ಸಿಎಂ ಯೋಗಿ ಆದಿತ್ಯನಾಥನಿಗೆ ಉಘೇ ಉಘೇ ಎಂದ ರಾಖಿ ಸಾವಂತ್!

 ಆಗಾಗ ಒಂದಿಲ್ಲೊಂದು ಸುದ್ದಿಯಲ್ಲಿರುವ ಬಾಲಿವುಡ್ ಬೆಡಗಿ ರಾಖಿ ಸಾವಂತ್ ಈ ಮತ್ತೆ ಹೊಸ ಸುದ್ದಿಯಲ್ಲಿದ್ದಾರೆ. ಹಾಗಾದರೆ ಆಕೆ ಈ ಬಾರಿ ಸುದ್ದಿಯಲ್ಲಿರುವುದು ಏತಕ್ಕೆ ಅಂತೀರಾ? ಈಗ ರಾಖಿ ಯೋಗಿ ಆದಿತ್ಯನಾಥ್ ನನ್ನು ಹೊಗಳುವ ಮೂಲಕ ಮತ್ತೆ ಸುದ್ದಿಗೆ ಗ್ರಾಸವಾಗಿದ್ದಾರೆ. 

Last Updated : Sep 6, 2018, 02:43 PM IST
 ಸಿಎಂ ಯೋಗಿ ಆದಿತ್ಯನಾಥನಿಗೆ ಉಘೇ ಉಘೇ ಎಂದ ರಾಖಿ ಸಾವಂತ್! title=

ನವದೆಹಲಿ: ಆಗಾಗ ಒಂದಿಲ್ಲೊಂದು ಸುದ್ದಿಯಲ್ಲಿರುವ ಬಾಲಿವುಡ್ ಬೆಡಗಿ ರಾಖಿ ಸಾವಂತ್ ಈ ಮತ್ತೆ ಹೊಸ ಸುದ್ದಿಯಲ್ಲಿದ್ದಾರೆ. ಹಾಗಾದರೆ ಆಕೆ ಈ ಬಾರಿ ಸುದ್ದಿಯಲ್ಲಿರುವುದು ಏತಕ್ಕೆ ಅಂತೀರಾ? ಈಗ ರಾಖಿ ಯೋಗಿ ಆದಿತ್ಯನಾಥ್ ನನ್ನು ಹೊಗಳುವ ಮೂಲಕ ಮತ್ತೆ ಸುದ್ದಿಗೆ ಗ್ರಾಸವಾಗಿದ್ದಾರೆ. 

ಯೂಟ್ಯೂಬ್ ವೊಂದರಲ್ಲಿ ಶೇರ್ ಮಾಡಿಕೊಂಡಿರುವ ರಾಖಿ ಸಾವಂತ್ ಈಗ ಉತ್ತರ ಪ್ರದೇಶದ ಮುಖ್ಯಮಂತ್ರಿಯನ್ನು ಹೊಗಳುತ್ತಾ "ಜನರು ಯಾವುದೇ ವ್ಯಕ್ತಿ, ಪಕ್ಷ, ಸರ್ಕಾರವನ್ನು ಅದು ಆಯ್ಕೆಯಾದ ತಕ್ಷಣ ನಿರ್ಧರಿಸಬಾರದು.ನಾವು ಅವರಿಗೆ ಸ್ವಲ್ಪ ಸಮಯವನ್ನು ನೀಡಬೇಕು ಎಂದು ಆಕೆ ಅಭಿಮಾನಿಗಳಲ್ಲಿ ವಿನಂತಿಕೊಂಡಿದ್ದಾಳೆ.

ಯೋಗಿಗೆ ಬೆಂಬಲ ವ್ಯಕ್ತಪಡಿಸಿ ಮಾತನಾಡುತ್ತಾ"ಯೋಗಿ ಉತ್ತರ ಪ್ರದೇಶದ ಮುಖ್ಯಮಂತ್ರಿಯಾದ ನಂತರ ರಾಜ್ಯದಲ್ಲಿ ಯಾವುದೇ ಅತ್ಯಾಚಾರ ಪ್ರಕರಣಗಳು ಸಂಭವಿಸಿಲ್ಲ.ಅವರು ನಿಜಕ್ಕೂ ಉತ್ತಮ ಕೆಲಸ ಮಾಡಿದ್ದು ಅವರು ಪೂಜೆಗೆ ತಮ್ಮ ಸಮಯವನ್ನು ಮಿಸಲಿಡುವುದಲ್ಲದೆ ಪ್ರಾಣಿಗಳ ಹಿತ ರಕ್ಷಣೆಗೂ ಸಹಿತ ಗಮನ ನೀಡಿದ್ದಾರೆ.ಆದ್ದರಿಂದ ಅವರು ಮತ್ತೊಮ್ಮೆ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಬೇಕು" ಎಂದು  ರಾಖಿ ಸಾವಂತ್ ತಿಳಿಸಿದ್ದಾಳೆ.   

Trending News