Rajinikanth: ಅಭಿಮಾನಿಗಳಿಗೆ 'ಗುಡ್ ನ್ಯೂಸ್' ನೀಡಿದ ತಲೈವಾ..‌!

ದೀಪಾವಳಿ ಹಬ್ಬದ ಪ್ರಯುಕ್ತ ನವೆಂಬರ್ 4ರಂದು ಗುರುವಾರ 'ಅಣ್ಣಾಥೆ' ತೆರೆಗೆ ಬರಲಿದೆ.

Last Updated : Jan 26, 2021, 03:37 PM IST
  • 'ಸೂಪರ್ ಸ್ಟಾರ್' ರಜನಿಕಾಂತ್ ಅಭಿಮಾನಿಗಳು ಈಚೆಗೆ ತೀವ್ರ ಬೇಸರಗೊಂಡಿದ್ದರು. ಅದಕ್ಕೆ ಕಾರಣ, ರಜನಿ ರಾಜಕೀಯಕ್ಕೆ ಬರುವುದಿಲ್ಲ ಎಂದು ಹೇಳಿದ್ದು.
  • 'ತಲೈವಾ' ತಮಿಳುನಾಡು ರಾಜಕೀಯಕ್ಕೆ ಎಂಟ್ರಿ ನೀಡುತ್ತಾರೆ ಎಂದು ಕಾದಿದ್ದ ಫ್ಯಾನ್ಸ್‌ಗೆ ಇದು ತುಂಬ ಬೇಸರ ತಂದಿತ್ತು. ಇದೀಗ ಆ ಬೇಸರವನ್ನು ಮರೆಯುವಂತಹ ನ್ಯೂಸ್‌ವೊಂದು ರಜನಿಕಾಂತ್ ಕಡೆಯಿಂದ ಸಿಕ್ಕಿದೆ!
  • ದೀಪಾವಳಿ ಹಬ್ಬದ ಪ್ರಯುಕ್ತ ನವೆಂಬರ್ 4ರಂದು ಗುರುವಾರ 'ಅಣ್ಣಾಥೆ' ತೆರೆಗೆ ಬರಲಿದೆ.
Rajinikanth: ಅಭಿಮಾನಿಗಳಿಗೆ 'ಗುಡ್ ನ್ಯೂಸ್' ನೀಡಿದ ತಲೈವಾ..‌! title=

'ಸೂಪರ್ ಸ್ಟಾರ್' ರಜನಿಕಾಂತ್ ಅಭಿಮಾನಿಗಳು ಈಚೆಗೆ ತೀವ್ರ ಬೇಸರಗೊಂಡಿದ್ದರು. ಅದಕ್ಕೆ ಕಾರಣ, ರಜನಿ ರಾಜಕೀಯಕ್ಕೆ ಬರುವುದಿಲ್ಲ ಎಂದು ಹೇಳಿದ್ದು. 'ತಲೈವಾ' ತಮಿಳುನಾಡು ರಾಜಕೀಯಕ್ಕೆ ಎಂಟ್ರಿ ನೀಡುತ್ತಾರೆ ಎಂದು ಕಾದಿದ್ದ ಫ್ಯಾನ್ಸ್‌ಗೆ ಇದು ತುಂಬ ಬೇಸರ ತಂದಿತ್ತು. ಇದೀಗ ಆ ಬೇಸರವನ್ನು ಮರೆಯುವಂತಹ ನ್ಯೂಸ್‌ವೊಂದು ರಜನಿಕಾಂತ್ ಕಡೆಯಿಂದ ಸಿಕ್ಕಿದೆ!

ರಜನಿಕಾಂತ್ ಅಭಿನಯದ ಮುಂದಿನ ಸಿನಿಮಾ 'ಅಣ್ಣಾಥೆ' ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಈ ಹಿಂದೆ ಅಜಿತ್‌ ಜೊತೆ 'ವೀರಂ', 'ವಿಶ್ವಾಸಂ'ನಂತಹ ಹಿಟ್ ಸಿನಿಮಾಗಳನ್ನು ಮಾಡಿರುವ ನಿರ್ದೇಶಕ ಶಿವ, ಈಗ ರಜನಿ(Rajinikanth) ಜೊತೆ ಕೈಜೋಡಿಸಿರುವುದರಿಂದ ಸಹಜವಾಗಿಯೇ ನಿರೀಕ್ಷೆ ಜೋರಾಗಿದೆ. ಚಿತ್ರ ಯಾವಾಗ ರಿಲೀಸ್ ಆಗಲಿದೆ ಎಂಬ ಪ್ರಶ್ನೆ ಅಭಿಮಾನಿಗಳಿಂದ ಕೇಳಿಬಂದಿತ್ತು. ಇದೀಗ ನಿರ್ಮಾಪಕರು ರಿಲೀಸ್ ಡೇಟ್ ಅನೌನ್ಸ್‌ ಮಾಡಿದ್ದಾರೆ. ದೀಪಾವಳಿ ಹಬ್ಬದ ಪ್ರಯುಕ್ತ ನವೆಂಬರ್ 4ರಂದು ಗುರುವಾರ 'ಅಣ್ಣಾಥೆ' ತೆರೆಗೆ ಬರಲಿದೆ.

