"ಸುದೀಪ್ ನನ್ನ ಸಿನಿಮಾದ 4 ಶೋ ಗಳನ್ನ ನನ್ನ ಅಭಿಮಾನಿಗಳಿಗೆ ತೋರಿಸುತ್ತೀನಿ ಅಂತಾರೆ"

ಕನ್ನಡ ಚಿತ್ರರಂಗಕ್ಕೆ ಅದ್ಧೂರಿತನ, ಶ್ರೀಮಂತಿಕೆ, ಹಾಗೂ ವೈಭವನ್ನು ತಂದುಕೊಟ್ಟವರರಲ್ಲಿ ನಮ್ಮ ಕ್ರೇಜಿಸ್ಟಾರ್ ಅವರದ್ದು ಅಗ್ರಪಾಲು, ಹೌದು, ಚಂದನವನದ ಬೆಳ್ಳಿತೆರೆಯನ್ನು ರಂಗುರಂಗಾಗಿಸುವ ಮೂಲಕ ಕನ್ನಡ ಸಿನಿಮಾಗಳಿಗೆ ಹೊಸ ಆಯಾಮವನ್ನು ನೀಡಿದ ಕೀರ್ತಿ ಕನ್ನಡದ ಶೋಮ್ಯಾನ್ ರವಿಚಂದ್ರನ್ ಅವರಿಗೆ ಸಲ್ಲುತ್ತದೆ.

Written by - YASHODHA POOJARI | Edited by - Manjunath N | Last Updated : Aug 10, 2022, 10:24 PM IST
  • ಇದೇ ಆಗಸ್ಟ್ 12ರಂದು ಕ್ರೇಜಿಸ್ಟಾರ್ ರವಿಚಂದ್ರನ್ ಅವ್ರ ಕನಸಿನ ಚಿತ್ರವಾಗಿರುವ 'ರವಿ ಬೋಪಣ್ಣ' ತೆರೆಯ ಮೇಲೆ ಅಬ್ಬರಿಸಲು ಸಿದ್ಧವಾಗಿದೆ.
  • ಇನ್ನೇನು ಸಿನಿಮಾ ರಿಲೀಸ್ ಗೆ ಕೆಲವೇ ಗಂಟೆಗಳು ಬಾಕಿ ಇದೆ.
  • 'ರವಿ ಬೋಪಣ್ಣ' ಸಿನಿಮಾ ನೋಡಿದ ಅಭಿಮಾನಿಗಳಂತೂ ಗುಂಡಿಗೆ ಮತ್ತು ಗಟ್ಟಿತನ ಇರೋರು ಮಾತ್ರ 7 ನಿಮಿಷದ ಟ್ರೇಲರ್ ಬಿಡಲು ಸಾಧ್ಯ
"ಸುದೀಪ್ ನನ್ನ ಸಿನಿಮಾದ 4 ಶೋ ಗಳನ್ನ ನನ್ನ ಅಭಿಮಾನಿಗಳಿಗೆ ತೋರಿಸುತ್ತೀನಿ ಅಂತಾರೆ" title=
screengrab

ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಅದ್ಧೂರಿತನ, ಶ್ರೀಮಂತಿಕೆ, ಹಾಗೂ ವೈಭವನ್ನು ತಂದುಕೊಟ್ಟವರರಲ್ಲಿ ನಮ್ಮ ಕ್ರೇಜಿಸ್ಟಾರ್ ಅವರದ್ದು ಅಗ್ರಪಾಲು, ಹೌದು, ಚಂದನವನದ ಬೆಳ್ಳಿತೆರೆಯನ್ನು ರಂಗುರಂಗಾಗಿಸುವ ಮೂಲಕ ಕನ್ನಡ ಸಿನಿಮಾಗಳಿಗೆ ಹೊಸ ಆಯಾಮವನ್ನು ನೀಡಿದ ಕೀರ್ತಿ ಕನ್ನಡದ ಶೋಮ್ಯಾನ್ ರವಿಚಂದ್ರನ್ ಅವರಿಗೆ ಸಲ್ಲುತ್ತದೆ.ಸಿನಿಮಾವನ್ನೇ ಉಸಿರಾಗಿ ಬದುಕುತ್ತಿರುವ ವ್ಯಕ್ತಿ ಕನ್ನಡದಲ್ಲಿ ಯಾರಾದರೂ ಇದ್ದರೆ ಅದು ನಮ್ಮೆಲ್ಲರ ನೆಚ್ಚಿನ ಕನಸುಗಾರ ಎಂದು ನಿಶ್ಚಿತವಾಗಿ ಹೇಳಬಹುದು.

