ಚಿತ್ರೀಕರಣ ಮುಗಿಸಿದ S/o ಮುತ್ತಣ್ಣ : ಇದೇ ಜಾಗದಲ್ಲಿ ಕುಂಬಳಕಾಯಿ ಹೊಡೆಯಬೇಕು ಎನ್ನುವ ನಿರ್ದೇಶಕರ ನಿರ್ಧಾರದ ಹಿಂದಿದೆ ಈ ಕಾರಣ

‘ಸನ್ ಆಫ್ ಮುತ್ತಣ್ಣ’ ಅಪ್ಪ ಮಗನ ಬಾಂಧವ್ಯದ ಕಥೆ. ಸಿನಿಮಾದ ಕತೆ ಮತ್ತು ಮಾಡಿರುವ ಕೆಲಸದ ಬಗ್ಗೆ ಚಿತ್ರದ ನಾಯಕ ಪ್ರಣಂ ದೇವರಾಜ್ ಖುಷಿ ವ್ಯಕ್ತಪಡಿಸಿದ್ದಾರೆ. ಈ ಜರ್ನಿ ಖುಷಿ ಜೊತೆಗೆ ಎಮೋಷನಲ್ ಆಗಿಯೂ ಇತ್ತು ಎಂದಿದ್ದಾರೆ. 

Written by - Ranjitha R K | Last Updated : Jul 10, 2024, 11:10 AM IST
  • 49 ದಿನಗಳ ಚಿತ್ರೀಕರಣ ಮುಕ್ತಾಯ
  • S/o ಮುತ್ತಣ್ಣ ಸಿನಿಮಾಗೆ ಕುಂಬಳಕಾಯಿ
  • ಬಂಡೆ ಮಹಾಕಾಳಿ ಸನ್ನಿಧಿಯಲ್ಲಿ 'S/o ಮುತ್ತಣ್ಣ'ನಿಗೆ ಕುಂಬಳಕಾಯಿ
ಚಿತ್ರೀಕರಣ ಮುಗಿಸಿದ S/o ಮುತ್ತಣ್ಣ : ಇದೇ ಜಾಗದಲ್ಲಿ ಕುಂಬಳಕಾಯಿ ಹೊಡೆಯಬೇಕು ಎನ್ನುವ ನಿರ್ದೇಶಕರ ನಿರ್ಧಾರದ ಹಿಂದಿದೆ ಈ ಕಾರಣ  title=

ಬೆಂಗಳೂರು : ದೇವರಾಜ್ ಕಿರಿಯ ಮಗ ಪ್ರಣಂ ದೇವರಾಜ್ ನಟನೆಯ ಸಿನಿಮಾ ‘ಸನ್ ಆಫ್ ಮುತ್ತಣ್ಣ’.ಈ ಚಿತ್ರದ ಚಿತ್ರೀಕರಣ ಮುಕ್ತಾಯಗೊಂಡಿದೆ.ಚಿತ್ರದ ಚಿತ್ರೀಕರಣ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಸಿನಿಮಾ ಸೆಟ್ಟೇರಿದ ಜಾಗದಲ್ಲಿ  ಕುಂಬಳಕಾಯಿ ಹೊಡೆಯಲಾಗಿದೆ.ಇದೇ ಜಾಗದಲ್ಲಿ ಕುಂಬಳಕಾಯಿ ಹೊಡೆಯಬೇಕು ಎಂದು ಚಿತ್ರತಂಡ ಮೊದಲೇ ನಿರ್ಧಾರ ಮಾಡಿತ್ತಂತೆ.   ಆ ಹಿನ್ನೆಲೆಯಲ್ಲಿ ಬೆಂಗಳೂರಿನ ಬಂಡೆ ಮಾಕಾಳಮ್ಮ ದೇವಸ್ಥಾನದಲ್ಲಿ ಕೊನೆಯ ಹಂತದ ಶೂಟಿಂಗ್ ಮಾಡಿ ಕುಂಬಳಕಾಯಿ ಹೊಡೆಯಲಾಗಿದೆ. 

‘ಸನ್ ಆಫ್ ಮುತ್ತಣ್ಣ’ ಅಪ್ಪ ಮಗನ ಬಾಂಧವ್ಯದ ಕಥೆ. ಸಿನಿಮಾದ ಕತೆ ಮತ್ತು ಮಾಡಿರುವ ಕೆಲಸದ ಬಗ್ಗೆ ಚಿತ್ರದ ನಾಯಕ ಪ್ರಣಂ ದೇವರಾಜ್ ಖುಷಿ ವ್ಯಕ್ತಪಡಿಸಿದ್ದಾರೆ. ಈ ಜರ್ನಿ ಖುಷಿ ಜೊತೆಗೆ ಎಮೋಷನಲ್ ಆಗಿಯೂ ಇತ್ತು ಎಂದಿದ್ದಾರೆ. 

