ಬಜೆಟ್‌ನಲ್ಲಿ ಮಾಡಲಾಗುವುದು ಪ್ರಮುಖ ಘೋಷಣೆ! ಬಡವರಿಗೆ ಸ್ವಂತ ಮನೆ ಭಾಗ್ಯ, ತೆರಿಗೆದಾರರಿಗೂ ಇರಲಿದೆ ಪರಿಹಾರ!

Expectations From Union Budget 2023: ಬಜೆಟ್ ಮಂಡನೆಗೆ ಕೆಲವೇ ದಿನಗಳು ಉಳಿದಿವೆ. ಕೇಂದ್ರ ಸರ್ಕಾರದಿಂದ ಈ ಬಾರಿಯ ಬಜೆಟ್‌ಗೆ ಸಿದ್ಧತೆಗಳು ನಡೆಯುತ್ತಿವೆ.  ಈ ಬಜೆಟ್ ನಲ್ಲಿ ಅನೇಕ ವಿಶೇಷ ಘೋಷಣೆ ಮಾಡುವ ಸಾಧ್ಯತೆ ಇದೆ.    

Written by - Ranjitha R K | Last Updated : Jan 11, 2023, 03:54 PM IST
  • ಬಜೆಟ್ ಮಂಡನೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ.
  • ಈ ಬಾರಿಯ ಬಜೆಟ್‌ಗೆ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ.
  • ಮನೆ ನೀಡಲು ಸರ್ಕಾರ ವಿಶೇಷ ಯೋಜನೆ
ಬಜೆಟ್‌ನಲ್ಲಿ ಮಾಡಲಾಗುವುದು ಪ್ರಮುಖ ಘೋಷಣೆ! ಬಡವರಿಗೆ ಸ್ವಂತ ಮನೆ ಭಾಗ್ಯ, ತೆರಿಗೆದಾರರಿಗೂ ಇರಲಿದೆ ಪರಿಹಾರ!  title=

Expectations From Union Budget 2023: ಬಜೆಟ್ ಮಂಡನೆಗೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಕೇಂದ್ರ ಸರ್ಕಾರದಿಂದ ಈ ಬಾರಿಯ ಬಜೆಟ್‌ಗೆ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ಮಾರುಕಟ್ಟೆ ತಜ್ಞರ ಪ್ರಕಾರ, ಈ ಬಾರಿ ಸರ್ಕಾರವು ತೆರಿಗೆಯಿಂದ ಹಿಡಿದು ಕೃಷಿ ರಾಸಾಯನಿಕಗಳವರೆಗೆ ಬಹುತೇಕ ಎಲ್ಲಾ ಕ್ಷೇತ್ರಗಳಿಗೆ ದೊಡ್ಡ ಮಟ್ಟದ ಘೋಷಣೆಗಳನ್ನು ಮಾಡಬಹುದು. ಇದರೊಂದಿಗೆ ಇನ್ನೂ ಮನೆ ಸಿಗದವರಿಗೆ ಮನೆ ನೀಡಲು ಸರ್ಕಾರ ವಿಶೇಷ ಯೋಜನೆಯನ್ನು ರೂಪಿಸುತ್ತಿದೆ ಎನ್ನಲಾಗಿದೆ.

ಗ್ರೋಥ್ ಮೇಲೆ ಇರಲಿದೆ ಫೋಕಸ್ : 
ವಿಶ್ಲೇಷಕ ಗೌರವ್ ಶರ್ಮಾ ಪ್ರಕಾರ, ಅಭಿವೃದ್ದಿಯ ಮೇಲೆ ಗಮನವನ್ನು ಕೇಂದ್ರಿಕರಿಸಿ ಹಣದುಬ್ಬರವನ್ನು ನಿಯಂತ್ರಿಸಲು ಯೋಜನೆಯನ್ನು ರೂಪಿಸಿಕೊಳ್ಳಬೇಕಾಗಿದೆ. ಇದರೊಂದಿಗೆ ಗ್ರಾಹಕರು ಗರಿಷ್ಠ ಸಂಖ್ಯೆಯಲ್ಲಿ ಭಾಗವಹಿಸುವ ಬಗ್ಗೆಯೂ ಸರ್ಕಾರ ಗಮನ ಹರಿಸಬೇಕು. ಸರ್ಕಾರದ ಈ ಕ್ರಮದ ಮೂಲಕ ಗ್ರಾಹಕರ ಜೇಬಿಗೆ ಹೆಚ್ಚಿನ ಹಣ ಸೇರುವಂತೆ ಮಾಡಬಹುದು. ಹೀಗಾದಾಗ ಹೂಡಿಕೆಯಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ. 

