ನಮ್ಮಿಬ್ಬರ ಮಧ್ಯೆ ಕೋಪವಿಲ್ಲ..ದರ್ಶನ್‌ ನೋಡಿ ನನಗೂ ಖುಷಿಯಾಯ್ತು..ದಚ್ಚು ಬಗ್ಗೆ ಕಿಚ್ಚನ ಮಾತು

Kiccha Sudeep on Darshan : ದರ್ಶನ್‌ ಬಗ್ಗೆ ಕಿಷ್ಷ ಸುದೀಪ್‌ ಮಾತನಾಡಿ ನಾನು ದರ್ಶನ್‌ ಕಿತ್ತಾಡಿಕೊಂಡಿಲ್ಲ, ನಮ್ಮಿಬ್ಬರ ಮದ್ಯ ಯಾವುದೇ ಕೋಪವಿಲ್ಲ. ಎಲ್ಲವೂ ನಿಧಾನವಾಗಿ ಬಗೆಹರಿಯುತ್ತದೆ. ಅದಕ್ಕೆ ಒಂದಷ್ಟು ಕಾಲಾವಕಾಶ ಬೇಕು ಎಂದು ಕಿಚ್ಚ ಹೇಳಿಕೊಂಡಿದ್ದಾರೆ.   

Written by - Savita M B | Last Updated : Sep 3, 2023, 12:36 PM IST
  • ಸದ್ಯ ಕಿಚ್ಚ ಸುದೀಪ್‌ ತಮ್ಮ ಬರ್ತಡೇ ಸಂಭ್ರಮದಲ್ಲಿದ್ದಾರೆ.
  • ಇದೆಲ್ಲದರ ನಡುವೆ ದರ್ಶನ್‌ ಮತ್ತು ಕಿಚ್ಚ ಸುದೀಪ್‌ ಇಬ್ಬರು ಒಂದಾಗಬೇಕು ಎನ್ನುವುದು ಎಷ್ಟೋ ಅಭಿಮಾನಿಗಳ ಆಸೆ.
  • ಕಳೆದ ಆರು ವರ್ಷಗಳಿಂದ ಅವರಿಬ್ಬರ ನಡುವಿನ ವೈಮನಸ್ಸು ಹಾಗೇಯೇ ಇದೆ.
ನಮ್ಮಿಬ್ಬರ ಮಧ್ಯೆ ಕೋಪವಿಲ್ಲ..ದರ್ಶನ್‌ ನೋಡಿ ನನಗೂ ಖುಷಿಯಾಯ್ತು..ದಚ್ಚು ಬಗ್ಗೆ ಕಿಚ್ಚನ ಮಾತು title=

Kiccha-Dachhu : ಸದ್ಯ ಕಿಚ್ಚ ಸುದೀಪ್‌ ತಮ್ಮ ಬರ್ತಡೇ ಸಂಭ್ರಮದಲ್ಲಿದ್ದಾರೆ. ಇದೇ ಖುಷಿಯಲ್ಲಿ ಅಭಿಮಾನಿಗಳ ಪ್ರೀತಿಯನ್ನು, ಆಶೀರ್ವಾದವನ್ನು ಪಡೆದುಕೊಳ್ಳುತ್ತಿದ್ದಾರೆ. ಇನ್ನು ಇದೆಲ್ಲದರ ನಡುವೆ ದರ್ಶನ್‌ ಮತ್ತು ಕಿಚ್ಚ ಸುದೀಪ್‌ ಇಬ್ಬರು ಒಂದಾಗಬೇಕು ಮತ್ತೆ ಚಂದನವನ ನಂದನವನ ಆಗಬೇಕು ಎನ್ನುವುದು ಎಷ್ಟೋ ಅಭಿಮಾನಿಗಳ ಆಸೆ. 

ಕಳೆದ ಆರು ವರ್ಷಗಳಿಂದ ಅವರಿಬ್ಬರ ನಡುವಿನ ವೈಮನಸ್ಸು ಹಾಗೇಯೇ ಇದೆ. ಇದೇ ಕಾರಣಕ್ಕೆ ಇವರಿಬ್ಬರು ಒಂದಾಗಬೇಕೆಂದು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಹೀಗಿರುವಾಗಲೇ ಕಿಚ್ಚ ತಮ್ಮ ಹುಟ್ಟುಹಬ್ಬದ ದಿನವೇ ದರ್ಶನ್‌ ಕುರಿತು ಮಾತನಾಡಿ, ನನ್ನ ಮತ್ತು ದರ್ಶನ್‌ ಮದ್ಯ ಯಾವ ಕೋಪವೂ ಇಲ್ಲ ಎಂದು ಸ್ನೇಹಿತನಿಗಾಗಿ ಮಾತನಾಡಿದ್ದಾರೆ. 

