ಈ 5 ಅಂಗಗಳು ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾದಾಗ ಸಂಕೇತ ನೀಡುತ್ತವೆ..! ನಿರ್ಲಕ್ಷಿಸಬೇಡಿ

Diabetes causes : ಮಧುಮೇಹ ಬರುವ ಕುರಿತು ಜನರಿಗೆ ಸುಳಿವು ಸಿಗುವುದಿಲ್ಲ. ಆದರೆ ನಮ್ಮ ದೇಹದ ಕೆಲವು ಭಾಗಗಳು ಸರಿಯಾದ ಸಮಯಕ್ಕೆ ಸಂಕೇತಗಳನ್ನು ನೀಡಲು ಪ್ರಾರಂಭಿಸುತ್ತವೆ. ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟ ಹೆಚ್ಚಾಗಿದೆ ಎಂದು ನೀವು ಹೇಗೆ ಅರ್ಥಮಾಡಿಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳಬೇಕು.. ಹೇಗೆ ಅಂತ ನಾವು ಹೇಳ್ತೀವಿ..

Written by - Krishna N K | Last Updated : Aug 17, 2023, 11:11 PM IST
  • ಮಧುಮೇಹ ಬರುವ ಕುರಿತು ಜನರಿಗೆ ಸುಳಿವು ಸಿಗುವುದಿಲ್ಲ.
  • ನಮ್ಮ ದೇಹದ ಕೆಲವು ಭಾಗಗಳು ಸರಿಯಾದ ಸಮಯಕ್ಕೆ ಸಂಕೇತಗಳನ್ನು ನೀಡಲು ಪ್ರಾರಂಭಿಸುತ್ತವೆ.
  • ಮಧುಮೇಹ ಬರುವ ಮೊದಲು ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟ ಹೆಚ್ಚಾಗುತ್ತದೆ.
ಈ 5 ಅಂಗಗಳು ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾದಾಗ ಸಂಕೇತ ನೀಡುತ್ತವೆ..! ನಿರ್ಲಕ್ಷಿಸಬೇಡಿ title=

Diabetes symptoms : ಇತ್ತೀಚಿನ ದಿನಗಳಲ್ಲಿ ಮಧುಮೇಹವು ಸಾಮಾನ್ಯ ಕಾಯಿಲೆಯಾಗಿದೆ. ಈ ರೋಗ ಬರುವ ಕುರಿತು ಜನರಿಗೆ ಸುಳಿವು ಸಿಗುವುದಿಲ್ಲ. ಆದರೆ ನಮ್ಮ ದೇಹದ ಕೆಲವು ಭಾಗಗಳು ಸರಿಯಾದ ಸಮಯಕ್ಕೆ ಸಂಕೇತಗಳನ್ನು ನೀಡಲು ಪ್ರಾರಂಭಿಸುತ್ತವೆ. ದೇಹದಲ್ಲಿ ಸಕ್ಕರೆಯ ಪ್ರಮಾಣ ಹೆಚ್ಚಾದಾಗ ಬೇರೆ ಬೇರೆ ಕಾಯಿಲೆಗಳು ಕಾಡಲಾರಂಭಿಸುತ್ತವೆ. ಇದರಿಂದಾಗಿ ದೇಹದ ಅನೇಕ ಭಾಗಗಳು ಕ್ಷೀಣಿಸಲು ಪ್ರಾರಂಭಿಸುತ್ತವೆ. ಮಧುಮೇಹ ಬರುವ ಮೊದಲು ನಿಮ್ಮ ರಕ್ತದಲ್ಲಿನ ಸಕ್ಕರೆಯ ಮಟ್ಟ ಹೆಚ್ಚಾಗಿದೆ ಎಂದು ಹೇಗೆ ನೀವು ಅರ್ಥಮಾಡಿಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳುವುದು  ಬಹುಮುಖ್ಯವಾಗಿದೆ. 

ಕಣ್ಣು : ನಿಮ್ಮ ದೃಷ್ಟಿ ಕಡಿಮೆಯಾಗಲು ಪ್ರಾರಂಭಿಸಿದರೆ ಅಥವಾ ನೀವು ದೃಷ್ಟಿ ಮಂದವಾಗಲು ಪ್ರಾರಂಭಿಸಿದರೆ, ಅದು ಮಧುಮೇಹದ ಸಂಕೇತವಾಗಿರಬಹುದು. ದೇಹದಲ್ಲಿನ ಅಧಿಕ ರಕ್ತದ ಸಕ್ಕರೆಯು ಕಣ್ಣುಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಈ ಕಾರಣದಿಂದಾಗಿ ನೀವು ದೂರದ ವಸ್ತುವನ್ನು ಸ್ಪಷ್ಟವಾಗಿ ನೋಡಲಾಗುವುದಿಲ್ಲ. ಅದಕ್ಕಾಗಿ ನೀವು ಕನ್ನಡಕವನ್ನು ಧರಿಸಬೇಕು.   

