Immunity Booster: ಬೇವು ಹಾಗೂ ಕಲ್ಲು ಸಕ್ಕರೆಯನ್ನು ಬೆರೆಸಿ ತಿನ್ನುವುದರ ಹಲವು ಲಾಭಗಳಿವೆ, PM Modi ಕೂಡ ಈ ಉಪಾಯ ಅನುಸರಿಸುತ್ತಾರೆ

Immunity Booster: ಬೇವು (Neem) ಮತ್ತು ಕಲ್ಲುಸಕ್ಕರೆ (Mishri) ಎರಡೂ ಆರೋಗ್ಯದ ದೃಷ್ಟಿಯಿಂದ ತುಂಬಾ ಲಾಭಕಾರಿಗಾಗಿವೆ. ಅವುಗಳನ್ನು ವಿವಿಧ ರೋಗಗಳಿಗೆ ಔಷಧಿಯಾಗಿ ಬಳಸಲಾಗುತ್ತದೆ, ಆದರೆ ಇವೆರಡರ ಸಂಯೋಜನೆ  (Neem-Mishri Combination)ಪವರ್-ಪ್ಯಾಕ್ ಇಮ್ಯೂನ್ ಬೂಸ್ಟರ್ ಆಗಿ ಕಾರ್ಯ ನಿರ್ವಹಿಸುತ್ತದೆ.

Written by - Nitin Tabib | Last Updated : Sep 19, 2021, 10:59 AM IST
  • ಬೇವು-ಕಲ್ಲುಸಕ್ಕರೆಯ ಮಿಶ್ರಣ ತುಂಬಾ ಲಾಭಕಾರಿಯಾಗಿದೆ.
  • ಇಮ್ಯೂನ್ ಬೂಸ್ಟರ್ ರೀತಿ ಕಾರ್ಯ ನಿರ್ವಹಿಸುತ್ತದೆ.
  • ಪಿಎಂ ಮೋದಿ ಕೂಡ ಬೇವು ಹಾಗೂ ಕಲ್ಲುಸಕ್ಕರೆಯನ್ನು ಸೇವಿಸುತ್ತಾರೆ.
Immunity Booster: ಬೇವು ಹಾಗೂ ಕಲ್ಲು ಸಕ್ಕರೆಯನ್ನು ಬೆರೆಸಿ ತಿನ್ನುವುದರ ಹಲವು ಲಾಭಗಳಿವೆ, PM Modi ಕೂಡ ಈ ಉಪಾಯ ಅನುಸರಿಸುತ್ತಾರೆ title=
Immunity Booster (File Photo)

Immunity Booster: ಸಾಮಾನ್ಯವಾಗಿ ಜನರು ಊಟ ಮಾಡಿದ ನಂತರ ಮೆಂತ್ಯದೊಂದಿಗೆ ಕಲ್ಲುಸಕ್ಕರೆಯ (Benefits Of Mishri) ಕ್ಯೂಬ್ ಗಳನ್ನು ತಿನ್ನುತ್ತಾರೆ. ಇದರ ಹೊರತಾಗಿ, ಸಕ್ಕರೆ ಕ್ಯೂಬ್ ಗಳನ್ನು ಪ್ರಸಾದ ರೂಪದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಅಂತೆಯೇ, ಬೇವು (Benefits Of Neem) ಅದರ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಮತ್ತು ಪರಿಮಳದಿಂದಾಗಿ ಔಷಧಿ, ಆಹಾರ ಮತ್ತು ಚರ್ಮದ ಆರೈಕೆಯಲ್ಲಿ ಬಳಸಲಾಗುತ್ತದೆ.  ಆದರೆ ಇವರಡನ್ನು ಒಟ್ಟಿಗೆ ಬೆರೆಸಿ ಸೇವಿಸಿದರೆ, ಇವು ಅದ್ಭುತ ಲಾಭ ನೀಡುತ್ತವೆ ಎಂಬುದು ಬಹುತೇಕರಿಗೆ ತಿಳಿದಿಲ್ಲ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಇಮ್ಯೂನ್ ಸಿಸ್ಟಂ ಅನ್ನು ಬೂಸ್ಟ್ (Immunity Booster) ಮಾಡಲು ಬೇವು ಹಾಗೂ ಕಲ್ಲುಸಕ್ಕರೆಯ ಕಾಂಬಿನೇಷನ್ ಅತ್ಯಂತ ಪರಿಣಾಮಕಾರಿಯಾಗಿದೆ. 

