Mahanati: 'ಮಹಾನಟಿ' ವೇದಿಕೆಯಲ್ಲಿ ಲೀಲಮ್ಮನನ್ನು ನೆನೆದು ಭಾವುಕರಾದ ವಿನೋದ್ ರಾಜ್!

Mahanati Reality Show: ಮಹಾನಟಿ ರಿಯಾಲಿಟಿ ಶೋದಲ್ಲಿ ಈ ವಾರ ವಿಶೇಷ ಅತಿಥಿಯಾಗಿ ಆಗಮಿಸಿದ ವಿನೋದ್ ರಾಜ್ ತಮ್ಮ ತಾಯಿ ಲೀಲಾವತಿ ಅಮ್ಮನನ್ನು ನೆನಪಿಸಿಕೊಂಡು ಕಣ್ಣೀರು ಹಾಕಿದ್ದಾರೆ. ಇದರ ಸಂಪೂರ್ಣ ಮಾಹಿತಿ ಇಲ್ಲಿದೆ.  

Written by - Zee Kannada News Desk | Last Updated : Apr 14, 2024, 10:44 AM IST
  • ಈ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಸ್ಪರ್ಧಿಗಳಿಗೆ ಸವಾಲೊಂದು ನೀಡಿದ್ದು, ಪ್ರತಿಯೊಬ್ಬರು ಹಿರಿಯ ಮಹಾನಟಿಯರನ್ನು ಸ್ಪೂರ್ತಿಯಾಗಿಟ್ಟುಕೊಂಡು ನಟಿಸಬೇಕಿತ್ತು.
  • ಮಹಾನಟಿ ವೇದಿಕೆ ಮೇಲೆ 'ಬಿಂಕದ ಸಿಂಗಾರಿ' ಪರ್ಫಾಮೆನ್ಸ್ ಮುಗಿದ ನಂತರ ಕಾರ್ಯಕ್ರಮದಲ್ಲಿರುವರು ಎಲ್ಲರೂ ಎದ್ದು ನಿಂತು ಲೀಲಾವತಿಯವರಿಗೆ ಗೌರವ ಸಲ್ಲಿಸಿದರು.
  • ಆಂಕರ್‌ ಅನುಶ್ರೀ ವಿನೋದ್‌ ರಾಜ್‌ ಅವರನ್ನು ಸಮಾಧಾನ ಮಾಡಿ ನಿಮ್ಮ ನೋವು ಅರ್ಥವಾಗುತ್ತದೆ. ಕ್ಷಮೆ ಕೇಳಬೇಡಿ ಎಂದು ಹೇಳಿದ್ದಾರೆ.
Mahanati: 'ಮಹಾನಟಿ' ವೇದಿಕೆಯಲ್ಲಿ ಲೀಲಮ್ಮನನ್ನು ನೆನೆದು ಭಾವುಕರಾದ ವಿನೋದ್ ರಾಜ್! title=

Vinod Raj Became Emotional: ಝೀ ಕನ್ನಡದ ಮಹಾನಟಿ ರಿಯಾಲಿಟಿ ಶೋದಲ್ಲಿ ವಿನೋದ್‌ ರಾಜ್‌ ಲೀಲಾವತಿ ಅಮ್ಮನನ್ನು ನೆನಪಿಸಿಕೊಂಡು ಭಾವುಕರಾಗಿದ್ದಾರೆ. ಈ ವಾರದ ಮಹಾನಟಿ ಶೋಗೆ ವಿಶೇಷ ಅತಿಥಿಯಾಗಿ ಡ್ಯಾನ್ಸ್‌ನಲ್ಲಿ ಕಿಂಗ್ ವಿನೋದ್ ರಾಜ್ ಅನ್ನು ಕರೆಸಿದ್ದರು. ಈ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ಸ್ಪರ್ಧಿಗಳಿಗೆ ಸವಾಲೊಂದು ನೀಡಿದ್ದು, ಪ್ರತಿಯೊಬ್ಬರು  ಹಿರಿಯ ಮಹಾನಟಿಯರನ್ನು ಸ್ಪೂರ್ತಿಯಾಗಿಟ್ಟುಕೊಂಡು ನಟಿಸಬೇಕಿತ್ತು.

