ಆ ಭಾಷೆಯ ಸೊಗಡಿನಲ್ಲಿಯೇ ಸಿನಿಮಾ ಮಾಡಲು ರೆಡಿ...ಉತ್ತರ ಕರ್ನಾಟಕದ ಹುಡುಗ್ರುಗೆ ರಕ್ಷಿತ್‌ ಶೆಟ್ಟಿ ಬುಲಾವ್‌

Rakshith Shetty Invited North Karnataka Talents : ಇತ್ತೀಚೆಗೆ ನಡೆದ ಟೋಬಿ ಚಿತ್ರದ ಟ್ರೇಲರ್‌ ಬಿಡುಗಡೆ ಕಾರ್ಯಕ್ರಮದಲ್ಲಿ ನಟ ರಕ್ಷಿತ್‌ ಶೆಟ್ಟಿ ಕನ್ನಡ ಚಿತ್ರೋದ್ಯಮ ಬೆಳವಣಿಗೆ ಬಗ್ಗೆ ಮಾತಾನಾಡಿದ್ದಾರೆ. ಅದೇ ಸಂದರ್ಭದಲ್ಲಿ ಉತ್ತರ ಕರ್ನಾಟಕದ ಪ್ರತಿಭಾವಂತ ತಂಡ ಬಂದರೆ, ಆ ಭಾಷೆಯ ಸೊಗಡಿನಲ್ಲಿಯೇ ನಾನು ಸಿನಿಮಾ ಮಾಡಲು ರೆಡಿ ಎಂದಿದ್ದಾರೆ.

Written by - Savita M B | Last Updated : Aug 5, 2023, 05:27 PM IST
  • ನಟ, ನಿರ್ದೇಶಕ, ನಿರ್ಮಾಪಕ ಹೀಗೆ ತಮ್ಮ ಬಹುಮುಖ ಪ್ರತಿಭೆಯಿಂದ ಗುರುತಿಸಿಕೊಂಡ ನಾಯಕ ರಕ್ಷಿತ್‌ ಶೆಟ್ಟಿ
  • ಸದ್ಯ ಕನ್ನಡಿಗರ ಭರವಸೆಯ ನಟ.
  • ಇದೀಗ ಉತ್ತರ ಕರ್ನಾಟಕ ಭಾಗದ ಪ್ರತಿಭೆಗಳಿಗೆ ಬುಲಾವ್‌ ನೀಡಿದ್ದಾರೆ.
ಆ ಭಾಷೆಯ ಸೊಗಡಿನಲ್ಲಿಯೇ ಸಿನಿಮಾ ಮಾಡಲು ರೆಡಿ...ಉತ್ತರ ಕರ್ನಾಟಕದ ಹುಡುಗ್ರುಗೆ ರಕ್ಷಿತ್‌ ಶೆಟ್ಟಿ ಬುಲಾವ್‌ title=

Rakshith Shetty : ನಟ, ನಿರ್ದೇಶಕ, ನಿರ್ಮಾಪಕ ಹೀಗೆ ತಮ್ಮ ಬಹುಮುಖ ಪ್ರತಿಭೆಯಿಂದ ಗುರುತಿಸಿಕೊಂಡ ರಕ್ಷಿತ್‌ ಶೆಟ್ಟಿ, ಸದ್ಯ ಕನ್ನಡಿಗರ ಭರವಸೆಯ ನಟ. ಪ್ರತಿಯೊಂದು ಹೊಸ ಸಿನಿಮಾ ಮಾಡುವಾಗಲೂ ಹೊಸ ಪ್ರಯತ್ನ ಹಾಗೂ ಪ್ರಯೋಗಳನ್ನು ಮಾಡುವ ಇವರು ಇದೀಗ ಉತ್ತರ ಕರ್ನಾಟಕ ಭಾಗದ ಯುವಕರಿಗೆ ಬುಲಾವ್‌ ನೀಡಿದ್ದಾರೆ.

ರಾಜ್‌ ಶೆಟ್ಟಿ ಅವರ ಟೋಬಿ ಚಿತ್ರದ ಟ್ರೇಲರ್‌ ಬಿಡುಗಡೆ ಕಾರ್ಯಕ್ರಮ ಶುಕ್ರವಾರವಷ್ಟೇ ನೆರವೇರಿತು. ಈ ವಿಶೇಷ ಕಾರ್ಯಕ್ರಮಕ್ಕೆ ಅತಿಥಿಗಳಾಗಿ ಆಗಮಿಸಿದ ರಕ್ಷಿತ್‌ ಶೆಟ್ಟಿ ಮತ್ತು ರಿಷಬ್‌ ಶೆಟ್ಟಿ ಹತ್ತಾರು ವಿಚಾರಗಳನ್ನು ಪ್ರೇಕ್ಷಕರೊಂದಿಗೆ ವಿನಿಮಯ ಮಾಡಿಕೊಂಡಿದ್ದಾರೆ. 

ಪ್ಯಾನ್‌ ಇಂಡಿಯಾ ಪರಿಕಲ್ಪನೆ..ತಮ್ಮ ಮುಂದಿನ ಸಿನಿಮಾಗಳು...ಕನ್ನಡ ಸಿನಿಮಾಗಳು..ಹೀಗೆ ಕನ್ನಡ ಚಿತ್ರರಂಗ ಮುಂದುವರಿಯಬೇಕಾದರೆ ಏನೆಲ್ಲಾ ಅಗತ್ಯವಿದೆ ಎನ್ನುವುದರ ಕುರಿತು ರಕ್ಷಿತ್‌ ಶೆಟ್ಟಿ ಹೇಳಿದ್ದಾರೆ. 