ಇದನ್ನೂ ಓದಿ-Cardamom Benefits : ದೇಹ ತೂಕ ಇಳಿಕೆಗೆ ತಪ್ಪದೆ ಪ್ರತಿ ದಿನ ರಾತ್ರಿ ಈ ರೀತಿ ಸೇವಿಸಿ 4 ಏಲಕ್ಕಿ!

ಪ್ರಧಾನಿ ಮೋದಿ ಕೂಡ ಬೇವು ಮತ್ತು ಕಲ್ಲುಸಕ್ಕರೆಯನ್ನು ಸೇವಿಸುತ್ತಾರೆ
ಈ ಹಿಂದೆ ಪೋಸ್ಟ್ ವೊಂದನ್ನು ಹಂಚಿಕೊಂಡಿದ್ದ ಪ್ರಧಾನಿ  ನರೇಂದ್ರ ಮೋದಿ ಕೂಡ ಬೇವು ಮತ್ತು ಸಕ್ಕರೆ ಕ್ಯೂಬ್ ಒಟ್ಟಿಗೆ ಬಳಸುವುದರಿಂದ ಆಗುವ ಪ್ರಯೋಜನಗಳ (Health Benefits) ಕುರಿತು ಮಾಹಿತಿ ನೀಡಿದ್ದರು. ಅವರು ತಮ್ಮ ಪೋಸ್ಟ್‌ನಲ್ಲಿ ತಾವು ಬೇವಿನ ಎಲೆಗಳ ರಸ ಮತ್ತು ಅದರ ಗುರ್ಬೆಲ್ ಅನ್ನು ಸಕ್ಕರೆ ಕ್ಯೂಬ್ ನೊಂದಿಗೆ ಸೇವಿಸುತ್ತಿರುವುದಾಗಿ ಹೇಳಿದ್ದರು. ಈ ಕಾರಣದಿಂದಾಗಿ ಪ್ರತಿರಕ್ಷಣಾ ವ್ಯವಸ್ಥೆಯು ತುಂಬಾ ಚೆನ್ನಾಗಿರುತ್ತದೆ ಮತ್ತು ದೇಹವು ಎಲ್ಲಾ ರೋಗಗಳ ವಿರುದ್ಧ ಹೋರಾಡುವ ಶಕ್ತಿಯನ್ನು ಪಡೆಯುತ್ತದೆ. ಇದರ ಹೊರತಾಗಿ, ಈ ಸಂಯೋಜನೆಯು ದೇಹದಲ್ಲಿ ಹಿಮೋಗ್ಲೋಬಿನ್ ಅನ್ನು ಹೆಚ್ಚಿಸುತ್ತದೆ. ಈ ಕಾರಣದಿಂದಾಗಿ, ಆಯಾಸ, ದೌರ್ಬಲ್ಯ, ರಕ್ತಹೀನತೆಯಂತಹ ಸಮಸ್ಯೆಗಳು  ನಿವಾರಣೆಯಾಗುತ್ತವೆ. ಒಟ್ಟಾರೆಯಾಗಿ ಇದು ಒಂದು ಉತ್ತಮ ರೋಗನಿರೋಧಕ ಮನೆ ಮದ್ದಾಗಿದೆ.

