"ಗಂಧದಗುಡಿ" ರಾಜಕುಮಾರನ ಪುನೀತ ಪರ್ವಕ್ಕೆ ಕೆಲವೇ ಗಂಟೆಗಳು ಬಾಕಿ..!

Puneeth Parva: ಅರಮನೆ ಮೈದಾನದಲ್ಲಿ ಇಂದು ನಡೆಯಲಿರುವ ಪುನೀತ ಪರ್ವದಲ್ಲಿ ಬರೀ ಚಂದನವನದ ಸ್ಟಾರ್ ಗಳು ಮಾತ್ರವಲ್ಲದೆ ಸೌತ್ ತಾರೆಯರ ಸಂಗಮವಾಗಲಿದೆ. ರಾಕಿಂಗ್ ಸ್ಟಾರ್  ಯಶ್, ಕಿಚ್ಚ ಸುದೀಪ್, ಬಾಲಯ್ಯ, ಅಕ್ಕಿನೇನಿ ನಾಗಾರ್ಜುನ್,  ರಾಣಾ ದಗ್ಗುಭಾಟಿ, ತಮಿಳಿನ ಸೂರ್ಯ ಸೇರಿದಂತೆ ಹಲವರ ಆಗಮನ ಇದೀಗ ಕನ್ಫರ್ಮ್ ಆಗಿದೆ.

Written by - YASHODHA POOJARI | Edited by - Yashaswini V | Last Updated : Oct 21, 2022, 08:26 AM IST
  • ಅರಮನೆ ಮೈದಾನದಲ್ಲಿ ಇಂದು ನಡೆಯಲಿರುವ ಪುನೀತ ಪರ್ವದಲ್ಲಿ ಬರೀ ಚಂದನವನದ ಸ್ಟಾರ್ ಗಳು ಮಾತ್ರವಲ್ಲದೆ ಸೌತ್ ತಾರೆಯರ ಸಂಗಮವಾಗಲಿದೆ.
  • ಪುನೀತ ಪರ್ವದಲ್ಲಿ ಶಿವಣ್ಣ, ರಮ್ಯಾ, ಪ್ರಭುದೇವ್ ಲೈವ್ ಡ್ಯಾನ್ಸ್ ಪರ್ಫಾಮೆನ್ಸ್ ಇರುತ್ತೆ.
  • ಪುನೀತ ಪರ್ವದಲ್ಲಿ ಕುನಾಲ್‌ ಗಾಂಜಾವಾಲ, ಅರ್ಮಾನ್‌ ಮಲಿಕ್‌ ಗಾಯನ ಕೂಡ ಇರುತ್ತೆ.
"ಗಂಧದಗುಡಿ" ರಾಜಕುಮಾರನ ಪುನೀತ ಪರ್ವಕ್ಕೆ ಕೆಲವೇ ಗಂಟೆಗಳು ಬಾಕಿ..! title=
Puneeth Parva

Puneeth Parva:  ಗಂಧದಗುಡಿ ಪ್ರೀ ರಿಲೀಸ್ ಇವೆಂಟ್ ಗೆ ಕೌಂಟ್ ಡೌನ್ ಶುರುವಾಗಿದೆ. ಬೆಂಗಳೂರಿನ ಅರಮನೆ ಮೈದಾನನಲ್ಲಿ ಇಂದು ಸಂಜೆ 6ಗಂಟೆಗೆ ಪುನೀತ ಪರ್ವ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಲು ದೊಡ್ಡ ಮಟ್ಟದಲ್ಲಿ ವೇದಿಕೆ ಸಜ್ಜಾಗಿ ನಿಂತಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಲಕ್ಷ ಲಕ್ಷ ಪವರ್ ಫುಲ್ ಅಭಿಮಾನಿಗಳು ಕಾರ್ಯಕ್ರಮಕ್ಕೆ ಹಾಜರಾಗಿ ಅಪ್ಪು ಮೇಲಿನ ಅಭಿಮಾನ ತೋರಿಸಲು ಸಿದ್ದರಾಗಿದ್ದಾರೆ.

