ಗಂಡನಿಲ್ಲ ಸುಖ ಕೊಡು ಬಾ ಎಂದು‌ ಕರೆದ ಆಂಟಿ: ನಂಬಿ ಹೋದವನ ಹಣ ದೋಚಿದ ಗ್ಯಾಂಗ್

ಇತ್ತೀಚೆಗೆ ವೈಟ್‌ಫೀಲ್ಡ್‌ ನಿವಾಸಿಯನ್ನು ಲೈಂಗಿಕ ಕ್ರಿಯೆಗೆ ಎಂದು ಮೆಹರಾ ಎಂಬಾಕೆ ತನ್ನ ಜೆ.ಪಿ.ನಗರದ 5ನೇ ಹಂತದ ಮನೆಗೆ ಕರೆಸಿಕೊಂಡಿದ್ದಾರೆ. ವ್ಯಕ್ತಿ ಮನೆಗೆ ಎಂಟ್ರಿಯಾಗುತ್ತಿದ್ದಂತೆ ಮಹಿಳೆ ಮತ್ತು ಆಕೆಯ ತಂಡ ಸೇರಿಕೊಂಡು ಈ ಕೃತ್ಯ ಎಸಗಿರುವುದಾಗಿ ಎಂದು ತಿಳಿದುಬಂದಿದೆ. 

Written by - VISHWANATH HARIHARA | Edited by - Yashaswini V | Last Updated : Jun 5, 2023, 10:54 AM IST
  • ಕೆಲ ದಿನಗಳ ಹಿಂದೆ ಡೇಟಿಂಗ್‌ ಆ್ಯಪ್‌ ಮೂಲಕ ಸಂತ್ರಸ್ತನಿಗೆ ಆರೋಪಿ ಮೆಹರಾ ಹೆಸರಿನ ಮಹಿಳೆ ಪರಿಚಯವಾಗಿತ್ತು‌.
  • ಪರಿಚಯದ ನಂತರ ಮೊಬೈಲ್‌ ಸಂಖ್ಯೆಗಳು ವಿನಿಮಿಯವಾಗಿದ್ದು, ಬಳಿಕ ಚಾಟಿಂಗ್‌, ಕಾಲಿಂಗ್ ಅಂತಾ ಶುರುವಾಗಿದೆ.
  • ಬಳಿಕ ಸಂತ್ರಸ್ತನನ್ನು ಸಂಪರ್ಕಿಸಿದ ಮಹಿಳೆ ನನ್ನ ಗಂಡ ದುಬೈನಲ್ಲಿದ್ದಾನೆ. ನಾನು ಲೈಂಗಿಕ ತೃಪ್ತಿಗಾಗಿ ಸಂಗಾತಿಯನ್ನು ಹುಡುಕುತ್ತಿದ್ದೇನೆ ಎಂದು ಮೆಸೇಜ್ ಮಾಡಿದ್ದಾಳೆ.
ಗಂಡನಿಲ್ಲ ಸುಖ ಕೊಡು ಬಾ ಎಂದು‌ ಕರೆದ ಆಂಟಿ: ನಂಬಿ ಹೋದವನ ಹಣ ದೋಚಿದ ಗ್ಯಾಂಗ್ title=

ಬೆಂಗಳೂರು: ತನ್ನ ಪತಿ ದುಬೈನಲ್ಲಿದ್ದಾನೆ.. ನನಗೆ ಲೈಂಗಿಕ ಸುಖ ನೀಡು ಬಾ ಎಂದು ಹೇಳಿ ವ್ಯಕ್ತಿಯೋರ್ವನನ್ನು ಮನೆಗೆ ಆಹ್ವಾನಿಸಿ ಹಣ ದೋಚಿರುವ ಘಟನೆ ಬೆಂಗಳೂರಿನ  ಪುಟ್ಟೇನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.  ಇತ್ತೀಚೆಗೆ ವೈಟ್‌ಫೀಲ್ಡ್‌ ನಿವಾಸಿಯನ್ನು ಲೈಂಗಿಕ ಕ್ರಿಯೆಗೆ ಎಂದು ಮೆಹರಾ ಎಂಬಾಕೆ ತನ್ನ ಜೆ.ಪಿ.ನಗರದ 5ನೇ ಹಂತದ ಮನೆಗೆ ಕರೆಸಿಕೊಂಡಿದ್ದಾರೆ. ವ್ಯಕ್ತಿ ಮನೆಗೆ ಎಂಟ್ರಿಯಾಗುತ್ತಿದ್ದಂತೆ ಮಹಿಳೆ ಮತ್ತು ಆಕೆಯ ತಂಡ ಸೇರಿಕೊಂಡು ಈ ಕೃತ್ಯ ಎಸಗಿರುವುದಾಗಿ ಎಂದು ತಿಳಿದುಬಂದಿದೆ. 

