ನೆಗಡಿಯಿಂದ ಮೂಗು ಕಟ್ಟಿದೆಯೇ... ಈ ಹಣ್ಣಿನ ಸಿಪ್ಪೆಯ ಚಹಾ ಕುಡಿದರೆ 10 ನಿಮಿಷದಲ್ಲೇ ಸರಿಯಾಗುವುದು!

Home remedies for a blocked nose: ದಾಳಿಂಬೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ದಾಳಿಂಬೆಯ ಸಿಪ್ಪೆಯಲ್ಲಿ ಸಹ ಅದ್ಭುತವಾದ ಪೌಷ್ಟಿಕಾಂಶವೂ ಇದೆ ಎಂಬುದು ಹಲವರಿಗೆ ತಿಳಿದಿಲ್ಲ. 

Written by - Chetana Devarmani | Last Updated : Oct 18, 2024, 07:34 AM IST
  • ಕಟ್ಟಿದ ಮೂಗಿನ ನಿವಾರಣೆಗೆ ಮನೆಮದ್ದು
  • ದಾಳಿಂಬೆ ಸಿಪ್ಪೆ ಚಹಾ ಪ್ರಯೋಜನ
  • ದಾಳಿಂಬೆ ಸಿಪ್ಪೆ ಚಹಾ ಹೇಗೆ ತಯಾರಿಸುವುದು?
ನೆಗಡಿಯಿಂದ ಮೂಗು ಕಟ್ಟಿದೆಯೇ... ಈ ಹಣ್ಣಿನ ಸಿಪ್ಪೆಯ ಚಹಾ ಕುಡಿದರೆ 10 ನಿಮಿಷದಲ್ಲೇ ಸರಿಯಾಗುವುದು!  title=

stuffy nose home remedies : ದಾಳಿಂಬೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ದಾಳಿಂಬೆಯ ಸಿಪ್ಪೆಯಲ್ಲಿ ಸಹ ಅದ್ಭುತವಾದ ಪೌಷ್ಟಿಕಾಂಶವೂ ಇದೆ ಎಂಬುದು ಹಲವರಿಗೆ ತಿಳಿದಿಲ್ಲ. ಇದು ಪಾಲಿಫಿನಾಲ್‌ಗಳು, ಫ್ಲೇವನಾಯ್ಡ್‌ಗಳು, ಆಲ್ಕಲಾಯ್ಡ್‌ಗಳು ಮತ್ತು ಟ್ರೈಟರ್‌ಪೀನ್‌ಗಳನ್ನು ದೊಡ್ಡ ಪ್ರಮಾಣದಲ್ಲಿ ಹೊಂದಿರುತ್ತದೆ. ಇದರಲ್ಲಿ ಆ್ಯಂಟಿಆಕ್ಸಿಡೆಂಟ್ ಮತ್ತು ಉರಿಯೂತ ನಿವಾರಕ ಗುಣಗಳು ಹೇರಳವಾಗಿರುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು.

ಕಟ್ಟಿದ ಮೂಗಿಗೆ ಮನೆಮದ್ದು 

ನೆಗಡಿ ಮತ್ತು ಜ್ವರವನ್ನು ತಡೆಯಲು ಸಮಯದಲ್ಲಿ ದಾಳಿಂಬೆ ಸಿಪ್ಪೆಯಿಂದ ಚಹಾವನ್ನು ತಯಾರಿಸಿ ಕುಡಿಯಿರಿ. ಕೆಮ್ಮಿನಿಂದ ಗಂಟಲು ಬಿಗಿದುಕೊಂಡಿದ್ದರೆ ದಾಳಿಂಬೆ ಸಿಪ್ಪೆಯ ನೀರು ಕುಡಿಯಿರಿ. ಕೆಲವೇ ನಿಮಿಷಗಳಲ್ಲಿ ಉಪಶಮನವಾಗುವುದು. ಕಫದ ಸಮಸ್ಯೆ ಸಹ ದೂರವಾಗುತ್ತದೆ. ದಾಳಿಂಬೆ ಸಿಪ್ಪೆಯ ಟೀ ಕುಡಿದರೆ ಗಂಟಲು ಊತ, ಕಟ್ಟಿದ ಮೂಗಿನ ಸಮಸ್ಯೆಗಳು ದೂರವಾಗುತ್ತವೆ.

