ಬೆಂಗಳೂರು : ಇದೇ ತಿಂಗಳ ಮೂರನೇ ತಾರೀಖು ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ರಾಮಸಂದ್ರದ ನಿರ್ಜನ ಪ್ರದೇಶದಲ್ಲಿ ಅರೆ ಬೆಂದ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾಗಿತ್ತು. ಸದ್ಯ ಈ ಪ್ರಕರಣಕ್ಕೆ ಮೇಜರ್ ಟ್ವಿಸ್ಟ್ ಸಿಕ್ಕಿದ್ದು, ಪತಿಯೇ ಪತ್ನಿಯ ಶೀಲ ಶಂಕಿಸಿ ಸ್ನೇಹಿತನ ಜೊತೆಗೂಡಿ ಕೊಲೆಗೈದಿದ್ದಾನೆ ಎಂಬ ಸತ್ಯ ಬಯಲಾಗಿದೆ. ನಗೀನಾ ಖಾನಂ ಎಂಬಾಕೆಯೇ ಗಂಡನಿಂದ ಹತ್ಯೆಯಾದ ಮಹಿಳೆ. ಈಕೆಯ ಗಂಡ ಮೊಹಮ್ಮದ್ ರಫೀಕ್ ಹಾಗೂ ಕೊಲೆಗೆ ಸಹಕರಿಸಿದ ಪ್ರಜ್ವಲ್ ಎಂಬಾತನನ್ನು ಕೆಂಗೇರಿ ಪೊಲೀಸರು ವಿಜಯಪುರದಲ್ಲಿ ಬಂಧಿಸಿ ಜೈಲಿಗಟ್ಟಿದ್ದಾರೆ.
ಪ್ರಕರಣದ ಹಿನ್ನೆಲೆ:
ಆರೋಪಿ ರಫೀಕ್ ಮೂಲತ: ಯಾದಗಿರಿ ಜಿಲ್ಲೆಯವನಾಗಿದ್ದು, ಕೆಲಸ ಅರಸಿ ಬೆಂಗಳೂರಿಗೆ ಬಂದಿದ್ದ. ನಗೀನಾ ಬೆಂಗಳೂರಿನಲ್ಲಿಯೇ ವಾಸವಿದ್ದಳು. ಇಬ್ಬರಿಗೂ ಇದು ಎರಡನೇ ಮದುವೆ. ಪರಸ್ಪರ ಒಪ್ಪಿಗೆ ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ವಿವಾಹವಾಗಿದ್ರು. ಮದುವೆಯಾದ ಆರಂಭದಲ್ಲಿ ಇಬ್ಬರ ನಡುವೆ ಒಳ್ಳೆ ಪ್ರೀತಿ, ವಿಶ್ವಾಸವಿತ್ತು. ಆದರೆ ಇತ್ತಿಚೇಗೆ ರಫೀಕ್ ಗೆ ಪತ್ನಿ ನಗೀನಾ ಅಕ್ರಮ ಸಂಬಂಧ ಹೊಂದಿದ್ದಾಳೆ ಎಂಬ ಅನುಮಾನ ಶುರುವಾಗಿತ್ತು.
ಇದನ್ನೂ ಓದಿ:
ಇದಕ್ಕೆ ಪುಷ್ಠಿ ನೀಡುವಂತೆ ನಗೀನಾ ಪರಪುರುಷನ ಜೊತೆಗಿರುವುದನ್ನು ಕಣ್ಣಾರೆ ಕಂಡಿದ್ದ. ಅಂದಿನಿಂದ ನಗೀನಾಗೆ ಒಂದು ಗತಿ ಕಾಣಿಸಬೇಕು ಅಂತಾ ನಿರ್ಧರಿಸಿದ್ದ. ರಫೀಕ್ ಚಾಲಕನಾಗಿ ಕೆಲಸ ಮಾಡುತ್ತಿದ್ದ. 5 ವರ್ಷಗಳ ಹಿಂದೆ ರಫೀಕ್ ಗೆ ಪ್ರಜ್ವಲ್ ಎಂಬಾತನ ಗೆಳೆತನವಾಗಿ ತುಂಬಾ ಆತ್ಮೀಯರಾಗಿತ್ತಾರೆ. ಹೀಗಾಗಿ ತನ್ನ ಹೆಂಡತಿ ಪರಪುರುಷನ ಜೊತೆ ಚಕ್ಕಂದ ಆಡುತ್ತಿದ್ದಾಳೆ. ಆಕೆಗೆ ಒಂದು ಗತಿ ಕಾಣಿಸಬೇಕು ಅಂತಾ ಪ್ರಜ್ವಲ್ ಬಳಿ ರಫೀಕ್ ಹೇಳಿದ್ದ.
