ಡ್ರಗ್ಸ್ ದಂಧೆ ವಿಚಾರಣೆ ನಡುವೆಯೂ ಶೂಟಿಂಗ್ ಗೆ ರೆಡಿಯಾದ ದಿಗಂತ್

ಸದ್ಯ ನಟ ದಿಗಂತ್ 'ಮಾರಿಗೋಲ್ಡ್' ಮತ್ತು 'ಗಾಳಿಪಟ-2' ಸಿನಿಮಾಗಳಲ್ಲಿ ನಟಿಸುತ್ತಿದ್ದು ವಿಚಾರಣೆ ನಡುವೆಯೇ ಎರಡೂ ಚಿತ್ರಗಳ ಚಿತ್ರೀಕರಣ ಮುಗಿಸಿಕೊಡುವುದಾಗಿ ನಿರ್ಮಾಪಕರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. 

Last Updated : Sep 17, 2020, 09:10 AM IST
  • ನಿನ್ನೆ ಸೆಂಟ್ರಲ್ ಕ್ರೈಂ ಬ್ರಾಂಚ್ ಪೊಲೀಸ್ (CCB) ಕಚೇರಿಯಲ್ಲಿ ವಿಚಾರಣೆ ಎದುರಿಸಿ ಬೆಂಗಳೂರಿನ ತಮ್ಮ ರಾಜರಾಜೇಶ್ವರಿ ನಗರದ ನಿವಾಸಕ್ಕೆ ಆಗಮಿಸಿದ ಐಂದ್ರಿತಾ ಮತ್ತು ದಿಗಂತ್ ಈವರೆಗೂ ಯಾರ ಸಂಪರ್ಕಕೂ ಸಿಕ್ಕಿಲ್ಲ.
  • ಟ್ವೀಟ್ ಅಥವಾ ಮತ್ತಿತರ ಸಾಮಾಜಿಕ ಜಾಲತಾಣದ ಮೂಲಕವೂ ಮಾತನಾಡಿಲ್ಲ.
  • ಮೌನಕ್ಕೆ ಮೊರೆಹೋಗಿರುವ ಈ ಜೋಡಿಯನ್ನು ಇಬ್ಬರಿಗೂ ಆಪ್ತರಾಗಿರುವ ಪ್ರಸನ್ನ ಎಂಬುವವರು ಮಾತ್ರ ಭೇಟಿಯಾಗಿದ್ದಾರೆ.
ಡ್ರಗ್ಸ್ ದಂಧೆ ವಿಚಾರಣೆ ನಡುವೆಯೂ ಶೂಟಿಂಗ್ ಗೆ ರೆಡಿಯಾದ ದಿಗಂತ್ title=
Image courtesy: Facebook

ಬೆಂಗಳೂರು: ರಾಜ್ಯದಲ್ಲಿ ಸಂಚಲನ ಮೂಡಿಸಿರುವ ಡ್ರಗ್ಸ್ ಮಾಫಿಯಾ (Drugs Mafia)ಕ್ಕೆ ಸಂಬಂಧಿಸಿದಂತೆ ನಿನ್ನೆ ಸಿನಿ ಜೋಡಿ ಐಂದ್ರಿತಾ ಮತ್ತು ದಿಗಂತ್  ಸೆಂಟ್ರಲ್ ಕ್ರೈಂ ಬ್ರಾಂಚ್ ಪೊಲೀಸ್ (CCB) ಕಚೇರಿಗೆ ಬಂದು ವಿಚಾರಣೆ ಎದುರಿಸಿದ್ದರು. ಇದರ ಬೆನ್ನಲ್ಲೇ ಈಗ ನಟ ದಿಗಂತ್ ಎರಡು ಚಿತ್ರಗಳ‌ ಶೂಟಿಂಗ್ ಗೆ ಸಿದ್ದತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

ಸದ್ಯ ನಟ ದಿಗಂತ್ (Diganth) 'ಮಾರಿಗೋಲ್ಡ್' ಮತ್ತು 'ಗಾಳಿಪಟ-2' ಸಿನಿಮಾಗಳಲ್ಲಿ ನಟಿಸುತ್ತಿದ್ದು ವಿಚಾರಣೆ ನಡುವೆಯೇ ಎರಡೂ ಚಿತ್ರಗಳ ಚಿತ್ರೀಕರಣ ಮುಗಿಸಿಕೊಡುವುದಾಗಿ ನಿರ್ಮಾಪಕರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ ಇಂದು ವಿಶ್ರಾಂತಿ ಪಡೆದು ನಾಳೆಯೇ (ಶುಕ್ರವಾರ) ಮಾರಿಗೋಲ್ಡ್ ಚಿತ್ರದ ಚಿತ್ರೀಕರಣಕ್ಕೆ ತೆರಳಲಿದ್ದಾರೆ ಎನ್ನಲಾಗಿದೆ.

