ಸರ್ಕಾರಿ ಬಸ್‌ನಲ್ಲಿ ಮಹಿಳೆಯ ಚಿನ್ನಾಭರಣ ಕಳ್ಳತನ: ಪ್ರಕರಣ ತಡವಾಗಿ ಬೆಳಕಿಗೆ

Crime News: ಮಾ. 3 ರಂದು ಕಾರ್ಯ ನಿಮಿತ್ತ ಮದ್ದೂರಿಗೆ  ಬಂದಿದ್ದ ಸವಿತ  3 ಮಕ್ಕಳ ಜತೆ ಸಂಜೆ 6ಗಂಟೆ ಸುಮಾರಿಗೆ ಮದ್ದೂರು ಬಸ್ ಸ್ಟಾಪ್ ನಲ್ಲಿ ಚನ್ನಪಟ್ಟಣಕ್ಕೆ  ಬಸ್ಸು ಹತ್ತುವ ಸಂದರ್ಭದಲ್ಲಿ ಬ್ಯಾಗ್ ನಲ್ಲಿದ್ದ  1 ಲಾಂಗ್ ಚೈನ್ ಒಡವೆ (45 ಗ್ರಾಂ) ಮತ್ತು ಒಂದು ನೆಕ್ಲೆಸ್( 25 ಗ್ರಾಂ) ಒಟ್ಟು 70 ಗ್ರಾಂ ಒಡವೆಯನ್ನು ಕಳ್ಳರು ಕಳ್ಳತನ ಮಾಡಿದ್ದಾರೆ.

Written by - Yashaswini V | Last Updated : Mar 5, 2024, 12:24 PM IST
  • ಬಸ್ ಹತ್ತಿದ ತಕ್ಷಣ ಸವಿತ ಬ್ಯಾಗ್ ನೋಡಿಕೊಂಡಾಗ ಬ್ಯಾಗಿನಲ್ಲಿದ್ದ ಚಿನ್ನದ ಒಡವೆಗಳು ಕಳ್ಳತನವಾಗಿರುವುದು ಗಮನಕ್ಕೆ ಬಂದಿದೆ.
  • ಆಗ ಸವಿತ 100 ಕಂಟ್ರೋಲ್ ಗೆ ಪೋನ್ ಮಾಡಿ ತಿಳಿಸಿದಾಗ ಚನ್ನಪಟ್ಟಣ ಠಾಣೆಯ ನಂಬರ್ ಕೊಟ್ಟಿರುತ್ತಾರೆ.
  • ಆ ವೇಳೆಯಲ್ಲಿ ಪೋನ್ ಸಂಪರ್ಕ ಸಿಕ್ಕಿರುವುದಿಲ್ಲ.
ಸರ್ಕಾರಿ ಬಸ್‌ನಲ್ಲಿ ಮಹಿಳೆಯ ಚಿನ್ನಾಭರಣ ಕಳ್ಳತನ: ಪ್ರಕರಣ ತಡವಾಗಿ ಬೆಳಕಿಗೆ  title=

Theft In Govt Bus: ಕಳೆದ ಭಾನುವಾರ(ಮಾರ್ಚ್ 03) ಸರ್ಕಾರಿ ಬಸ್‌ನಲ್ಲಿ ಮಹಿಳೆಯ ಚಿನ್ನಾಭರಣ ಕಳ್ಳತನವಾಗಿರುವ ಘಟನೆ ನಡೆದಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಚನ್ನಪಟ್ಟಣ ಕೋದಂಡರಾಮ ಬಡಾವಣೆಯ ನಿವಾಸಿ ಎಸ್.ಆರ್.ಸವಿತ ಚಿನ್ನಾಭರಣ ಕಳೆದುಕೊಂಡ ಮಹಿಳೆಯಾಗಿದ್ದಾರೆ.

