Salar: ಚಿತ್ರರಂಗಕ್ಕೆ ಮತ್ತೊಬ್ಬ ಶಿವಗಾಮಿ ಎಂಟ್ರಿ.. ರಮ್ಯಾ ಕೃಷ್ಣನ್‌ ಅವರನ್ನೇ ಮೀರಿಸ್ತಾರಾ ಶ್ರೀಯಾ ರೆಡ್ಡಿ!

Shriya Reddy: ಯಂಗ್ ರೆಬೆಲ್ ಸ್ಟಾರ್ ಪ್ರಭಾಸ್ ಅಭಿನಯದ ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಚಿತ್ರ ನಿನ್ನೆ ಥಿಯೇಟರ್‌ಗಳಲ್ಲಿ ಬಿಡುಗಡೆಯಾಗಿದ್ದು ಪಾಸಿಟಿವ್ ಟಾಕ್ ಗಳಿಸುತ್ತಿದೆ. ಈ ಚಿತ್ರದಲ್ಲಿ ತಮಿಳು ನಟಿ ಶ್ರೀಯಾ ರೆಡ್ಡಿ ಅವರು ರಾಧಾ ಪಾತ್ರವನ್ನು ನಿರ್ವಹಿಸಿದ್ದಾರೆ. ಇದೀಗ ಇವರ ಕುರಿತಾಗಿ ಭಾರೀ ಚರ್ಚೆಯೊಂದು ಶುರುವಾಗಿದ್ದು.. ಚಿತ್ರರಂಗಕ್ಕೆ ಮತ್ತೊಬ್ಬ ಶಿವಗಾಮಿ ಎಂಟ್ರಿ ಕೊಟ್ಟಿದ್ದಾರೆ ಎನ್ನಲಾಗುತ್ತಿದೆ..   

Written by - Savita M B | Last Updated : Dec 23, 2023, 05:14 PM IST
  • ಪ್ರೇಕ್ಷಕರ ಭಾರೀ ನಿರೀಕ್ಷೆಯಂತೆ ಬಿಡುಗಡೆಯಾದ ಸಲಾರ್‌ ಚಿತ್ರ
  • ಸಲಾರ್‌ ಚಿತ್ರ ಭಾಕ್ಸಾಫೀಸ್‌ನಲ್ಲಿ ಭರ್ಜರಿ ಸೌಂಡ್‌ ಮಾಡುತ್ತಿದೆ..
  • ಇದೀಗ ಈ ಚಿತ್ರದಲ್ಲಿನ ನಟಿ ಶ್ರೀಯಾ ರೆಡ್ಡಿ ಪಾತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ
Salar: ಚಿತ್ರರಂಗಕ್ಕೆ ಮತ್ತೊಬ್ಬ ಶಿವಗಾಮಿ ಎಂಟ್ರಿ.. ರಮ್ಯಾ ಕೃಷ್ಣನ್‌ ಅವರನ್ನೇ ಮೀರಿಸ್ತಾರಾ ಶ್ರೀಯಾ ರೆಡ್ಡಿ!  title=

Salar: ಪ್ರೇಕ್ಷಕರ ಭಾರೀ ನಿರೀಕ್ಷೆಯಂತೆ ಬಿಡುಗಡೆಯಾದ ಸಲಾರ್‌ ಚಿತ್ರ ಭಾಕ್ಸಾಫೀಸ್‌ನಲ್ಲಿ ಭರ್ಜರಿ ಸೌಂಡ್‌ ಮಾಡುತ್ತಿದೆ.. ಇದೀಗ ಈ ಚಿತ್ರದಲ್ಲಿನ ನಟಿ ಶ್ರೀಯಾ ರೆಡ್ಡಿ ಪಾತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು.. ವಿಮರ್ಶಕರ ಮೆಚ್ಚುಗೆ ಪಡೆಯುತ್ತಿದ್ದಾರೆ. ಅಲ್ಲದೇ ಸಲಾರ್ ಸಿನಿಮಾ ನೋಡಿದವರು ಶ್ರೀಯಾ ರೆಡ್ಡಿ ಪಾತ್ರವನ್ನು ‘ಬಾಹುಬಲಿ’ ಶಿವಗಾಮಿಗೆ ಹೋಲಿಸುತ್ತಿದ್ದಾರೆ... 

