ಕುಡಿದ ಮತ್ತಲ್ಲಿ ಮೊಬೈಲ್ ವಿಷಯಕ್ಕೆ ಗಲಾಟೆ, ವ್ಯಕ್ತಿಗೆ ಚಾಕು ಇರಿತ

ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಗೆ ಚಾಕು ಇರಿದಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ‌ ನಡೆದಿದೆ. ಗಾಂಧಿನಗರದ ಮಿಂಚು ಲೇಡಿಸ್ ಬಾರ್ ನಲ್ಲಿ ತಡರಾತ್ರಿ ಮೊಬೈಲ್ ಕಳುವಾದ ಬಗ್ಗೆ ಗಲಾಟೆ ಶುರುವಾಗಿದೆ. 

Written by - VISHWANATH HARIHARA | Edited by - Chetana Devarmani | Last Updated : Jun 14, 2022, 11:09 AM IST
  • ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಗೆ ಚಾಕು ಇರಿದಿರುವ ಘಟನೆ
  • ಕುಡಿದ ಮತ್ತಲ್ಲಿ ಮೊಬೈಲ್ ವಿಷಯಕ್ಕೆ ಗಲಾಟೆ
  • ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಗಾಯಾಳುವಿಗೆ ಚಿಕಿತ್ಸೆ
ಕುಡಿದ ಮತ್ತಲ್ಲಿ ಮೊಬೈಲ್ ವಿಷಯಕ್ಕೆ ಗಲಾಟೆ, ವ್ಯಕ್ತಿಗೆ ಚಾಕು ಇರಿತ  title=
ಚಾಕು ಇರಿತ

ಬೆಂಗಳೂರು: ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಗೆ ಚಾಕು ಇರಿದಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ‌ ನಡೆದಿದೆ. ಗಾಂಧಿನಗರದ ಮಿಂಚು ಲೇಡಿಸ್ ಬಾರ್ ನಲ್ಲಿ ತಡರಾತ್ರಿ ಮೊಬೈಲ್ ಕಳುವಾದ ಬಗ್ಗೆ ಗಲಾಟೆ ಶುರುವಾಗಿದೆ. 

ಇದನ್ನೂ ಓದಿ: ಮುಂದಿನ ಒಂದೂವರೆ ವರ್ಷದಲ್ಲಿ 10 ಲಕ್ಷ ನೇಮಕಾತಿ ಮಾಡಲು ಪ್ರಧಾನಿ ಸೂಚನೆ

ಈ ವೇಳೆ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ‌ ತಿರುಗಿ ಸುಂದರ್ ತಲೆ‌ ಮತ್ತು‌ ಭುಜಕ್ಕೆ ಪ್ರಸನ್ನ ಹಾಗೂ ಅಜಯ್ ಎಂಬುವವರು ಚಾಕು ಇರಿದಿದ್ದಾರೆ. ನಂತರ ಆರೋಪಿಗಳು ಪರಾರಿಯಾಗಲು ಯತ್ನಿಸಿದ್ದಾರೆ.  

ಆದರೆ ಅಷ್ಟರಲ್ಲಾಗಲೇ ಹೊಯ್ಸಳ ಪೊಲೀಸರು ಸ್ಥಳಕ್ಕಾಗಮಿಸಿ ಆರೋಪಿಗಳನ್ನ ವಶಕ್ಕೆ ಪಡೆದಿದ್ದಾರೆ. ಸದ್ಯ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಗಾಯಾಳುವಿಗೆ ಚಿಕಿತ್ಸೆ ನೀಡಲಾಗ್ತಿದೆ. ಇನ್ನೂ ಚಾಕು ಇರಿದ ಪ್ರಸನ್ನ ಹಾಗೂ ಅಜಯ್ ವಿರುದ್ಧ ಯಾವುದೇ ದೂರು ದಾಖಲಾಗಿಲ್ಲ. 

ಚಾಕು ಇರಿತಕ್ಕೊಳ್ಳಗಾದ ಯುವಕನಿಂದ ದೂರು ಸ್ವೀಕರಿಸಿದ ಬಳಿಕ ಪೊಲೀಸರು ಹೆಚ್ಚಿನ ತನಿಖೆ ನಡೆಸಲಿದ್ದಾರೆ. 

ಇದನ್ನೂ ಓದಿ: Jack Manju: ನಿರ್ಮಾಪಕ ಜಾಕ್‌ ಮಂಜು ಆಸ್ಪತ್ರೆಗೆ ದಾಖಲು

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

Trending News