Diabetics: ಮಧುಮೇಹಿಗಳಿಗೆ ಪನೀರ್ ಸೇವನೆ ವರದಾನವಿದ್ದಂತೆ

Paneer In Diabetes: ಮಧುಮೇಹ ರೋಗಿಗಳು ನಿತ್ಯ ಮಧ್ಯಾಹ್ನ ಅಥವಾ ರಾತ್ರಿಯ ಊಟದಲ್ಲಿ ಪನೀರ್ ಸೇವಿಸಬಹುದು. ಟೋನ್ಡ್ ಹಾಲಿನಿಂದ ತಯಾರಿಸಿದ ಪನೀರ್ ರಕ್ತದಲ್ಲಿ ಅಧಿಕ ಸಕ್ಕರೆ ಇರುವ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ.  

Written by - Nitin Tabib | Last Updated : Jan 5, 2023, 04:39 PM IST
  • ಸಕ್ಕರೆ ರೋಗಿಗಳಿಗೆ ಪನೀರ್ ಸೇವನೆಯು ತುಂಬಾ ಪ್ರಯೋಜನಕಾರಿಯಾಗಿದೆ.
  • ಮಧುಮೇಹ ರೋಗಿಗಳು ಪನೀರ್ ಅನ್ನು ಕಚ್ಚಾ ಅಥವಾ ಬೇಯಿಸಿದ ರೂಪದಲ್ಲಿ ಸೇವಿಸಬಹುದು.
  • ಕಚ್ಚಾ ಪನೀರ್‌ನಲ್ಲಿ ಕೊಬ್ಬಿನ ಪ್ರಮಾಣ ಕಡಿಮೆ ಇರುವುದರಿಂದ ಶುಗರ್ ರೋಗಿಗಳಿಗೆ ಇದು ಹೆಚ್ಚು ಪ್ರಯೋಜನಕಾರಿ.
Diabetics: ಮಧುಮೇಹಿಗಳಿಗೆ ಪನೀರ್ ಸೇವನೆ ವರದಾನವಿದ್ದಂತೆ title=
Paneer In Diabetes

Paneer Benefits For Diabetics: ಅನಾರೋಗ್ಯಕರ ಜೀವನಶೈಲಿಗೆ ಸಂಬಂಧಿಸಿದ ಕಾಯಿಲೆಗಳಲ್ಲಿ ಮಧುಮೇಹ ಕೂಡ ಒಂದು, ಇದರಲ್ಲಿ ನಾವು ಸೇವಿಸುವ ಆಹಾರದ ಮೇಲೆ ನಮ್ಮ ನಿಯಂತ್ರಣ ತುಂಬಾ ಮುಖ್ಯವಾಗಿದೆ. ಏಕೆಂದರೆ ಇದರಲ್ಲಿ ನೀವು ಸೇವಿಸುವ ಪ್ರತಿಯೊಂದೂ ಆಹಾರ ಪದಾರ್ಥ ರಕ್ತಕ್ಕೆ ಸಕ್ಕರೆಯನ್ನು ಸೇರಿಸುತ್ತದೆ ಮತ್ತು ಮಧುಮೇಹದ ಕಾಯಿಲೆಯನ್ನು ಮತ್ತಷ್ಟು ಉಲ್ಬಣಿಸುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ನಿಮ್ಮ ಆಹಾರವನ್ನು ನಿಯಂತ್ರಿಸುವುದು ಮತ್ತು ಕಾರ್ಬೋಹೈಡ್ರೇಟ್‌ಗಳ ಪ್ರಮಾಣವು ಕಡಿಮೆ ಇರುವಂತಹ ಸಂಗತಿಗಳನ್ನು ನೀವು ನಿಮ್ಮ ಆಹಾರದಲ್ಲಿ ಸೇರಿಸುವುದು ತುಂಬಾ ಮುಖ್ಯವಾಗಿ ಬಿಡುತ್ತದೆ.  ಕಚ್ಚಾ ಪನೀರ್ ಹೆಚ್ಚಿನ ಪ್ರೋಟೀನ್ ಮತ್ತು ಕಡಿಮೆ ಕಾರ್ಬೋಹೈಡ್ರೇಟ್‌ಗಳಲ್ಲಿ ಸಮೃದ್ಧವಾಗಿದೆ, ಇದರ ಸೇವನೆಯು ದೇಹಕ್ಕೆ ಹಲವು ವಿಧಗಳಲ್ಲಿ ಪ್ರಯೋಜನಕಾರಿಯಾಗಿದೆ.
 
