ಬೆಂಗಳೂರು : ಬೆಂಗಳೂರಿನ ಆಡುಗೋಡಿಯಲ್ಲಿ ಕೋಪಿಷ್ಟ ಗಂಡ ಇಂತಹ ಘೋರ ಕೃತ್ಯವೆಸಗಿದ್ಧಾನೆ. ಪತ್ನಿ ಪ್ರಿಯಾಂಕಾಗೆ ಚಾಕು ಇರಿದ ಪತಿಯ ಹೆಸರು ದಯಾನಂದ. ಇಬ್ಬರಿಗೂ ಕೆಲ ವರ್ಷಗಳ ಹಿಂದೆ ಮದುವೆಯಾಗಿತ್ತು. ದಯಾನಂದ ಕುಡಿತದ ದಾಸನಾಗಿದ್ದು, ಆಗಾಗ ಪತ್ನಿಯ ಮೇಲೆ ಅನುಮಾನಪಟ್ಟು ಗಲಾಟೆ ಮಾಡುತ್ತಿದ್ದ.
ಅತಿಯಾಗಿ ಫೋನ್ನಲ್ಲಿ ಮಾತನಾಡುತ್ತಿಯಾ.. ನಿನಗೆ ಅಕ್ರಮ ಸಂಬಂಧ ಇದೆ ಎಂದು ಕಿರಿಕ್ ಮಾಡುತ್ತಿದ್ದ. ಇದೇ ರೀತಿ ನಿನ್ನೆ ಗಲಾಟೆ ಶುರುವಾಗಿದ್ದು, ರೊಚ್ಚಿಗೆದ್ದು ಖಾಸಗಿ ಅಂಗಕ್ಕೆ ಇರಿದು ದಯಾನಂದ ಎಸ್ಕೇಪ್ ಆಗಿದ್ದ. ಪ್ರಿಯಾಂಕಾಳ ಕಿರುಚಾಟ ಕೇಳಿದ ಸ್ಥಳೀಯರು ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.
ಇದನ್ನೂ ಓದಿ-"ಸಂವಿಧಾನದ ರಕ್ಷಣೆಗೆ ಕಾಂಗ್ರೆಸ್ ನವರು ಎಲ್ಲ ಹೋರಾಟಗಳಿಗೂ ಸಿದ್ಧರಾಗಬೇಕಿದೆ"
ಆರೋಪಿ ದಯಾನಂದ, ಅಶೋಕ್ ನಗರ ಠಾಣೆಯ ರೌಡಿಶೀಟರ್. ಈ ಹಿಂದೆ ಕೊಲೆ ಪ್ರಕರಣದಲ್ಲಿ ಜೈಲು ಸೇರಿ ಬಂದಿದ್ದ. ಸದ್ಯ ಪೊಲೀಸರು ಪತ್ನಿಯ ಮೇಲೆ ಚಾಕು ಇರಿದ ಕಾರಣಕ್ಕೆ ಆರೋಪಿ ದಯಾನಂದ ಅಲಿಯಾಸ್ ನಂದನನ್ನು ವಶಕ್ಕೆ ಪಡೆದಿದ್ದಾರೆ. ಗಾಯಾಳು ಪತ್ನಿ ಪ್ರಿಯಾಂಕಾ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆ ಸಂಬಂಧ ಆಡುಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ-ಶಕ್ತಿ ಯೋಜನೆ ಹೊಡೆತ: ಆಟೋ ಮಾರಾಟಕ್ಕೆ ನಿಂತ ಆಟೋ ಚಾಲಕರು
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.