ಲಾಂಗ್ ಟ್ರಿಪ್ ಹೋಗಿ ರಿಲ್ಯಾಕ್ಸ್ ಆಗಿ ಬಂದ್ರು ನಟಿ ಕಾವ್ಯಾ..!

ಇನ್ನು ಕಾವ್ಯಾ ಮಹಾದೇವನ ದರ್ಶನ ಕೂಡ ಮಾಡಿದ್ದಾರೆ. ಈಷಾಗೆ ಹೋಗಿರುವ ಕಾವ್ಯಾ, ಭಕ್ತಿಯಿಂದ ಶಿವನನ್ನು ಪ್ರಾರ್ಥಿಸಿ ಆಶೀರ್ವಾದ ಪಡೆದಿದ್ದಾರೆ. ತಂಪಾದ ಪರಿಸರದಲ್ಲಿ, ಶಿವನ ಸನ್ನಿಧಿಯಲ್ಲಿ ನಟಿ ಕಾವ್ಯಾ ಒಂದಿಷ್ಟು ಸಮಯ ಕಳೆದಿದ್ದಾರೆ. 

Written by - CHARITHA PATEL | Edited by - Bhavishya Shetty | Last Updated : Jun 10, 2022, 02:47 PM IST
ಲಾಂಗ್ ಟ್ರಿಪ್ ಹೋಗಿ ರಿಲ್ಯಾಕ್ಸ್ ಆಗಿ ಬಂದ್ರು ನಟಿ ಕಾವ್ಯಾ..! title=
Actress Kavya Shashtri

ಸದ್ಯ ನಮ್ಮ ಕನ್ನಡದ ಸೆಲೆಬ್ರೆಟಿಗಳು ಒಂದಲ್ಲಾ ಒಂದು ಪ್ರಾಜೆಕ್ಟ್​ ಅಂತಾ ಫುಲ್​ ಬ್ಯುಸಿಯಾಗಿದ್ದಾರೆ. ಅದರಲ್ಲೂ ನಟಿ ಕಾವ್ಯಾ ಶಾಸ್ತ್ರಿ  ಆ ಶೂಟಿಂಗ್‌, ಈ ಶೋಟಿಂಗ್‌ ಅಂತಾ ಫುಲ್‌ ಬ್ಯುಸಿ ಶೆಡ್ಯೂಲ್‌ನಲ್ಲೇ ಇದ್ದಾರೆ. ಆದ್ರೆ ಕಾವ್ಯಾ ಶೂಟಿಂಗ್‌ನಿಂದ ಫ್ರೀ ಸಿಕ್ಕಾಗೆಲ್ಲಾ ಟ್ರಿಪ್‌,‌ ಟ್ರೆಕ್ಕಿಂಗ್‌ ಅಂತಾ ಹೋಗೊದು ಕಾಮನ್ ಆಗಿಬಿಟ್ಟಿದೆ. ಈ ಬ್ಯುಸಿ ಟೈಮ್‌ನಲ್ಲಿ ರಿಲ್ಯಾಕ್ಸೇಷನ್‌ಗೋಸ್ಕರ ಒಂದಲ್ಲಾ ಒಂದು ಕಡೆ ಕಾವ್ಯಾ ಹೋಗ್ತಾನೇ ಇರ್ತಾರೆ. ಸದ್ಯ ಕಾವ್ಯಾ ಒಂದಿಷ್ಟು ದಿನಗಳ ಬಳಿಕ ಮತ್ತೆ ಭರ್ಜರಿ ಟ್ರಿಪ್‌ ಹೋಗಿದ್ದಾರೆ.

ಇದನ್ನೂ ಓದಿ: ಡಿಕೆ ಜೊತೆ ಪಾಂಡ್ಯ ವರ್ತನೆ ಸರಿಯೇ..? ಟ್ರೋಲ್‌ಗೆ ಗುರಿಯಾದ ಹಾರ್ದಿಕ್‌!

ಹೌದು, ಈ ಬಾರಿ ಕಾವ್ಯಾ ಫ್ರೀ ಮಾಡಿಕೊಂಡು ಒಂದಲ್ಲಾ ಎರಡಲ್ಲಾ ಸಾಕಷ್ಟು ಸ್ಥಳಗಳಿಗೆ ವಿಸಿಟ್‌ ಮಾಡಿ ಬಂದಿದ್ದಾರೆ. ಕೇರಳ, ಗೋಕರ್ಣ, ಕನ್ಯಾಕುಮಾರಿ, ಗೋವಾಗೆ ಹೋಗಿ ಎಂಜಾಯ್‌ ಮಾಡಿದ್ದಾರೆ. 

ನೀಲಿ ಸಮುದ್ರದ ಅಲೆಗಳ ಜೊತೆಗೆ ತಂಪಾದ ಗಾಳಿಯಲ್ಲಿ ಸಖತ್‌ ಮಜಾ ಮಾಡಿದ್ದಾರೆ. ಸಮುದ್ರದ ತೀರದಲ್ಲಿ ಫುಲ್‌ ಮೋಡ್‌ ಲುಕ್‌ನಲ್ಲಿ ಕಾವ್ಯ ಮಿಂಚಿದ್ದು, ಸಖತ್‌ ಆಗಿ ಫೋಟೋಗಳನ್ನು ಕೂಡ ಕ್ಲಿಕ್ಕಿಸಿಕೊಂಡಿದ್ದಾರೆ. ಕಾವ್ಯಾ ಅವರ ಈ ಲುಕ್‌ ನೋಡಿ ಫ್ಯಾನ್ಸ್‌ ಫುಲ್‌ ಫಿದಾ ಆಗಿರುವುದರ ಜೊತೆಗೆ ಲೈಕ್ಸ್‌ಗಳ ಸುರಿಮಳೆಯನ್ನೇ ಹರಿಸಿದ್ದಾರೆ.

