ಬೇರೆಯವರ ಹಾಗೆ ಹಿಟ್‌ ಸಿನಿಮಾ ಮಾಡಿದೆ ಅಂತ ಕನ್ನಡ ಬಿಟ್ಟು ಹೋಗಲ್ಲ..! ರಿಷಬ್‌ ಹೀಗೆ ಹೇಳಿದ್ಯಾರಿಗೆ..?

Rishab shetty : ಇತ್ತೀಚೆಗೆ ಗೋವಾದಲ್ಲಿ ನಡೆದ ಇಂಟರ್‌ನ್ಯಾಶನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾದಲ್ಲಿ ನಟ, ನಿರ್ದೇಶಕ ರಿಷಬ್ ಶೆಟ್ಟಿ ಭಾಗವಹಿಸಿದ್ದರು. ಈ ವೇಳೆ ಮಾತನಾಡಿದ ಅವರು, ಕನ್ನಡ ಸಿನಿರಂಗ ಬಿಟ್ಟು ಪರಭಾಷೆಗೆ ಹೋಗಿ ಸಿನಿಮಾ ಮಾಡುವವರ ಕುರಿತು ನೀಡಿದ ಹೇಳಿಕೆ ಇದೀಗ ಸಂಚಲನ ಸೃಷ್ಟಿಸುತ್ತಿದೆ.

Written by - Krishna N K | Last Updated : Nov 29, 2023, 11:16 AM IST
  • ಕನ್ನಡ ಸಿನಿರಂಗ ಬಿಟ್ಟು ಪರಭಾಷೆಗೆ ಹೋಗಿ ಸಿನಿಮಾ ಮಾಡಲ್ಲ
  • ರಿಷಬ್‌ ಶೆಟ್ಟಿ ನೀಡಿರುವ ಹೇಳಿಕೆ ಸೋಷಿಯಲ್‌ ಮೀಡಿಯಾದಲ್ಲಿ ಸಂಚಲನ
  • ಶೆಟ್ರು ಈ ಮಾತನ್ನು ಯಾರಿಗೆ ಹೇಳಿದ್ರು ಅಂತ ನೆಟ್ಟಿಗರ ಚರ್ಚೆ
ಬೇರೆಯವರ ಹಾಗೆ ಹಿಟ್‌ ಸಿನಿಮಾ ಮಾಡಿದೆ ಅಂತ ಕನ್ನಡ ಬಿಟ್ಟು ಹೋಗಲ್ಲ..! ರಿಷಬ್‌ ಹೀಗೆ ಹೇಳಿದ್ಯಾರಿಗೆ..? title=

Rishab shetty on Kantara : ಒಂದು ಸಿನಿಮಾ ಹಿಟ್‌ ಆಯ್ತು ಅಂತ ನಾನು ಬೇರೆಯವರ ಹಾಗೆ ಕನ್ನಡ ಸಿನಿರಂಗವನ್ನು ಬಿಟ್ಟು ಹೋಗುವುದಿಲ್ಲ ಎಂದು ನಟ, ನಿರ್ದೇಶಕ ರಿಷಬ್‌ ಶೆಟ್ಟಿ ನೀಡಿರುವ ಹೇಳಿಕೆ ಸೋಷಿಯಲ್‌ ಮೀಡಿಯಾದಲ್ಲಿ ಸಂಚಲನ ಸೃಷ್ಟಿಸುತ್ತಿದೆ. ಅಲ್ಲದೆ, ಶೆಟ್ರು ಈ ಮಾತನ್ನು ಯಾರಿಗೆ ಹೇಳಿದ್ರು ಎನ್ನುವ ಕುರಿತು ನೆಟ್ಟಿಗರ ಚರ್ಚೆ ಶುರು ಮಾಡಿದ್ದಾರೆ. 