ಹೌದು, ಈಗ ರವಿ ಬೋಪಣ್ಣ ಚಿತ್ರದ ಬಿಡುಗಡೆಗೂ ಮುನ್ನ ಜೀ ಕನ್ನಡ ನ್ಯೂಸ್ ಗೆ ನೀಡಿದ Exclusive ಸಂದರ್ಶನದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ತಮ್ಮ ಚಿತ್ರಕ್ಕೆ ಸಂಬಂಧಿಸಿದಂತೆ ಹಲವಾರು ವಿಷಯಗಳನ್ನು ಅವರು ಮುಕ್ತವಾಗಿ ಹಂಚಿಕೊಂಡಿದ್ದಾರೆ.

ಇದೇ ವೇಳೆ ಸಾಮಾನ್ಯವಾಗಿ ಚಿತ್ರದ ಬಿಡುಗಡೆಗೂ ಮುನ್ನ ಅದಕ್ಕಾಗಿ ಭರ್ಜರಿ ಪ್ರೊಮೋಷನ್ ಮಾಡುವುದು ಈಗಿನ ಟ್ರೆಂಡ್ ಆಗಿದೆ.ಈ ವಿಚಾರವಾಗಿ ಕೇಳಿದಾಗ ಇದಕ್ಕೆ  ಭಿನ್ನವೆನ್ನುವಂತೆ ಉತ್ತರಿಸಿದ ರವಿಚಂದ್ರನ್ ಅವರು ಸಿನಿಮಾವನ್ನು ಮಾಡಿರೋದೇ ಅಭಿಮಾನಿಗಳಿಗಾಗಿ ಹಾಗಾಗಿ ಅವರಾಗಿಯೇ ಬಂದು ಸಿನಿಮಾವನ್ನು ನೋಡಿ ಮೆಚ್ಚಿಕೊಂಡರೆ ಅದೇ ನಂಗೆ ಖುಷಿ ಎಂದು ಹೇಳುತ್ತಾರೆ.ಆ ಮೂಲಕ ಅಭಿಮಾನಿಗಳೇ ಸಿನಿಮಾಗೆ ಶ್ರೀರಕ್ಷೆಯಾಗಬೇಕು ಎಂದು ಹೇಳುತ್ತಾರೆ.

ಇದನ್ನೂ ಓದಿ: Jaggesh On Ravichandran: ಕಷ್ಟದ ಕಾಲದಲ್ಲಿ ನೆರಳಾಗಿ ನಿಂತವರು ಕ್ರೇಜಿ ಸ್ಟಾರ್: ಜಗ್ಗೇಶ್

ಇದೇ ಆಗಸ್ಟ್ 12ರಂದು ಕ್ರೇಜಿಸ್ಟಾರ್ ರವಿಚಂದ್ರನ್ ಅವ್ರ ಕನಸಿನ ಚಿತ್ರವಾಗಿರುವ 'ರವಿ ಬೋಪಣ್ಣ' ತೆರೆಯ ಮೇಲೆ ಅಬ್ಬರಿಸಲು ಸಿದ್ಧವಾಗಿದೆ.ಇನ್ನೇನು ಸಿನಿಮಾ ರಿಲೀಸ್ ಗೆ ಕೆಲವೇ ಗಂಟೆಗಳು ಬಾಕಿ ಇದೆ. 'ರವಿ ಬೋಪಣ್ಣ' ಸಿನಿಮಾದ ಟ್ರೈಲರ್ ನೋಡಿದ ಅಭಿಮಾನಿಗಳಂತೂ ಗುಂಡಿಗೆ ಮತ್ತು ಗಟ್ಟಿತನ ಇರೋರು ಮಾತ್ರ 7 ನಿಮಿಷದ ಟ್ರೇಲರ್ ಬಿಡಲು ಸಾಧ್ಯ. 7 ನಿಮಿಷದ ಟ್ರೇಲರ್ ಬಿಡುಗಡೆ ಮಾಡುವ ಮೂಲಕ ಈ ಸಿನಿಮಾ ಇತಿಹಾಸವನ್ನ ಸೃಷ್ಠಿಸಿದೆ ಎಂದು ಹಾಡಿಹೊಗಳುತ್ತಿದ್ದಾರೆ.

