Bengaluru News: ಕುಡಿದು ಪಾದಚಾರಿಗೆ ಕಾರು ಡಿಕ್ಕಿ ಹೊಡೆಸಿ ಯುವಕನಿಂದ ಕಿರಿಕ್: ಧರ್ಮದೇಟು ಕೊಟ್ಟ ಜನ

ಸ್ನೇಹಿತರೊಂದಿಗೆ ಪಾರ್ಟಿ ಮಾಡುವ ಸಲುವಾಗಿ  ಬೆಂಗಳೂರಿಗೆ ಬಂದಿದ್ದ ವ್ಯಕ್ತಿಯೊಬ್ಬ ಕುಡಿದು ಕಿರಿಕ್ ಮಾಡಿಕೊಂಡಿದ್ದಾನೆ. ಆತನ ಗ್ರಹಚಾರ ಕೆಟ್ಟು ಅಡ್ಡಗಟ್ಟಿದ ಜನರು ಸಖತ್ ಗೂಸಾ ಕೊಟ್ಟಿದ್ದಾರೆ.

Written by - VISHWANATH HARIHARA | Edited by - Manjunath N | Last Updated : Aug 4, 2023, 05:28 PM IST
  • ಮೈಸೂರಿನಿಂದ ಬೆಂಗಳೂರಿನ ಜಯನಗರಕ್ಕೆ ಸ್ನೇಹಿತರ ಭೇಟಿಗೆ ತನ್ನ ಕಾರಿನಲ್ಲಿ ಬಂದಿದ್ದಾನೆ.‌ಹೀಗೆ ಬಂದವನು ಬಂದ ಪುಟ್ಟ,
  • ಹೋದ ಪುಟ್ಟ ಎನ್ನದೇ ಬಹುದಿನಗಳ ನಂತರ ಸ್ನೇಹಿತರ ಭೇಟಿ ಮಾಡಿದ ಖುಷಿಯಲ್ಲಿ ಭರ್ಜರಿ ಪಾರ್ಟಿ ಮಾಡಿದ್ದಾನೆ.
  • ಬಳಿಕ ಕುಡಿದ ನಶೆಯಲ್ಲೇ ಕಾರು ಡ್ರೈವ್ ಮಾಡಿಕೊಂಡು ಜಯನಗರದ ನಂದಿನಿ ಜಂಕ್ಷನ್ ಬಳಿ ಬಂದು ಪಾದಚಾರಿಗೆ ಡಿಕ್ಕಿ ಹೊಡೆದಿದ್ದಾನೆ.
 Bengaluru News: ಕುಡಿದು ಪಾದಚಾರಿಗೆ ಕಾರು ಡಿಕ್ಕಿ ಹೊಡೆಸಿ ಯುವಕನಿಂದ ಕಿರಿಕ್: ಧರ್ಮದೇಟು ಕೊಟ್ಟ ಜನ title=
screengrab

ಬೆಂಗಳೂರು: ಸ್ನೇಹಿತರೊಂದಿಗೆ ಪಾರ್ಟಿ ಮಾಡುವ ಸಲುವಾಗಿ  ಬೆಂಗಳೂರಿಗೆ ಬಂದಿದ್ದ ವ್ಯಕ್ತಿಯೊಬ್ಬ ಕುಡಿದು ಕಿರಿಕ್ ಮಾಡಿಕೊಂಡಿದ್ದಾನೆ. ಆತನ ಗ್ರಹಚಾರ ಕೆಟ್ಟು ಅಡ್ಡಗಟ್ಟಿದ ಜನರು ಸಖತ್ ಗೂಸಾ ಕೊಟ್ಟಿದ್ದಾರೆ.

ಹೀಗೆ ಧರ್ಮದೇಟು ತಿಂದವನ ಹೆಸರು ವಿಷ್ಣು. ಮೂಲತಃ ಮೈಸೂರಿನ ಕುವೆಂಪುನಗರ ನಿವಾಸಿ.ಆಗಸ್ಟ್ ಒಂದರಂದು ಮೈಸೂರಿನಿಂದ ಬೆಂಗಳೂರಿನ ಜಯನಗರಕ್ಕೆ ಸ್ನೇಹಿತರ ಭೇಟಿಗೆ ತನ್ನ ಕಾರಿನಲ್ಲಿ ಬಂದಿದ್ದಾನೆ.‌ಹೀಗೆ ಬಂದವನು ಬಂದ ಪುಟ್ಟ, ಹೋದ ಪುಟ್ಟ ಎನ್ನದೇ ಬಹುದಿನಗಳ ನಂತರ ಸ್ನೇಹಿತರ ಭೇಟಿ ಮಾಡಿದ ಖುಷಿಯಲ್ಲಿ ಭರ್ಜರಿ ಪಾರ್ಟಿ ಮಾಡಿದ್ದಾನೆ. ಬಳಿಕ ಕುಡಿದ ನಶೆಯಲ್ಲೇ ಕಾರು ಡ್ರೈವ್ ಮಾಡಿಕೊಂಡು ಜಯನಗರದ ನಂದಿನಿ ಜಂಕ್ಷನ್ ಬಳಿ ಬಂದು ಪಾದಚಾರಿಗೆ ಡಿಕ್ಕಿ ಹೊಡೆದಿದ್ದಾನೆ.

