ರಿಷಬ್ ಶೆಟ್ಟಿ ಚಿತ್ರಕ್ಕೆ ಇಂಥಾ ನಿರ್ಭಂಧ... 'ಕಾಂತಾರ 1'ದಲ್ಲಿ ಪಂಜುರ್ಲಿ ದೈವ ಇರೋದಿಲ್ವಾ?

Kantara 1 Updates: ಸಾಕಷ್ಟು ಪ್ರಸಿದ್ಧಿ ಪಡೆದು ವಿವಾದಗಳನ್ನೂ ಹೊತ್ತುಕೊಂಡಿದ್ದ ರಿಷಬ್‌ ಶೆಟ್ಟಿ ಅವರ ಕಾಂತಾರ ಸಿನಿಮಾದ ಮುಂದಿನ ಅಧ್ಯಾಯದ ಚಿತ್ರೀಕರಣಕ್ಕೆ ಮತ್ತೊಂದು ಹೊಸ ಕಂಟಕ ಶುರುವಾಗಿದೆ..

Written by - Savita M B | Last Updated : Feb 20, 2024, 09:28 AM IST
  • ಕನ್ನಡ ಸಿನಿರಂಗದಲ್ಲಿ ಸಂಚಲನವನ್ನೇ ಸೃಷ್ಟಿಮಾಡಿದ ಕಾಂತಾರ ಸಿನಿಮಾ ಸಾಕಷು ಮೆಚ್ಚುಗೆ ಪಡೆದರೂ ಟೀಕೆಗಳನ್ನು ಎದುರಿಸಿತ್ತು
  • ಸದ್ಯ ನಟ ರಿಷಬ್‌ ಕಾಂತಾರದ ಮುಂದಿನ ಭಾಗದ ಸಿದ್ದತೆಯಲ್ಲಿದ್ದಾರೆ..
  • ಇದೀಗ ಈ ಕಾಂತಾರ 1 ಚಿತ್ರತಂಡಕ್ಕೂ ಹೊಸ ಕಾಟ ಶುರುವಾಗಿದೆ.
ರಿಷಬ್ ಶೆಟ್ಟಿ ಚಿತ್ರಕ್ಕೆ ಇಂಥಾ ನಿರ್ಭಂಧ... 'ಕಾಂತಾರ 1'ದಲ್ಲಿ ಪಂಜುರ್ಲಿ ದೈವ ಇರೋದಿಲ್ವಾ? title=

Kantara 1: ಕನ್ನಡ ಸಿನಿರಂಗದಲ್ಲಿ ಸಂಚಲನವನ್ನೇ ಸೃಷ್ಟಿಮಾಡಿದ ಕಾಂತಾರ ಸಿನಿಮಾ ಸಾಕಷು ಮೆಚ್ಚುಗೆ ಪಡೆದರೂ ಟೀಕೆಗಳನ್ನು ಎದುರಿಸಿತ್ತು.. ಸದ್ಯ ನಟ ರಿಷಬ್‌ ಕಾಂತಾರದ ಮುಂದಿನ ಭಾಗದ ಸಿದ್ದತೆಯಲ್ಲಿದ್ದಾರೆ.. ಆದರೆ ಇದೀಗ ಈ ಕಾಂತಾರ 1 ಚಿತ್ರತಂಡಕ್ಕೂ ಹೊಸ ಕಾಟ ಶುರುವಾಗಿದೆ.. ಏನದು ಅಂತೀರಾ ಇಲ್ಲಿದೆ ಉತ್ತರ.. 

ರಿಷಬ್ ಶೆಟ್ಟಿ ಕಾಂತಾರಕ್ಕೆ ಸದ್ಯ ಮತ್ತೊಂದು ಹೊಸ ಕಂಟಕ ಶುರುವಾಗಿದೆ.. ಪಂಜುರ್ಲಿ ದೈವ ನೃತ್ಯವನ್ನು ಚಿತ್ರದಲ್ಲಿ ಪ್ರದರ್ಶಿಸದಂತೆ ಭಜರಂಗದಳ ವಾರ್ನಿಂಗ್ ನೀಡಿದೆ.. ಈ ಮೂಲಕ ಚಿತ್ರತಂಡ ದೊಡ್ಡ ಸಂಕಷ್ಟಕ್ಕೆ ಸಿಲುಕಿದೆ.. ಹಾಗಾದರೆ ಕಾಂತಾರ ಸಿನಿಮಾದಲ್ಲಿ ಪಂಜುರ್ಲಿ ದೈವ ನೃತ್ಯ ಇರುತ್ತಾ? ಇಲ್ಲವಾ? ಅಥವಾ ಕಾಂತಾರ ಕಥೆಯನ್ನೇ ಬದಲಿಸುತ್ತಾ? ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ಮುಂದಿನ ದಿನಗಳಲ್ಲಿ ಸಿಗಲಿದೆ.. ಅಷ್ಟಕ್ಕೂ ಭಜರಂಗದಳ ಈ ಕಾಂತಾರ ಚಿತ್ರ ತಂಡಕ್ಕೆ ಇಂಥಾ ನಿರ್ಭಂಧ ಹೇರುತ್ತಿರೋದ್ಯಾಕೆ? 