ನಮ್ಮ ಕ್ರೇಜಿಸ್ಟಾರ್ ಅವರಿಗೆ ವಯಸ್ಸು 60 ಆಗಿದ್ದರು ಇನ್ನೂ 16 ರ ಹರೆಯದಂತೆ ಸಿನಿಮಾದ ಕುರಿತಾದ ಉತ್ಸಾಹ, ಸ್ಪೂರ್ತಿಯನ್ನು ಹೊಂದಿದ್ದಾರೆ. ಆ ಮೂಲಕ ವಯಸ್ಸು ಆಗಿರುವುದು ದೇಹಕ್ಕೆ ಹೊರತು ಮನಸ್ಸಿಗಲ್ಲ ಎನ್ನುವುದನ್ನು ಅವರು ಸಾಬೀತುಪಡಿಸಿದ್ದಾರೆ.ಕನ್ನಡ ಸಿನಿಮಾ ಇತಿಹಾಸದ ಪುಟವನ್ನ ತಿರುವಿ ನೋಡಿದ್ರೆ ವೀರಸ್ವಾಮಿ ಮತ್ತು ರವಿಚಂದ್ರನ್ ಜೋಡಿ ಸುವರ್ಣ ಸಂಭ್ರಮದಲ್ಲಿರುವ ಈಶ್ವರಿ ಪ್ರೊಡಕ್ಷನ್ ಮೂಲಕ ಕನ್ನಡ ಸಿನಿಮಾಗಳಿಗೆ ಹೊಸ ಆಯಾಮವನ್ನು ನೀಡಿದೆ.

ಬದುಕಿನ ಎಲ್ಲಾ ಆಯಾಮಗಳನ್ನು ನೋಡಿರುವ ನಮ್ಮ ಕನಸುಗಾರ ತಮ್ಮ  ತಂದೆಯವರ ಬಗ್ಗೆ ಮಾತನಾಡುತ್ತಾ 'ಸಾಲು ಸಾಲು ಸಿನಿಮಾಗಳನ್ನು ಮಾಡುವ ಮೂಲಕ ಸಾಕಷ್ಟು ಜನರಿಗೆ ಅನ್ನ ಹಾಕಿದ ಕೈ ನಮ್ಮ ತಂದೆ ವೀರಸ್ವಾಮಿಯವರದ್ದು, ಆದರೆ ಒಮ್ಮೆ ಅವರು ಆಸ್ಪತ್ರೆಗೆ ದಾಖಲಾಗಿದ್ದಾಗ ತುಂಬಾ ಬೇಕಾದವರ ಬಳಿ ಒಂದು ಲಕ್ಷ ಹಣವನ್ನು ಕೇಳಿದರೆ ಆಗ ಅವರು ಕೊಡಲಿಲ್ಲ' ಎನ್ನುವ ವಿಷಯವನ್ನು ಇದೆ ವೇಳೆ ರವಿಚಂದ್ರನ್ ಹಂಚಿಕೊಂಡರು.

ನಾನು ಸಿನಿಮಾದಿಂದ ಎಲ್ಲವನ್ನೂ ಕಳೆದುಕೊಂಡೆ, ಸಿನಿಮಾ ಮಾಡಿ ಹಣ ಬಂದ್ರೆ ಮತ್ತೇ ಅದನ್ನ ಸಿನಿಮಾಗೆ ಉಪಯೋಗಿಸುವೆ. ನಾನು ಇರೋದು ಒಂದೇ ಮನೆಯಲ್ಲಿ ನನಗೆ ಅಷ್ಟೇ ಸಾಕು.ನನ್ನ ಮಕ್ಕಳಿಗೆ ನಾನು ಏನೂ ಮಾಡಿಲ್ಲ, ಅವರೇ ಅವರ ಜೀವನಕ್ಕೆ ಏನು ಬೇಕೋ ಅದನ್ನ ಮಾಡಿಕೊಳ್ಳಲಿ ಎಂದು ರವಿಚಂದ್ರನ್ ಹೇಳುತ್ತಾರೆ.

ಇದನ್ನೂ ಓದಿ: ಕಿಚ್ಚ ಸುದೀಪ್ 'ವಿಕ್ರಾಂತ್‌ ರೋಣ' ₹200 ಕೋಟಿ ಕ್ಲಬ್‌ ಸೇರೋದು ಪಕ್ಕಾ..?

