AR Rahman ಪ್ರತಿದಿನ ಆತ್ಮಹತ್ಯೆ ಬಗ್ಗೆ ಯೋಚಿಸುತ್ತಿದ್ದರಂತೆ! ಕಾರಣ...

ಮಹಾನ್ ಸಂಗೀತಗಾರ ಎ.ಆರ್. ರಹಮಾನ್(AR Rahman) ತಮ್ಮ ಜೀವನವನ್ನು ಕೊನೆಗೊಳಿಸುವ ಬಗ್ಗೆ ಯೋಚಿಸುತ್ತಿದ್ದ ಒಂದು ಸಮಯವಿತ್ತು. ಎ.ಆರ್.ರೆಹಮಾನ್ ತಮ್ಮ 53 ನೇ ಹುಟ್ಟುಹಬ್ಬವನ್ನು ಇಂದು ಆಚರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ, ಅವರ ಜೀವನಕ್ಕೆ ಸಂಬಂಧಿಸಿದ ಈ ನೋವಿನ ರಹಸ್ಯವನ್ನು ನಾವು ತಿಳಿಸುತ್ತಿದ್ದೇವೆ.

Last Updated : Jan 6, 2020, 09:20 AM IST
AR Rahman ಪ್ರತಿದಿನ ಆತ್ಮಹತ್ಯೆ ಬಗ್ಗೆ ಯೋಚಿಸುತ್ತಿದ್ದರಂತೆ! ಕಾರಣ... title=

ನವದೆಹಲಿ: ಬಾಲಿವುಡ್‌ಗೆ ಆಸ್ಕರ್ ಮತ್ತು ಗ್ರ್ಯಾಮಿ ಪ್ರಶಸ್ತಿ ಗೌರವಗಳನ್ನು ನೀಡಿರುವ ಸಂಗೀತ ಸಂಯೋಜಕ ಎ.ಆರ್.ರೆಹಮಾನ್(AR Rahman) ಅವರ ರಾಗಗಳು ಇಡೀ ಜಗತ್ತಿನಲ್ಲಿ ವಿಭಿನ್ನ ಸ್ಥಾನವನ್ನು ಗಳಿಸಿವೆ. ಅವರು ಭಾರತೀಯ ಚಿತ್ರರಂಗದ ಸಂಗೀತವನ್ನು ಹೊಸ ಆಯಾಮಗಳಿಗೆ ಕೊಂಡೊಯ್ದಿದ್ದಾರೆ. ಆದರೆ ಈ ಮಹಾನ್ ಸಂಗೀತಗಾರನು ತನ್ನ ಜೀವನವನ್ನು ಕೊನೆಗೊಳಿಸುವ ಬಗ್ಗೆ ಯೋಚಿಸುತ್ತಿದ್ದರು ಎಂದು ನಿಮಗೆ ತಿಳಿದಿದೆಯೇ? ಎ.ಆರ್.ರೆಹಮಾನ್ ತಮ್ಮ 53 ನೇ ಹುಟ್ಟುಹಬ್ಬವನ್ನು ಇಂದು ಆಚರಿಸುತ್ತಿದ್ದಾರೆ. ಈ ಸಂದರ್ಭದಲ್ಲಿ, ಅವರ ಜೀವನಕ್ಕೆ ಸಂಬಂಧಿಸಿದ ಈ ನೋವಿನ ರಹಸ್ಯವನ್ನು ನಾವಿಂದು ಹೇಳಲಿದ್ದೇವೆ.

