ಧಂತೇರಸ್‌ನಲ್ಲಿ ಕುಬೇರನನ್ನು ಈ ರೀತಿ ಪೂಜಿಸಿದರೆ ವರ್ಷವಿಡೀ ಹಣಕ್ಕೆ ಕೊರತೆಯೇ ಇರಲ್ಲ

Dhanteras: ಧಂತೇರಸ್‌ನಲ್ಲಿ ಸಂಪತ್ತಿನ ದೇವತೆ ಲಕ್ಷ್ಮಿ ದೇವಿಯ ಜೊತೆಗೆ ಸಂಪತ್ತಿನ ಒಡೆಯ ಎಂತಲೇ ಕರೆಯಲಾಗುವ ಕುಬೇರನಿಗೂ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಈ ದಿನ ಕುಬೇರನಿಗೆ ಕೆಲವು ವಸ್ತುಗಳನ್ನು ಅರ್ಪಿಸುವುದರಿಂದ ವರ್ಷವಿಡೀ ಹಣದ ಕೊರತೆ ಕಾಡುವುದಿಲ್ಲ ಎಂದು ಹೇಳಲಾಗುತ್ತದೆ. 

Written by - Yashaswini V | Last Updated : Nov 8, 2023, 11:03 AM IST
  • ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಕುಬೇರನನ್ನು ಸಂಪತ್ತಿನ ದೇವರು ಎಂದು ಪರಿಗಣಿಸಲಾಗುತ್ತದೆ.
  • ಧಂತೇರಸ್ ದಿನದಂದು ಕುಬೇರನನ್ನು ಪೂಜಿಸಲಾಗುತ್ತದೆ
  • ಧಂತೇರಸ್‌ನಲ್ಲಿ ಕುಬೇರನನ್ನು ಪೂಜಿಸುವಾಗ ಕೈಗೊಳ್ಳುವ ಕೆಲವು ಸುಲಭ ಪರಿಹಾರದಿಂದ ವರ್ಷವಿಡೀ ಹಣದ ಕೊರತೆ ಎದುರಾಗುವುದಿಲ್ಲ ಎಂದು ಹೇಳಲಾಗುತ್ತದೆ.
ಧಂತೇರಸ್‌ನಲ್ಲಿ ಕುಬೇರನನ್ನು ಈ ರೀತಿ ಪೂಜಿಸಿದರೆ ವರ್ಷವಿಡೀ ಹಣಕ್ಕೆ ಕೊರತೆಯೇ ಇರಲ್ಲ  title=

Dhanteras Upay: ಬೆಳಕಿನ ಹಬ್ಬ ದೀಪಾವಳಿ ಐದು ದಿನಗಳ ಹಬ್ಬ. ಇದರಲ್ಲಿ ಲಕ್ಷ್ಮಿ ಪೂಜೆ, ಧಂತೇರಸ್ ಪೂಜೆಗೆ ವಿಶೇಷವಾದ ಪ್ರಾಮುಖ್ಯತೆ ಇದೆ. ಧಂತೇರಸ್ ದಿನದಂದು ಕುಬೇರನನ್ನು ಪೂಜಿಸಲಾಗುತ್ತದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಧಂತೇರಸ್‌ನಲ್ಲಿ ಕುಬೇರನನ್ನು ಪೂಜಿಸುವಾಗ ಕುಬೇರ ದೇವನಿಗೆ ಕೆಲವು ವಸ್ತುಗಳನ್ನು ಅರ್ಪಿಸುವುದರಿಂದ ವರ್ಷವಿಡೀ ಹಣಕಾಸಿಗೆ ಕೊರತೆ ಇರುವುದಿಲ್ಲ. ಮಾತ್ರವಲ್ಲ, ಅವರು ಶೀಘ್ರದಲ್ಲೇ ಶ್ರೀಮಂತರಾಗಬಹುದು ಎಂದು ಹೇಳಲಾಗುತ್ತದೆ. 

ಧಂತೇರಸ್‌ನಲ್ಲಿ ಕುಬೇರನಿಗೆ ಈ ವಸ್ತುಗಳನ್ನು ಅರ್ಪಿಸುವುದರಿಂದ ಶೀಘ್ರದಲ್ಲೇ ಶ್ರೀಮಂತರಾಗಬಹುದು:
ಹಳದಿ ಸ್ವಸ್ತಿಕ: 

ಹಿಂದೂ ಧರ್ಮದಲ್ಲಿ ಪೂಜೆಯ ವೇಳೆ ಸ್ವಸ್ತಿಕವನ್ನು ಬರೆಯುವುದು ಪ್ರತೀತಿ. ಧಂತೇರಸ್‌ನಲ್ಲಿ ಕುಬೇರನನ್ನು ಪೂಜಿಸುವಾಗ ಪೂಜಾ ಕೊಠಡಿ ಮುಂದೆ ಭಗವಾನ್ ಕುಬೇರನ ಹೆಸರಿನಲ್ಲಿ ಅರಿಶಿನವನ್ನು ತುಪ್ಪ ಅಥವಾ ನೀರಿನಲ್ಲಿ ಬೆರೆಸಿ ಸ್ವಸ್ತಿಕ  ಚಿಹ್ನೆಯನ್ನು ಬರೆಯುವುದು ತುಂಬಾ ಮಂಗಳಕರ ಎಂದು ನಂಬಲಾಗಿದೆ. 