ಮಧುಮೇಹದಲ್ಲಿ ಪನೀರ್ ತಿನ್ನುವ ಪ್ರಯೋಜನಗಳು
>> ಪನೀರ್ ಕಡಿಮೆ ಜಿಐ ಇರುವುದರಿಂದ ಮಧುಮೇಹಿಗಳಿಗೆ ಆರೋಗ್ಯಕರ ಆಹಾರ ಆಯ್ಕೆಯಾಗಿದೆ.
>> ಕಾರ್ಬೋಹೈಡ್ರೇಟ್‌ಗಳು ಕಡಿಮೆಯಾಗಿರುವುದರಿಂದ, ಪನೀರ್ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಇದ್ದಕ್ಕಿದ್ದಂತೆ ಹೆಚ್ಚಿಸುವುದಿಲ್ಲ.
>> ಇತ್ತೀಚಿನ ಅಧ್ಯಯನವೊಂದು ಪನೀರ್ ಸೇವನೆಯು ಟೈಪ್ 2 ಮಧುಮೇಹದ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ತೋರಿಸಿದೆ.
>> ಪನೀರ್ ಪ್ರೋಟೀನ್‌ಗಳು ಮತ್ತು ವಿವಿಧ ಸೂಕ್ಷ್ಮ ಪೋಷಕಾಂಶಗಳಲ್ಲಿ ಸಮೃದ್ಧವಾಗಿದೆ, ಇದು ಉತ್ಕರ್ಷಣ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ.
>> ಇದಲ್ಲದೆ, ಪನೀರ್ ಮೂಳೆ ಮತ್ತು ಹೃದಯದ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಇದು ಜೀರ್ಣಕ್ರಿಯೆಗೂ ಸಹಾಯ ಮಾಡುತ್ತದೆ.

ಮಧುಮೇಹ ರೋಗಿಗಳು ಯಾವಾಗ ಮತ್ತು ಎಷ್ಟು ಪನೀರ್ ಸೇವಿಸಬೇಕು?
ಮಧುಮೇಹ ರೋಗಿಗಳು ದಿನದಲ್ಲಿ ಅಥವಾ ರಾತ್ರಿಯ ಊಟದಲ್ಲಿ ಪನೀರ್ ಸೇವಿಸಬಹುದು. ಟೋನ್ಡ್ ಹಾಲಿನಿಂದ ತಯಾರಿಸಿದ ಪನೀರ್ ರಕ್ತದ ಸಕ್ಕರೆ ರೋಗಿಗಳಿಗೆ ಪ್ರಯೋಜನಕಾರಿಯಾಗಿದೆ. ಶುಗರ್ ರೋಗಿಗಳಿಗೆ ದಿನಕ್ಕೆ 80 ರಿಂದ 100 ಗ್ರಾಂ ಪನೀರ್ ಸಾಕು.

ಇದನ್ನೂ ಓದಿ-Bad Cholesterol Control: ಕೆಟ್ಟ ಕೊಲೆಸ್ಟ್ರಾಲ್ ಮತ್ತು ಹೃದಯಾಘಾತದ ಅಪಾಯದಿಂದ ಪಾರಾಗಲು ಈ ಎಣ್ಣೆ ರಾಮಬಾಣ
 
ಪನೀರ್ ಅನ್ನು ಹೇಗೆ ಸೇವಿಸಬೇಕು
ಸಕ್ಕರೆ ರೋಗಿಗಳಿಗೆ ಪನೀರ್ ಸೇವನೆಯು ತುಂಬಾ ಪ್ರಯೋಜನಕಾರಿಯಾಗಿದೆ. ಮಧುಮೇಹ ರೋಗಿಗಳು ಪನೀರ್ ಅನ್ನು ಕಚ್ಚಾ ಅಥವಾ ಬೇಯಿಸಿದ ರೂಪದಲ್ಲಿ ಸೇವಿಸಬಹುದು. ಕಚ್ಚಾ ಪನೀರ್‌ನಲ್ಲಿ ಕೊಬ್ಬಿನ ಪ್ರಮಾಣ ಕಡಿಮೆ ಇರುವುದರಿಂದ ಶುಗರ್ ರೋಗಿಗಳಿಗೆ ಇದು ಹೆಚ್ಚು ಪ್ರಯೋಜನಕಾರಿ. ಇದಲ್ಲದೆ, ಪನೀರ್ ಅನ್ನು ಪ್ರತ್ಯೇಕ ಭಕ್ಷ್ಯವಾಗಿಯೂ ತಿನ್ನಬಹುದು. ಪನೀರ್ ಅನ್ನು ತರಕಾರಿಗಳು ಮತ್ತು ತಿಂಡಿಗಳ ರೂಪದಲ್ಲಿಯೂ ಸೇವಿಸಬಹುದು.

ಇದನ್ನೂ ಓದಿ-Alert ! 2023 ರಲ್ಲಿ ಕೊರೊನಾ ಬಳಿಕ 2ನೇ ಅತಿದೊಡ್ಡ ಮಾರಕ ಸಾಬೀತಾಗಬಹುದು ಈ ಸೂಪರ್ ಬಗ್

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News