Health Tips: ಇನ್ನಿಲ್ಲದಂತೆ ಕಾಡುವ ತಲೆನೋವಿಗೆ ಈ 3 ಆಯುರ್ವೇದದ ಗಿಡಮೂಲಿಕೆ ಬಳಸಿ

ಮಾನಸಿಕ ಆರೋಗ್ಯ ಸಲಹೆ: ದೈಹಿಕ ಆರೋಗ್ಯದ ಜೊತೆಗೆ ನಾವು ಮಾನಸಿಕ ಆರೋಗ್ಯದ ಬಗ್ಗೆಯೂ ಸಮಾನ ಕಾಳಜಿ ತೆಗೆದುಕೊಳ್ಳಬೇಕು. ಸಾಮಾನ್ಯವಾಗಿ ಅನೇಕರಿಗೆ ತಲೆಯಲ್ಲಿ ಭಾರದ ಸಮಸ್ಯೆ ಕಾಡುತ್ತದೆ. ಇದಕ್ಕೆ ನೀವು ಕೆಲವು ಸುಲಭವಾದ ಆಯುರ್ವೇದ ಚಿಕಿತ್ಸೆಗಳನ್ನು ತೆಗೆದುಕೊಳ್ಳಬಹುದು.

Written by - Puttaraj K Alur | Last Updated : Nov 5, 2023, 12:13 PM IST
  • ಬ್ರಾಹ್ಮಿಯನ್ನು ಸೇವಿಸುವುದಿರಂದ ಮಾನಸಿಕ ಭಾರ ಮತ್ತು ಆಯಾಸದಿಂದ ಪರಿಹಾರ ಸಿಗುತ್ತದೆ
  • ಆಯುರ್ವೇದ ಔಷಧವಾಗಿರುವ ಅಶ್ವಗಂಧವು ಮಾನಸಿಕ ಅಸ್ವಸ್ಥತೆ ಮತ್ತು ತಲೆಯ ಭಾರಕ್ಕೆ ಉತ್ತಮ ಚಿಕಿತ್ಸೆ
  • ಶಂಖಪುಷ್ಪಿಯ ಸೇವನೆಯು ಮೆದುಳಿಗೆ ಮಾತ್ರವಲ್ಲದೇ ದೇಹಕ್ಕೂ ಅಷ್ಟೇ ಪ್ರಯೋಜನಕಾರಿ
Health Tips: ಇನ್ನಿಲ್ಲದಂತೆ ಕಾಡುವ ತಲೆನೋವಿಗೆ ಈ 3 ಆಯುರ್ವೇದದ ಗಿಡಮೂಲಿಕೆ ಬಳಸಿ title=
ತಲೆನೋವಿಗೆ ಆಯುರ್ವೇದ ಚಿಕಿತ್ಸೆ

ನವದೆಹಲಿ: ನಮ್ಮಲ್ಲಿ ಅನೇಕರು ಮಾನಸಿಕ ಆರೋಗ್ಯವನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಆದರೆ ದೈಹಿಕ ಆರೋಗ್ಯದ ಜೊತೆಗೆ ಮಾನಸಿಕ ಆರೋಗ್ಯವೂ ಅಷ್ಟೇ ಮುಖ್ಯ ಎಂಬುದನ್ನು ನಾವು ಮರೆಯುತ್ತೇವೆ. ಈ ಬಗ್ಗೆ ಕಾಳಜಿ ವಹಿಸದಿದ್ದರೆ ಹಲವು ರೀತಿಯ ಸಮಸ್ಯೆಗಳು ಎದುರಾಗುತ್ತವೆ. ಇತ್ತೀಚಿನ ದಿನಗಳಲ್ಲಿ ಜನರು ಅನೇಕ ರೀತಿಯ ಒತ್ತಡ ಎದುರಿಸಬೇಕಾಗುತ್ತದೆ. ಇದರಿಂದಾಗಿ ದೇಹದಲ್ಲಿ ಭಾರವು ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನೋವು ನಿವಾರಕಗಳು ಅಥವಾ ಇನ್ನಾವುದೇ ಔಷಧವನ್ನು ತೆಗೆದುಕೊಳ್ಳುವುದು ಅಪಾಯಕಾರಿ. ಏಕೆಂದರೆ ಸಂಶೋಧನೆಯು ಇದರ ಅನೇಕ ಅಡ್ಡಪರಿಣಾಮಗಳನ್ನು ಬಹಿರಂಗಪಡಿಸಿದೆ. ಇದಕ್ಕೆ ಸ್ವಲ್ಪ ಆಯುರ್ವೇದ ಚಿಕಿತ್ಸೆ ಪಡೆಯುವುದು ಉತ್ತಮ.