ಇದನ್ನೂ ಓದಿ-ಕೋಟಿಗಟ್ಟಲೆ ಸಂಪಾದಿಸಿದರೂ ಸಿಕ್ಕಾಪಟ್ಟೆ ಕಂಜೂಸ್‌ ಈ ಸಿನಿ ತಾರೆಯರು

"ಸಿನಿ ರಂಗ ಬೆಳೆದರೆ ಮಾತ್ರ ನಾವು ಬೆಳೆಯಲು ಸಾಧ್ಯ...ನಾವು ಯಾವ ಇಂಡಸ್ಟ್ರಿಯಲ್ಲಿ ಕೆಲಸ ಮಾಡುತ್ತಿದ್ದೇವೆ?  ಆ ಇಂಡಸ್ಟ್ರಿ ಎಷ್ಟು ದೊಡ್ಡದು? ಅಷ್ಟೇ ನಾವು ಎತ್ತರಕ್ಕೆ ಬೆಳೆಯಲು ಪ್ರತ್ನಿಸಬೇಕಾಗುತ್ತದೆ. ಆದರೆ ಈಗ ಪ್ಯಾನ್‌ ಇಂಡಿಯಾ ಪರಿಕಲ್ಪನೆ ಬಂದಿದೆ. ಆದರೆ ವೇದಿಕೆ ಕೊಟ್ಟಿದ್ದು ನಮ್ಮ ಇಂಡಸ್ಟ್ರಿ. 

ನಟರು ಒಬ್ಬರೊನ್ನೊಬ್ಬರು ಪ್ರೋತ್ಸಾಹಿಸಿದಾಗ ಮಾತ್ರ ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿ ಎಲ್ಲ ನಟರು ಮಿಂಚಲು ಸಾಧ್ಯವಾಗುವುದು. ಸದ್ಯ ಆ ಮಾತಿಗೆ ಬದ್ದವಾದಂತೆ ರಾಜ್‌ ಶೆಟ್ಟಿ ತಮ್ಮದೇ ಆದ ತಂಡ ಕಟ್ಟಿಕೊಂಡು ಸಿನಿಮಾ ಮಾಡಿದ್ದಾರೆ.

ಹೀಗೆ ಕರ್ನಾಟಕದ ಮೂಲೆ ಮೂಲೆಯಿಂದಲೂ ಒಂದೊಂದು ಟೀಮ್‌ ಬರಬೇಕು. ಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆ ಸಿನಿಮಾ ತಂಡದವರೂ ಹಿಂಗೆ ಮಾಡಿದ್ರು. ತಮ್ಮದೇ ಒಂದು ತಂಡ ಕಟ್ಟಿಕೊಂಡು ಗಾಡ್‌ ಫಾದರ್‌ ಇಲ್ಲದೆ ಸಿನಿಮಾ ಮಾಡಿ ಯಶಸ್ಸುಗಳಿಸಿದರು. ಹೊಸ ಹೊಸ ತಂಡಗಳು ಕನ್ನಡದಲ್ಲಿ ಸೃಷ್ಟಿಯಾಗಬೇಕು.  

ನಮಗೆ ಸಾಕಷ್ಟು ಪ್ರಶ್ನೆಗಳು ಬರುತ್ತಿರುತ್ತವೆ..ಏಕೆ ಉತ್ತರ ಕರ್ನಾಟಕದ ಸಿನಿಮಾ ಮಾಡಲ್ಲ? ಎಂದು. ನಮಗೆ ಆ ಭಾಷೆಯಲ್ಲಿ ಸಿನಿಮಾ ಮಾಡೋಕೆ ಇಷ್ಟ ಇದೆ. ಆದರೆ ಅಲ್ಲಿಂದ ನಮಗೆ ಒಂದು ತಂಡ ಬೇಕು. 

ನಾನು ಉತ್ತರ ಕರ್ನಾಟಕದ ಸಿನಿಮಾ ಮಾಡಬೇಕೆಂದರೆ ನಾನು ಅಲ್ಲಿಗೆ ಹೋಗಿ ಇದ್ದು ಬರಬೇಕಾಗುತ್ತದೆ. ಅದಕ್ಕಾಗಿ ಅಲ್ಲೇ ಹುಟ್ಟಿ ಬೆಳೆದ ತಂಡ ಬಂದರೇ ಅಧ್ಭುತವಾದ ಸಿನಿಮಾ ನಿರ್ಮಾಣ ಮಾಡಬಹುದು. ಅಲ್ಲಿನ ಸಂಸ್ಕೃತಿ ಎಲ್ಲವೂ ಅದ್ಭುತವಾಗಿದೆ. ಅಲ್ಲಿನ ತಂಡ ಕೈ ಜೋಡಿಸುವುದಾದರೆ ನಾನು ಸಿನಿಮಾ ಮಾಡಲು ರೆಡಿ. ಕರ್ನಾಟಕದ ಮೂಲೆ ಮೂಲೆಯಿಂದ ನಿರ್ದೇಶಕರು, ನಟರು ಬರಬೇಕು. ಅಂದಾಗ ಮಾತ್ರ ಸಿನಿಮಾ ರಂಗ ಬೆಳೆಯಲು ಸಾಧ್ಯ" ಎಂದಿದ್ದಾರೆ. 

ಇದನ್ನೂ ಓದಿ-ಸ್ಟಾರ್​ ನಟನಿಂದ ಸಮಂತಾ 25 ಕೋಟಿ ಸಾಲ ಪಡೆದಿದ್ದು ನಿಜನಾ? ಸ್ಪಷ್ಟನೆ ನೀಡಿದ ಸ್ಯಾಮ್ ಹೇಳಿದ್ದೇನು?

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News