ತಾತ್ಕಾಲಿಕವಾಗಿ The Kapil Sharma Show ಸ್ಥಗಿತ

'ಅಣ್ಣಾಥೆ' ಮೇಲೆ ನಿರೀಕ್ಷೆ ಹೆಚ್ಚಲು ರಜನಿಕಾಂತ್ ಒಂದು ಕಾರಣವಾದರೆ, ಚಿತ್ರದ ಪಾತ್ರವರ್ಗ ಮತ್ತೊಂದು ಪ್ರಮುಖ ಕಾರಣ ಎನ್ನಬಹುದು. ನಾಯಕಿಯರಾಗಿ ನಯನತಾರಾ, ಕೀರ್ತಿ ಸುರೇಶ್‌ ಇದ್ದಾರೆ. ಇನ್ನು, ದಶಕಗಳ ಹಿಂದೆ ರಜನಿ ಜೊತೆ ಡ್ಯುಯೆಟ್ ಹಾಡಿದ್ದ ಮೀನಾ, ಖುಷ್ಬೂ ಕೂಡ ಮುಖ್ಯಪಾತ್ರಗಳಲ್ಲಿದ್ದಾರೆ. ಜಾಕಿಶ್ರಾಫ್‌, ಪ್ರಕಾಶ್ ರೈ, ಸತೀಶ್, ಸೂರಿ ಮುಂತಾದವರು ನಟಿಸುತ್ತಿದ್ದಾರೆ. ಸನ್ ಪಿಕ್ಚರ್ಸ್ ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದೆ. ಹಾಡುಗಳಿಗೆ ಡಿ. ಇಮ್ಮಾನ್‌ ಸಂಗೀತ ನೀಡುತ್ತಿದ್ದಾರೆ.

ಮತ್ತೊಂದು ದಾಖಲೆ..! KGF 2 ಹಿಂದಿ ರೈಟ್ಸ್ ಎಷ್ಟಕ್ಕೆ ಮಾರಾಟವಾಗಿದೆ ಗೊತ್ತಾ..?

ಚಿತ್ರೀಕರಣ ಬಾಕಿ ಇದೆ! 'ಅಣ್ಣಾಥೆ' ಶೂಟಿಂಗ್ 2020ರ ಆರಂಭದಲ್ಲೇ ಶುರುವಾಗಿತ್ತು. ಆದರೆ, ಕೊರೊನಾ ಎಫೆಕ್ಟ್‌ನಿಂದ ಬ್ರೇಕ್‌ ಬಿದ್ದಿತ್ತು. ಕಳೆದ ಡಿಸೆಂಬರ್‌ನಲ್ಲಿ ಸಕಲ ಸಿದ್ಧತೆಯೊಂದಿಗೆ ಶೂಟಿಂಗ್ ಮತ್ತೆ ಶುರುವಾಗಿತ್ತು. ಅದರಲ್ಲಿ ರಜನಿಕಾಂತ್ ಕೂಡ ಭಾಗವಹಿಸಿದ್ದರು. ಆದರೆ, ಚಿತ್ರೀಕರಣ ಆರಂಭವಾದ ಕೆಲವೇ ದಿನಗಳಲ್ಲಿ ಸೆಟ್‌ನ ಕೆಲ ಮಂದಿಗೆ ಕೊರೊನಾ ಪಾಸಿಟಿವ್‌ ಆಗಿತ್ತು. ಹಾಗಾಗಿ, ಮತ್ತೆ ಶೂಟಿಂಗ್‌ಗೆ ಬ್ರೇಕ್ ಹಾಕಲಾಯಿತು. ಅಲ್ಲದೇ ಈ ಮಧ್ಯೆ ರಜನಿಕಾಂತ್‌ ಅವರಿಗೂ ಕೂಡ ಆರೋಗ್ಯ ಸಮಸ್ಯೆ ಉಂಟಾಗಿತ್ತು. ಶೇ.50ರಷ್ಟು ಚಿತ್ರೀಕರಣ ಬಾಕಿ ಇದೆ ಎಂದು ಚಿತ್ರತಂಡದ ಮೂಲಗಳು ತಿಳಿಸಿವೆ.

Jayashree Ramaiah Suicide : ಬಿಗ್ ಬಾಸ್ ಸ್ಪರ್ಧಿ ಜಯಶ್ರೀ ರಾಮಯ್ಯ ನೇಣಿಗೆ ಶರಣು

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News