ಅವರಿಗೆ ನನ್ನ ಮುಟ್ಟಲು ಇಷ್ಟವಿರಲಿಲ್ಲ, ಆದರೆ ನನ್ನನ್ನು ʼಕೊಲ್ಲಲಿಲ್ಲʼ..! ಪವನ್‌ ಮಾಜಿ ಪತ್ನಿ ಶಾಕಿಂಗ್‌ ಹೇಳಿಕೆ ವೈರಲ್‌

Renu Desai on parents : ನಟಿ ರೇಣು ದೇಸಾಯಿ ಅವರ ಇತ್ತೀಚಿನ ಕಾಮೆಂಟ್‌ಗಳು ಚರ್ಚೆಗೆ ಕಾರಣವಾಗುತ್ತಿವೆ. ವಿಚ್ಛೇದನಕ್ಕಿಂತ ಮುಂಚೆ ನಡೆದ ವಿಷಯದ ಕುರಿತು ಮಾತನಾಡಿರುವ ನಟ ಪವನ್‌ ಕಲ್ಯಾಣ್‌ ಮಾಜಿ ಪತ್ನಿಯ ಹೇಳಿಕೆಯೊಂದು ಸಧ್ಯ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.. 

Written by - Krishna N K | Last Updated : Jul 31, 2024, 07:14 PM IST
    • ರೇಣು ದೇಸಾಯಿ ಪವನ್‌ ಕಲ್ಯಾಣ್‌ ನಟನೆಯ ʼಬದ್ರಿʼ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು.
    • ಬದ್ರಿ ನಂತರ ʼಜಾನಿʼ ಚಿತ್ರದಲ್ಲಿ ರೇಣು ದೇಸಾಯಿ ಮತ್ತು ಪವನ್ ಕಲ್ಯಾಣ್ ಮತ್ತೊಮ್ಮೆ ಜೊತೆ ನಟಿಸಿದರು.
    • ಬದ್ರಿ ಸಿನಿಮಾದ ಅವಧಿಯಲ್ಲಿ ಇಬ್ಬರು ಪ್ರೀತಿಯಲ್ಲಿ ಬಿದ್ದಿದ್ದರು, ನಂತರ ಮದುವೆಯಾದರು.
ಅವರಿಗೆ ನನ್ನ ಮುಟ್ಟಲು ಇಷ್ಟವಿರಲಿಲ್ಲ, ಆದರೆ ನನ್ನನ್ನು ʼಕೊಲ್ಲಲಿಲ್ಲʼ..! ಪವನ್‌ ಮಾಜಿ ಪತ್ನಿ ಶಾಕಿಂಗ್‌ ಹೇಳಿಕೆ ವೈರಲ್‌ title=
Pawan kalyan

Renu Desai : ಮಾಡೆಲ್ ಆಗಿದ್ದ ರೇಣು ದೇಸಾಯಿ ಪವನ್‌ ಕಲ್ಯಾಣ್‌ ನಟನೆಯ ʼಬದ್ರಿʼ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ನಿರ್ದೇಶಕ ಪೂರಿ ಜಗನ್ನಾಥ್ ಅವರನ್ನು ಬೆಳ್ಳಿತೆರೆಗೆ ಪರಿಚಯಿಸಿದರು. ಬದ್ರಿ ಸೆಟ್‌ನಲ್ಲಿ ಪವನ್ ಕಲ್ಯಾಣ್ ಮತ್ತು ರೇಣು ದೇಸಾಯಿ ನಡುವೆ ಪ್ರೀತಿ ಅರಳಿತು.. 

ಬದ್ರಿ ನಂತರ ʼಜಾನಿʼ ಚಿತ್ರದಲ್ಲಿ ರೇಣು ದೇಸಾಯಿ ಮತ್ತು ಪವನ್ ಕಲ್ಯಾಣ್ ಮತ್ತೊಮ್ಮೆ ಜೊತೆ ನಟಿಸಿದರು. ಆದ್ರೆ ಈ ಸಿನಿಮಾ ಅಷ್ಟಾಗಿ ಯಶಸ್ವಿಯಾಗಲಿಲ್ಲ.. ಇದರ ನಡುವೆ ಇಬ್ಬರೂ ಮದುವೆಯಾದರು, ಈ ಜೋಡಿಗೆ ಅಕಿರಾ ಮತ್ತು ಆದ್ಯಾ ಎಂಬ ಮಕ್ಕಳು ಹುಟ್ಟಿದರು. ಆನಂತರ ಕಾರಣಾಂತರದಿಂದ ಬೇರ್ಪಟ್ಟರು.