ಇದನ್ನೂ ಓದಿ- ಧಂತೇರಸ್‌ನಲ್ಲಿ ಅಪಾರ ಧನ-ಸಂಪತ್ತಿನೊಂದಿಗೆ ಈ ರಾಶಿಯವರ ಮನೆ ಪ್ರವೇಶಿಸಲಿದ್ದಾಳೆ ಮಹಾಲಕ್ಷ್ಮೀ

ದರ್ಬೆ: 
ದರ್ಬೆ ಎಂದರೆ ವಿಘ್ನ ವಿನಾಶಕನಿಗೆ ತುಂಬಾ ಪ್ರಿಯ ಎಂದು ನಿಮಗೆ ತಿಳಿದೇ ಇದೆ. ಆದರೆ, ಗಣೇಶನಿಗೆ ಮಾತ್ರವಲ್ಲ, ಧಂತೇರಸ್‌ನಲ್ಲಿ ಕುಬೇರನನ್ನು ಪೂಜಿಸುವಾಗಲೂ ದರ್ಬೆಯನ್ನು ಅರ್ಪಿಸಬೇಕು. ಇದರಿಂದ ಭಗವಾನ್ ಕುಬೇರ ಕುಟುಂಬದಲ್ಲಿ ಸುಖ-ಸಂಪತ್ತನ್ನು ಹೆಚ್ಚಿಸುವ ಜೊತೆಗೆ ಮನೆಯಲ್ಲಿ ಎದುರಾಗಿರುವ ಆರ್ಥಿಕ ಬಿಕ್ಕಟ್ಟನ್ನು ಸಹ ಶಮನಗೊಳಿಸುತ್ತಾನೆ ಎಂದು ನಂಬಲಾಗಿದೆ. 

ತೆಂಗಿನಕಾಯಿ: 
ಧಂತೇರಸ್‌ ಪೂಜೆಯ ವೇಳೆ ಒಂದು ಕೆಂಪು ಬಟ್ಟೆಯಲ್ಲಿ ತೆಂಗಿನಕಾಯಿಯನ್ನು ಸುತ್ತಿ ಕಲಶದ ಮೇಲೆ ಪ್ರತಿಷ್ಠಾಪಿಸುವುದನ್ನು ಅದೃಷ್ಟವೆಂದು ಹೇಳಲಾಗುತ್ತದೆ. ಈ ರೀತಿ ಮಾಡುವುದರಿಂದ ವ್ಯಕ್ತಿಯ ಜೀವನದಲ್ಲಿ ಹಣದ ಮಲೆಯಾಗುತ್ತದೆ ಎಂದು ಹೇಳಲಾಗುತ್ತದೆ. 

ಇದನ್ನೂ ಓದಿ- ಧಂತೇರಸ್‌ನಲ್ಲಿ ಕೊತ್ತಂಬರಿ ಸೊಪ್ಪಿನ ಪರಿಹಾರದಿಂದ ಮನೆಯಲ್ಲಿ ವರ್ಷವಿಡೀ ತುಂಬಿರಲಿದೆ ಸುಖ-ಸಂಪತ್ತು

ಹಳದಿ ಆಹಾರ: 
ಸಂಪತ್ತಿನ ಒಡೆಯನಾದ ಕುಬೇರನು ಹಳದಿ ಬಣ್ಣದ ವಸ್ತುಗಳನ್ನು ಹೆಚ್ಚು ಇಷ್ಟಪಡುತ್ತಾನೆ. ಧಂತೇರಸ್ ಪೂಜೆಯಲ್ಲಿ ಕುಬೇರನಿಗೆ ಹಳದಿ ಬಣ್ಣದ ಖಾದ್ಯಗಳನ್ನು ಪ್ರಸಾದವಾಗಿ ಅರ್ಪಿಸುವುದರಿಂದ ಶೀಘ್ರವೇ ಭಕ್ತರಿಗೆ ಕುಬೇರ ದಯೆ ತೋರುತ್ತಾನೆ. ಇಂತಹವರ ಮನೆಯಲ್ಲಿ ವರ್ಷ ಪೂರ್ತಿ ಹಣಕಾಸಿನ ಸಮಸ್ಯೆ ಇರುವುದಿಲ್ಲ ಎನ್ನಲಾಗುತ್ತದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News