ಕೆಲ ದಿನಗಳ ಹಿಂದೆ ಡೇಟಿಂಗ್‌ ಆ್ಯಪ್‌ ಮೂಲಕ ಸಂತ್ರಸ್ತನಿಗೆ ಆರೋಪಿ ಮೆಹರಾ ಹೆಸರಿನ ಮಹಿಳೆ ಪರಿಚಯವಾಗಿತ್ತು‌. ಪರಿಚಯದ ನಂತರ ಮೊಬೈಲ್‌ ಸಂಖ್ಯೆಗಳು ವಿನಿಮಿಯವಾಗಿದ್ದು, ಬಳಿಕ  ಚಾಟಿಂಗ್‌, ಕಾಲಿಂಗ್ ಅಂತಾ ಶುರುವಾಗಿದೆ. ಬಳಿಕ ಸಂತ್ರಸ್ತನನ್ನು ಸಂಪರ್ಕಿಸಿದ ಮಹಿಳೆ ನನ್ನ ಗಂಡ ದುಬೈನಲ್ಲಿದ್ದಾನೆ. ನಾನು ಲೈಂಗಿಕ ತೃಪ್ತಿಗಾಗಿ ಸಂಗಾತಿಯನ್ನು ಹುಡುಕುತ್ತಿದ್ದೇನೆ ಎಂದು ಮೆಸೇಜ್ ಮಾಡಿದ್ದಾಳೆ. ಇದನ್ನು ನಂಬಿದ ಸಂತ್ರಸ್ತ ಸಹ ಆರೋಪಿ ಜತೆ ಲೈಂಗಿಕ ಕ್ರಿಯೆ ನಡೆಸಲು ಇಚ್ಛೆ ವ್ಯಕ್ತಪಡಿಸಿದ್ದಾನೆ. 

ಇದನ್ನೂ ಓದಿ- ಬಾರ್​ನಲ್ಲಿ ಕುಡಿದು ಗಲಾಟೆ: ಕ್ಯಾಶಿಯರ್​ನ ಕೊಲೆಯಲ್ಲಿ ಅಂತ್ಯ

ಆಗ ಆತನಿಂದ ಫೋಟೋ ಪಡೆದ ಆರೋಪಿತೆ ತನ್ನ ಮನೆಯ ವಿಳಾಸ ಲೋಕೇಷನ್‌ ಶೇರ್‌ ಮಾಡಿದ್ದಾಳೆ. ಅಂತೆಯೇ ಜೆ.ಪಿ.ನಗರ 5ನೇ ಹಂತದಲ್ಲಿರುವ ಮಹಿಳೆಯ ನಿವಾಸಕ್ಕೆ ಸಂತ್ರಸ್ತ ತೆರಳಿದ್ದಾನೆ. ಈ ವೇಳೆ ಏಕಾಏಕಿ ಆ ಮನೆಗೆ ನುಗ್ಗಿದ ಮೂವರು ಅಪರಿಚಿತರು ಸಂತ್ರಸ್ತನನ್ನು ಬೆಡ್‌ ರೂಂನಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿದ್ದಾರೆ. ನಿನ್ನನ್ನು ಬೆತ್ತಲೆಗೊಳಿಸಿ ರಸ್ತೆಯಲ್ಲಿ ಓಡಾಡಿಸುತ್ತೇವೆ. ನಿನ್ನನ್ನು ಮಸೀದಿಗೆ ಕರೆದುಕೊಂಡು ಹೋಗಿ ಮುಂಜಿ ಮಾಡಿಸಿ ಮೆಹರಾಳೊಂದಿಗೆ ಮದುವೆ ಮಾಡಿಸುತ್ತೇವೆ ಎಂದು ಬೆದರಿಕೆ ಹಾಕಿದ್ದಾರೆ‌. 

ಇದನ್ನೂ ಓದಿ- Bengaluru Crime: ಮಾದಕವ್ಯಸನ ಮುಕ್ತಿ ಕೇಂದ್ರ ನಡೆಸುತ್ತಿದ್ದವನಿಂದಲೇ ಡ್ರಗ್ ದಂಧೆ: ನಶೆಯಲ್ಲಿ ಪೊಲೀಸರಿಗೆ ಸಿಕ್ಕಿಕಿಬಿದ್ದ ಆಸಾಮಿ!

ಇದೇ ಸಂದರ್ಭದಲ್ಲಿ ನಿನ್ನನ್ನು ಸುಮ್ಮನೆ ಬಿಡಬೇಕಾದರೆ 3 ಲಕ್ಷ ಕೊಡು ಎಂದು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಇದರಿಂದ ಭಯಭೀತನಾದ ವ್ಯಕ್ತಿಗೆ ದಿಕ್ಕುತೋಚದಂತಾಗಿದೆ. ಕೊನೆಗೆ ಸಂತ್ರಸ್ತನ ಅಕೌಂಟ್​ನಲ್ಲಿದ್ದ 21 ಸಾವಿರ ರೂಪಾಯಿಯನ್ನು ಫೋನ್‌ ಪೇ ಮಾಡಿಸಿಕೊಂಡ ಆರೋಪಿಗಳು ಆ ವ್ಯಕ್ತಿಯನ್ನು ಬಿಟ್ಟು ಕಳುಹಿಸಿದ್ದಾರೆ. ಸದ್ಯ ಈ ಕುರಿತು ಸಂತ್ರಸ್ತ ವ್ಯಕ್ತಿ ಪುಟ್ಟೇನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿರುವ ಹಿನ್ನೆಲೆ ಎಫ್‌ಐಆರ್‌ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ತಲಾಶ್ ನಡೆಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News