ಆಂಬ್ಯುಲೆನ್ಸ್ ಗೆ ದಾರಿ ಬಿಡದ ಪ್ರಜ್ಞಾವಂತರ ನಡೆಗೆ ನಟ ಜಗ್ಗೇಶ್ ಆಕ್ರೋಶ

ಸೋಶಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ಕ್ರಿಯಾಶೀಲವಾಗಿರುವ ಕನ್ನಡದ ಹಿರಿಯ ನಟ ಜಗ್ಗೇಶ್ ಆಗಾಗ ತಮ್ಮ ಟ್ವೀಟರ್ ಪೋಸ್ಟ್ ಗಳ ಮೂಲಕ  ಗಮನ ಸೆಳೆಯುತ್ತಾರೆ.

Last Updated : Feb 1, 2019, 05:58 PM IST
ಆಂಬ್ಯುಲೆನ್ಸ್ ಗೆ ದಾರಿ ಬಿಡದ ಪ್ರಜ್ಞಾವಂತರ ನಡೆಗೆ ನಟ ಜಗ್ಗೇಶ್ ಆಕ್ರೋಶ title=
Photo courtesy: Facebook

ಬೆಂಗಳೂರು: ಸೋಶಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ಕ್ರಿಯಾಶೀಲವಾಗಿರುವ ಕನ್ನಡದ ಹಿರಿಯ ನಟ ಜಗ್ಗೇಶ್ ಆಗಾಗ ತಮ್ಮ ಟ್ವೀಟರ್ ಪೋಸ್ಟ್ ಗಳ ಮೂಲಕ  ಗಮನ ಸೆಳೆಯುತ್ತಾರೆ.

ಆದರೆ ಈ ಬಾರಿ ನಟ ಜಗ್ಗೇಶ್ ಅವರು ತಮ್ಮ ಟ್ವಿಟ್ಟರ್ ಪೋಸ್ಟ್ ವೊಂದರಲ್ಲಿ ಟ್ರಾಫಿಕ್ ಮಧ್ಯ ಸಿಕ್ಕಿ ಹಾಕಿಕೊಂಡಿರುವ ಫೋಟೋವೊಂದನ್ನು ಶೇರ್ ಮಾಡಿಕೊಂಡು "ಹೃದಯದ ಆಸ್ಪತ್ರೆಯ ಆಂಬ್ಯುಲೆನ್ಸ್ ಗು ದಾರಿ ಬಿಡದ ಪ್ರಙ್ನಾವಂತರು!ವಿಧ್ಯಾವಂತರು!
ಅಂಬುಲೆನ್ಸ್ ಗೆ ಪ್ರತ್ಯೇಕ ರಸ್ತೆ ಮಾಡದ ಜಡವಿಡಿದ ರಾಜರುಗಳು!
ಜೈ ಭಾರತಾಂಬೆ ಸಂಜಾತರೆ.." ಎಂದು ತಮ್ಮ ಸಾತ್ವಿಕ ಸಿಟ್ಟನ್ನು ಈ ಪೋಸ್ಟ್ ಮೂಲಕ ಹೊರಹಾಕಿದ್ದಾರೆ.

ಟ್ರಾಫಿಕ್ ಮಧ್ಯ ತುರ್ತು ಚಿಕಿತ್ಸೆಗಾಗಿ ಹೋಗುತ್ತಿರುವ ಆಸ್ಪತ್ರೆಯ ಆಂಬ್ಯುಲೆನ್ಸ್ ನಲ್ಲಿ ಸಾವು ನೋವಿನ ನಡುವೆ ಜೀವದ ಹೋರಾಟವನ್ನು ನಡೆಸುತ್ತಾ ಕೆಲವೊಮ್ಮೆ ದಾರಿ ಮಧ್ಯೆಯೇ ರೋಗಿಯ ಜೀವ ಹೋಗುವುದುಂಟು. ಇಷ್ಟೆಲ್ಲಾ ಸಂಗತಿ ಗೊತ್ತಿದ್ದೂ ದಾರಿಯ ಮಧ್ಯದಲ್ಲಿ ಸಿಕ್ಕಿ ಹಾಕಿಕೊಂಡಿರುವ ಅಂಬುಲನ್ಸ್ ಗೆ ದಾರಿ ಬಿಡದಿರುವ ಪ್ರಜ್ಞಾವಂತರ ನಡೆ ಕಂಡು ಈಗ ನಟ ಜಗ್ಗೇಶ್  ತಮ್ಮ ಟ್ವೀಟ್ ಮೂಲಕ ಆಕ್ರೋಶ್ ವ್ಯಕ್ತಪಡಿಸಿದ್ದಾರೆ.

Trending News