ನಿತ್ಯ ಮುಂಜಾನೆ ಒಂದು ಲೋಟ ಈ ಚಹಾ ಕುಡಿಯಿರಿ ! ಹೇಳ ಹೆಸರಿಲ್ಲದಂತೆ ಮಾಯವಾಗುವುದು ಡಯಾಬಿಟೀಸ್

Indian Gooseberry Tea For Diabetes:ಸಾಮಾನ್ಯವಾಗಿ ಕೂದಲಿನ ಆರೋಗ್ಯವನ್ನು ಸುಧಾರಿಸಲು ನೆಲ್ಲಿಕಾಯಿಯನ್ನು ಬಳಸುತ್ತೇವೆ. ಆದರೆ, ಇದು ಕ್ಯಾನ್ಸರ್, ಮೂತ್ರಪಿಂಡದ ಕಾಯಿಲೆ ಮತ್ತು ಹೃದಯ ಕಾಯಿಲೆಗಳನ್ನು ಕಡಿಮೆ ಮಾಡುತ್ತದೆ. 

Written by - Ranjitha R K | Last Updated : Dec 22, 2023, 09:56 AM IST
  • ಔಷಧಿಯಿಂದ ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು.
  • ನೆಲ್ಲಿಕಾಯಿಯಲ್ಲಿ ಕಂಡುಬರುವ ಪೋಷಕಾಂಶಗಳು
  • ಮಧುಮೇಹದಲ್ಲಿ ನೆಲ್ಲಿಕಾಯಿ ಬಳಕೆ ಹೇಗೆ?
ನಿತ್ಯ ಮುಂಜಾನೆ ಒಂದು ಲೋಟ ಈ  ಚಹಾ ಕುಡಿಯಿರಿ ! ಹೇಳ ಹೆಸರಿಲ್ಲದಂತೆ ಮಾಯವಾಗುವುದು  ಡಯಾಬಿಟೀಸ್  title=

Indian Gooseberry Tea For Diabetes : ಮಧುಮೇಹವು ವೈದ್ಯಕೀಯ ಸ್ಥಿತಿಯಾಗಿದ್ದು, ಇದನ್ನು ಸಂಪೂರ್ಣವಾಗಿ ನಿರ್ನಾಮ ಮಾಡಲು ಇನ್ನು ಕೂಡಾ ಯಾವುದೇ ರೀತಿಯ ಔಷಧಿ ಕಂಡು ಹಿಡಿಯುವುದು ಸಾಧ್ಯವಾಗಿಲ್ಲ. ಸದ್ಯಕ್ಕೆ ಲಭ್ಯವಿರುವ ಔಷಧಿಯಿಂದ ಮಧುಮೇಹವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಹಾಗೆಯೇ ನೈಸರ್ಗಿಕವಾಗಿ ಸಿಗುವ ಕೆಲವು ವಸ್ತುಗಳನ್ನು ಬಳಸುವ ಮೂಲಕವೂ ನೈಸರ್ಗಿಕವಾಗಿಯೇ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಅವುಗಳಲ್ಲಿ ಒಂದು ನೆಲ್ಲಿಕಾಯಿ ಟೀ. ಸಾಮಾನ್ಯವಾಗಿ ಕೂದಲಿನ ಆರೋಗ್ಯವನ್ನು ಸುಧಾರಿಸಲು ನೆಲ್ಲಿಕಾಯಿಯನ್ನು  ಬಳಸುತ್ತೇವೆ. ಆದರೆ ಇದು ಕ್ಯಾನ್ಸರ್, ಮೂತ್ರಪಿಂಡದ ಕಾಯಿಲೆ ಮತ್ತು ಹೃದಯ ಕಾಯಿಲೆಗಳನ್ನು ಕಡಿಮೆ ಮಾಡುತ್ತದೆ. 

ನೆಲ್ಲಿಕಾಯಿಯಲ್ಲಿ ಕಂಡುಬರುವ ಪೋಷಕಾಂಶಗಳು : 
ನೆಲ್ಲಿಕಾಯಿಯನ್ನು ಸೂಪರ್‌ಫುಡ್ ಎಂದು ಕರೆಯಲಾಗುತ್ತದೆ. ಕಬ್ಬಿಣ, ವಿಟಮಿನ್ ಸಿ, ಕಾರ್ಬೋಹೈಡ್ರೇಟ್, ರಂಜಕ, ಫೈಬರ್, ಕ್ಯಾಲ್ಸಿಯಂ ಮತ್ತು ಪ್ರೋಟೀನ್‌ಗಳಂತಹ ಅನೇಕ ಪ್ರಮುಖ ಪೋಷಕಾಂಶಗಳು ಇದರಲ್ಲಿ ಕಂಡುಬರುತ್ತವೆ. ಇದು ಆರೋಗ್ಯಕ್ಕೆ ಅನೇಕ ಪ್ರಯೋಜನಗಳನ್ನು ನೀಡುತ್ತದೆ. ನೆಲ್ಲಿಕಾಯಿಯನ್ನು ಆಯುರ್ವೇದದ ನಿಧಿ ಎಂದು ಕೂಡಾ ಕರೆಯಲಾಗುತ್ತದೆ. ಇದನ್ನು ಔಷಧಿಯಾಗಿ ಬಳಸಲಾಗುತ್ತದೆ.