ಇದನ್ನೂ ಓದಿ: ಮುಂಜಾನೆ ಕುಡಿಯುವ ಒಂದು ಲೋಟ ಕಾಫಿ ದೇಹಕ್ಕೆ ನೀಡುವುದು ಇಷ್ಟೆಲ್ಲಾ ಪ್ರಯೋಜನ

ಕೈ ಮತ್ತು ಕಾಲು : ಒಬ್ಬ ವ್ಯಕ್ತಿಯು ಮಧುಮೇಹದ ಅಪಾಯದಲ್ಲಿದ್ದಾಗ, ಮೊದಲು ಸೂಚನೆಯಂತೆ ಅವನ ಕೈ ಮತ್ತು ಕಾಲುಗಳಲ್ಲಿ ಜುಮ್ಮೆನ್ನುವುದಕ್ಕೆ ಪ್ರಾರಂಭಿಸುತ್ತವೆ. ನಿಮಗೂ ಪ್ರತಿ ದಿನ ಹೀಗೆ ಅನಿಸಿದರೆ ಎಚ್ಚರದಿಂದಿರಿ. ಸಕ್ಕರೆ ರೋಗ ಪ್ರಾರಂಭ ಪಾದಗಳಲ್ಲಿ ಮರಗಟ್ಟುವಿಕೆಗೆ ಕಾರಣವಾಗಬಹುದು. ಏಕೆಂದರೆ ಮಧುಮೇಹದಲ್ಲಿ, ವ್ಯಕ್ತಿಯ ದೇಹದ ನರಗಳು ದುರ್ಬಲಗೊಳ್ಳಲು ಪ್ರಾರಂಭಿಸುತ್ತವೆ. ಇದರಿಂದಾಗಿ ರಕ್ತವು ರಕ್ತನಾಳಗಳ ಮೂಲಕ ದೇಹದ ವಿವಿಧ ಭಾಗಗಳನ್ನು ತಲುಪುವುದಿಲ್ಲ.

ಮೂತ್ರಪಿಂಡ : ನಿಮಗೆ ಮೂತ್ರಪಿಂಡದ ಸಮಸ್ಯೆಗಳಿದ್ದರೆ, ನೀವು ಮಧುಮೇಹಕ್ಕೆ ಗುರಿಯಾಗಿರಬಹುದು. ಇದು ಮಧುಮೇಹಕ್ಕೆ ಪ್ರಮುಖ ಕಾರಣವಾಗಿದೆ, ವಾಸ್ತವವಾಗಿ ದೇಹದಲ್ಲಿ ರಕ್ತದಲ್ಲಿನ ಸಕ್ಕರೆಯ ಮಟ್ಟವು ಹೆಚ್ಚಾದಾಗ, ಮೂತ್ರಪಿಂಡವು ಸರಿಯಾಗಿ ಕಾರ್ಯನಿರ್ವಹಿಸುವುದಿಲ್ಲ. ಇದರಿಂದ ಪದೇ ಪದೇ ಮೂತ್ರ ವಿಸರ್ಜನೆ ಸಮಸ್ಯೆಯಾಗುತ್ತದೆ.  

ಇದನ್ನೂ ಓದಿ: ತಾಮ್ರದ ಪಾತ್ರೆಯಲ್ಲಿಟ್ಟ ನೀರು ಕುಡಿಯುವುದರಿಂದ ಆರೋಗ್ಯಕ್ಕಿದೆ ಹಲವು ಲಾಭ

ಒಸಡು : ಒಸಡುಗಳಲ್ಲಿ ರಕ್ತಸ್ರಾವವಾಗುವುದು ಕೂಡ ಮಧುಮೇಹದ ಆರಂಭಿಕ ಲಕ್ಷಣಗಳಲ್ಲಿ ಒಂದಾಗಿದೆ. ನಿಮ್ಮ ಒಸಡುಗಳು ನಿರಂತರವಾಗಿ ರಕ್ತಸ್ರಾವವಾಗುತ್ತಿದ್ದರೆ, ನೀವು ವೈದ್ಯರನ್ನು ಸಂಪರ್ಕಿಸಬೇಕು. ಇಂತಹ ಸ್ಥಿತಿಯಲ್ಲಿ ವ್ಯಕ್ತಿಯ ವಸಡಿನಿಂದ ರಕ್ತಸ್ರಾವವಾದಾಗ ವಾಸನೆಯೂ ಬರಲು ಆರಂಭಿಸುತ್ತದೆ.

ಗಾಯ : ನೀಮ್ಮ ದೇಹದಲ್ಲಿ ಗಾಯವಾದಾಗ ಅದು ಬೇಗನೆ ಗುಣವಾಗುವುದಿಲ್ಲ, ಇದು ಮಧುಮೇಹದ ಲಕ್ಷಣ ಎಂದು ಅರ್ಥಮಾಡಿಕೊಳ್ಳಿ. ಇದರೊಂದಿಗೆ ದೇಹದಲ್ಲಿ ಸಕ್ಕರೆಯ ಪ್ರಮಾಣವೂ ಹೆಚ್ಚಿದೆ ಅಂತ ತಿಳಿಯಿರಿ. ಗಾಯ ಗುಣವಾಗಲು ತೆಗೆದುಕೊಳ್ಳುವ ಸಮಯವು ಮಧುಮೇಹದ ಸಂಕೇತವಾಗಿರಬಹುದು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News