ಎಲ್ಲಿದ್ದಾರೆ ಮನಸಾರೆ ಜೋಡಿ ಐಂದ್ರಿತಾ - ದಿಗಂತ್ ? ಕೇರಳದಲ್ಲೋ? ಬೆಂಗಳೂರಿನ ರಹಸ್ಯ ಸ್ಥಳದಲ್ಲೋ?

ಡ್ರಗ್ಸ್ ಮಾಫಿಯಾ (Drugs Mafia)ಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸುತ್ತಿರವ  ಸೆಂಟ್ರಲ್ ಕ್ರೈಂ ಬ್ರಾಂಚ್ ಪೊಲೀಸರು (CCB) ಐಂದ್ರಿತಾ ಮತ್ತು ದಿಗಂತ್ ಗೆ ವಿಚಾರಣೆ ಹಂತದಲ್ಲಿ ಬೆಂಗಳೂರು ತೊರೆಯುವಂತಿಲ್ಲ ಎಂದು ಸೂಚಿಸಿದ್ದಾರೆ. ಆದರೆ ಮಾರಿಗೋಲ್ಡ್ ಚಿತ್ರೀಕರಣ ಬೆಂಗಳೂರಿನಲ್ಲೇ ನಡೆಯುವುದರಿಂದ ಸದ್ಯ ಯಾವುದೇ ಸಮಸ್ಯೆ ಇರುವುದಿಲ್ಲ.

Video: ವಿವಾಹ ಸಂಭ್ರಮದಲ್ಲಿ ದಿಗ್ಗಿ-ಆ್ಯಂಡಿ ಸೂಪರ್ ರೊಮ್ಯಾಂಟಿಕ್ ಡ್ಯಾನ್ಸ್!

ರಾಘವೇಂದ್ರ ನಾಯಕ್ ನಿರ್ದೇಶಿಸುತ್ತಿರುವ ಮಾರಿಗೋಲ್ಡ್ ಈಗಾಗಲೇ ಮೊದಲ ಹಂತದ ಚಿತ್ರೀಕರಣ ಮುಗಿಸಿದೆ. ನಾಳೆಯಿಂದ ಎರಡನೇ ಹಂತದ ಚಿತ್ರೀಕರಣ ನಡೆಯಲಿದೆ.‌ ಯಾವುದೇ ಕಾರಣಕ್ಕೂ ಸಿನಿಮಾಗೆ ತೊಂದರೆಯಾಗಲು ಬಿಡುವುದಿಲ್ಲ ಎಂದು ದಿಗಂತ್ ಭರವಸೆ ನೀಡಿದ್ದಾರೆಂದು ಚಿತ್ರತಂಡ ತಿಳಿಸಿದೆ.

ನಿನ್ನೆ ಸೆಂಟ್ರಲ್ ಕ್ರೈಂ ಬ್ರಾಂಚ್ ಪೊಲೀಸ್ (CCB) ಕಚೇರಿಯಲ್ಲಿ ವಿಚಾರಣೆ ಎದುರಿಸಿ ಬೆಂಗಳೂರಿನ ತಮ್ಮ ರಾಜರಾಜೇಶ್ವರಿ ನಗರದ ನಿವಾಸಕ್ಕೆ ಆಗಮಿಸಿದ ಐಂದ್ರಿತಾ ಮತ್ತು ದಿಗಂತ್ ಈವರೆಗೂ ಯಾರ ಸಂಪರ್ಕಕೂ ಸಿಕ್ಕಿಲ್ಲ. ಮಾಧ್ಯಮಗಳಿಗೂ ಪ್ರತಿಕ್ರಿಯೆ ನೀಡಿಲ್ಲ. ಟ್ವೀಟ್ ಅಥವಾ ಮತ್ತಿತರ ಸಾಮಾಜಿಕ ಜಾಲತಾಣದ ಮೂಲಕವೂ ಮಾತನಾಡಿಲ್ಲ. ಮೌನಕ್ಕೆ ಮೊರೆಹೋಗಿರುವ ಈ ಜೋಡಿಯನ್ನು ಇಬ್ಬರಿಗೂ ಆಪ್ತರಾಗಿರುವ ಪ್ರಸನ್ನ ಎಂಬುವವರು ಮಾತ್ರ ಭೇಟಿಯಾಗಿದ್ದಾರೆ.

Trending News