ಇದನ್ನೂ ಓದಿ : ಅಬ್ಬಬ್ಬಾ..!ಹೊಳೆದದ್ದೆಲ್ಲಾ ಚಿನ್ನ: ಬಂಗಾರದ ಪೈಜಾಮ ತೊಟ್ಟು ಮಿಂಚಿದ ಅನಂತ್‌ ಅಂಬಾನಿ..

ನಾಯಕಿ ಖುಷಿ ರವಿ ಮಾತನಾಡಿ,  ಪುರಾತನ ಫಿಲ್ಮಂಸ್ ಅದ್ಧೂರಿಯಾಗಿ ಶೂಟಿಂಗ್ ಮುಗಿಸಿದೆ. 49 ದಿನ ಜರ್ನಿಯಲ್ಲಿಯೂ ಯಾವುದೇ ರೀತಿ ಕೊರತೆ ಇಲ್ಲದ ರೀತಿ ನೋಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ.ಈ ಜನರೇಷನ್ ಗೆ ಬೇಕಾಗಿರುವ ಅಪ್ಪ-ಮಗ, ಅಪ್ಪ-ಮಗಳು, ಸ್ನೇಹ ಎಲ್ಲಾ ಎಮೋಷನ್ ಅನ್ನು ಸಿನಿಮಾದಲ್ಲಿ ತೋರಿಸಿದ್ದಾರೆ ಎಂದು ತಿಳಿಸಿದ್ದಾರೆ. 

ಬಂಡಿ ಮಹಾಕಾಳಿ ದೇಗುಲದಲ್ಲಿ ಸಿನಿಮಾ ಶುರು ಮಾಡಿದ್ದೆವು. ನಿರ್ಮಾಪಕರು‌ ಇಲ್ಲಿಯೇ ಕುಂಬಳಕಾಯಿ ಹೊಡೆಯಬೇಕು ಎಂಬ ಆಸೆ ವ್ಯಕ್ತಪಡಿಸಿದ್ದರು. ಅದಕ್ಕಾಗಿ ಇಲ್ಲಿಯೇ ಕುಂಬಳಕಾಯಿ ಹೊಡೆದಿದ್ದೇವೆ. 49 ದಿನ ವಾರಣಾಸಿ, ಬೆಂಗಳೂರಿನಲ್ಲಿ ಶೂಟಿಂಗ್ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.  

ಇದನ್ನೂ ಓದಿ : 27ನೇ ವಯಸ್ಸಿನ ಈ ನಟಿ ಭರ್ತಿ 1000 ಕೋಟಿಯ ಒಡತಿ..!

‘S/O ಮುತ್ತಣ್ಣ’ ಸಿನಿಮಾವನ್ನು ಶ್ರೀಕಾಂತ್ ಹುಣ್ಸೂರ್ ನಿರ್ದೇಶನ ಮಾಡಿದ್ದಾರೆ.ಈ ಚಿತ್ರದ ಮೂಲಕ ಶ್ರೀಕಾಂತ್, ಸ್ವತಂತ್ರ ನಿರ್ದೇಶಕರಾಗಿ ಹೊರಹೊಮ್ಮಿದ್ದಾರೆ.  ಪ್ರಣಂ ದೇವರಾಜ್ ನಾಯಕನಾಗಿ ನಟಿಸಿದ್ದು, ಖುಷಿ ರವಿ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ.ಇನ್ನು ಹಲವು ಹಿರಿಯ ಕಲಾವಿದರಾದ ರಂಗಾಯಣ ರಘು,ಸುಚೇಂದ್ರ ಪ್ರಸಾದ್,ಗಿರಿ ಶಿವಣ್ಣ,ತಬಲ ನಾಣಿ, ಶ್ರೀನಿವಾಸ್ ಪ್ರಭು, ಸುಧಾ ಬೆಳವಾಡಿ, ಅರುಣ್ ಚಕ್ರವರ್ತಿ ಮೊದಲಾದವರು ನಟಿಸಿದ್ದಾರೆ.  

ಪುರಾತನ ಫಿಲ್ಮಂಸ್ ಬ್ಯಾನರ್ ಅಡಿಯಲ್ಲಿ ಮುಡಿ ಬಂದಿರುವ ಈ ಚಿತ್ರವನ್ನು  ದಿವ್ಯಾ ನಿರ್ಮಾಣ ಮಾಡುತ್ತಿದ್ದಾರೆ.‘S/O ಮುತ್ತಣ್ಣ’ ಸಿನಿಮಾಕ್ಕೆ ಸ್ಕೇಟಿಂಗ್ ಕೃಷ್ಣ ಛಾಯಾಗ್ರಹಣ , ಹರೀಶ್ ಕೊಮ್ಮೆ ಸಂಕಲನ ಇದೆ. ಸಚಿನ್ ಬಸ್ರೂರ್ ಸಂಗೀತ ನಿರ್ದೇಶನ ಮಾಡುತ್ತಿರುವುದು ವಿಶೇಷ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News