ಕಾಂತಾರ ಸಿನಿಮಾದ ಮೂಲಕ ರಿಷಬ್ ಶೆಟ್ಟಿ ಈಗ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ. ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಕಾಂತಾರ ಹಿಟ್‌ ಆದರೂ ಸಹ ರಿಷಬ್‌ ಕನ್ನಡ ನೆಲ ಬಿಟ್ಟು ಹೋಗುವ ಮಾತಿಲ್ಲ ಎನ್ನುತ್ತಿದ್ದಾರೆ. ಅಲ್ಲದೆ, ಬೇರೆ ಭಾಷೆಗಳ ದೊಡ್ಡ ದೊಡ್ಡ ಸ್ಟಾರ್‌ ಸಿನಿಮಾಗಳಲ್ಲಿ ನಟಿಸಲು ಆಹ್ವಾನ ಬಂದ್ರು ವಿನಮ್ರವಾಗಿ ತಿರಸ್ಕರಿಸಿದ್ದಾರಂತೆ.

ಇದನ್ನೂ ಓದಿ:41 ನೇ ವಸಂತಕ್ಕೆ ಕಾಲಿಟ್ಟ ಮೋಹಕತಾರೆ..! ಅಭಿಮಾನಿಗಳಿಗೆ ಸ್ಪೆಷ್ಟಲ್ ಗಿಫ್ಟ್ ನೀಡ್ತಾರಾ ರಮ್ಯಾ?

ಹೌದು.. ಇತ್ತಿಚೀಗೆ ಗೋವಾದಲ್ಲಿ ನಡೆದ ಇಂಟರ್‌ನ್ಯಾಶನಲ್ ಫಿಲ್ಮ್ ಫೆಸ್ಟಿವಲ್ ಆಫ್ ಇಂಡಿಯಾದಲ್ಲಿ ಭಾಗವಹಿಸಿದ್ದ ರಿಷಬ್‌ ಶೆಟ್ಟಿ ಕನ್ನಡ ಸಿನಿ ಪ್ರೇಕ್ಷಕರ ಕುರಿತು ಮೆಚ್ಚುಗೆಯ ಮಾತುಗಳನ್ನಾಡಿದರು. ನನ್ನ ಕಾಂತಾರ ಸಿನಿಮಾವನ್ನು ಮೊದಲು ಒಪ್ಪಿಕೊಂಡವರು ನನ್ನ ಕನ್ನಡ ಪ್ರೇಕ್ಷಕರು. ಅವರಿಗೆ ನಾನು ಎಂದೆಂದಿಗೂ ಋಣಿಯಾಗಿರುತ್ತೇನೆ ಎಂದರು.

ಅಲ್ಲದೆ, ಬೇರೆಯವರ ಹಾಗೆ ಹಿಟ್ ಸಿಕ್ಕಿದ ತಕ್ಷಣ ಈ ನೆಲವನ್ನು ಬಿಟ್ಟು ಹೋಗುವ ಮಾತಿಲ್ಲ. ನನಗೆ ಒಂದಿಷ್ಟು ಸೆಂಟಿಮೆಂಟ್ಸ್ ಇದೆ.. ಏನು ಮಾಡಿದರೂ ಕನ್ನಡದಲ್ಲೇ ಮಾಡುತ್ತೇನೆ.. ಜಾಗತಿಕ ಮಟ್ಟದಲ್ಲಿ ರೀಚ್ ಮಾಡುತ್ತೇನೆ.. ಕನ್ನಡದಲ್ಲಿ ಶೂಟ್ ಮಾಡಿದ್ರೂ.. ಡಬ್ ಮಾಡಿದ್ರೂ.. ಎಮೋಷನ್ ಬದಲಾಗುವುದಿಲ್ಲ. ಇದು ಎಲ್ಲರಿಗೂ ಕನೆಕ್ಟ್ ಆಗಲಿದೆ ಎಂದು ರಿಷಬ್ ಶೆಟ್ಟಿ ಹೇಳಿದ್ದಾರೆ. 