ಇಬ್ಬರೂ ಸೇರಿ ನಗೀನಾಳನ್ನು ಮುಗಿಸಬೇಕು ಅಂತಾ ಪ್ಲಾನ್ ಮಾಡಿದ್ರು. ಇದೇ ತಿಂಗಳ 3 ತಾರೀಖು ನಗೀನಾಗೆ ಕರೆ ಮಾಡಿದ್ದ ರಫೀಕ್ ನಾನು ರಾಮಸಂದ್ರದ ನಿರ್ಜನ ಕುಡಿದು ಬಿದ್ದಿದ್ದೇನೆ. ಬಂದು ಕರೆದುಕೊಂಡು ಹೋಗು ಎಂದಿದ್ದ. ಹೀಗಾಗಿ ನಗೀನಾ ರಫೀಕ್ ನನ್ನು ಕರೆದುಕೊಂಡು ಬರಲು ಅಲ್ಲಿಗೆ ಹೋಗಿದ್ದಾಳೆ.
ನಗೀನಾ ಬಂದ ತಕ್ಷಣ ರಫೀಕ್ ಕಿರಿಕ್ ಸ್ಟಾರ್ಟ್ ಮಾಡಿದ್ದ. ನನಗೆ ನೀನು ಮೋಸ ಮಾಡಿದ್ದೀಯಾ ಅಂತಾ ಕೂಗಾಡಿ ಆಕೆಗೆ ಮನಬಂದತೆ ಥಳಿಸಿದ್ದ. ಸ್ಥಳದಲ್ಲಿದ್ದ ಪ್ರಜ್ವಲ್, ರಫೀಕ್ ಸಾಥ್ ನೀಡಿ ನಗೀನಾ ತಲೆ ರಾಡ್ ನಿಂದ ಹೊಡೆದು ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾರೆ. ಹೆಣದ ಗುರುತು ಸಿಗಬಾರದು ಅಂತಾ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಎಸ್ಕೇಪ್ ಆಗಿದ್ರು. ಆದರೆ ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಸ್ಥಳಕ್ಕೆ ಭೇಟಿ ನೀಡಿದ್ದ ಪೊಲೀಸರು ದೂರು ದಾಖಲಿಸಿಕೊಂಡಿದ್ದರು.
ಇದನ್ನೂ ಓದಿ:
ಪ್ರಕರಣದ ಬೆನ್ನು ಹತ್ತಿ ನಗೀನಾ ತಂದೆ-ತಾಯಿಯ ವಿಚಾರಣೆ ನಡೆಸಿದ್ದರು. ಈ ವೇಳೆ ರಫೀಕ್ ನನ್ನ ಮಗಳನ್ನು ಕೊಂದಿದ್ದಾನೆ ಎಂದು ನಗೀನಾ ತಂದೆ- ತಾಯಿ ಆರೋಪಿಸಿದ್ರು. ಇತ್ತ ಎಸ್ಕೇಪ್ ಆಗಿದ್ದ ರಫೀಕ್ ಗುರುತು ತಲೆ, ಮೀಸೆ ಗಡ್ಡ ಬೋಳಿಸಿಕೊಂಡಿದ್ದ. ಹೆಂಡತಿ ಮೊಬೈಲ್ ತೆಗೆದುಕೊಂಡು ಹೋಗಿ ಆಗಾಗ ಆಫ್ ಅಂಡ್ ಆನ್ ಮಾಡಿ ಪೊಲೀಸರ ದಾರಿ ತಪ್ಪಿಸಿದ್ದ. ಆದರೆ ಕೆಂಗೇರಿ ಪೊಲೀಸ್ ಇನ್ಸ್ ಪೆಕ್ಟರ್ ವಂಸತ್ ಹಾಗೂ ತಂಡ ಇಬ್ಬರು ಕೊಲೆಗಡುಕರನ್ನ ಬಂಧಿಸಿ ಕಂಬಿ ಹಿಂದೆ ತಳ್ಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.