ತಲೆಯ ಭಾರಕ್ಕೆ ಆಯುರ್ವೇದ ಚಿಕಿತ್ಸೆ

ತಲೆಯಲ್ಲಿ ಭಾರವಾಗಲು ಅಥವಾ ಮಾನಸಿಕ ಆಯಾಸಕ್ಕೆ ಹಲವು ಕಾರಣಗಳಿರಬಹುದು. ಇದು ದೀರ್ಘಕಾಲದ ಅನಾರೋಗ್ಯ, ಕೆಲಸದ ಒತ್ತಡ, ದೀರ್ಘಕಾಲದವರೆಗೆ ಔಷಧಿ ತೆಗೆದುಕೊಳ್ಳುವುದು ಅಥವಾ ವೈಯಕ್ತಿಕ ಸಮಸ್ಯೆಗಳನ್ನು ಒಳಗೊಂಡಿರುತ್ತದೆ. ಇದಕ್ಕಾಗಿ ನೀವು 3 ವಿಧದ ಆಯುರ್ವೇದ ಔಷಧಿಗಳನ್ನು ತೆಗೆದುಕೊಳ್ಳಬಹುದು. ಇವುಗಳ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಇದನ್ನೂ ಓದಿ: ಮಧುಮೆಹಿಗಳಿಗೆ ಮೂರು ಗಿಡಗಳು ವರದಾನವಿದ್ದಂತೆ, ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗಲು ಇವು ಅನುಮತಿಸುವುದಿಲ್ಲ!

1. ಬ್ರಾಹ್ಮಿ: ಮಾನಸಿಕ ಆಯಾಸ ಮತ್ತು ತಲೆಯ ಭಾರದಿಂದ ಬಳಲುತ್ತಿರುವ ಜನರು ಆಗಾಗ್ಗೆ ಜ್ಞಾಪಕ ಶಕ್ತಿ ಕಳೆದುಕೊಳ್ಳಬೇಕಾಗುತ್ತದೆ. ಇದನ್ನು ಹೋಗಲಾಡಿಸಲು ನೀವು ಬ್ರಾಹ್ಮಿಯನ್ನು ಸೇವಿಸಬಹುದು. ಇದು ಮಾನಸಿಕ ಭಾರ ಮತ್ತು ಆಯಾಸದಿಂದ ಪರಿಹಾರವನ್ನು ನೀಡುತ್ತದೆ.

2. ಅಶ್ವಗಂಧ: ಅಶ್ವಗಂಧ ಒಂದು ಆಯುರ್ವೇದ ಔಷಧವಾಗಿದ್ದು, ಮಾನಸಿಕ ಅಸ್ವಸ್ಥತೆ ಮತ್ತು ತಲೆಯ ಭಾರಕ್ಕೆ ಉತ್ತಮ ಚಿಕಿತ್ಸೆ ಎಂದು ಪರಿಗಣಿಸಲಾಗಿದೆ. ನೀವು ಮಾನಸಿಕ ಮತ್ತು ಉದ್ವೇಗದಿಂದ ಮುಕ್ತವಾಗಿರಲು ಈ ವಿಶೇಷ ಆಯುರ್ವೇದಿಕ್ ಔಷಧ ಬಳಸಬಹುದು. ಇದರಲ್ಲಿರುವ ಗುಣಗಳು ನಮ್ಮ ಮೆದುಳಿಗೆ ಎಲ್ಲ ರೀತಿಯಲ್ಲೂ ಪ್ರಯೋಜನವನ್ನು ನೀಡುತ್ತದೆ.

3. ಶಂಖಪುಷ್ಪಿ: ಶಂಖಪುಷ್ಪಿಯ ಸೇವನೆಯು ಮೆದುಳಿಗೆ ಮಾತ್ರವಲ್ಲದೇ ದೇಹಕ್ಕೂ ಅಷ್ಟೇ ಪ್ರಯೋಜನಕಾರಿ. ಇದನ್ನು ಆಯುರ್ವೇದದ ಸಂಪತ್ತು ಎಂದು ಕರೆದರೆ ಬಹುಶಃ ತಪ್ಪಾಗಲಾರದು. ಇದು ಮನಸ್ಸಿನ ಭಾರವನ್ನು ಹೋಗಲಾಡಿಸುತ್ತದೆ. ಈ ಹೂವಿನಿಂದ ಮಾಡಿದ ಶರಬತ್ತು ಅಥವಾ ಸಿರಪ್ ಅನ್ನು ನೀವು ಕುಡಿಯಬಹುದು.

ಇದನ್ನೂ ಓದಿ: ಕೆಟ್ಟ ಕೊಲೆಸ್ಟ್ರಾಲ್ ಗೆ ಮಾರಕ ಈ ಹಣ್ಣು, ಇಂದಿನಿಂದಲೇ ಸೇವನೆ ಆರಂಭಿಸಿ!

(ಗಮನಿಸಿರಿ: ಇಲ್ಲಿ ನೀಡಿರುವ ಸಲಹೆ ಪಾಲಿಸುವ ಮೊದಲು ನೀವು ಕಡ್ಡಾಯವಾಗಿ ವೈದ್ಯರ ಸಲಹೆ ಪಡೆದುಕೊಳ್ಳಬೇಕು.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News