Shivarajkumar: ತೆಲುಗು, ತಮಿಳು ಆಯ್ತು ಈಗ ಬಾಲಿವುಡ್‌ಗೆ ಸೆಂಚುರಿ ಸ್ಟಾರ್‌...ಕೇರಳ ಸ್ಟೋರಿ ನಿರ್ದೇಶಕನ ಚಿತ್ರದಲ್ಲಿ ನಟನೆ?

Shivanna Entry to Bollywood : ಸ್ಯಾಂಡಲ್‌ವುಡ್‌ ಕಿಂಗ್‌ ಎಂದೇ ಗುರುತಿಸಿಕೊಳ್ಳುವ ಕನ್ನಡದ ಎವರ್‌ಗ್ರೀನ್‌ ನಟ ಶಿವರಾಜ್‌ಕುಮಾರ್‌ ಸದ್ಯ ಜೈಲರ್‌ ಸಿನಿಮಾದಲ್ಲಿ ನಟಿಸಿ ಇಡೀ ಸೌತ್‌ ಇಂಡಿಯಾ ತುಂಬಾ ಕ್ರೇಜ್‌ ಕ್ರಿಯೆಟ್‌ ಮಾಡಿದ್ದಾರೆ. ಇದೀಗ ಸೆಂಚುರಿಸ್ಟಾರ್‌ ಬಾಲಿವುಡ್‌ ಪ್ರವೇಶಿಸಲಿದ್ದಾರೆ ಎನ್ನಲಾಗುತ್ತಿದೆ.   

Written by - Savita M B | Last Updated : Aug 29, 2023, 06:01 PM IST
  • ಜೈಲರ್‌ ಸಿನಿಮಾ ಭಾಕಾಫೀಸ್‌ ಕೊಳ್ಳೆ ಹೊಡೆಯುತ್ತಿರುವುದು ಎಲ್ಲರಿಗು ಗೊತ್ತೆಯಿದೆ.
  • ಶಿವಣ್ಣ ಅವರದು ಚಿಕ್ಕ ಪಾತ್ರ ಆದರೂ ಸಹ ಅದಕ್ಕೆ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್‌ ಸಿಕ್ಕಿದೆ.
  • ಸದ್ಯ ಶಿವಣ್ಣ ಬಾಲಿವುಡ್‌ಗೂ ಎಂಟ್ರಿ ಕೊಡಲಿದ್ದಾರೆ ಎನ್ನಲಾಗುತ್ತಿದೆ.
Shivarajkumar: ತೆಲುಗು, ತಮಿಳು ಆಯ್ತು ಈಗ ಬಾಲಿವುಡ್‌ಗೆ ಸೆಂಚುರಿ ಸ್ಟಾರ್‌...ಕೇರಳ ಸ್ಟೋರಿ ನಿರ್ದೇಶಕನ ಚಿತ್ರದಲ್ಲಿ ನಟನೆ? title=

Shivanna in Bollywood Film : ಜೈಲರ್‌ ಸಿನಿಮಾ ಭಾಕಾಫೀಸ್‌ ಕೊಳ್ಳೆ ಹೊಡೆಯುತ್ತಿರುವುದು ಎಲ್ಲರಿಗು ಗೊತ್ತೆಯಿದೆ. ಅದರಲ್ಲಿ ಶಿವಣ್ಣ ಅವರದು ಚಿಕ್ಕ ಪಾತ್ರ ಆದರೂ ಸಹ ಅದಕ್ಕೆ ಪ್ರೇಕ್ಷಕರಿಂದ ಭರ್ಜರಿ ರೆಸ್ಪಾನ್ಸ್‌ ಸಿಕ್ಕಿದೆ. ಇನ್ನು ಇದೇ ಸಿನಿಮಾದ ಮೂಲಕ ಶಿವಣ್ಣ ಕಾಲಿವುಡ್ ಪ್ರವೇಶಿಸಿದ್ದಾರೆ.