ಇದನ್ನೂ ಓದಿ:ರೇಸಾರ್ಟ್‌ ʼಬರ್ತ್‌ಡೇ ಪಾರ್ಟಿʼ..! ಮಾಜಿ ʼಬಿಗ್ ಬಾಸ್ ಸ್ಪರ್ಧಿʼ ವಿರುದ್ಧ ಪ್ರಕರಣ ದಾಖಲು 

ವಿಚ್ಛೇದನದ ನಂತರ, ರೇಣು ದೇಸಾಯಿ ತನ್ನ ಮಕ್ಕಳೊಂದಿಗೆ ಪುಣೆಯಲ್ಲಿ ನೆಲೆಸಿದ್ದರು. ಅಕಿರಾ ಮತ್ತು ಆದ್ಯಾ ದೊಡ್ಡವರಾದ ನಂತರ ಹೈದರಾಬಾದ್‌ಗೆ ಮರುಳಿದರು. ಸಧ್ಯ ಅಕಿರಾ ಮತ್ತು ಆದ್ಯಾ ಮೆಗಾ ಕುಟುಂಬದ ಭಾಗವಾಗಿದ್ದು, ಮೆಗಾ ಕುಟುಂಬದ ಎಲ್ಲಾ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುತ್ತಾರೆ..

ಪವನ್ ಕಲ್ಯಾಣ್ ಅಭಿಮಾನಿಗಳೊಂದಿಗೆ ರೇಣು ದೇಸಾಯಿ ಆಗಾಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವಾರ್ ನಡೆಯುತ್ತಿರುತ್ತದೆ. ಟ್ರೋಲ್‌ಗಳನ್ನು ಸಹಿಸಲಾಗದೆ ಅವರು ತಮ್ಮ ಫೇಸ್‌ಬುಕ್ ಮತ್ತು ಟ್ವಿಟರ್ ಖಾತೆಗಳನ್ನು ತೊರೆದಿದ್ದಾರೆ. ಸಾಮಾಜಿಕ ಸೇವೆಗಾಗಿ Instagram ಅನ್ನು ಬಳಸುತ್ತಿದ್ದಾರೆ ಎನ್ನಲಾಗಿದೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ರೇಣು ದೇಸಾಯಿ ಅವರು ಹಿಂದೆಂದೂ ಹೇಳದ ಕೆಲವು ಪ್ರಮುಖ ವಿಷಯಗಳನ್ನು ಹಂಚಿಕೊಂಡಿದ್ದಾರೆ.

ಇದನ್ನೂ ಓದಿ:ಹೀರೋ ನನ್ನ ಕೈಯಲ್ಲಿ ಆಗಲ್ಲ ಅಂದಿದಕ್ಕೆ ಆ ಕೆಲಸವನ್ನು ಮಾಡಿ ತೋರಿಸಿದ ಡೈರೆಕ್ಟರ್‌..! ನಟಿ ಶ್ರೀದೇವಿಯನ್ನ...

ಗಂಡು ಮಗು ಹುಟ್ಟುತ್ತದೆ ಅಂತ ನನ್ನ ತಂದೆ-ತಾಯಿ ಮೊದಲಿನಿಂದಲೂ ನಂಬಿದ್ದರು. ನಾನು ಹುಟ್ಟಿದಾಗ ಅವರು ತೀವ್ರ ಖಿನ್ನತೆಗೆ ಒಳಗಾದರು. ನನ್ನ ತಂದೆಗೆ ನನ್ನನ್ನು ನೋಡಲು ಅಥವಾ ಮುಟ್ಟಲು ಇಷ್ಟವಿರಲಿಲ್ಲ. ಅನೇಕ ಪೋಷಕರು ಹೆಣ್ಣು ಮಗು ಜನಿಸಿದರೆ ಕೊಲ್ಲುತ್ತಾರೆ. ಆದರೆ ನನ್ನ ತಂದೆ ತಾಯಿ ವಿದ್ಯಾವಂತರಾಗಿದ್ದರಿಂದ ನನ್ನನ್ನು ಕೊಲ್ಲಲಿಲ್ಲ.

ನನ್ನ ಮನೆ ಸೇವಕಿ ನನ್ನನ್ನು ಪ್ರೀತಿಯಿಂದ ಬೆಳೆಸಿದಳು. ತಂದೆ-ತಾಯಿ ಇದ್ದರೂ ಅವರ ಪ್ರೀತಿ ನನಗೆ ಸಿಗಲಿಲ್ಲ. ಜನ್ಮ ನೀಡಿದ ಪೋಷಕರ ಬೆಂಬಲದ ಕೊರತೆಯು ವಿಚ್ಛೇದನಕ್ಕಿಂತಲೂ ಹೆಚ್ಚು ನೋವುಂಟುಮಾಡಿತು. ನನ್ನ ಮಕ್ಕಳ ಜೀವನ ಹಾಳಾಗಬಾರದು ಅಂತ ಎಂಗೇಜ್ ಮೆಂಟ್ ಕ್ಯಾನ್ಸಲ್ ಮಾಡಿಸಿದೆ ಎಂದು ಎರಡನೇ ಮದುವೆ ಕ್ಯಾನ್ಸಲ್‌ ಬಗ್ಗೆ ನಟಿ ಹೇಳಿಕೊಂಡಿದ್ದಾರೆ...

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News