ಮದುವೆಗೂ ಮುನ್ನ ಐಶ್ವರ್ಯಾ ರೈ ಆಸೆ ʼಅದನ್ನುʼ ಮಾಡೋದಾಗಿತ್ತು! ಸದ್ಯ ಬಚ್ಚನ್ ಕುಟುಂಬದೊಂದಿಗಿನ ಸಂಬಂಧ ಹದಗೆಡಲು ಇದೇ ಕಾರಣವೇ?

Aishwarya Rai Bachchan: ಮಾಜಿ ವಿಶ್ವ ಸುಂದರಿ, ಬಾಲಿವುಡ್‌ ನಟಿ ಐಶ್ವರ್ಯಾ ರೈ ನಟ ಅಭಿಷೇಕ್‌ ಜೊತೆಗೆ ಉತ್ತಮ ಸಂಬಂಧ ಹೊಂದಿಲ್ಲ.. ಇಬ್ಬರೂ ವಿಚ್ಚೇದನ ಪಡೆಯಲಿದ್ದಾರೆ ಎನ್ನುವ ವದಂತಿಗಳು ಸಾಕಷ್ಟು ಹರಿದಾಡುತ್ತಿವೆ.. ಇದೇ ವೇಳೆ ಐಶ್‌ ಕುರಿತಾದ ಸಿಕ್ರೇಟ್‌ ಮಾಹಿತಿಯೊಂದು ಹೊರಬಿದ್ದಿದೆ.. 

Written by - Savita M B | Last Updated : Apr 4, 2024, 08:57 AM IST
  • ಐಶ್ವರ್ಯಾ ರೈ ಇಂಡಸ್ಟ್ರಿಯಲ್ಲಿ ದೊಡ್ಡ ಛಾಪು ಮೂಡಿಸಿರುವ ತಾರೆ
  • ಅಭಿಷೇಕ್ ಬಚ್ಚನ್ ಜೊತೆ ವಿಚ್ಛೇದನದ ಬಗ್ಗೆ ವದಂತಿಗಳು ಬಹಳ ದಿನಗಳಿಂದ ತೇಲುತ್ತಿದ್ದವು.
  • ಈ ಬಗ್ಗೆ ನಟಿಯಾಗಲೀ, ಬಚ್ಚನ್ ಕುಟುಂಬವಾಗಲೀ... ಯಾರೊಬ್ಬರೂ ಏನನ್ನೂ ಹೇಳಿಲ್ಲ.
ಮದುವೆಗೂ ಮುನ್ನ ಐಶ್ವರ್ಯಾ ರೈ ಆಸೆ ʼಅದನ್ನುʼ ಮಾಡೋದಾಗಿತ್ತು! ಸದ್ಯ ಬಚ್ಚನ್ ಕುಟುಂಬದೊಂದಿಗಿನ ಸಂಬಂಧ ಹದಗೆಡಲು ಇದೇ ಕಾರಣವೇ? title=

Aishwarya Rai Bachchan want to Become a Doctor: ಐಶ್ವರ್ಯಾ ರೈ ಇಂಡಸ್ಟ್ರಿಯಲ್ಲಿ ದೊಡ್ಡ ಛಾಪು ಮೂಡಿಸಿರುವ ತಾರೆ.. ಆದರೆ ನಟಿ ಮದುವೆಗೆ ಸಂಬಂಧಿಸಿದಂತೆ ಕೆಲವು ಸಮಯದಿಂದ ಸುದ್ದಿಯಲ್ಲಿದ್ದಾರೆ. ಅಭಿಷೇಕ್ ಬಚ್ಚನ್ ಜೊತೆ ವಿಚ್ಛೇದನದ ಬಗ್ಗೆ ವದಂತಿಗಳು ಬಹಳ ದಿನಗಳಿಂದ ತೇಲುತ್ತಿದ್ದವು. ಆದರೆ, ಈ ಬಗ್ಗೆ ನಟಿಯಾಗಲೀ, ಬಚ್ಚನ್ ಕುಟುಂಬವಾಗಲೀ... ಯಾರೊಬ್ಬರೂ ಏನನ್ನೂ ಹೇಳಿಲ್ಲ.

