Puneetha Parva: ಸೂರ್ಯ,ಚಂದ್ರ ಇರೋವರೆಗೂ ಅಪ್ಪು ಶಾಶ್ವತ: ದು‌ನಿಯಾ ವಿಜಯ್

Puneetha Parva: ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ 'ಪುನೀತ ಪರ್ವ' ಕಾರ್ಯಕ್ರಮದಲ್ಲಿ ಮಾತನಾಡಿರುವ ಅಪ್ಪು ನೆನೆದು ಕುಟುಂಬಸ್ಥರು ಸೇರಿ ನೆರೆದಿದ್ದ ಅಭಿಮಾನಿಗಳು ಭಾವುಕರಾಗಿದ್ದರು. ಈ ಕಾರ್ಯಕ್ರಮದಲ್ಲಿ ನಟ ದುನಿಯಾ ವಿಜಯ್ ಸಹ ಭಾಗಿಯಾಗಿದ್ದರು. ನಟ ದುನಿಯಾ ವಿಜಯ್, ಧೃವ ಸರ್ಜಾ,ರಾಜ್ ಬಿ ಶೆಟ್ಟಿ ಜೊತೆ ವೇದಿಕೆ ಏರಿದ್ರೂ.   

Written by - Nitin Tabib | Last Updated : Oct 22, 2022, 12:55 PM IST
  • ಕಣ್ಣಲ್ಲಿ‌ ನೀರು ತುಂಬಿಕೊಂಡು‌ ಮಾತು ಆರಂಭಿಸಿದ ವಿಜಯ್,
  • ಕರ್ನಾಟಕಕ್ಕೆ ಒಬ್ಬರೇ ರಾಜಕುಮಾರ,
  • ನಾನು ಅಪ್ಪು ಸರ್ ಫ್ಯಾನ್ ಆಗಿ ಬಂದಿದ್ದೇನೆ. ಗಂಧದಗುಡಿ ಸಿನಿಮಾ ದೊಡ್ಡ ಹಿಟ್ ಆಗುತ್ತೆ.
Puneetha Parva: ಸೂರ್ಯ,ಚಂದ್ರ ಇರೋವರೆಗೂ ಅಪ್ಪು ಶಾಶ್ವತ: ದು‌ನಿಯಾ ವಿಜಯ್ title=
Puneetha Parva

Puneetha Parva : ಬೆಂಗಳೂರು - ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ 'ಪುನೀತ ಪರ್ವ' ಕಾರ್ಯಕ್ರಮದಲ್ಲಿ ಮಾತನಾಡಿರುವ ಅಪ್ಪು ನೆನೆದು ಕುಟುಂಬಸ್ಥರು ಸೇರಿ ನೆರೆದಿದ್ದ ಅಭಿಮಾನಿಗಳು ಭಾವುಕರಾಗಿದ್ದರು. ಈ ಕಾರ್ಯಕ್ರಮದಲ್ಲಿ ನಟ ದುನಿಯಾ ವಿಜಯ್ ಸಹ ಭಾಗಿಯಾಗಿದ್ದರು. ನಟ ದುನಿಯಾ ವಿಜಯ್, ಧೃವ ಸರ್ಜಾ,ರಾಜ್ ಬಿ ಶೆಟ್ಟಿ ಜೊತೆ ವೇದಿಕೆ ಏರಿದ್ರೂ. 

ಕಣ್ಣಲ್ಲಿ‌ ನೀರು ತುಂಬಿಕೊಂಡು‌ ಮಾತು ಆರಂಭಿಸಿದ ವಿಜಯ್, ಕರ್ನಾಟಕಕ್ಕೆ ಒಬ್ಬರೇ ರಾಜಕುಮಾರ, ನಾನು ಅಪ್ಪು ಸರ್ ಫ್ಯಾನ್ ಆಗಿ ಬಂದಿದ್ದೇನೆ. ಗಂಧದಗುಡಿ ಸಿನಿಮಾ ದೊಡ್ಡ ಹಿಟ್ ಆಗುತ್ತೆ. ಮಾತನಾಡಲು ಕಷ್ಟವಾಗುತ್ತಿದೆ. ಈ ಸಿನಿಮಾವನ್ನು ದೊಡ್ಡ ಮಟ್ಟಕ್ಕೆ ಗೆಲ್ಲಿಸಬೇಕಾಗಿರುವುದು ನಮ್ಮ ಕರ್ತವ್ಯ. ಕರ್ನಾಟಕಕ್ಕೆ ಒಬ್ಬರೇ ರಾಜಕುಮಾರ ಅದು ಅಪ್ಪು ಸರ್‌. 

