Crime News: ಮದುವೆಯಾಗಲು ಒಪ್ಪದ ಮಹಿಳಾ ಟೆಕ್ಕಿಯ ಕತ್ತು ಸೀಳಿದ ಯುವಕ..!

Hyderabad Crime News: ಮದುವೆಯಾಗಲು ನಿರಾಕರಿಸಿದ 22 ವರ್ಷದ ಮಹಿಳಾ ಸಾಫ್ಟ್​ವೇರ್ ಇಂಜಿನಿಯರ್ ಕತ್ತು ಸೀಳಿರುವ ಭಯಾನಕ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ.

Written by - Zee Kannada News Desk | Last Updated : Jun 22, 2023, 07:04 PM IST
  • ಮದುವೆಯಾಗಲು ನಿರಾಕರಿಸಿದ ಮಹಿಳಾ ಟೆಕ್ಕಿಯ ಕತ್ತು ಸೀಳಿದ ಯುವಕ
  • ಹೈದರಾಬಾದ್‍ನಲ್ಲಿ ಸಾಫ್ಟ್‍ವೇರ್ ಇಂಜಿನಿಯರ್ ಕತ್ತು ಸೀಳಿದ ಫುಡ್ ಡೆಲಿವರಿ ಬಾಯ್
  • ಗಾಯಗೊಂಡ ಯುವತಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ, ಆರೋಪಿಯನ್ನು ಬಂಧಿಸಿದ ಪೊಲೀಸರು
Crime News: ಮದುವೆಯಾಗಲು ಒಪ್ಪದ ಮಹಿಳಾ ಟೆಕ್ಕಿಯ ಕತ್ತು ಸೀಳಿದ ಯುವಕ..! title=
ಮಹಿಳಾ ಟೆಕ್ಕಿಯ ಕತ್ತು ಸೀಳಿದ ಯುವಕ!

ಹೈದರಾಬಾದ್: ಯುವಕನೊಬ್ಬ ಮದುವೆಯಾಗಲು ನಿರಾಕರಿಸಿದ ಮಹಿಳಾ ಟೆಕ್ಕಿಯ ಕತ್ತು ಸೀಳಿರುವ ಭಯಾನಕ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ. 22 ವರ್ಷದ ಮಹಿಳಾ ಸಾಫ್ಟ್​ವೇರ್ ಇಂಜಿನಿಯರ್‍ ಕತ್ತು ಸೀಳಿದ ಆರೋಪಿಯನ್ನು ಬಂಧಿಸಲಾಗಿದೆ.  

ಗಾಯಗೊಂಡಿರುವ ಟೆಕ್ಕಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿಯನ್ನು ಬಂಧಿಸಿರುವ ಪೊಲೀಸರು ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಈ ಘಟನೆಯು ನರಸಿಂಗಿ ಪೊಲೀಸ್ ​ಠಾಣಾ ವ್ಯಾಪ್ತಿಯ ಪುಪ್ಪಲಗೂಡದಲ್ಲಿ ನಡೆದಿದೆ.

ಇದನ್ನೂ ಓದಿ: ಡಾ.ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ವಿಶ್ವವಿದ್ಯಾಲಯಕ್ಕೆ ಮೊದಲ ಬಾರಿಗೆ ಭೇಟಿ ನೀಡಿದ ಡಾ. ಎಂ‌.ಸಿ ಸುಧಾಕರ್

ಘಟನೆಯ ವಿವರ

ಫುಡ್ ಡೆಲಿವರಿ ಮಾಡುತ್ತಿದ್ದ ಯುವಕ ಗಣೇಶ್​ ಎಂಬಾತ ಮಹಿಳಾ ಟೆಕ್ಕಿಯನ್ನು ಮದುವೆಯಾಗಲು ಬಯಸಿದ್ದ. ಆದರೆ ಆಕೆಯು ಆತನ ಪ್ರಸ್ತಾಪವನ್ನು ತಿರಸ್ಕರಿಸಿದ್ದಳು. ಇದರಿಂದ ಆ ಯುವಕ ಕೋಪಗೊಂಡಿದ್ದ. ಹೈದರಾಬಾದ್​ನ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಹಾಸ್ಟೆಲ್​ವೊಂದರಲ್ಲಿ ಉಳಿದುಕೊಂಡಿದ್ದಳು.

ಆರೋಪಿ ಗಣೇಶ್​ ಮಂಗಳವಾರ ರಾತ್ರಿ ಯುವತಿಯ ಹಾಸ್ಟೆಲ್​ಗೆ ಹೋಗಿ ಪುಪ್ಪಲಗುಡದ ಹೋಟೆಲ್​ ಬಳಿ ಆಕೆಯನ್ನು ಕರೆದುಕೊಂಡು ಹೋಗಿದ್ದನಂತೆ. ಅಲ್ಲಿ ಮತ್ತೊಮ್ಮೆ ಮದುವೆ ಪ್ರಸ್ತಾಪ ಇಟ್ಟಿದ್ದನಂತೆ. ಆದರೆ ಈ ವೇಳೆಯೂ ಯುವತಿ ಆತನ ಮದುವೆ ಪ್ರಸ್ತಾಪವನ್ನುತಿರಸ್ಕರಿಸಿದ್ದಳಂತೆ. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿದೆ.

ಇದನ್ನೂ ಓದಿ: ಕೇಂದ್ರ ಸರ್ಕಾರ ಸಹಕಾರ ನೀಡದಿದ್ದರೆ ಮುಂದಿನ ಆಯ್ಕೆ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದೇನು?

ಬಳಿಕ ಗಣೇಶ್ ತನ್ನ ಬ್ಯಾಗ್​ನಲ್ಲಿಟ್ಟಿದ್ದ ಚಾಕುವನ್ನು ತೆಗೆದು ಯುವತಿಯ ಮೇಲೆ ಹಲ್ಲೆ ನಡೆಸಿದ್ದಾನೆ. ಪರಿಣಾಮ ಆಕೆಯ ಕತ್ತು ಮತ್ತು ಕೈಗಳಿಗೆ ಇರಿತದ ಗಾಯಗಳಾಗಿವೆ. ಯುವತಿ ಮೇಲೆ ಚಾಕುವಿನಿಂದ ಹಲ್ಲೆ ನಡೆಸುತ್ತಿದ್ದನ್ನು ಕಂಡ ಸ್ಥಳೀಯರು ಪೊಲೀಸರಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಗಣೇಶ್‍ನನ್ನು ಬಂಧಿಸಿದ್ದಾರೆ. ಕೂಡಲೇ ಯುವತಿಯನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ತಿಳಿದುಬಂದಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News