ಕನ್ನಡದಲ್ಲಿಯೇ ಮಾಸ್‌ ಡೈಲಾಗ್‌ ಹೊಡೆದಿರುವ ಶಿವಣ್ಣ ತಮಿಳು ಮಂದಿ ಸೇರಿದಂತೆ ಕೇರಳ ಹಾಗೂ ಆಂಧ್ರ ಜನರಿಗೆ ಸಖತ್‌ ಫೇವರೆಟ್‌ ಆಗಿದ್ದಾರೆ. ಚಿತ್ರದಲ್ಲಿ ರಜನಿ ಪಾತ್ರಕ್ಕೆ ಎಷ್ಟು ಗಮ್ಮತ್ತಿದೆಯೋ ಅಷ್ಟೇ ಗಮ್ಮತ್ತು ಶಿವಣ್ಣನ ಅಥಿತಿ ಪಾತ್ರಕ್ಕಿದೆ. 

ಇದನ್ನೂ ಓದಿ-Kichha 47: ಈ ಕ್ರೇಜಿ ಕಾಂಬಿನೇಷನ್‌ನಲ್ಲಿ ಕಿಚ್ಚನ ಮುಂದಿನ ಸಿನಿಮಾ!...ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಲ್ಲಿ ಮೆಗಾ ಪ್ರಾಜೆಕ್ಟ್?

ಹೀಗೆ ಸೌತ್‌ನ ಮೂರು ಚಿತ್ರರಂಗಗಳಲ್ಲಿ ನಟಿಸಿ ಸೈ ಎನಿಸಿಕೊಂಡಿರುವ ಶಿವಣ್ಣ ಸದ್ಯ ಬಾಲಿವುಡ್‌ಗೂ ಎಂಟ್ರಿ ಕೊಡಲಿದ್ದಾರೆ ಎನ್ನಲಾಗುತ್ತಿದೆ. ಹೌದು ಹಿಂದಿ ಚಿತ್ರದಲ್ಲಿ ಶಿವರಾಜ್‌ಕುಮಾರ್‌ ಒಂದು ಪಾತ್ರಕ್ಕೆ ಜೀವ ತುಂಬಲಿದ್ದಾರೆ ಎನ್ನಲಾಗುತ್ತಿದೆ. 

ಇನ್ನು ಈ ರೀತಿ ಸುದ್ದಿ ಹರಿದಾಡಲು ಕಾರಣವೆಂದರೇ ಅದು ಈ ವರ್ಷ ಬಿಡುಗಡೆಯಾಗಿ ವಿವಾದಕ್ಕೆ ಸಿಲುಕಿದರೂ ಬಾಕ್ಸ್ ಆಫೀಸ್‌ನಲ್ಲಿ ಸುನಾಮಿ ಎಬ್ಬಿಸಿದ್ದ 'ದಿ ಕೇರಳ ಸ್ಟೋರಿ' ಚಿತ್ರದ ನಿರ್ದೇಶಕ ಸುದೀಪ್ತೊ ಸೇನ್ ಅವರನ್ನು ಶಿವಣ್ಣ ಭೇಟಿಯಾಗಿರುವುದು.  

ಹೌದು ಶಿವಣ್ಣ ಸುದೀಪ್ತೊ ಸೇನ್ ಅವರನ್ನು ಭೇಟಿ ಮಾಡಿರುವ ಫೋಟೊಗಳು ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್‌ ಆಗಿದ್ದು, ನಿರ್ದೇಶಕ ಸುದೀಪ್ತೊ ಸೇನ್ ತಮ್ಮ ಮುಂದಿನ ಚಿತ್ರ 'ಬಸ್ತರ್' ಶಿವಣ್ಣನಿಗೆ ವಿಶೇಷ ಪಾತ್ರವೊಂದನ್ನು ಮಾಡಲು ಆಹ್ವಾನಿಸಿದ್ದಾರೆ ಎನ್ನಲಾಗುತ್ತಿದೆ. 

ಇದನ್ನೂ ಓದಿ-Darshan : ಏನಿದು ದರ್ಶನ್ 'ಏಕಾಂಗಿ' ಟ್ವೀಟ್?.."ಬೀ ಅಲೋನ್ ಟು ಬಿ ಹ್ಯಾಪಿ" ಎಂದಿದ್ದೇಕೆ ಡಿಬಾಸ್‌..?

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News