ಇನ್ನು ಕಾವ್ಯಾ ಮಹಾದೇವನ ದರ್ಶನ ಕೂಡ ಮಾಡಿದ್ದಾರೆ. ಈಷಾಗೆ ಹೋಗಿರುವ ಕಾವ್ಯಾ, ಭಕ್ತಿಯಿಂದ ಶಿವನನ್ನು ಪ್ರಾರ್ಥಿಸಿ ಆಶೀರ್ವಾದ ಪಡೆದಿದ್ದಾರೆ. ತಂಪಾದ ಪರಿಸರದಲ್ಲಿ, ಶಿವನ ಸನ್ನಿಧಿಯಲ್ಲಿ ನಟಿ ಕಾವ್ಯಾ ಒಂದಿಷ್ಟು ಸಮಯ ಕಳೆದಿದ್ದಾರೆ. 

ಕನ್ಯಾಕುಮಾರಿಗೆ ಕಾವ್ಯಾ ತಮ್ಮ ತಂದೆ-ತಾಯಿ ಜೊತೆಗೆ ಒಂದಿಷ್ಟು ಸ್ಥಳಗಳಿಗೆ ಭೇಟಿ ನೀಡಿ ಸಂತಸ ಪಟ್ಟಿದ್ದಾರೆ. ಮತ್ತೊಂದು ವಿಚಾರ ಅಂದ್ರೆ ಕಾವ್ಯ ಅವರಿಗೆ ತಮ್ಮ ತಂದೆ-ತಾಯಿಗೆ ಸಾಕಷ್ಟು ಸ್ಥಳಗಳನ್ನು ತೋರಿಸಬೇಕೆನ್ನುವ ಆಸೆ ಹೆಚ್ಚಿದೆ. ಹಾಗಾಗಿ ಕಾವ್ಯಾ ಸೋಲೋ ಟ್ರಿಪ್‌ ಮಾತ್ರವಲ್ಲದೆ ತಮ್ಮ ತಂದೆ-ತಾಯಿಯ ಜೊತೆಗೆ ಕೂಡ ಆಗಾಗ ಟ್ರಿಪ್‌ ಹೋಗಿ ಎಂಜಾಯ್‌ ಮಾಡ್ತಾರೆ.

ಕೇರಳದ ತಿರುವನಂತಪುರಂಗೂ ಕೂಡ ಭೇಟಿ ನೀಡಿರೋ ಕಾವ್ಯಾ ಶಾಸ್ತ್ರಿ, ಒಂದಿಷ್ಟು ದಿನಗಳನ್ನು ಅಲ್ಲಿ ಕಳೆದಿದ್ದಾರೆ. ಒಟ್ಟಿನಲ್ಲಿ ಕಾವ್ಯಾ ಈ ಬಾರಿ ಲಾಂಗ್‌ ಟ್ರಿಪ್‌ ಹೋಗಿದ್ದು ಸ್ಟ್ರೆಸ್‌, ಕ್ರೌಡ್‌, ಡಸ್ಟ್‌ ಟ್ರಾಫಿಕ್‌ ಈ ಎಲ್ಲದರಿಂದ ಕೊಂಚ ರಿಲ್ಯಾಕ್ಸ್‌ ಆಗಿ ಬೆಂಗಳೂರಿಗೆ ಮರಳಿದ್ದಾರೆ. 

ಇದನ್ನೂ ಓದಿ: Rajya Sabha Elections 2022: ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ

ಇನ್ನು ನಟಿ ಕಾವ್ಯಾ ಶುಭ ವಿವಾಹ ಧಾರಾವಾಹಿ ನಂತರ  ಕಿರುತೆರೆ ಜರ್ನಿಗೆ ಕೊಂಚ ಬ್ರೇಕ್ ನೀಡಿದ್ದರು. ಅಂದ್ರೆ ಯಾವ ಸೀರಿಯಲ್‌ನಲ್ಲೂ ಕಾವ್ಯಾ ಕಾಣಿಸಿಕೊಂಡಿರಲಿಲ್ಲ. ಇದೀಗ ಕಾವ್ಯಾ ಮತ್ತೆ ಕಮ್‌ ಬ್ಯಾಕ್‌ ಆಗಿರುವ ವಿಚಾರ ನಿಮಗೆ ತಿಳಿದಿದೆ. ಹೌದು, ನಿರ್ದೇಶಕ ದರ್ಶಿತ್ ಭಟ್  ಆಕ್ಷನ್‌ ಕಟ್‌ ಹೇಳ್ತಾಯಿರೋ ರಾಧಿಕಾ ಧಾರಾವಾಹಿಯಲ್ಲಿ ಕಾವ್ಯಾ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಕಾವ್ಯಾ ಅವರ ಪಾತ್ರ ಪ್ರೇಕ್ಷಕರಿಗೂ ಇಷ್ಟವಾಗಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News