ರೈಲಿನಲ್ಲಿ ಗಾಂಜಾ ಸಾಗಿಸುತ್ತಿದ್ದ ರೈಲ್ವೆ ನೌಕರನ ಬಂಧನ..!

ಬೆಂಗಳೂರು ರೈಲ್ವೆ ಪೊಲೀಸರು ಒಂದಲ್ಲಾ ಒಂದು ಪ್ರಕರಣವನ್ನು ಭೇದಿಸುತ್ತಾನೆ ಇದ್ದಾರೆ. ಅದರಂತೆ ಮತ್ತೊಂದು ಪ್ರಕರಣವನ್ನು ಪತ್ತೆ ಮಾಡಿ ಲಕ್ಷಾಂತರ ರೂಪಾಯಿ ಬೆಲೆಬಾಳುವ ಗಾಂಜಾವನ್ನು ಸೀಜ್ ಮಾಡಿದ್ದಾರೆ.. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.. ನೋಡಿ..

Written by - VISHWANATH HARIHARA | Edited by - Krishna N K | Last Updated : Jun 26, 2024, 11:30 PM IST
    • ಬೆಂಗಳೂರು ರೈಲ್ವೇ ಪೊಲೀಸರ ಭರ್ಜರಿ ಕಾರ್ಯಾಚರಣೆ
    • ರೈಲಿನಲ್ಲಿ ಗಾಂಜಾ ಸರಬರಾಜು ಮಾಡುತ್ತಿದ್ದ ಆರೋಪಿ ಅಂದರ್
    • ಬೈಯಪ್ಪನಹಳ್ಳಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಆರೋಪಿ
ರೈಲಿನಲ್ಲಿ ಗಾಂಜಾ ಸಾಗಿಸುತ್ತಿದ್ದ ರೈಲ್ವೆ ನೌಕರನ ಬಂಧನ..! title=

ಬೆಂಗಳೂರು : ಕೆಲ ವರ್ಷಗಳಿಂದ ರೈಲ್ವೇ ಇಲಾಖೆಯಲ್ಲಿ ಕಂಟ್ರಾಕ್ಸ್ ಬೇಸ್ ಮೇಲೆ ಕೆಲಸ ಮಾಡಿಕೊಂಡಿದ್ದ. ಇಷ್ಟರಲ್ಲೇ ಇದ್ದಿದ್ದರೆ ಇವತ್ತು ಪೊಲೀಸರಿಂದ ಬಂಧನವಾಗುವ ಪರಿಸ್ಥಿತಿ ಬರುತ್ತಿರಲಿಲ್ಲ. ಹಣದ ದುರಾಸೆಗೆ ಬಿದ್ದು ಮಾದಕ ಜಾಲದಲ್ಲಿ ತೊಡಗಿ ಈಗ ರೇಲ್ವೆ ಪೊಲೀಸರ ಅತಿಥಿಯಾಗಿದ್ದಾನೆ. ಹಾಗಾದರೆ ಇದೇನ್ ಸ್ಟೋರಿ ಅಂತೀರಾ ತೋರ್ಸ್ತೀವಿ ನೋಡಿ.

ಯೆಸ್.. ಈ ಪೊಟೋದಲ್ಲಿ ಇರೋ ವ್ಯಕ್ತಿಯನ್ನು ಒಮ್ಮೆ ನೋಡಿ..ಈತನ ಹೆಸ್ರು ದೀಪನ್ ದಾಸ್ ಅಂತಾ.. ಮೂಲತ: ಬೆಂಗಳೂರಿನವನು. ರೈಲ್ವೇ ಇಲಾಖೆಯಲ್ಲಿ ಕಾಂಟ್ರಾಕ್ಟ್ ಬೇಸಲ್ಲ ಮೇಲೆ ಕೆಲಸ ಮಾಡುತ್ತಿದ್ದ. ಸದ್ಯ ಹಣದ ಆಸೆಗೆ ಬಿದ್ದು ಗಾಂಜಾ ಕೇಸ್ ನಲ್ಲಿ ಬೈಯಪ್ಪನಹಳ್ಳಿ ಪೊಲೀಸರು ಕೈಗೆ ಸಿಕ್ಕಿಬಿದ್ದಿದ್ದಾನೆ. 