ಇದನ್ನೂ ಓದಿ: BBK 10: ಬಿಗ್‌ಬಾಸ್‌ ಮನೆಯಿಂದ ಹೊರನಡೆದ ತನಿಷಾ: ಏನಾಗಿತ್ತು ದೊಡ್ಮನೆಯ ಬೆಂಕಿಗೆ?

ಇದೀಗ ನೆಟಿಜನ್‌ಗಳು ರಿಷಬ್ ಶೆಟ್ಟಿ ಅವರ ಮಾತು ಕೇಳಿ, ಪರೋಕ್ಷವಾಗಿ ರಶ್ಮಿಕಾ ಸೇರಿದಂತೆ ಕನ್ನಡದಲ್ಲಿ ಹಿಟ್‌ ಸಿನಿಮಾ ಮಾಡಿ ಸ್ಯಾಂಡಲ್‌ವುಡ್‌ ತೊರೆದ ನಟ, ನಟಯರು ಮತ್ತು ನಿರ್ಮಾಪಕರಿಗೆ ಇದು ಅನ್ವಯ ಅಂತ ಕಾಮೆಂಟ್‌ ಮಾಡುತ್ತಿದ್ದಾರೆ. ಅಲ್ಲದೆ, ರಿಷಬ್‌ ನಿರ್ಧಾರಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 

ಅಷ್ಟೇ ಅಲ್ಲದೆ, ನನಗೆ ಬೇರೆ ಭಾಷೆಯಿಂದ ಸಾಕಷ್ಟು ಅವಕಾಶಗಳು ಬಂದಿವೆ.. ಬರುತ್ತಿವೆ.. ಅವರ ಅಭಿಮಾನಿ ನಾನು.. ಯಾವಾಗಲೂ ಅವರಿಗೆ ಅಭಿಮಾನಿಯಾಗಿರುತ್ತೇನೆ.. ನನಗೂ ದೊಡ್ಡ ದೊಡ್ಡ ವ್ಯಕ್ತಿಗಳ ಜೊತೆ ನಟಿಸುವ ಅವಕಾಶಗಳು ಬಂದಿವೆ.. ಆದರೆ ನಾನು ಕನ್ನಡದಲ್ಲಿ ಮಾತ್ರ ಸಿನಿಮಾ ಮಾಡುತ್ತೇನೆ ಎಂದು ಶೆಟ್ರು ಕನ್ನಡಾಭಿಮಾನ ಮೆರೆದರು.

ಇದನ್ನೂ ಓದಿ: ಪ್ರತಿಷ್ಠಿತ ಅಂತಾರಾಷ್ಟ್ರೀಯ ಪ್ರಶಸ್ತಿ ಮುಡಿಗೇರಿಸಿಕೊಂಡ 'ಕಾಂತಾರ'

ಕಾಂತಾರ ಚಿತ್ರದ ಮೂಲಕ ರಿಷಬ್ ಶೆಟ್ಟಿ ದೇಶಾದ್ಯಂತ ತಮ್ಮದೇ ಆದ ಛಾಪು ಮೂಡಿಸಿದರು. ಕನ್ನಡದ ಕಾಂತಾರ ರಾಷ್ಟ್ರವ್ಯಾಪಿ ಉತ್ತಮ ಪ್ರತಿಕ್ರಿಯೆ ಪಡೆಯಿತು. ಸಧ್ಯ ಕಾಂತಾರ ಪ್ರೀಕ್ವೆಲ್ ʼಕಾಂತಾರ -ಅಧ್ಯಾಯ 1ʼ ನಿರ್ಮಾಣವಾಗುತ್ತಿದೆ. ಇತ್ತೀಚಿಗಷ್ಟೇ ಈ ಚಿತ್ರದ ಫಸ್ಟ್‌ ಲುಕ್‌ ಬಿಡುಗಡೆಯಾಗಿತ್ತು. ಮೊದಲ ನೋಟದಲ್ಲೇ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿತು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News