150 ಗ್ರಾಂ ಚಿನ್ನ, 15 ಎಕರೆ ಭೂಮಿ & BMW ಬೇಡಿಕೆಯಿಂದ ಮದುವೆ ರದ್ದು: ವೈದ್ಯೆ ಆತ್ಮಹತ್ಯೆ!

Doctor suicide in Kerala: 150 ಗ್ರಾಂ ಚಿನ್ನ, 15 ಎಕರೆ ಭೂಮಿ ಮತ್ತು BMW ಕಾರು ಬೇಕೆಂಬ ವರನ ಕಡೆಯವರ ಬೇಡಿಕೆಯಿಂದ ಮದುವೆ ರದ್ದಾದ ಕಾರಣ ವೈದ್ಯೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೇರಳದ ತಿರುವನಂತಪುರದಲ್ಲಿ ನಡೆದಿದೆ.​

Written by - Puttaraj K Alur | Last Updated : Dec 7, 2023, 03:37 PM IST
  • 150 ಗ್ರಾಂ ಚಿನ್ನ, 15 ಎಕರೆ ಭೂಮಿ ಮತ್ತು BMW ಕಾರಿಗೆ ಬೇಡಿಕೆ
  • ವರದಕ್ಷಿಣೆ ಕಿರುಕುಳಕ್ಕೆ 22 ವರ್ಷದ ಯುವವೈದ್ಯೆ ಆತ್ಮಹತ್ಯೆಗೆ ಶರಣು
  • ಕೇರಳದ ತಿರುವನಂತಪುರದಲ್ಲಿ ನಡೆದಿರುವ ಆಘಾತಕಾರಿ ಘಟನೆ
150 ಗ್ರಾಂ ಚಿನ್ನ, 15 ಎಕರೆ ಭೂಮಿ & BMW ಬೇಡಿಕೆಯಿಂದ ಮದುವೆ ರದ್ದು: ವೈದ್ಯೆ ಆತ್ಮಹತ್ಯೆ! title=
ವರದಕ್ಷಿಣೆ ಕಿರುಕುಳಕ್ಕೆ ವೈದ್ಯೆ ಆತ್ಮಹತ್ಯೆ!

ನವದೆಹಲಿ: 150 ಗ್ರಾಂ ಚಿನ್ನ, 15 ಎಕರೆ ಭೂಮಿ ಮತ್ತು BMW ಕಾರು ಬೇಕೆಂಬ ವರನ ಕಡೆಯವರ ಬೇಡಿಕೆಯಿಂದ ಮದುವೆ ರದ್ದಾದ ಕಾರಣ 22 ವರ್ಷದ ವೈದ್ಯೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಕೇರಳದ ತಿರುವನಂತಪುರದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ವರದಕ್ಷಿಣೆ ಕಿರುಕುಳದಿಂದ ಮದುವೆ ರದ್ದಾದ ಕಾರಣ ಮನನೊಂದು ಯುವ ವೈದ್ಯೆ ಡಾ.ಶಹಾನಾ ಆತ್ಮಹತ್ಯೆಗೆ ಶರಣಾಗಿದ್ದಾರೆ. ವರದಕ್ಷಿಣೆ ಬೇಡಿಕೆ ಪೂರೈಸಲು ಸಾಧ್ಯವಾಗದ ಕಾರಣ ವರನು ಮದುವೆಯಾಗಲು ನಿರಾಕರಿಸಿದ ಕಾರಣ ಡಾ.ಶಹಾನಾ ಈ ನಿರ್ಧಾರ ಕೈಗೊಂಡಿದ್ದಾರೆಂದು ವರದಿಯಾಗಿದೆ.   

