧೀಶ ಒ.ಪಿ. ಸೈನಿ ಈ ಬಗ್ಗೆ ತೀರ್ಪು ಪ್ರಕಟಿಸಿದ್ದಾರೆ.

Trending News