ಇದನ್ನು ಓದಿ : GK Quiz: ಯಾವ ಆಂಜನೇಯನ ದೇವಸ್ಥಾನದಲ್ಲಿ ಮುಸ್ಲಿಮರು ಪೂಜೆ ಸಲ್ಲಿಸುತ್ತಾರೆ?

ಕಾಂತಾರ ಸಿನಿಮಾ ಬಿಡುಗಡೆಯಾದ ನಂತರ ಕರಾವಳಿ ದೈವ ಹೆಚ್ಚು ಪ್ರಸಿದ್ದಿ ಪಡೆದು ಕೊಂಡಿತ್ತು.. ಆದರೆ ಅಷ್ಟೇ ಟೀಕೆಗಳೂ ವ್ಯಕ್ತವಾಗಿದ್ದವು ಎನ್ನುವ ಮಾತುಗಳು ಇವೆ.. ಆದರೆ ಈಗ ಸಿನಿಮಾ, ಧಾರಾವಾಹಿ ಹಾಗೂ ಸಭಾ ಕಾರ್ಯಕ್ರಮದಲ್ಲಿ ಕರಾವಳಿ ದೈವಾರಾಧನೆಗೆ ಅಪಮಾನ ಮಾಡಲಾಗುತ್ತಿದೆ ಎಂದು ದೈವಾರಾಧಕರು ಆರೋಪಿಸುತ್ತಿದ್ದಾರೆ.. ಇದೆಲ್ಲದರ ನಡುವೆ ಕಾಂತಾರ 1ರ ಟೀಸರ್‌ ಭರ್ಜರಿ ಸದ್ದು ಮಾಡಿದೆ.. ಅದರಲ್ಲೂ ರಿಷಬ್‌ ವರಾಹ ನಾರಯಣಾವತಾರ ಅಭಿಮಾನಿಗಳಲ್ಲಿ ಮೈಜುಮ್‌ ಎನ್ನಿಸುವಂತಿದೆ... ಬರೀ ಟೀಸರ್ ಮಿಲಿಯನ್ ಗಟ್ಟಲೆ ವೀವ್ಸ್‌ ಪಡೆದುಕೊಂಡಿದೆ.. ಸದ್ಯ ಜನ ಸಿನಿಮಾ ರಿಲೀಸ್‌ಗಾಗಿ ಕಾತೂರದಿಂದ ಕಾಯುತ್ತಿದ್ದಾರೆ.. 

ಇದನ್ನೂ ಓದಿ-ಲೈಟ್ ಪಿಚ್ ಸೀರೆಯಲ್ಲಿ ದೀಪಿಕಾ ಪಡುಕೋಣೆ : ಹೊಸ ಫೋಟೋಶೂಟ್

ಕಾಂತಾರ ಸಿನಿಮಾದಲ್ಲಿ ಕರಾವಳಿ ದೈವ ಹೆಚ್ಚು ಪ್ರಸಿದ್ದಿ ಪಡೆಯುತ್ತಿದ್ದಂತೆ.. ನಟ ರಿಷಬ್‌ "ಧೈವಾರಾಧನೆಯನ್ನು ಯಾರು ಅನುಕರಣೆ ಮಾಡಬೇಡಿ..  ರೀಲ್ಸ್‌, ಡ್ಯಾನ್ಸ್‌ ಎಂದೆಲ್ಲ ದೈವಕ್ಕೆ ಅಪಚಾರ ಮಾಡಬೇಡಿ.. ನಾವು ಶ್ರದ್ಧಾ ಭಕ್ತಿಯಿಂದ ಪಾತ್ರಗಳನ್ನು ಮಾಡಿದ್ದೇವೆ.. ಅದನ್ನು ತಪ್ಪಾಗಿ ಪ್ರದರ್ಶಿಸಿ ಅಪಮಾನ ಮಾಡಬೇಡಿ" ಎಂದು ಮನವಿ ಮಾಡಿದ್ದರು.. ಆದರೂ ಕೆಲವರು ಆ ತಪ್ಪನ್ನು ಮಾಡುತ್ತಿದ್ದಾರೆ.. ಹೀಗಾಗಿ ಆಕ್ರೋಶಗಳು ಕೇಳಿಬರುತ್ತಿವೆ.

ಸದ್ಯ ಕಾಂತಾರ ಪ್ರೀಕ್ವೆಲ್ ಚಿತ್ರೀಕರಣ ನಡೆಯುತ್ತಿದ್ದು.. ಚಿತ್ರದಲ್ಲಿ ದೈವಾರಾಧನೆ ಇರುವ ಸಾಧ್ಯತೆಯಿದೆ.. ಆದರೆ ದೈವಾರಾಧನೆ ಪ್ರದರ್ಶನಕ್ಕಲ್ಲ.. ಒಂದು ವೇಳೆ ಪ್ರದರ್ಶನ ಮಾಡಿದರೆ ಮುತ್ತಿಗೆ ಹಾಕುತ್ತೇವೆ ಎಂದು ವಿಶ್ವ ಹಿಂದೂ ಪರಿಷತ್ತು ಮುಖಂಡ ಶರಣ್ ಪಂಪ್ವೆಲ್ ಎಚ್ಚರಿಕೆ ನೀಡಿದ್ದಾರೆ.. ಇದೀಗ ಈ ವಿಚಾರ ಕಾಂತಕ್ಕೆ ಚಿತ್ರತಂಡಕ್ಕೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News