ಚಿತ್ರರಂಗಕ್ಕೆ ರಮ್ಯಾ ಕೃಷ್ಣ ಅವರಂತಹ ಮತ್ತೊಬ್ಬ ಮಹಾನ್ ನಟಿ ಸಿಕ್ಕಿದ್ದಾರೆ ಎಂದು ಚಿತ್ರರಂಗದಲ್ಲಿ ಪ್ರಶಂಸೆಯ ಸುರಿಮಳೆಯಾಗುತ್ತಿದೆ.. 2003 ರಲ್ಲಿ, ಶ್ರೀಯಾ ರೆಡ್ಡಿ ತೆಲುಗು ಚಲನಚಿತ್ರದಲ್ಲಿ ನಟಿಸಿ ನಂತರ ವಿಶಾಲ್ ಅಭಿನಯದ ಪೊಗರು ಚಿತ್ರದಲ್ಲಿ ವಿಲನ್ ಪಾತ್ರದಲ್ಲಿ ನಟಿಸಿದ್ದರು... 

ಇದನ್ನೂ ಓದಿ-56ನೇ ವಯಸ್ಸಿನಲ್ಲಿ ತನಗಿಂತ 22 ವರ್ಷ ಕಿರಿಯ ಯುವತಿ ಜೊತೆ 2ನೇ ಬಾರಿ ಮದುವೆಗೆ ಸಿದ್ಧರಾದ ಸ್ಟಾರ್ ನಟ!

ಇದೀಗ ಅಭಿಮಾನಿಗಳು ಸಲಾರ್ ಚಿತ್ರದಲ್ಲಿನ ಶ್ರೀಯಾ ಅವರ ಲುಕ್‌ನ್ನು ರಮ್ಯಾ ಕೃಷ್ಣನ್‌ ಅವರಿಗೆ ಹೋಲಿಸಿ ಭಾರೀ ಮೆಚ್ಚುಗೆ ನೀಡುತ್ತಿದ್ದಾರೆ.. ಇನ್ನು ಮೊದಲ ದಿನವೇ ಈ ಚಿತ್ರ ವಿಶ್ವಾದ್ಯಂತ ಚಿತ್ರ 178.7 ಕೋಟಿ ಗಳಿಸಿದೆ ಎಂದು ನಿರ್ಮಾಪಕರು ಮಾಹಿತಿ ನೀಡಿದ್ದಾರೆ. ಅಂದರೆ ನಿವ್ವಳ ಕಲೆಕ್ಷನ್ 89 ಕೋಟಿಗೂ ಹೆಚ್ಚು...

ಈ ವರ್ಷ ಬಾಲಿವುಡ್‌ನ ಶಾರುಖ್ ಖಾನ್ ಮತ್ತು ರಣಬೀರ್ ಕಪೂರ್ ಅವರ ಚಿತ್ರಗಳು ಭಾರತದಾದ್ಯಂತ ದೊಡ್ಡ ಓಪನಿಂಗ್ ಪಡೆದುಕೊಂಡು ಪಠಾಣ್ 106 ಕೋಟಿ, ಜವಾನ್ 129 ಕೋಟಿ ಮತ್ತು ಅನಿಮಲ್ 116 ಕೋಟಿ ಗ್ರಾಸ್ ಪಡೆದಿದ್ದವು.. ಆದರೆ ಇದೀಗ ಪ್ರಭಾಸ್ ಅಭಿನಯದ ಸಲಾರ್ ಸಿನಿಮಾ.. ಬಾಲಿವುಡ್ ಸ್ಟಾರ್ ಗಳ ಸಿನಿಮಾಗಳನ್ನು ಮೀರಿ ಕಲೆಕ್ಷನ್ ಪಡೆಯುವ ಮೂಲಕ ಸಂಚಲನ ಮೂಡಿಸಿದೆ.

ಇದನ್ನೂ ಓದಿ-"ರಂಗಸಮುದ್ರ" ಚಿತ್ರಕ್ಕೆ ಬಾಹುಬಲಿ ಸಂಗೀತ ನಿರ್ದೇಶಕ ಎಮ್ ಎಮ್ ಕೀರವಾಣಿ ಸಾಥ್!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News