ಎ.ಆರ್. ರಹಮಾನ್ ಅವರ ಜೀವನದಲ್ಲಿ ಅವರು ತಮ್ಮಿಂದ ಏನೂ ಮಾಡಲು ಸಾಧ್ಯವಿಲ್ಲ. ನಾನು ಜೀವನದಲ್ಲಿ ಸೊತಿದ್ದೆನೆಉ ಎಂದು ಆತ್ಮಹತ್ಯೆಯ ಬಗ್ಗೆ ಯೋಚಿಸುತ್ತಿದ್ದರು. ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತಗಾರ ಎರಡು ವರ್ಷಗಳ ಹಿಂದೆ ಸಂದರ್ಶನವೊಂದರಲ್ಲಿ, "25 ವರ್ಷಗಳಿಂದ ನಾನು ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ಯೋಚಿಸುತ್ತಿದ್ದೆ. ನಮ್ಮಲ್ಲಿ ಹೆಚ್ಚಿನವರು ಇದು ಒಳ್ಳೆಯದಲ್ಲ ಎಂದು ಭಾವಿಸುತ್ತಾರೆ. ನನ್ನ ತಂದೆ ಸತ್ತ ಕಾರಣ, ಒಂದು ರೀತಿಯ ಶೂನ್ಯತೆ ಆವರಿಸಿತ್ತು... ಜೀವನದಲ್ಲಿ ಅನೇಕ ಕಷ್ಟದ ಸಂದರ್ಭಗಳು ಎದುರಾದವು ಇಂತಹ ಸಂದರ್ಭದಲ್ಲಿ ನಾನು ಬಹಳ ದಿನಗಳವರೆಗೆ ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ಯೋಚಿಸುತ್ತಿದೆ". ಆದರೆ ಮುಂದೆ, " ಈ ಎಲ್ಲ ವಿಷಯಗಳು ನನ್ನನ್ನು ಹೆಚ್ಚು ಹೆಚ್ಚು ನಿರ್ಭಯವಾಗಿಸಿದವು. ಸಾವು ನಿಶ್ಚಿತ. ಯಾವುದೇ ಕೆಲಸ ಮಾಡಿದರೂ ಅದಕ್ಕೆ ಒಂದು ಎಲ್ಲೆ ಇದ್ದೇ ಇರುತ್ತದೆ. ಅದಕ್ಕೆ ಏಕೆ ಭಯಪಡಬೇಕು?” ಎಂಬುದು ಅರಿವಾಯಿತು ಎಂದು ರಹಮಾನ್ ತಿಳಿಸಿದರು.

ಜನ್ಮದಿನದ ಶುಭಾಶಯಗಳು ಎ.ಆರ್. ರಹಮಾನ್: ಸಂಗೀತ ರತ್ನದ ಸಾಂಪ್ರದಾಯಿಕ ಹಾಡುಗಳು

ರಹಮಾನ್ ತಮ್ಮ ಕಷ್ಟದ ದಿನಗಳು ಮತ್ತು ಇತರ ಘಟನೆಗಳ ಬಗ್ಗೆ 'ನೋಟ್ಸ್ ಆಫ್ ಎ ಡ್ರೀಮ್: ದಿ ಅಧಿಕೃತ ಜೀವನಚರಿತ್ರೆ ಎ.ಆರ್. ರಹಮಾನ್' ನಲ್ಲಿ ಮಾತನಾಡಿದ್ದಾನೆ. ಈ ಪುಸ್ತಕವನ್ನು ಕೃಷ್ಣ ತ್ರಿಲೋಕ್ ಬರೆದಿದ್ದಾರೆ.

ರಹಮಾನ್ ತನ್ನ ತಂದೆಯಿಂದ ಸಂಗೀತವನ್ನು ಕಲಿತರು. ಅವರ ತಂದೆ ಆರ್.ಕೆ.ಶೇಖರ್ ಮಲಯಾಳಿ ಚಿತ್ರಗಳಲ್ಲಿ ಸಂಗೀತ ನೀಡುತ್ತಿದ್ದರು. ತಂದೆ ತೀರಿಕೊಂಡಾಗ ರಹಮಾನ್‌ಗೆ ಕೇವಲ 9 ವರ್ಷ. ತಂದೆಯ ಮರಣದ ನಂತರ, ಅವರ ಮನೆಯ ಆರ್ಥಿಕ ಸ್ಥಿತಿ ಗಣನೀಯವಾಗಿ ಹದಗೆಟ್ಟಿತ್ತು. ಹಣಕ್ಕಾಗಿ, ಕುಟುಂಬವು ಸಂಗೀತ ವಾದ್ಯಗಳನ್ನು ಸಹ ಮಾರಾಟ ಮಾಡಬೇಕಾಗಿತ್ತು. ಕೇವಲ 11 ನೇ ವಯಸ್ಸಿನಲ್ಲಿ, ತನ್ನ ಬಾಲ್ಯದ ಗೆಳೆಯ ಶಿವಮಣಿಯೊಂದಿಗೆ, ರಹಮಾನ್ ರೂಟ್ಸ್ ಬ್ಯಾಂಡ್ ಗಾಗಿ ಕೀಬೋರ್ಡ್ (ಸಿಂಥಸೈಜರ್) ನುಡಿಸಲು ಪ್ರಾರಂಭಿಸಿದರು. ಬ್ಯಾಂಡ್ ಗುಂಪಿನಲ್ಲಿ ಕೆಲಸ ಮಾಡುವಾಗ, ಅವರು ಲಂಡನ್‌ನ ಟ್ರಿನಿಟಿ ಕಾಲೇಜ್ ಆಫ್ ಮ್ಯೂಸಿಕ್‌ನಿಂದ ವಿದ್ಯಾರ್ಥಿವೇತನವನ್ನು ಪಡೆದರು. ಅಲ್ಲಿಂದ ಅವರು ಪಾಶ್ಚಾತ್ಯ ಶಾಸ್ತ್ರೀಯ ಸಂಗೀತದಲ್ಲಿ ಪದವಿ ಗಳಿಸಿದರು.