ಇದನ್ನೂ ಓದಿ: ನೆಗಡಿ ಕೆಮ್ಮು ಜ್ವರಕ್ಕೆ ನಿಮಿಷದಲ್ಲಿ ಉಮಶಮನ.. ಈ ಹಣ್ಣನ್ನು ಕುದಿಸಿದ ನೀರು ಕುಡಿದರೆ ಬರೋದೇ ಇಲ್ಲ ವ್ಯಾಧಿ!

ದಾಳಿಂಬೆ ಸಿಪ್ಪೆ ಚಹಾ ಪ್ರಯೋಜನ 

ದಾಳಿಂಬೆ ಸಿಪ್ಪೆಯಲ್ಲಿ ಆ್ಯಂಟಿ ವೈರಲ್, ಆ್ಯಂಟಿ ಬ್ಯಾಕ್ಟೀರಿಯಲ್ ಮತ್ತು ಉರಿಯೂತ ನಿವಾರಕ ಗುಣಗಳು ಹೇರಳವಾಗಿವೆ. ಮೊಡವೆಗಳು ಮತ್ತು ದದ್ದುಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಚರ್ಮವನ್ನು ಡಿಟಾಕ್ಸ್ ಮಾಡಿ. ರಾಷ್ಟ್ರೀಯ ಆರೋಗ್ಯ ಸಂಸ್ಥೆಯ ಅಧ್ಯಯನದ ಪ್ರಕಾರ, ದಾಳಿಂಬೆ ಸಿಪ್ಪೆಯ ಚಹಾವನ್ನು ನಿಯಮಿತವಾಗಿ ಸೇವಿಸುವುದರಿಂದ ಸ್ತನ ಕ್ಯಾನ್ಸರ್, ಪ್ರಾಸ್ಟೇಟ್ ಕ್ಯಾನ್ಸರ್ ಮತ್ತು ಕರುಳಿನ ಕ್ಯಾನ್ಸರ್ ನಿಂದ ರಕ್ಷಿಸಬಹುದು.

ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ದಾಳಿಂಬೆ ಸಿಪ್ಪೆಯ ಟೀ ಪ್ರಯೋಜನಕಾರಿಯಾಗಿದೆ. ದಾಳಿಂಬೆ ಸಿಪ್ಪೆಯ ಟೀಯಲ್ಲಿರುವ ಆಂಟಿಆಕ್ಸಿಡೆಂಟ್‌ಗಳಿಂದಾಗಿ ಕೆಟ್ಟ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್‌ಗಳನ್ನು ಕಡಿಮೆ ಮಾಡಬಹುದು. ಇದು ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ಕೂಡ ಹೆಚ್ಚಿಸಬಹುದು.

ದಾಳಿಂಬೆ ಸಿಪ್ಪೆ ಚಹಾವನ್ನು ಹೇಗೆ ತಯಾರಿಸುವುದು?

10 ಗ್ರಾಂ ದಾಳಿಂಬೆ ಸಿಪ್ಪೆಯನ್ನು ಒಂದು ಕಪ್ ನೀರಿನಲ್ಲಿ ಕುದಿಸಿ. 5 ನಿಮಿಷಗಳ ನಂತರ ಸ್ಟವ್ ಆಫ್ ಮಾಡಿ. ಈ ಚಹಾವನ್ನು ದಿನಕ್ಕೆ 2-3 ಬಾರಿ ಕುಡಿಯುವುದು ಒಳ್ಳೆಯದು. ರಕ್ತದಲ್ಲಿನ ಸಕ್ಕರೆ ನಿಯಂತ್ರಿಸಲು ದಾಳಿಂಬೆ ಸಿಪ್ಪೆಯ ಚಹಾವನ್ನು ನಿಯಮಿತವಾಗಿ ಸೇವಿಸಿ. ಮಧುಮೇಹ ಮತ್ತು ಹೃದ್ರೋಗಗಳ ಅಪಾಯವನ್ನು ಕಡಿಮೆ ಮಾಡಬಹುದು.  

ಇದನ್ನೂ ಓದಿ: ನಮ್ಮ ದೇಹಕ್ಕೆ ವಿಟಮಿನ್ ಬಿ 12 ಯಾಕೆ ಬೇಕು? ಅದು ಇಲ್ಲದೆ ಏನಾಗುತ್ತೆ ಗೊತ್ತಾ?

(ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News