ಇದನ್ನೂ ಓದಿ:ಭಾರೀ ಮಳೆ ಹಿನ್ನೆಲೆ ಹಂಪಿ ಸ್ಮಾರಕಗಳ ಸಂರಕ್ಷಣೆಗೆ ಮುಂದು

ಬೆಂಗಳೂರು ರೈಲ್ವೆ ಪೊಲೀಸರು ಒಂದಲ್ಲಾ ಒಂದು ಪ್ರಕರಣವನ್ನು ಭೇದಿಸುತ್ತಾನೆ ಇದ್ದಾರೆ. ಅದರಂತೆ ಮತ್ತೊಂದು ಪ್ರಕರಣವನ್ನು ಪತ್ತೆ ಮಾಡಿ ಲಕ್ಷಾಂತರ ರೂಪಾಯಿ ಬೆಲೆಬಾಳುವ ಗಾಂಜಾವನ್ನು ಸೀಜ್ ಮಾಡಿದ್ದಾರೆ.. ಈ ಆರೋಪಿ ರೈಲಿನಲ್ಲಿ ತ್ರಿಪುರದಿಂದ ಬೆಂಗಳೂರಿಗೆ ಗಾಂಜಾ ಸಾಗಿಸುತ್ತಿದ್ದ. ಈತ ತ್ರಿಪುರದ ಅಗರ್ತಲಾದಿಂದ ಬೆಂಗಳೂರಿನ ಬೈಯ್ಯಪ್ಪನಹಳ್ಳಿ ರೈಲ್ವೆ ಟರ್ಮಿನಲ್‌ಗೆ ಬಂದಿಳಿದಾಗ ಖಚಿತ ಮಾಹಿತಿ ದಾಳಿ‌ ನಡೆಸಿದ್ದ ಪೊಲೀಸರು  ದೀಪನ್​ದಾಸ್​​ ಬಂಧಿಸಿದ್ದಾರೆ. ಆರೋಪಿಯಾಗಿದ್ದಾನೆ..

ಹೌದು... ಆರೋಪಿಯು ಅಗರ್ತಲಾ - ಬೆಂಗಳೂರು ಎಕ್ಸ್‌ಪ್ರೆಸ್​ ರೈಲಿನಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲ ವರ್ಷಗಳಿಂದ ಬೆಡ್ ರೋಲರ್ ಕೆಲಸ ಮಾಡಿಕೊಂಡಿದ್ದ. ಪ್ರಕರಣದಲ್ಲಿ  ತ್ರಿಪುರ ಮೂಲದ ಸುಮನ್ ಹಾಗೂ ಬೆಂಗಳೂರಿನಲ್ಲಿ ಗಾಂಜಾ ಆಮದು ಮಾಡಿಕೊಳ್ಳುತ್ತಿದ್ದ ಬಿಸ್ವಜಿತ್ ಎಂಬ ಆರೋಪಿಗಳು ಎಸ್ಕೇಪ್ ಆಗಿದ್ದಾರೆ. ಅಲ್ಲದೇ ವಿಚಾರಣೆ ವೇಳೆ ಸುಮಾರು ತಿಂಗಳಿನಿಂದ ರಾಜ್ಯ ರಾಜಧಾನಿಗೆ ಗಾಂಜಾ ಸರಬರಾಜು ಮಾಡ್ತಿದ್ದು ತನಿಖೆ ವೇಳೆ ಗೊತ್ತಾಗಿದೆ..

ಇದನ್ನೂ ಓದಿ:ಸಕ್ಕರೆನಾಡು ಮಂಡ್ಯದಲ್ಲೊಂದು ಮನಕಲಕುವ ಕೃತ್ಯ

ಇನ್ನು ಬಂಧಿತ ಆರೋಪಿಯಿಂದ 32.8 ಕೆ.ಜಿ. ಗಾಂಜಾವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೈಯ್ಯಪ್ಪನಹಳ್ಳಿ ರೈಲ್ವೆ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಅದೆನೇ ಇರಲಿ, ಬೆಂಗಳೂರನ್ನು ಡ್ರಗ್ ಮುಕ್ತ ಮಾಡಬೇಕು ಅಂತಾ ಪೊಲೀಸರು ಹರಸಾಹಸಪಡುತ್ತಿದ್ದಾರೆ‌. ಆದರೆ ಸಾರ್ವಜನಿಕ ಸಾರಿಗೆಗಳಲ್ಲಿ ಮಾದಕ ವಸ್ತು ಬೆಂಗಳೂರು ಸೇರುತ್ತಿರೋದು ದುರಂತವೇ ಸರಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News