ರಹಮಾನ್ ಅವರ ನಿಜವಾದ ಹೆಸರು ದಿಲೀಪ್ ಕುಮಾರ್ ಎಂದು ನಿಮ್ಮಲ್ಲಿ ಕೆಲವೇ ಜನರಿಗೆ ತಿಳಿದಿರುತ್ತದೆ. ಮತಾಂತರವನ್ನು ಉಲ್ಲೇಖಿಸಿ, ರೆಹಮಾನ್ ಸಂದರ್ಶನವೊಂದರಲ್ಲಿ, "ನನ್ನ ತಂದೆಯ ಮರಣದ 10 ವರ್ಷಗಳ ನಂತರ, ನಾವು ಮತ್ತೆ ಖಾದ್ರಿ ಸಾಹೇಬರನ್ನು ಭೇಟಿಯಾಗಲು ಹೋದೆವು. ಅವರು ಅನಾರೋಗ್ಯದಿಂದ ಬಳಲುತ್ತಿದ್ದರು ಮತ್ತು ನನ್ನ ತಾಯಿ ಅವರನ್ನು ನೋಡಿಕೊಂಡರು. ಅವರು ನನ್ನ ತಾಯಿಯನ್ನು ತನ್ನ ಮಗಳೆಂದು ಪರಿಗಣಿಸಿದ್ದರು. ನಮ್ಮ ನಡುವೆ ಒಂದು ನಿಕಟವಾದ ಸಂಬಂಧವಿತ್ತು. ಆ ಸಮಯದಲ್ಲಿ ನನಗೆ 19 ವರ್ಷ. ಖಾದ್ರಿ ಸಹಾಬ್ ಅವರನ್ನು ಭೇಟಿಯಾದ 1 ವರ್ಷದ ನಂತರ ರೆಹಮಾನ್ ತನ್ನ ಕುಟುಂಬದೊಂದಿಗೆ ಕೊಡಂಬಕ್ಕಂಗೆ ಸ್ಥಳಾಂತರಗೊಂಡರು. ಅವರ ಕುಟುಂಬ ಇನ್ನೂ ಅಲ್ಲಿಯೇ ವಾಸಿಸುತ್ತಿತ್ತು. ಆ ಸಮಯದಲ್ಲಿ ಒಂದು ದಾರಿಯನ್ನು ಆಯ್ಕೆ ಮಾಡಿಕೊಳ್ಳುವುದು ಸೂಕ್ತವೆಂದು ರೆಹಮಾನ್ ಅರ್ಥಮಾಡಿಕೊಂಡರು. ಅವನು ಮತ್ತು ಅವನ ತಾಯಿ ಇಬ್ಬರೂ ಸೂಫಿಸಂನ ಹಾದಿಯನ್ನು ಇಷ್ಟಪಟ್ಟರು. ಅದಕ್ಕಾಗಿಯೇ ಅವರು ಸೂಫಿ ಇಸ್ಲಾಂ ಧರ್ಮವನ್ನು ಸ್ವೀಕರಿಸಿದರು."

