ಅಂಧಾಭಿಮಾನಿಗಳೇ, ತಿಳುವಳಿಕೆ ಹೇಳಿದ್ರೂ ಕೇಳಲಿಲ್ಲ.. ಈಗ ಅನುಭವಿಸಿ..! ಪ್ರಥಮ್‌ ಗರಂ

Pratham on Darshan fans : ರೇಣುಕಾಸ್ವಾಮಿ ಹತ್ಯೆ ಕುರಿತು ಮಾತನಾಡಿದ್ದ ನಟ ಪ್ರಥಮ್‌ ವಿರುದ್ಧ ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಟ್ರೋಲ್‌ ಮಾಡಲಾಗುತ್ತಿದೆ.. ಇದೀಗ ಅಂತಹವರ ವಿರುದ್ಧ ನಟ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದು, ತಮ್ಮ ವಿರುದ್ಧ ಅವಹೇಳನಕಾರಿ ಭಾಷೆ ಬಳಸಿದವರಿಗೆ ಲೀಗಲ್‌ ಆಗಿ ಉತ್ತರ ನೀಡೋಕೆ ಮುಂದಾಗಿದ್ದಾರೆ..

Written by - Krishna N K | Last Updated : Jul 4, 2024, 01:30 PM IST
    • ರೇಣುಕಾಸ್ವಾಮಿ ಹತ್ಯೆ ವಿಚಾರ ಭಾರತೀಯ ಸಿನಿ ಇಂಡ್ರಸ್ಟ್ರಿಯಲ್ಲಿ ಸದ್ದು ಮಾಡುತ್ತಿದೆ.
    • ಪ್ರಕರಣಕ್ಕೆ ಸಂಬಂಧಿಸಿ 17 ಜನರನ್ನು ʻನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ..
    • ಈ ಕುರಿತು ಧ್ವನಿ ಎತ್ತಿದ್ದ ನಟ ಪ್ರಥಮ್‌ ವಿರುದ್ಧ ಸೋಷಿಯಲ್‌ ಮೀಡಿಯಾದಲ್ಲಿ ಟ್ರೋಲ್‌
ಅಂಧಾಭಿಮಾನಿಗಳೇ, ತಿಳುವಳಿಕೆ ಹೇಳಿದ್ರೂ ಕೇಳಲಿಲ್ಲ.. ಈಗ ಅನುಭವಿಸಿ..! ಪ್ರಥಮ್‌ ಗರಂ title=
Big Boss Pratham

Actor Pratham : ರೇಣುಕಾಸ್ವಾಮಿ ಹತ್ಯೆ ವಿಚಾರ ಭಾರತೀಯ ಸಿನಿ ಇಂಡ್ರಸ್ಟ್ರಿಯಲ್ಲಿ ಸದ್ದು ಮಾಡಿದ್ದು ಎಲ್ಲರಿಗೂ ಗೊತ್ತಿದೆ. ಇನ್ನು ಪ್ರಕರಣಕ್ಕೆ ಸಂಬಂಧಿಸಿ ಈಗಾಗಲೇ ನಟಿ ಪವಿತ್ರ ಗೌಡ, ನಟ ದರ್ಶನ್‌ ಸೇರಿದಂತೆ ಒಟ್ಟು 17 ಜನರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.. ಅಲ್ಲದೆ, ಈ ಕುರಿತು ಧ್ವನಿ ಎತ್ತಿದ್ದ ನಟ ಪ್ರಥಮ್‌ ವಿರುದ್ಧ ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಟ್ರೋಲ್‌ ಮಾಡಲಾಗಿತ್ತು.. ಇದೀಗ ಅಂತಹವರಿಗೆ ಒಳ್ಳೆಯ ಹುಡುಗ ಬಿಸಿ ಮುಟ್ಟಿಸಿದ್ದಾನೆ..

ಹೌದು... ಅಶ್ಲೀಲ ಸಂದೇಶ ಕುಳುಹಿಸಿದ್ದ ಎನ್ನುವ ಕಾರಣಕ್ಕೆ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಎಂಬುವರ ಹತ್ಯೆ ನಡೆದಿದೆ. ಪ್ರಕರಣ ತನಿಖೆ ಹಂತದಲ್ಲಿದ್ದು, ಸಧ್ಯ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ. ನಟ ದರ್ಶನ್‌ ಬಂಧನ ಬೆನ್ನಲ್ಲೆ ಸಿನಿರಂಗದ ಹಲವಾರು ನಟ ನಟಿಯರು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಈ ಪೈಕಿ ನಟ ಪ್ರಥಮ್‌ ಕೂಡ ಮಾತನಾಡಿದ್ದರು.