ಇದನ್ನೂ ಓದಿ : ಬೆಳಿಗ್ಗೆ ಖಾಲಿ ಹೊಟ್ಟೆಗೆ ಅಲೋವೆರಾ ಜ್ಯೂಸ್ ಕುಡಿದರೆ ಈ ರೋಗಗಳು ನಿಮ್ಮನ್ನು ಬಾಧಿಸುವುದಿಲ್ಲ!

ಮಧುಮೇಹದಲ್ಲಿ  ನೆಲ್ಲಿಕಾಯಿ ಬಳಕೆ ಹೇಗೆ? : 
ನೆಲ್ಲಿಕಾಯಿಯಲ್ಲಿರುವ ಫೈಬರ್ ರಕ್ತದ ಹರಿವಿನಲ್ಲಿ ನಿಧಾನವಾಗಿ ಗ್ಲೂಕೋಸ್ ಅನ್ನು ಬಿಡುಗಡೆ ಮಾಡುವ ಕೆಲಸ ಮಾಡುತ್ತವೆ. ಆಮ್ಲಾದಲ್ಲಿ ವಿಟಮಿನ್ ಸಿ ಇರುವುದರಿಂದ ಇದು ಮಧುಮೇಹ ರೋಗಿಗಳಿಗೆ ಸೂಕ್ತವಾದ ಆಹಾರವಾಗಿದೆ. ಇದಲ್ಲದೆ, ನೆಲ್ಲಿಕಾಯಿಯು ಕ್ರೋಮಿಯಂ ಎಂಬ ಖನಿಜವನ್ನು ಹೊಂದಿರುತ್ತದೆ.  ಇದು ಗ್ಲೂಕೋಸ್ ಮತ್ತು ರಕ್ತದೊತ್ತಡವನ್ನು ನಿಯಂತ್ರಿಸುವಲ್ಲಿ ಪರಿಣಾಮಕಾರಿಯಾಗಿದೆ.

ಮಧುಮೇಹಿಗಳು ನೆಲ್ಲಿಕಾಯಿ ಚಹಾವನ್ನು ಕುಡಿಯಲೇಬೇಕು :
ನೀವು ಕೂಡಾ ಮಧುಮೇಹಿಗಳಾಗಿದ್ದರೆ ನೆಲ್ಲಿಕಾಯಿ ಚಹಾ ನಿಮಗೆ ರಾಮಬಾಣಕ್ಕಿಂತ ಕಡಿಮೆಯಿಲ್ಲ. ನೆಲ್ಲಿಕಾಯಿಯನ್ನು ಹಸಿಯಾಗಿ ತಿನ್ನುವುದು, ಕಲ್ಲು ಉಪ್ಪಿನೊಂದಿಗೆ ಬೆರೆಸಿ ತಿನ್ನುವುದು, ರುಬ್ಬಿಕೊಂಡು ಚಟ್ನಿ ಮಾಡಿ ಸೇವಿಸುವುದು ಮತ್ತು ಆಮ್ಲಾ ಜ್ಯೂಸ್ ಮಾಡಿ ಕುಡಿಯುವುದು ಸಹ ಪ್ರಯೋಜನಕಾರಿಯಾಗಿರುತ್ತದೆ  

ಇದನ್ನೂ ಓದಿ :  ಊಟಕ್ಕೂ ಮುನ್ನ ಈ ಕೆಂಪು ತರಕಾರಿ ಜ್ಯೂಸ್ ಸೇವಿಸಿ, ರಕ್ತದಲ್ಲಿನ ಸಕ್ಕರೆ ಮಟ್ಟ ಹೆಚ್ಚಾಗುವುದಿಲ್ಲ!

ಆಮ್ಲಾ ಟೀ ಮಾಡುವ ವಿಧಾನ  : 
- ಮೊದಲನೆಯದಾಗಿ, ಒಂದು ಪಾತ್ರೆಯಲ್ಲಿ 2 ಕಪ್ ನೀರು ತೀಗ್ದುಕೊಂಡು ಚೆನ್ನಾಗಿ  ಕುದಿಸಿ
- ಈಗ ಅದರಲ್ಲಿ ಒಂದು ಚಮಚ ಆಮ್ಲಾ ಪುಡಿ ಮತ್ತು ಪುಡಿಮಾಡಿದ ಶುಂಠಿ ಮಿಶ್ರಣ ಮಾಡಿ
- ಈಗ ತಾಜಾ ಪುದೀನ ಎಲೆಗಳನ್ನು ಸೇರಿಸಿ ಮತ್ತು ಕೆಲವು ನಿಮಿಷ ಕುದಿಸಿ
- ನಂತರ ಚಹಾವನ್ನು ಫಿಲ್ಟರ್ ಮಾಡಿ ಕುಡಿಯಿರಿ
- ನೀವು ದಿನಕ್ಕೆ ಎರಡು ಬಾರಿ ಈ ನೆಲ್ಲಿಕಾಯಿ ಚಹಾವನ್ನು ಕುಡಿಯಬಹುದು.

 ( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಬೇಕು. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News