ಇಂದು ಸಂಜೆ ಅದ್ಧೂರಿಯಾಗಿ ನಡೆಯಲಿರುವ ಗಂಧದಗುಡಿ ಪ್ರೀ ರಿಲೀಸ್ ಇವೆಂಟ್ ನಲ್ಲಿ ಎಲ್ಲಾ ಇಂಡಸ್ಟ್ರಿಯ ಸಿನಿತಾರೆಯರಿಂದ ಗಂಧದಗುಡಿ ರಾಜರತ್ನನಿಗೆ ವಿಶೇಷ ನಮನ  ಸಲ್ಲಿಸಲಿದ್ದಾರೆ. ಪುನೀತ ಪರ್ವದಲ್ಲಿ ಶಿವಣ್ಣ, ರಮ್ಯಾ, ಪ್ರಭುದೇವ್ ಲೈವ್ ಡ್ಯಾನ್ಸ್ ಪರ್ಫಾಮೆನ್ಸ್ ಇರುತ್ತೆ. 

ಇದನ್ನೂ ಓದಿ- ನ.1ರಂದು ಪುನೀತ್ ರಾಜ್‌ಕುಮಾರ್‌ಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ಪ್ರದಾನ: ಸಿಎಂ ಬೊಮ್ಮಾಯಿ 

ಅರಮನೆ ಮೈದಾನದಲ್ಲಿ ಇಂದು ನಡೆಯಲಿರುವ ಪುನೀತ ಪರ್ವದಲ್ಲಿ ಬರೀ ಚಂದನವನದ ಸ್ಟಾರ್ ಗಳು ಮಾತ್ರವಲ್ಲದೆ  ಸೌತ್ ತಾರೆಯರ ಸಂಗಮವಾಗಲಿದೆ. ರಾಕಿಂಗ್ ಸ್ಟಾರ್  ಯಶ್, ಕಿಚ್ಚ ಸುದೀಪ್, ಬಾಲಯ್ಯ, ಅಕ್ಕಿನೇನಿ ನಾಗಾರ್ಜುನ್,  ರಾಣಾ ದಗ್ಗುಭಾಟಿ, ತಮಿಳಿನ ಸೂರ್ಯ ಸೇರಿದಂತೆ ಹಲವರ ಆಗಮನ ಇದೀಗ ಕನ್ಫರ್ಮ್ ಆಗಿದೆ.

ಪುನೀತ ಪರ್ವದಲ್ಲಿ ಕುನಾಲ್‌ ಗಾಂಜಾವಾಲ, ಅರ್ಮಾನ್‌ ಮಲಿಕ್‌ ಗಾಯನ ಕೂಡ ಇರುತ್ತೆ. ಇದರ ಜೊತೆಗೆ ವಿಶೇಷ ಎಂಬಂತೆ ಪುನೀತ ಪರ್ವ ಆಗಮಿಸುವವರಿಗೆ ಡ್ರೆಸ್ ಕೋಡ್ ಕೂಡ ಇರುತ್ತೆ. ಕಾರ್ಯಕ್ರಮಕ್ಕೆ ಆಗಮಿಸುವವರು ಬಿಳಿ ಬಣ್ಣದ ಬಟ್ಟೆ ಧರಿಸುವಂತೆ ಈಗಾಗಲೇ ಮನವಿ ಕೂಡ ಮಾಡಲಾಗಿದೆ. ಸಿಎಂ ಹಾಗೂ ಸಚಿವ ಸಂಪುಟದ ಸಹೋದ್ಯೋಗಿಗಳು ಮತ್ತು ಪೋಲಿಸ್ ಅಧಿಕಾರಿಗಳು, ಭಾಗಿಯಾಗುವ ಸಾಧ್ಯತೆಯಿದೆ.

ಇದನ್ನೂ ಓದಿ- Puneeth Parva: 'ಪುನೀತ ಪರ್ವ' ಕಾರ್ಯಕ್ರಮಕ್ಕೆ ಡ್ರೆಸ್‌ ಕೋಡ್‌.!

ಕಳೆದ ಒಂದು ವಾರದಿಂದ ರಾಘಣ್ಣ, ಯುವ, ವಿನಯ್ ಮತ್ತು ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಎಲ್ಲಾ ಸಿದ್ಧತೆಗಳನ್ನ ಖುದ್ದಾಗಿ ಗಮನಿಸಿದ್ದಾರೆ. ಸೋ ಅಪ್ಪು ಅಮರ. ಅವರ ನೆನಪು ಈ ಭೂಮಿ ಇರೋವರೆಗೂ ಶಾಶ್ವತವಾಗಿರುತ್ತೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News