 ಐಶ್ವರ್ಯಾ ರೈಗೆ ಸಂಬಂಧಿಸಿದ ಹಲವು ವಿಷಯಗಳು ಅನೇಕರಿಗೆ ತಿಳಿದಿಲ್ಲ. ಸಲ್ಮಾನ್ ಜೊತೆ ನಟಿಯ ಸಂಬಂಧ ಸುದ್ದಿಯಲ್ಲಿದ್ದು.. ಇದು ಬಾಲಿವುಡ್‌ನ ಕಾರಿಡಾರ್‌ನಲ್ಲಿ ಹಾಟೆಸ್ಟ್ ಗಾಸಿಪಿಂಗ್‌ಗಳಲ್ಲಿ ಒಂದಾಗಿದೆ. ಆದರೆ ಐಶ್ವರ್ಯಾ ಯಾವತ್ತೂ ನಟಿಯಾಗಲು ಬಯಸಿರಲಿಲ್ಲ ಎಂಬುದು ನಿಮಗೆ ಗೊತ್ತೇ? 

ಇದನ್ನೂ ಓದಿ-Rakshak Bullet: ತಂದೆಯ ಜನ್ಮ ದಿನದಂದು ಮೊದಲ ಸಿನಿಮಾದ ಪೋಸ್ಟರ್‌ ಔಟ್!

ಹೌದು! ವರದಿಯ ಪ್ರಕಾರ, ಐಶ್ವರ್ಯಾ ರೈ ತನ್ನ ಆರಂಭಿಕ ಜೀವನದ ಬಗ್ಗೆ ಮಾತನಾಡಿದ್ದು.."ನಾನು ಡಾಕ್ಟರ್‌ ಆಗಲು ಬಯಸಿದೆ... ಏಕೆಂದರೆ ನನ್ನ ಕುಟುಂಬದಲ್ಲಿ ಯಾರೂ ಕೂಡ ಸಿನಿಮಾ ಇಂಡಸ್ಟ್ರಿಯಲ್ಲಿ ತೊಡಗಿಸಿಕೊಂಡಿಲ್ಲ.. ನಾನು ಓದು ಮುಗಿಸಿ ಪದವಿ ಪಡೆದಾಗ ನನ್ನ ಮನೆಯವರು ಕೂಡ ಡಾಕ್ಟರ್ ಆಗಬೇಕೆಂದು ಬಯಸಿದ್ದರು ಆದರೆ ನನ್ನ ಕಾಲೇಜು ದಿನಗಳಲ್ಲಿ ನಡೆದ ಘಟನೆಯೊಂದು ಬದುಕನ್ನೇ ಸಂಪೂರ್ಣ ತಲೆಕೆಳಗಾಗಿಸಿತ್ತು..ಕಾಲೇಜಿನಲ್ಲಿಯೇ ಒಬ್ಬ ಪ್ರೊಫೆಸರ್ ಇದ್ದರು.. ಅವರು ಫ್ಯಾಷನ್ ಜಗತ್ತಿನಲ್ಲಿ ನಾನು ಕಾಣಿಸಿಕೊಳ್ಳಬೇಕು ಎಂದಿದ್ದರು.. ಅಲ್ಲಿಂದ ನನ್ನ  ವೃತ್ತಿಜೀವನ ಬದಲಾಗತೊಡಗಿತು" ಎಂದು ಹೇಳಿಕೊಂಡಿದ್ದಾರೆ.. 

 ಐಶ್ವರ್ಯಾ ರೈ 2007 ರಲ್ಲಿ ಅಭಿಷೇಕ್ ಬಚ್ಚನ್ ಅವರನ್ನು ವಿವಾಹವಾದರು.. ಇವರಿಗೆ ಆರಾಧ್ಯ ಎಂಬ ಮುದ್ದಾದ ಮಗಳಿದ್ದಾಳೆ.. ಸದ್ಯ ಇಬ್ಬರ ನಡುವೆ ಮನಸ್ತಾಪ ಸುದ್ದಿಗೆ ವೇಗ ಸಿಕ್ಕಿದ್ದು.. ವಿಚ್ಛೇದನದ ಪಡೆಯಲಿದ್ದಾರೆ ಎನ್ನಲಾಗುತ್ತಿದೆ..ಆದರೆ ಐಶ್ವರ್ಯಾ ಅಥವಾ ಬಚ್ಚನ್ ಕುಟುಂಬದ ಯಾರೊಬ್ಬರೂ ಈ ವರದಿಗಳ ಬಗ್ಗೆ ಪ್ರತಿಕ್ರಿಯೆ ನೀಡಿಲ್ಲ. 

ಇದನ್ನೂ ಓದಿ-Ramayana : ನಿತೇಶ್ ತಿವಾರಿ 'ರಾಮಾಯಣ' ಶೂಟಿಂಗ್ ಶುರು; ರಾಮನ ಪಾತ್ರದಲ್ಲಿ ರಣಬೀರ್ ಕಪೂರ್

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News