ಇದನ್ನೂ ಓದಿ: ವಿಜಯಪುರ ಜಿಲ್ಲೆಗೆ ಕಾಲಿಟ್ಟ ಮದ್ರಾಸ್ ಐ ಸೊಂಕು!

ಅದೃಷ್ಟ ವಶಾತ್ ಆ ಪಾದಚಾರಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದರೆ. ಕಾರಿನಿಂದ ಇಳಿದು ಬಂದ ವಿಷ್ಣು ಕುಡಿದ ನಶೆಯಲ್ಲಿ ಪಾದಚಾರಿಯ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಕುಡಿದ ನಶೆಯಲ್ಲಿ ಪಾದಚಾರಿ‌ಗೆ ಕಾರಿನಿಂದ ಡಿಕ್ಕಿ ಹೊಡೆದಿದ್ದಲ್ಲದೇ, ಆತನ‌
ಮೇಲೆಯೇ ಹಲ್ಲೆ ನಡೆಸಲು ಮುಂದಾಗಿದ್ದ ಕಾರು ಚಾಲಕ ವಿಷ್ಣುನನ್ನ ಪ್ರಶ್ನಿಸಲು ಸ್ಥಳೀಯರು ಮುಂದಾಗಿದ್ದಾರೆ.

ಇದನ್ನೂ ಓದಿ: ಕರ್ನಾಟಕ ವಿಪಕ್ಷ ನಾಯಕನ ಸ್ಥಾನಕ್ಕೆ ಪ್ರಧಾನಿ ಮೋದಿ ಟವಲ್ ಹಾಕಿದ್ದಾರಾ?: ಕಾಂಗ್ರೆಸ್ ಟೀಕೆ

ಈ ವೇಳೆ ಕಾರು ಚಾಲಕ ವಿಷ್ಣು ಸ್ಥಳೀಯರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಮಧ್ಯದ ಕೈ ಬೆರಳು ತೋರಿಸಿ ಮತ್ತಷ್ಟು ‌ಪ್ರಚೋದಿಸಿದ್ದಾನೆ. ಈ ವೇಳೆ ತಾಳ್ಮೆ ಕಳೆದುಕೊಂಡ ಸಾರ್ವಜನಿಕರು ಕಾರು ಚಾಲಕ ವಿಷ್ಣುಗೆ ಸರಿಯಾಗಿ ಗೂಸ ಕೊಟ್ಟಿದ್ದಾರೆ. ಬಳಿಕ ಜಯನಗರ ಟಾಫಿಕ್ ಪೊಲೀಸರು ಘಟನಾ ಸ್ಥಳಕ್ಕೆ ಎಂಟ್ರಿಕೊಟ್ಟು , ಹಲ್ಲೆಗೊಳಗಾಗಿದ್ದ ಕಾರು ಚಾಲಕ ವಿಷ್ಣುನ ವಶಕ್ಕೆ ಪಡೆದು, ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಇನ್ನೂ ಕುಡಿದ ಮತ್ತಿನಲ್ಲಿ ಕಾರು ಚಲಾಯಿಸಿ, ಸಾರ್ವಜನಿಕರ ಕೈಗೆ ತಗ್ಲಾಕೊಂಡು ಹಿಗ್ಗಾಮುಗ್ಗಾ ಧರ್ಮದೇಟು ತಿಂದಿದ್ದ ಕಾರು ಚಾಲಕ ವಿಷ್ಣು ಕಾರನ್ನು ಸೀಜ್ ಮಾಡಿದ ಜಯನಗರ ಸಂಚಾರಿ ಪೊಲೀಸರು, ಡ್ರಿಂಕ್ ಡ್ರೈವ್ ಮಾಡಿ ದುರ್ವರ್ತನೆ ತೋರಿದ ಹಿನ್ನೆಲೆ ಕೇಸ್ ದಾಖಲಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News