ಊಟಕ್ಕಾಗಿ ಅಭಿಮಾನಿಗಳ ಬಳಿ ಹೋದ್ರೆ ನಂಗೆ ಖಂಡಿತ ಅನ್ನ ಕೊಡುತ್ತಾರೆ.ಜನ ಪ್ರೀತಿ ಕೊಡುತ್ತಾರೆ ಅಷ್ಟೇ ಸಾಕು ನನಗೆ. ನಾನು ನಿದ್ದೆ ಮಾಡಲ್ಲ ಯಾಕಂದ್ರೆ ನನಗೆ ದಣಿವು ಅನ್ನೋದು ಇಲ್ಲವೇ ಇಲ್ಲ. ದಣಿವು ಆದ್ರೆ ಅಲ್ವೇ ರೆಸ್ಟ್ ಬೇಕು ಅನಿಸೋದು ಎಂದು ಅವರು ತಮ್ಮ ಸುದೀರ್ಘ ಜೀವನದ ಅನುಭವ, ಕಷ್ಟ ಸುಖಗಳನ್ನು ಜೀ ಕನ್ನಡ ನ್ಯೂಸ್ ನ ಸಂದರ್ಶನದಲ್ಲಿ ಹಂಚಿಕೊಂಡರು.

ಇದೆ ವೇಳೆ ಮುಂದುವರೆದು ಮಾತನಾಡಿದ ಅವರು 'ದರ್ಶನ್ ಒಂದು ಕರೆ ಮಾಡಿ ಹೇಗಿದ್ದೀರಿ ಅಂತ ಕೇಳಿದ್ರೆ ಸಾಕು ಎಲ್ಲಾ ಸಿಕ್ಕಂತೆ ಆಗುತ್ತೆ.ಸುದೀಪ್ ನನ್ನ ಸಿನಿಮಾದ 4 ಶೋ ಗಳನ್ನ ನನ್ನ ಅಭಿಮಾನಿಗಳಿಗೆ ತೋರಿಸುತ್ತೀನಿ ಅಂತಾರೆ.ಗೆಳೆಯ ಸಜ್ಜನ್ ಒಂದು ಶೋ ಕಂಪ್ಲೀಟ್ ನಂಗೆ ಬೇಕು ಅಂತಾರೆ ಈ ಪ್ರೀತಿಗೆ ನಾನು ಸದಾ ಋಣಿಯಾಗಿದ್ದೀನಿ' ಎಂದು ಹೇಳಿದರು.

ಇನ್ನು ರವಿ ಬೋಪಣ್ಣ ಚಿತ್ರದ ವಿಷಯಕ್ಕೆ ಬರುವುದಾದರೆ ನಮ್ಮೊಳಗಿರೋ ಮತ್ತೊಂದು ವ್ಯಕ್ತಿಯ ಬಗ್ಗೆ ಸೃಷ್ಟಿಯಾದ ಅದ್ಬುತ ಕಥೆಯೇ "ರವಿ ಬೋಪಣ್ಣ"ಈ ಸಿನಿಮಾದಲ್ಲಿ ಸಾಕಷ್ಟು ತಿರುವುಗಳು, ಭಾವನೆಗಳು, ಪ್ರಣಯ,ಪ್ರೀತಿ, ಗ್ಲಾಮರ್ ಹಾಗೂ ಅದ್ಬುತವಾದ 8 ಹಾಡುಗಳು ಇವೆ.ಆ ಮೂಲಕ ಬಹಳ ದಿನಗಳ ನಂತರ ನಮ್ಮ ಪ್ರೀತಿಯ ಕನಸುಗಾರ ಈಗ ರವಿ ಬೋಪಣ್ಣನ ಪಾತ್ರದ ಮೂಲಕ ಅಭಿಮಾನಿಗಳಿಗೆ ಚಿತ್ರದ ರಸದೌತಣವನ್ನು ಬಡಿಸಲಿದ್ದಾರೆ. ಹಾಗಿದ್ದಲ್ಲಿ ಮತ್ಯಾಕೆ ತಡ ಬೆಳ್ಳಿಪರದೆ ಮೇಲೆ ರವಿ ಬೋಪಣ್ಣನ ಅವತಾರವನ್ನು ನೋಡಲು ನೀವೆಲ್ಲರೂ ಸಿದ್ದರಾಗಿ..!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

 

 

 

 

Trending News