ನಾನು ಯಾವತ್ತೂ ಕನ್ನಡ ಚಿತ್ರರಂಗವನ್ನು ಮರೆಯುವುದಿಲ್ಲ- ಯಾಮಿ ಗೌತಮಿ

ಗಣೇಶ್ ಅಭಿನಯದ ಉಲ್ಲಾಸ ಉತ್ಸಾಹ ಚಿತ್ರದ ಮೂಲಕ ಸಿನಿಮಾ ಪ್ರಪಂಚಕ್ಕೆ ಕಾಲಿಟ್ಟಿದ್ದ ಯಾಮಿ ಗೌತಮಿ. ಇಲ್ಲಿಂದಲೇ ಮುಂದೆ ಅವರು ಬಾಲಿವುಡ್ ನಲ್ಲಿ  ಹೆಸರು ಮಾಡಿದವರು.ಈ ಹಿಂದೆ ಆಯುಷ್ಮಾನ್ ಕುರಾನಾ ಅವರ ಜೊತೆ ವಿಕಿ ಡೋನರ್ ಚಿತ್ರದಲ್ಲಿ ನಟಿಸಿ ಬಾಲಿವುಡ್ ನಲ್ಲಿ ಸೈ ಎನಿಸಿಕೊಂಡಿದ್ದರು.

Last Updated : Mar 6, 2019, 07:42 PM IST
ನಾನು ಯಾವತ್ತೂ ಕನ್ನಡ ಚಿತ್ರರಂಗವನ್ನು ಮರೆಯುವುದಿಲ್ಲ- ಯಾಮಿ ಗೌತಮಿ title=

ಬೆಂಗಳೂರು: ಗಣೇಶ್ ಅಭಿನಯದ ಉಲ್ಲಾಸ ಉತ್ಸಾಹ ಚಿತ್ರದ ಮೂಲಕ ಸಿನಿಮಾ ಪ್ರಪಂಚಕ್ಕೆ ಕಾಲಿಟ್ಟಿದ್ದ ಯಾಮಿ ಗೌತಮಿ. ಇಲ್ಲಿಂದಲೇ ಮುಂದೆ ಅವರು ಬಾಲಿವುಡ್ ನಲ್ಲಿ  ಹೆಸರು ಮಾಡಿದವರು.ಈ ಹಿಂದೆ ಆಯುಷ್ಮಾನ್ ಕುರಾನಾ ಅವರ ಜೊತೆ ವಿಕಿ ಡೋನರ್ ಚಿತ್ರದಲ್ಲಿ ನಟಿಸಿ ಬಾಲಿವುಡ್ ನಲ್ಲಿ ಸೈ ಎನಿಸಿಕೊಂಡಿದ್ದರು.

ಇತ್ತೀಚಿಗಷ್ಟೇ ಸರ್ಜಿಕಲ್ ಸ್ಟ್ರೈಕ್ ಆಧಾರಿತ ಉರಿ ಸಿನಿಮಾದಲ್ಲಿ ನಟಿಸಿ ಗಮನ ಸೆಳೆದಿದ್ದರು. ಸ್ಯಾಂಡಲ್ ವುಡ್ ಮೂಲಕ ಈಗ ಬಾಲಿವುಡ್ ನಲ್ಲಿ ಸಂಚಲನ ಮೂಡಿಸಿರುವ ಯಾಮಿ ಗೌತಮಿಗೆ ಚಂದನ ವನದಲ್ಲಿನ ಉಲ್ಲಾಸ್ ಉತ್ಸಾಹದ ನೆನಪುಗಳು ಇನ್ನು ಹಸಿರಾಗಿವೆ.

ಇದಕ್ಕೆ ಸಾಕ್ಷಿ ಎನ್ನುವಂತೆ ಇತ್ತೀಚಿಗೆ ಬೆಂಗಳೂರಿಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಬೆಂಗಳೂರಿಗೆ ಆಗಮಿಸಿದ್ದ ಯಾಮಿ ಗೌತಮಿ ತಮ್ಮ ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.ಚಂದನವನದಲ್ಲಿನ ನಿಜಕ್ಕೂ ಉತ್ತಮ ಅನುಭವವಾಗಿತ್ತು. ಗಣೇಶ್ ಜೊತೆಗೆ ಮೊದಲ ಬಾರಿಗೆ ನಾಯಕಿಯಾಗಿ ನಟಿಸಿದ್ದೆ. ಗಣೇಶ್ ನಿಜವಾಗಲೂ ಉತ್ತಮ ಪ್ರೋತ್ಸಾಹಕರು, ಈಗಲೂ ಅವರು ಅದೇ ರೀತಿಯಲ್ಲಿದ್ದಾರೆ. ಉತ್ತಮ ಕಥೆ, ಪಾತ್ರ ಸಿಕ್ಕರೆ ಮತ್ತೆ ಕನ್ನಡ ಚಿತ್ರಗಳಲ್ಲಿ ಅಭಿನಯಿಸುತ್ತೇನೆ" ಎನ್ನುವ ಮೂಲಕ ಕನ್ನಡ ಚಿತ್ರರಂಗ ಮೇಲಿನ ಅಭಿಮಾನ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ ಉಲ್ಲಾಸ ಉತ್ಸಾಹ ಚಿತ್ರವೂ ತಮಗೆ  ಪೂರ್ಣ ಪ್ರಮಾಣದ ನಾಯಕಿ ಪಟ್ಟವನ್ನು ತಂದುಕೊಟ್ಟಿರುವ ಸಿನಿಮಾ ಎಂದು ಹೇಳಲು ಮಾತ್ರ ಯಾಮಿ ಗೌತಮಿ ಮರೆಯಲಿಲ್ಲ 

 

Trending News