ಇದನ್ನೂ ಓದಿ-High Uric Acid: ಹೆಚ್ಚಾಗುತ್ತಿರುವ ಯುರಿಕ್ ಆಸಿಡ್ ಪ್ರಮಾಣ ಈ ರೀತಿ ನಿಯಂತ್ರಿಸಿ, ಕೀಲು ನೋವಿನಿಂದ ಈ ರೀತಿ ಪರಿಹಾರ ಪಡೆಯಿರಿ

ಬೇವಿನ ಕಡ್ಡಿಯನ್ನು ಹಲ್ಲುಜ್ಜಲು ಕೂಡ ಬಳಸಲಾಗುತ್ತದೆ
ಬೇವಿನ ಮರದ ವಿಶೇಷತೆ ಎಂದರೆ ಅದರ ಬೇರು, ಎಲೆಗಳು, ಗುರ್ಬೆಲ್ ಮತ್ತು ಮರದ ಕಟ್ಟಿಗೆ ಕೂಡ ತುಂಬಾ ಪ್ರಯೋಜನಕಾರಿಯಾಗಿದೆ. ಆದರ ಕಡ್ಡಿಯನ್ನು ಹಲ್ಲುಜ್ಜಲು ಕೂಡ ಬಲಾಲಾಗುತ್ತದೆ.  ಅಂದರೆ, ಬೇವಿನ ಮರದ ಪ್ರತಿಯೊಂದು ಭಾಗವು ತುಂಬಾ ಉಪಯುಕ್ತವಾಗಿದೆ. ಬೇವಿನ ಕಡ್ಡಿಯಿಂದ ಹಲ್ಲುಜ್ಜುವುದರಿಂದ ಹಲ್ಲುಗಳು ಬಲಿಷ್ಠಗೊಳ್ಳುತ್ತವೆ. ಅನೇಕ ಉಪವಾಸದ ಸಂದರ್ಭಗಳಲ್ಲಿ ಸಾಮಾನ್ಯ ಟೂತ್ಪೇಸ್ಟ್ ನಿಂದ ಬ್ರಷ್ ಮಾಡುವ ಬದಲು, ಬೇವಿನ ಕಡ್ಡಿಯಿಂದ ಹಲ್ಲುಗಳನ್ನು ಉಜ್ಜಿಕೊಳ್ಳುವ ಸಲಹೆಗಳನ್ನು ನೀಡಲಾಗುತ್ತದೆ. ಇದಕ್ಕೆ ಧಾರ್ಮಿಕ ಮಹತ್ವವೂ ಇದೆ. ಅಂತೆಯೇ, ಸಕ್ಕರೆ ಕ್ಯಾಂಡಿ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಮತ್ತೊಂದೆಡೆ, ಸಕ್ಕರೆ ಕ್ಯಾಂಡಿ ತಿನ್ನುವುದು ಕೆಮ್ಮಿನಿಂದ ಪರಿಹಾರ ಸಿಗುತ್ತದೆ. 

ಇದನ್ನೂ ಓದಿ-ಹಾಲಿನೊಂದಿಗೆ ಎಂದಿಗೂ ಈ ವಸ್ತುಗಳನ್ನು ಸೇವಿಸಲೇ ಬಾರದು, ಅನುಕೂಲಕ್ಕಿಂತ ಅನಾನುಕೂಲವೇ ಜಾಸ್ತಿ

(ಸೂಚನೆ: ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಹಾಗೂ ಮನೆ ಮದ್ದುಗಳು ಸಾಮಾನ್ಯ ಜ್ಞಾನವನ್ನು ಆಧರಿಸಿವೆ. ಯಾವುದೇ ಉಪಾಯಗಳನ್ನು ಅನುಸರಿಸುವ ಮೊದಲು ತಜ್ಞರ ಸಲಹೆ ಪಡೆಯಿರಿ. ಝೀ ಹಿಂದೂಸ್ತಾನ್ ಕನ್ನಡ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ )

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News