ಮಹಾನಟಿ ಶೋನಲ್ಲಿ ಈಗಿನ ಕಾಲದ ಸಿನಿಮಾದ ದೃಶ್ಯಗಳಲ್ಲ. ಹಿಂದೆ ನಟನೆಯಿಂದಾನೇ ಎಲ್ಲರ ಮನಗೆದ್ದಂತ ಹಿರಿಯ ಕಲಾವಿದರ ಸಿನಿಮಾಗಳ ಮೂಲಕ ತಮ್ಮ ನಟನೆಯನ್ನು ತೋರಿಸಬೇಕಿತ್ತು. ಸ್ಪರ್ಧಿಗಳಿಂದ  ರಾಜ್‍ಕುಮಾರ್ ಹಾಗೂ ಲೀಲಾವತಿಯವರ ಚಿತ್ರದ 'ಬಿಂಕದ ಸಿಂಗಾರಿ' ಹಾಡಿಗೆ ಅಭಿನಯಸಿ ತೋರಿಸಿದ್ದಾರೆ. ಇದನ್ನು ನೋಡಿದ ವಿನೋದ್‌ ರಾಜ್‌ ತಮ್ಮ ತಾಯಿಯನ್ನು ನೆನೆದು ಭಾವುಕರಾಗಿದ್ದಾರೆ. ಮಹಾನಟಿ ವೇದಿಕೆ ಮೇಲೆ 'ಬಿಂಕದ ಸಿಂಗಾರಿ' ಪರ್ಫಾಮೆನ್ಸ್ ಮುಗಿದ ನಂತರ ಕಾರ್ಯಕ್ರಮದಲ್ಲಿರುವರು ಎಲ್ಲರೂ ಎದ್ದು ನಿಂತು ಲೀಲಾವತಿಯವರಿಗೆ ಗೌರವ ಸಲ್ಲಿಸಿದರು. 

ಇದನ್ನೂ ಓದಿ: ಸಲ್ಮಾನ್ ಖಾನ್ ಮನೆ ಹೊರಗೆ ಗುಂಡಿನ ದಾಳಿ, ಮನೆಯಲ್ಲೇ ಇದ್ದ 'ಭಾಯಿಜಾನ್'.. ಆತಂಕದಲ್ಲಿ ಫ್ಯಾನ್ಸ್ !

ಅದೇ ಸಂದರ್ಭದಲ್ಲಿ ವಿನೋದ್‌ ರಾಜ್‌ ತಮ್ಮ ತಾಯಿ ಲೀಲಾವತಿಯವರನ್ನು ನೆನೆಪಿಸಿಕೊಂಡು ಭಾವುಕರಾಗಿ "ಎಷ್ಟೇ ಮರೆತು ಜೀವನ ಮಾಡಬೇಕು ಎಂದುಕೊಂಡರು ಅದು ಕಷ್ಟವಾಗುತ್ತದೆ. ನೋಡುತ್ತಾ ನೋಡುತ್ತಾ ಕೊನೆ ಫೋಟೋ ನೋಡಿ ನೋವು ತಡೆದುಕೊಳ್ಳುವುದಕ್ಕೆ ಆಗಲಿಲ್ಲ.ಅಮ್ಮ ಬಿಟ್ಟು ಹೋಗಿದ್ದಾರೆ. ನಾನು ಕೂಡ ಹೇಗೆ ನಾಲ್ಕು ತಿಂಗಳು ಕಳೆದುಬಿಟ್ಟೆ ಅನ್ನಿಸುತ್ತಾ ಇದೆ. ಮತ್ತೆ ಅದನ್ನ ನೋಡಿದಾಗ ಆ ನೋವು ಮರುಕಳಿಸುತ್ತೆ, ಎದೆ ಹಿಂಡಿದಂತೆ ಆಗಿ ಬಿಡುತ್ತ" ಎಂದಿದ್ದಾರೆ. 

ವಿನೋದ್‌ ರಾಜ್‌ ವೇದಿಕ ಮೇಲೆ ಕಣ್ಣೀರು ಹಾಕುತ್ತಾ, "ದೇವರು ಯಾಕೆ ಇಷ್ಟು ಬೇಗ ಇಬ್ಬರಲ್ಲಿ ಒಬ್ಬರನ್ನ ಹೀಗೆ ಬೇಗ ಕರೆದುಕೊಂಡು ಬಿಟ್ಟ. ಯಾವಾಗಲೂ ಕೇಳುತ್ತಿದ್ದರು ಮಗ ಬಂದನಾ, ಎಲ್ಲಿ ಹೋಗಿದ್ದಾನೆ ಕೇಳಿ ಎನ್ನುತ್ತಿದ್ದರು. ಈಗ ಕೇಳೋದಕ್ಕೆ ಯಾರೂ ಇಲ್ಲ. ಎರಡು ನಾಯಿ ಮಾತ್ರ ಇದೆ. ಇಷ್ಟು ಪ್ರೀತಿ ಮಾಡಬಾರದು ತಾಯಿ ಮಕ್ಳಳನ್ನ. ಕ್ಷಮಿಸಿ ಜಡ್ಜಸ್. 56 ವರ್ಷ ವಯಸ್ಸಾದರೂ ಅರಿವಿಲ್ಲದೆ ಅಳುತ್ತಾ ಇದ್ದೀನಿ. ಬೇಜಾರು ಮಾಡಿಕೊಳ್ಳಬೇಡಿ" ಎಂದಿದ್ದಾರೆ. ಅವಾಗ ಆಂಕರ್‌ ಅನುಶ್ರೀ ವಿನೋದ್‌ ರಾಜ್‌ ಅವರನ್ನು ಸಮಾಧಾನ ಮಾಡಿ ನಿಮ್ಮ ನೋವು ಅರ್ಥವಾಗುತ್ತದೆ. ಕ್ಷಮೆ ಕೇಳಬೇಡಿ  ಎಂದು ಹೇಳಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News