ಇದನ್ನೂ ಓದಿ : Auto Expo 2023: ಹೊಸ ಕಿಯಾ ಕಾರ್ನಿವಲ್ ಅನಾವರಣ; ವೈಶಿಷ್ಟ್ಯ, ವಿನ್ಯಾಸ & ದರ ಪರಿಶೀಲಿಸಿ

ತೆರಿಗೆ ಸ್ಲ್ಯಾಬ್‌ನಲ್ಲಿ ಬದಲಾವಣೆಯ ನಿರೀಕ್ಷೆ :
ತೆರಿಗೆ ಸ್ಲ್ಯಾಬ್ ಅನ್ನು ಬದಲಾಯಿಸುವ ಮೂಲಕ ಹೆಚ್ಚಿನ ಆದಾಯ ಗಳಿಸುವವರಿಗೆ ಪರಿಹಾರ ಸಿಗುವ ಸಾಧ್ಯತೆ ಇದೆ. ಲಿಂಕ್ಡ್ ಇನ್ಸೆಂಟಿವ್ ಯೋಜನೆಗಳ ಪ್ರೊಡಕ್ಷನ್ ಬಗ್ಗೆ ಸರ್ಕಾರ ಈಗಾಗಲೇ ಘೋಷಿಸಿದೆ. 

ಪರಿಹಾರದ ನಿರೀಕ್ಷೆಯಲ್ಲಿ ಹಲವು ಕ್ಷೇತ್ರಗಳು :  
ಎಲ್ಲಾ ನಿವಾಸಿಗಳಿಗೂ ಮನೆ ನೀಡುವತ್ತ ಸರ್ಕಾರ ಗಮನ ಹರಿಸುತ್ತಿದೆ. ಸರ್ಕಾರದ ಪ್ರಸ್ತುತ ಯೋಜನೆಗಳ ಹೊರತಾಗಿ, ಈ ಬಜೆಟ್‌ನಲ್ಲಿ ಅನೇಕ ಹೊಸ ಘೋಷಣೆಗಳನ್ನು ಜಾರಿಗೆ ತರುವ ಸಾಧ್ಯತೆ ಇದೆ. ಇದರೊಂದಿಗೆ ಪೈಪ್, ಕೇಬಲ್ ಮುಂತಾದ ಹಲವು ವಲಯಗಳ ಕೈಗಾರಿಕೆಗಳು ವೇಗ ಪಡೆಯಲಿದೆ. 

ಇದನ್ನೂ ಓದಿ : SBI-PNB-BoB ಸೇರಿದಂತೆ ಈ ಬ್ಯಾಂಕ್‌ಗಳಲ್ಲಿ ಖಾತೆ ಇದ್ದರೆ 6 ತಿಂಗಳಲ್ಲಿ ಸಿಗುತ್ತೆ ಇಷ್ಟು ಹಣ

ಕೃಷಿ ರಾಸಾಯನಿಕ ವಲಯದಲ್ಲಿ ಉತ್ತಮ ಚೇತರಿಕೆ : 
ಇದರೊಂದಿಗೆ ಕೃಷಿ ರಾಸಾಯನಿಕ ವಲಯದಲ್ಲೂ ಚೇತರಿಕೆ ಕಾಣುತ್ತಿದೆ. ಈ ವಲಯಕ್ಕೆ ಸಂಬಂಧಿಸಿದಂತೆ ಅನೇಕ ಸಕಾರಾತ್ಮಕ ಘೋಷಣೆಗಳನ್ನು  ಮಾಡಬಹುದು ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News