ಇದನ್ನೂ ಓದಿ-ಅ.19ರಂದು ಬಹು ನಿರೀಕ್ಷಿತ ‘ಘೋಸ್ಟ್’ ತೆರೆಗೆ; ವಿದೇಶದಲ್ಲೂ ‘ಬಿಗ್ ಡ್ಯಾಡಿ’ ಹವಾ ಜೋರು!

ಬರ್ತಡೇಯಂದು ದರ್ಶನ್‌ ಬಗ್ಗೆ ಮಾತನಾಡಿರುವ ಕಿಚ್ಚ ಸುದೀಪ್‌, ದರ್ಶನ್‌ ಎಂಬುದು ದೊಡ್ಡ ಹೆಸರು, ಅವರು ದೊಡ್ಡ ಸ್ಟಾರ್‌, ಇನ್ನು ದರ್ಶನ್‌ ಮತ್ತೆ ನನ್ನ ಮದ್ಯ ಯಾವುದೇ ಕಿತ್ತಾಟವಾಗಿಲ್ಲ. ಯಾವುದೇ ದ್ವೇಷವಿಲ್ಲ. ದರ್ಶನ್‌ ಆ ಪಾರ್ಟಿಗೆ ಬರುತ್ತಾರೆ ಎಂಬುದು ನನಗೆ ಗೊತ್ತಿತ್ತು. ಇಬ್ಬರು ಒಂದೇ ವೇದಿಕೆಯಲ್ಲಿ ಮುಖಾಮುಖಿಯಾಗಿದ್ದೇವೆ ಎಂದರೇ ಎಲ್ಲವೂ ಸರಿಯಾಗಿದೆ ಎಂದಲ್ಲ. ನನ್ನ ಮನಸ್ಸಲ್ಲಿನ ಪ್ರಶ್ನೆಗಳಿಗೆ ಅವರ ಮನಸ್ಸಲ್ಲಿನ ಪ್ರಶ್ನೆಗಳಿಗೆ ಉತ್ತರ ಸಿಕ್ಕಮೇಲೆ ಎಲ್ಲವೂ ಬಗೆಹರಿಯುತ್ತದೆ. ಅದಕ್ಕೆ ಒಂದಷ್ಟು ಕಾಲಾವಕಾಶ ಬೇಕಾಗುತ್ತದೆ. 

ಮುಂದುವರೆದು ಮಾತನಾಡಿದ ಕಿಚ್ಚ ಸುಮಲತಾ ಅವರು ನನಗೆ ತುಂಬಾ ಬೇಕಾದವರು. ಅವರನ್ನು ನಾನು ಚಿಕ್ಕ ವಯಸ್ಸಿನಿಂದಲೂ ನೋಡಿಕೊಂಡು ಬಂದಿದ್ದೇನೆ. ಅವರ ಪಾರ್ಟಿಯಲ್ಲಿ ನನಗೆ ತುಂಬಾ ಕಂಫರ್ಟ್‌ ಜೋನ್‌ ಕೂಡಾ ಇತ್ತು. ಇದೆಲ್ಲಕ್ಕಿಂತ ಹೆಚ್ಚಾಗಿ ಆ ಪಾರ್ಟಿಗೆ ದರ್ಶನ್‌ ಬರುತ್ತಾರೆ ಎನ್ನುವುದು ನನಗೆ ಮೊದಲೇ ಗೊತ್ತಿತ್ತು.  ಹಲವು ವರ್ಷಗಳ ಬಳಿಕ ಅವರನ್ನು ನೋಡಿ ಖುಷಿಯಾಯಿತು. ಎಲ್ಲವೂ ನಿಧಾನಕ್ಕೆ ಆಗಲಿದೆ ಎಂದು ತಮ್ಮ ಮನದಾಳದ ಮಾತುಗಳನ್ನಾಡಿದ್ದಾರೆ. 

ಇದನ್ನೂ ಓದಿ-ಹತ್ತನೇ ಸೀಸನ್ ನಲ್ಲಿ ಸರ್ಪ್ರೈಸ್ ಕೊಡಲು ಸಜ್ಜಾದ ಬಿಗ್ ಬಾಸ್ ರಿಯಾಲಿಟಿ ಶೋ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News