ದೆಹಲಿಯ ಸೂಫಿ ಗೋಷ್ಠಿಯಲ್ಲಿ ಎ.ಆರ್.ರೆಹಮಾನ್:
ಎ.ಆರ್.ರೆಹಮಾನ್ ಅವರ ಹೆಂಡತಿಯ ಹೆಸರು ಸೈರಾ ಬಾನು. ಅವರಿಗೆ ಖಾದಿಜಾ, ರಹೀಂ ಮತ್ತು ಅಮನ್ ಎಂಬ ಮೂವರು ಮಕ್ಕಳಿದ್ದಾರೆ. ಅವರು ದಕ್ಷಿಣ ಭಾರತದ ನಟ ರಶೀನ್ ರಹಮಾನ್ ಅವರ ಸಂಬಂಧಿಯೂ ಹೌದು. ರಹಮಾನ್ ಸಂಗೀತಗಾರ ಜಿ.ವಿ.ಪ್ರಕಾಶ್ ಕುಮಾರ್ ಅವರ ಚಿಕ್ಕಪ್ಪ. 1992 ರಲ್ಲಿ 'ರೋಜಾ' ಚಿತ್ರದೊಂದಿಗೆ ಚಲನಚಿತ್ರ ಜಗತ್ತಿನಲ್ಲಿ ತನ್ನ ಪ್ರಯಾಣವನ್ನು ಪ್ರಾರಂಭಿಸಿದ ನಂತರ, ಭೂಮಿಯ ಸ್ವರೂಪದ ಅತ್ಯಂತ ಶಾಸ್ತ್ರೀಯ ಮತ್ತು ಸಮಕಾಲೀನ ಧ್ವನಿಗಳನ್ನು ಒಳಗೊಂಡಂತೆ ಅವರ ಸಂಯೋಜನೆಗಳಿಗೆ ವಿವಿಧ ಸಂಗೀತ ಅಂಶಗಳನ್ನು ಸೇರಿಸುವ ಮೂಲಕ ಅವರು ತಮ್ಮದೇ ಆದ ಶೈಲಿಯನ್ನು ಅಭಿವೃದ್ಧಿಪಡಿಸಿದರು. ರಹಮಾನ್ ಅವರ ಸಂಗೀತವು ಬಾಲಿವುಡ್ ಸಂಗೀತದ ಧ್ವನಿಯನ್ನು ಬದಲಾಯಿಸಿತು ಮತ್ತು ಅದರ ನಂತರ ಸಾಂಪ್ರದಾಯಿಕವಾದಿಗಳು ತಮ್ಮ ಪಾಶ್ಚಾತ್ಯ ಸಂಗೀತವನ್ನು ಹಿಂದಿ ಹಾಡುಗಳಲ್ಲಿ ಹೇಗೆ ಬಳಸಬೇಕೆಂದು ಚರ್ಚಿಸುತ್ತಿದ್ದರು.

ಸ್ಲಮ್‌ಡಾಗ್ ಮಿಲಿಯನೇರ್ ಚಿತ್ರಕ್ಕಾಗಿ ರಹಮಾನ್‌ಗೆ ಎರಡು ಆಸ್ಕರ್ ಪ್ರಶಸ್ತಿ ನೀಡಲಾಗಿದೆ. ಎರಡು ಗ್ರ್ಯಾಮಿ ಪ್ರಶಸ್ತಿಗಳನ್ನು ಗೆದ್ದ ಮೊದಲ ಭಾರತೀಯ ಸಂಗೀತಗಾರ ಎ.ಆರ್. ರಹಮಾನ್. ರಹಮಾನ್ ಅವರು ಬಾಫ್ಟಾ ಪ್ರಶಸ್ತಿ, ಗೋಲ್ಡನ್ ಗ್ಲೋಬ್, 4 ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು, 15 ಫಿಲ್ಮ್‌ಫೇರ್ ಪ್ರಶಸ್ತಿಗಳು ಮತ್ತು 13 ಫಿಲ್ಮ್‌ಫೇರ್ ಸೌತ್ ಪ್ರಶಸ್ತಿಗಳನ್ನು ಸಹ ಪಡೆದಿದ್ದಾರೆ.

Trending News