'ಕಾಲಾ' ಚಿತ್ರಕ್ಕೆ ಕರ್ನಾಟಕದಲ್ಲಿ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎಂದು ಭಾವಿಸಿದ್ದೇನೆ-ರಜನಿಕಾಂತ್

   

Last Updated : Jun 5, 2018, 04:45 PM IST
'ಕಾಲಾ' ಚಿತ್ರಕ್ಕೆ ಕರ್ನಾಟಕದಲ್ಲಿ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎಂದು ಭಾವಿಸಿದ್ದೇನೆ-ರಜನಿಕಾಂತ್  title=

ಬೆಂಗಳೂರು: ಕರ್ನಾಟಕದಲ್ಲಿ ಕಾಲಾ ಚಿತ್ರದ ಬಿಡುಗಡೆಗೆ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎಂದು ಭಾವಿಸಿದ್ದೇನೆ ಎಂದು ಸೂಪರ್ ಸ್ಟಾರ್ ರಜನಿ ಕಾಂತ್ ಅಭಿಪ್ರಾಯಪಟ್ಟಿದ್ದಾರೆ.

ಇತ್ತೀಚಿಗೆ ಕಾವೇರಿ ವಿಚಾರವಾಗಿ ಮಾತನಾಡಿ ಕರ್ನಾಟಕದ ಕೆಂಗಣ್ಣಿಗೆ ಗುರಿಯಾಗಿದ್ದ ರಜನಿಕಾಂತ್ ಈಗ ರಾಜ್ಯದಲ್ಲಿ ಚಿತ್ರ ಬಿಡುಗಡೆಯ ವಿಚಾರವಾಗಿ ಮಾತನಾಡುತ್ತಾ ಅವರು "ನನಗನ್ನಿಸುವ ಹಾಗೆ ಕರ್ನಾಟಕದಲ್ಲಿ ಕಾಲಾ ಚಿತ್ರಕ್ಕೆ ಸಮಸ್ಯೆ  ಉಂಟಾಗುತ್ತದೆ ಎಂದು ಅನಿಸುವುದಿಲ್ಲ,ಅದು ಕೇವಲ ಕರ್ನಾಟಕದಲ್ಲಿರುವ ತಮಿಳಿಗರಷ್ಟೇ ಅಲ್ಲದೆ ಇತರ ಭಾಷೆಯನ್ನು ಮಾತನಾಡುವ ಜನರು ಸಹಿತ ಚಲನಚಿತ್ರ ವೀಕ್ಷಿಸಲು ಇಷ್ಟಪಡುತ್ತಾರೆ.ಕರ್ನಾಟಕ ಸರ್ಕಾರ ಪ್ರೇಕ್ಷಕರಿಗೆ ಮತ್ತು ಚಲನಚಿತ್ರ ಮಂದಿರಗಳಿಗೆ ಸೂಕ್ತ ರಕ್ಷಣೆ ನೀಡುತ್ತದೆ ಎಂದು ಭಾವಿಸಿದ್ದೇನೆ ಎಂದು ತಿಳಿಸಿದ್ದರು.

ನಿರ್ದೇಶಕ ಪಾ ರಂಜೀತ್ ಕಾಲಾ  ಚಿತ್ರಕ್ಕೆ ನಿರ್ದೇಶನ ಮಾಡಿದರೆ, ಅಳಿಯ ಧನುಶ್ ಅವರು ಚಿತ್ರ ನಿರ್ಮಿಸಿದ್ದಾರೆ,ಇದೇ ಜೂನ್ 7 ರಂದು ದೇಶಾದ್ಯಂತ ಈ ಚಿತ್ರ ಬಿಡುಗಡೆಯಾಗಲಿದೆ ಎನ್ನಲಾಗಿದೆ. 

Trending News