Cauvery water dispute: ಪ್ರತಿ ಬಾರಿ ಹೋರಾಟ ಬೇಕಾ..?- ನಟಿ ಶ್ರುತಿ

Cauvery Water Sharing Dispute: ಪ್ರತಿಬಾರಿಯೂ ನಮಗೆ ಕೋರ್ಟ್‌ನಲ್ಲಿ ಹಿನ್ನಡೆ ಆಗ್ತಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ನಟಿ ಶ್ರುತಿ  ಆಗ್ರಹಿಸಿದರು.

Written by - Zee Kannada News Desk | Last Updated : Sep 29, 2023, 03:39 PM IST
  • ಕರ್ನಾಟಕ ಬಂದ್‌ಗೆ ಬೆಂಬಲ ಸೂಚಿಸಲು ಒಗ್ಗಟ್ಟು ಪ್ರದರ್ಶಿಸಿದ ಕನ್ನಡ ಚಿತ್ರರಂಗ
  • ಪ್ರತಿಬಾರಿ ಹೋರಾಟ ಬೇಕಾ, ಕಾವೇರಿ ಸಮಸ್ಯೆಗೆ ಪರಿಹಾರ ಇಲ್ವಾ? ಎಂದ ನಟಿ ಶ್ರುತಿ
  • ಪ್ರತಿಬಾರಿಯೂ ನಮಗೆ ಕೋರ್ಟ್‌ನಲ್ಲಿ ಹಿನ್ನಡೆ ಆಗ್ತಿದೆ, ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು
Cauvery water dispute: ಪ್ರತಿ ಬಾರಿ ಹೋರಾಟ ಬೇಕಾ..?- ನಟಿ ಶ್ರುತಿ title=
ಒಗ್ಗಟ್ಟು ಪ್ರದರ್ಶಿಸಿದ ಕನ್ನಡ ಚಿತ್ರರಂಗ!  

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡುಗಡೆ ವಿರೋಧಿಸಿ ಶುಕ್ರವಾರ ಕರ್ನಾಟಕ ಬಂದ್ ಯಶಸ್ವಿಯಾಗಿದೆ. ರೈತರು ಮತ್ತು ವಿವಿಧ ಕನ್ನಡಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್‍ಗೆ ಕನ್ನಡ ಚಿತ್ರರಂಗವೂ ಬೆಂಬಲ ನೀಡಿದೆ.

ಕಾವೇರಿ ನೀರು ವಿವಾದ ಸಂಬಂಧ ಕರೆ ನೀಡಿರುವ ಕರ್ನಾಟಕ ಬಂದ್‌ಗೆ ಬೆಂಬಲ ಸೂಚಿಸಲು ಚಿತ್ರರಂಗ ಒಗ್ಗಟ್ಟು ಪ್ರದರ್ಶಿಸಿದೆ. ಈ ವೇಳೆ ಮಾತನಾಡಿದ ನಟಿ ಶ್ರುತಿ, ಇವತ್ತಿನ ಕರ್ನಾಟಕ ಬಂದ್‍ಗೆ ನೂರಾರು ಸಂಘಟನೆಗಳು ಬೆಂಬಲ ನೀಡಿದ್ದಾರೆ. ಪ್ರತಿಬಾರಿ ಹೋರಾಟ ಬೇಕಾ?’ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಕಾವೇರಿ ಹೋರಾಟದಲ್ಲಿ ʼತಮಿಳು ನಟ ಸಿದ್ಧಾರ್ಥ್ʼ ಕ್ಷಮೆ ಕೇಳಿದ ಶಿವಣ್ಣ..!

ಕಾವೇರಿ ಸಮಸ್ಯೆಗೆ ಪರಿಹಾರ ಇಲ್ವಾ? ರಾಜ್ಯದ ಎಲ್ಲರೂ ಪ್ರತಿಭಟನೆಯಲ್ಲಿ ಭಾಗವಹಿಸಬೇಕು. ನಾನು ಇವತ್ತು ಯಾವುದೇ ಪಕ್ಷದಿಂದ ಬಂದಿಲ್ಲ, ಕನ್ನಡಿತಿಯಾಗಿ ಬಂದಿದ್ದೇನೆ. ಪ್ರತಿಬಾರಿಯೂ ನಮಗೆ ಕೋರ್ಟ್‌ನಲ್ಲಿ ಹಿನ್ನಡೆ ಆಗ್ತಿದೆ. ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ನಟ ಉಪೇಂದ್ರ ಮಾತನಾಡಿ, ‘ಕಾವೇರಿ ನದಿ ನೀರು ವಿವಾದ ವಿಚಾರವಾಗಿ ಇದು ನನ್ನ 25ನೇ ಹೋರಾಟ. ನಮ್ಮ ಸೆಕ್ಯೂರಿಟಿಯೇ ಪಕ್ಕದ ಮನೆಗೆ ನೀರು ಬಿಡ್ತಿದ್ದಾನೆ, ಹೀಗಾಗಿ ಪೊಲೀಸರಿಗೆ ದೂರು ನೀಡಲು ಬಂದಿದ್ದೇನೆ ಎಂದು ವ್ಯಂಗ್ಯವಾಡಿದ್ದಾರೆ.

ಇದನ್ನೂ ಓದಿ: ಪ್ರಿಯಾಂಕಾ ಚೋಪ್ರಾ ಕುರಿತು ಬಹುದೊಡ್ಡ ರಹಸ್ಯ ಬಿಚ್ಚಿಟ್ರು ಈ ನಿರ್ದೇಶಕ!

ರಾಜಕಾರಣಿಗಳು ಸ್ವಲ್ಪ ಯೋಚನೆ ಮಾಡಬೇಕು. ಆಗ ಈ ಸಮಸ್ಯೆಗೆ ಪರಿಹಾರ ಸಿಗುತ್ತದೆ. ನಾನು ಚಿತ್ರರಂಗಕ್ಕೆ ಬಂದಾಗಿನಿಂದಲೂ ಈ ಸಮಸ್ಯೆ ಇದೆ. ಪರಿಹಾರ ಆಗದೇ ಇರೋ ಸಮಸ್ಯೆ ಇದು. ತಮಿಳುನಾಡಿಗೆ ನೀರನ್ನು ಬಿಡಬೇಡಿ ಅಂತಾ ಹೋರಾಟ ಮಾಡುತ್ತಿರೋದು ನನಗೆ ಆಶ್ಚರ್ಯ ಉಂಟುಮಾಡಿದೆ. ನಮ್ಮ ಸಮಸ್ಯೆಯನ್ನು ನಾವೇ ಬಗೆಹರಿಸಿಕೊಳ್ಳೋಣ ಎಂದು ಅವರು ಇದೇ ವೇಳೆ ಹೇಳಿದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News