ಮಾ. 3 ರಂದು ಕಾರ್ಯ ನಿಮಿತ್ತ ಮದ್ದೂರಿಗೆ  ಬಂದಿದ್ದ ಸವಿತ  3 ಮಕ್ಕಳ ಜತೆ ಸಂಜೆ 6ಗಂಟೆ ಸುಮಾರಿಗೆ ಮದ್ದೂರು ಬಸ್ ಸ್ಟಾಪ್ ನಲ್ಲಿ ಚನ್ನಪಟ್ಟಣಕ್ಕೆ  ಬಸ್ಸು ಹತ್ತುವ ಸಂದರ್ಭದಲ್ಲಿ ಬ್ಯಾಗ್ ನಲ್ಲಿದ್ದ  1 ಲಾಂಗ್ ಚೈನ್ ಒಡವೆ (45 ಗ್ರಾಂ) ಮತ್ತು ಒಂದು ನೆಕ್ಲೆಸ್( 25 ಗ್ರಾಂ) ಒಟ್ಟು 70 ಗ್ರಾಂ ಒಡವೆಯನ್ನು ಕಳ್ಳರು ಕಳ್ಳತನ ಮಾಡಿದ್ದಾರೆ.

ಇದನ್ನೂ ಓದಿ- ಪ್ರಧಾನಿ ಮೋದಿಗೆ ಜೀವ ಬೆದರಿಕೆ: ಕರ್ನಾಟಕ ಮೂಲದ ವ್ಯಕ್ತಿಯ ವಿರುದ್ಧ ಎಫ್‌ಐಆರ್ ದಾಖಲು

ಬಸ್ ಹತ್ತಿದ ತಕ್ಷಣ ಸವಿತ ಬ್ಯಾಗ್ ನೋಡಿಕೊಂಡಾಗ ಬ್ಯಾಗಿನಲ್ಲಿದ್ದ  ಚಿನ್ನದ ಒಡವೆಗಳು ಕಳ್ಳತನವಾಗಿರುವುದು ಗಮನಕ್ಕೆ ಬಂದಿದೆ. ಆಗ ಸವಿತ  100 ಕಂಟ್ರೋಲ್ ಗೆ ಪೋನ್ ಮಾಡಿ ತಿಳಿಸಿದಾಗ ಚನ್ನಪಟ್ಟಣ ಠಾಣೆಯ ನಂಬರ್ ಕೊಟ್ಟಿರುತ್ತಾರೆ.  ಆ ವೇಳೆಯಲ್ಲಿ ಪೋನ್ ಸಂಪರ್ಕ ಸಿಕ್ಕಿರುವುದಿಲ್ಲ. 

ನಂತರ ಕೆ.ಎಸ್.ಆರ್.ಟಿ.ಸಿ ಬಸ್ ನಂಬರ್ ಕೆಎ.11.ಎಫ್.0140 ಬಸ್ ಡ್ರೈವರ್ ಪೊಲೀಸ್ ಠಾಣೆಯ ಬಳಿ ಬಸ್ ತಂದು ನಿಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಎಲ್ಲಾ ಪ್ರಯಾಣಿಕರನ್ನು ಚನ್ನಪಟ್ಟಣ ಠಾಣೆಯ ಪೊಲೀಸರು ಪರಿಶೀಲನೆ ಮಾಡಿದ್ದಾರೆ. ಆದಾಗ್ಯೂ, ಒಡವೆ ಪತ್ತೆಯಾಗಿಲ್ಲ.  

ಇದನ್ನೂ ಓದಿ- ಆನಂದಪುರ ಪೊಲೀಸ್ ಸ್ಟೇಷನ್ ಲಿಮಿಟ್ಸ್​​ ನಲ್ಲಿ ಅಚ್ಚರಿಯ ಘಟನೆ: ವ್ಯಕ್ತಿಯೊಬ್ಬರ ಮೇಲೆ ಕಾರು ಹತ್ತಿಸಿ ಕೊಲೆ!

ತಮ್ಮ 70ಗ್ರಾಂ ಚಿನ್ನದ ಒಡವೆಯನ್ನು ಕಳ್ಳತನ ಮಾಡಿರುವ ಕಳ್ಳರನ್ನು ಪತ್ತೆ ಮಾಡಿ ಅಂದಾಜು 3. 80 ಲಕ್ಷ ರೂ. ಮೌಲ್ಯದ ತಮ್ಮ ಒಡವೆಯನ್ನು ತನಗೆ ಹಿಂತಿರುಗಿಸಿ ಕೊಡಬೇಕೆಂದು ಸವಿತ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬಸ್ ನಿಲ್ದಾಣದಲ್ಲಿ ಮಹಿಳೆಯ ಒಡವೆಗಳನ್ನು ಕದ್ದಿರುವ ಕಳ್ಳರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News