ಇದನ್ನೂ ಓದಿ:ಈ ಬ್ಯೂಟಿ ಯಾರು ಅಂತ ಥಟ್‌ ಅಂತ ಹೇಳಿ ನೋಡೋಣ..! ಗೆಸ್‌ ಮಾಡಿ.. ಸರ್ಪ್ರೈಸ್‌ ಒಳಗೆ ಇದೆ..

ಇನ್ನು ಪ್ರಥಮ್‌ ಹೇಳಿಕೆಗೆ ಸೋಷಿಯಲ್‌ ಮೀಡಿಯಾದಲ್ಲಿ ಸಾಕಷ್ಟು ವಿರೋಧ ವ್ಯಕ್ತವಾಗಿದ್ದು, ಅಲ್ಲದೆ, ಕೆಲ ಕಿಡಿಗೇಡಿಗಳು ಅವರ ಕುಟುಂಬವನ್ನೂ ಇದರಲ್ಲಿ ಎಳೆತಂದು ಟ್ರೋಲ್‌ ಮಾಡುತ್ತಿದ್ದರು. ಈ ಕುರಿತು ಒಳ್ಳೆ ಹುಡುಗ ಅನೇಕ ಬಾರಿ ಎಚ್ಚರಿಸಿದರೂ ಸಹ ಕ್ಯಾರೆ ಎನ್ನಲಿಲ್ಲ ಇದೀಗ ಅಂತಹವರಿಗೆ ಶಾಕ್‌ ನೀಡಿದ್ದಾರೆ ಪ್ರಥಮ್‌..

 

ಈ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ದೂರು ನೀಡಿರುವ ಪ್ರತಿ ಹಂಚಿಕೊಂಡಿರುವ ಒಳ್ಳೆ ಹುಡುಗ ಪ್ರಥಮ್‌, ʼಅಂಧಾಭಿಮಾನಿಗಳೇ;ನಾನೆಷ್ಟು ತಿಳುವಳಿಕೆ ಹೇಳಿದ್ರೂ ಕೇಳಲಿಲ್ಲ! ಮನೆಗೆpolice noticeಬಂದಮೇಲೆ stationಗೆ ಬಂದಾಗ ನಾವು ಪ್ರಥಮ್ fan, ಯಾರೋfake profile ಮಾಡಿಬಿಟ್ಟಿದ್ದಾರೆ ಅಂತ ಕಾಲಿಗೆ ಬೀಳ್ತೀರಾ; Social mediaದಲ್ಲಿ ಹಾರಾಡುವಾಗ ಇದ್ದ ಪೌರುಷpolice stationಗೆ ಬಂದಾಗ ಯಾಕಿಲ್ಲ?ನೀವು ಬುದ್ಧಿ ಕಲಿಯಲ್ಲ; ಇನ್ಮೇಲೆ legal ಆಗಿಹೋಗ್ತೀನಿ; ಅನುಭವಿಸಿ...; ಅಂತ ಬರೆದುಕೊಂಡಿದ್ದಾರೆ.. ಪ್ರಥಮ್‌ ಬೆಂಗಳೂರಿನ ಜ್ಞಾನಭಾರತಿ ಪೊಲೀಸ್‌ ಠಾಣೆಯಲ್ಲಿ ಕೆಟ್ಟ ಕಾಮೆಂಟ್ ಮಾಡಿದವರ ವಿರುದ್ಧ ಕಂಪ್ಲೆಂಟ್ ಕೊಟ್ಟಿದ್ದಾರೆ. 

ಇದನ್ನೂ ಓದಿ:ಸಿನಿಮಾ ಶೂಟಿಂಗ್‌ ವೇಳೆ ಸಲ್ಮಾನ್ ಖಾನ್ ಹತ್ಯೆಗೆ ಸಂಚು..? ಬಯಲಾಯ್ತು ರೋಚಕ ಸತ್ಯ..!

ಒಟ್ಟಾರೆಯಾಗಿ ರೇಣುಕಾಸ್ವಾಮಿ ಪ್ರಕರಣ ಸಿನಿರಂಗದಲ್ಲಿ ಸಂಚನಲ ಮೂಡಿಸಿದೆ.. ಅನೇಕ ನಟ ನಟಿಯರು ದರ್ಶನ್‌ ಪರ ಧ್ವನಿ ಎತ್ತಿದ್ದಾರೆ. ಇನ್ನೂ ಕೆಲವರು ನ್ಯಾಯ ಮತ್ತು ನ್ಯಾಯಾಂಗದ ಮೇಲೆ ನಂಬಿಕೆ ಇದ್ದು ತಪ್ಪಿತಸ್ಥರಿಗೆ ಶಿಕ್ಷೆಯಾಗಲಿ ಅಂತ ಹೇಳಿಕೆ ನೀಡಿದ್ದಾರೆ.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News