ಘಟನೆಯ ವಿವರ: ಡಾ.ಶಹಾನಾ ಅವರು ಕೇರಳದ ತಿರುವನಂತಪುರದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಶಸ್ತ್ರಚಿಕಿತ್ಸಾ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದರು. ಗಲ್ಫ್‌ನಲ್ಲಿ ಉದ್ಯೋಗದಲ್ಲಿದ್ದ ಅವರ ತಂದೆ 2 ವರ್ಷಗಳ ಹಿಂದಷ್ಟೇ ನಿಧನರಾಗಿದ್ದರು. ಹೀಗಾಗಿ ಶಹಾನಾ ತಮ್ಮ ತಾಯಿ ಮತ್ತು ಸಹೋದರಿಯರ ಜೊತೆ ವಾಸಿಸುತ್ತಿದ್ದಳು.

ಇದನ್ನೂ ಓದಿ: ಐಟಿ ದಾಳಿ: ₹50 ಕೋಟಿ ನೋಟು ಎಣಿಸಿ... ಎಣಿಸಿ ಸುಸ್ತಾದ ಯಂತ್ರಗಳು..!

ಶಹಾನಾ ಅವರು ಇಎ ರುವೈಸ್ ಎಂಬುವರನ್ನು ಮದುವೆಯಾಗಲು ನಿರ್ಧರಿಸಿದ್ದರು. ಆದರೆ ರುವೈಸ್ ಕುಟುಂಬಸ್ಥರು ವರದಕ್ಷಿಣೆಯಾಗಿ 150 ಗ್ರಾಂ ಚಿನ್ನ, 15 ಎಕರೆ ಭೂಮಿ ಮತ್ತು BMW ಕಾರು ನೀಡುವಂತೆ ಬೇಡಿಕೆ ಇಟ್ಟಿದರಂತೆ. ಇಷ್ಟು ದೊದ್ದ ಬೇಡಿಕೆ ಈಡೇರಿಸಲು ಶಹಾನಾ ಕುಟುಂಬಕ್ಕೆ ಆಗಿರಲಿಲ್ಲ. ಹೀಗಾಗಿ ರುವೈಸ್ ಕುಟುಂಸ್ಥರು ಮದುವೆ ರದ್ದುಗೊಳಿಸಿದ್ದರು.

ತನ್ನ ಮದುವೆ ರದ್ದಾಗಿದ್ದರಂತೆ ಮನನೊಂದ ಶಹಾನಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಸ್ಥಳೀಯರು ಆರೋಪಿಸಿದ್ದಾರೆ. ಸೂಸೈಸ್ ಮಾಡಿಕೊಳ್ಳುವ ಮುನ್ನ ಶಹಾನಾ ‘ಎಲ್ಲರಿಗೂ ಹಣ ಬೇಕು’ ಅಂತಾ ಡೆತ್‍ನೋಟ್ ಬರೆದಿಟ್ಟಿದ್ದಾಳೆ. ಈ ಸೂಸೈಡ್‍ ನೋಟ್‍ಅನ್ನು ಶಹಾನಾ ತಂಗಿದ್ದ ಅಪಾರ್ಟ್‍ಮೆಂಟ್‍ನಿಂದ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.  

ಇದನ್ನೂ ಓದಿ: Telangana New CM: ತೆಲಂಗಾಣದ ನೂತನ ಮುಖ್ಯಮಂತ್ರಿಯಾಗಿ ರೇವಂತ್ ರೆಡ್ಡಿ ಪ್ರಮಾಣವಚನ

ಇನ್ನು ವರದಕ್ಷಿಣೆ ಕಿರುಕುಳಕ್ಕೆ ಬಲಿಯಾಗಿರುವ ಶಹಾನಾ ಸಾವಿನ ಬಗ್ಗೆ ರಾಜ್ಯದ ಆರೋಗ್ಯ ಸಚಿವೆ ವೀಣಾ ಚಾರ್ಜ್ ಅವರು ತನಿಖೆಗೆ ಆದೇಶಿಸಿದ್ದಾರೆ. ರುವೈಸ್ ವಿರುದ್ಧ ಇದೀಗ ಪೊಲೀಸರು ವಿವಿಧ ಸೆಕ್ಷನ್‍ಗಳಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ.  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://youtu.be/--phA9ji8NM

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News