ಪ್ರಪ್ರಂಚ, ಸೂರ್ಯ ಚಂದ್ರ ಇರುವವರೆಗೂ ಅಪ್ಪು ಸರ್ ಇರ್ತಾರೆ ಎಂದರು. ಇನ್ನೂ ವಿಜಯ್ ವಿಶೇಷವಾಗಿ ಧರಿಸಿದ್ದ ಬಿಳಿ ಬಣ್ಣದ ಶರ್ಟ್ ಮೇಲೆ‌ ಪುನೀತ್ ಚಿತ್ರದ ಜೊತೆ ನೀನೇ ರಾಜಕುಮಾರ್ ಎಂಬ ಬರಹವಿತ್ತು. ಇದನ್ನು ಕಂಡ ನೆರೆದಿದ್ದ ಪ್ರೇಕ್ಷಕರು ಸಹ ಪುಳಕಿತರಾದರು. ವೇದಿಕೆ ಏರಿದದ್ದರಿಂದ ಹಿಡಿದು ಕಾರ್ಯಕ್ರಮ ಮುಗಿಯುವರೆಗೂ ದುನಿಯಾ ವಿಜಯ್ ಭಾವುಕಾರಗಿಯೇ ಕಾರ್ಯಕ್ರಮ ವೀಕ್ಷಿಸಿದರು.

ಇದನ್ನೂ ಓದಿ-Puneetha Parva: ‘ಗಂಧದ ಗುಡಿ’ ಪಿಕ್ಚರ್ ಕೆಜಿಎಫ್ ರೆಕಾರ್ಡ್ ಧೂಳ್ ಮಾಡ್ಬೇಕು- ಯಶ್

ಇದಕ್ಕೂ ಮುನ್ನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ್ದ ಕ್ರೇಜಿ ಸ್ಟಾರ್ ರವಿಚಂದ್ರನ್ 'ಇದು ಸಂಭ್ರಮ ಅಲ್ಲ ಸಂಗಮ' ಅಂತ ಹೇಳಿದ್ದರು. 'ನಾವು ಸಂಪಾದನೆ ಮಾಡಬೇಕಾಗಿದ್ದು ಇದೇ ನೋಡಿ. ಅಪ್ಪು ಅಪ್ಪುಗೆಯಿಂದ ನಾನು ಅದೃಷ್ಟವಂತನಾದೆ. ಅಣ್ಣಾವ್ರ ಅಪ್ಪುಗೆಯಿಂದ ನಾನು ನಟನಾದೆ, ವೀರಾಸ್ವಾಮಿಯವರ ಅಪ್ಪುಗೆಯಿಂದ ನಾನು ಡೈರೆಕ್ಟರ್ ಆದೆ. ಪುನೀತ್ ರಾಜ್ ಕುಮಾರ್ ಬದುಕಿದ ರೀತಿ ನೋಡಿ ನಾವು ಅವರ ತರಹ ಬದುಕೋಣ' ಅಂತ ಕ್ರೇಜಿ ಸ್ಟಾರ್ ರವಿಚಂದ್ರನ್ ಹೇಳಿದ್ದರು.

ಇದನ್ನೂ ಓದಿ-Puneeth Parva: ‘ಅಪ್ಪು’ ಹೋಗಿ 1 ವರ್ಷ ಆಯ್ತು.. ನೋವಿನಲ್ಲೇ ದಿನ ಕಳೆದ್ವಿ ಎಂದು ಶಿವಣ್ಣ ಭಾವುಕ

ಬಳಿಕ ಅಪ್ಪು ಬಗ್ಗೆ ಮಾತನಾರಿರುವ ರಾಕಿಂಗ್ ಸ್ಟಾರ್ ಯಶ್ ' ‘1 ವರ್ಷದ ಕೆಳಗೆ ಇದೇ ದಿನ ಇರಬಹುದು. ನಾನು. ಶಿವಣ್ಣ ಮತ್ತು ಅಪ್ಪು ವೇದಿಕೆ ಮೇಲೆ ಡ್ಯಾನ್ಸ್ ಮಾಡುತ್ತಿದ್ದೆವು. ಅದಿನ್ನೂ ನನ್ನ ತಲೆಯಲ್ಲಿಯೇ ಇದೆ. ಎಷ್ಟೋ ದಿನ ಆಗಿತ್ತು ನಾನು ಅವರು ಮಾತಾಡಿ, ಅವತ್ತು ಸಿಕ್ಕಿದ್ವಿ. ತುಂಬಾ ಮಾತಾಡಿದ್ವಿ. ಅವತ್ತು ಅವರು ಮಾತಾಡುತ್ತಿದ್ದ ವಿಷಯಗಳು, ಅವತ್ತು ಅವರಲ್ಲಿದ್ದ ಹುಮ್ಮಸ್ಸು-ಉತ್ಸಾಹ. ಅವರನ್ನು ನೋಡಿದಾಗಲೆಲ್ಲಾ ಒಂದು ನಮಗೆ ಹುಮ್ಮಸ್ಸು ಬರುತ್ತೆ' ಎಂದು ಹೇಳಿದ್ದಾರೆ.

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News