SBI ಗ್ರಾಹಕರಿಗೆ ಬಿಗ್ ಶಾಕ್ : ಬ್ಯಾಂಕ್ ಈ ನಿಯಮದಲ್ಲಿ ಭಾರಿ ಬದಲಾವಣೆ!

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI ನ್ಯೂಸ್) ನಲ್ಲಿ ಖಾತೆ ಹೊಂದಿರುವ ಗ್ರಾಹಕರಿಗೆ ಬಿಗ್ ಷಾಕಿಂಗ್ ನ್ಯೂಸ್ ಒಂದು ಹೊರಬೀದಿದ್ದೆ. ನೀವು ಈ ಸರ್ಕಾರಿ ಬ್ಯಾಂಕ್‌ನಲ್ಲಿ ಖಾತೆ ಇದ್ದರೆ ಮತ್ತು ಯಾವುದೇ ವ್ಯವಹಾರವಿಲ್ಲದೆ ನಿಮ್ಮ ಖಾತೆಯಿಂದ ಸ್ವಯಂಚಾಲಿತವಾಗಿ ಹಣ ಕಡಿತಗೊಳ್ಳುತ್ತಿದ್ದರೆ, ಬ್ಯಾಂಕ್ ನಿಮ್ಮ ಖಾತೆಯಿಂದ ಈ ಹಣವನ್ನು ಏಕೆ ಕಡಿತಗೊಳಿಸುತ್ತಿದೆ ಎಂದು ಈ ಕೆಳಗಿದೆ ನೋಡಿ..

Written by - Channabasava A Kashinakunti | Last Updated : Jan 19, 2023, 07:45 PM IST
  • ಖಾತೆಯಿಂದ 147.50 ರೂ.ಗಳನ್ನು ಕಡಿತ
  • ಬ್ಯಾಂಕ್ ಪ್ರತಿ ವರ್ಷ ಈ ಹಣ ಕಡಿತ
  • ಶೇ.18 ರಷ್ಟು ಜಿಎಸ್‌ಟಿ
SBI ಗ್ರಾಹಕರಿಗೆ ಬಿಗ್ ಶಾಕ್ : ಬ್ಯಾಂಕ್ ಈ ನಿಯಮದಲ್ಲಿ ಭಾರಿ ಬದಲಾವಣೆ! title=

SBI Latest News : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI ನ್ಯೂಸ್) ನಲ್ಲಿ ಖಾತೆ ಹೊಂದಿರುವ ಗ್ರಾಹಕರಿಗೆ ಬಿಗ್ ಷಾಕಿಂಗ್ ನ್ಯೂಸ್ ಒಂದು ಹೊರಬೀದಿದ್ದೆ. ನೀವು ಈ ಸರ್ಕಾರಿ ಬ್ಯಾಂಕ್‌ನಲ್ಲಿ ಖಾತೆ ಇದ್ದರೆ ಮತ್ತು ಯಾವುದೇ ವ್ಯವಹಾರವಿಲ್ಲದೆ ನಿಮ್ಮ ಖಾತೆಯಿಂದ ಸ್ವಯಂಚಾಲಿತವಾಗಿ ಹಣ ಕಡಿತಗೊಳ್ಳುತ್ತಿದ್ದರೆ, ಬ್ಯಾಂಕ್ ನಿಮ್ಮ ಖಾತೆಯಿಂದ ಈ ಹಣವನ್ನು ಏಕೆ ಕಡಿತಗೊಳಿಸುತ್ತಿದೆ ಎಂದು ಈ ಕೆಳಗಿದೆ ನೋಡಿ..

ಖಾತೆಯಿಂದ 147.50 ರೂ.ಗಳನ್ನು ಕಡಿತಗೊಳಿಸಲಾಗುತ್ತಿದೆ

ಇತ್ತೀಚಿನ ದಿನಗಳಲ್ಲಿ ಹಲವು ಗ್ರಾಹಕರ ಖಾತೆಯಿಂದ ಸ್ವಯಂಚಾಲಿತವಾಗಿ ಹಣ ಕಡಿತವಾಗುತ್ತಿರುವುದು ಕಂಡು ಬರುತ್ತಿದೆ. ಇದರೊಂದಿಗೆ 147.50 ರೂಪಾಯಿ ಕಡಿತಗೊಳಿಸುವ ಸಂದೇಶ ಬರುತ್ತಿದೆ.  ಈ SMS ನೋಡಿದ ನಂತರ ಅನೇಕ ಗ್ರಾಹಕರು ಬ್ಯಾಂಕ್ ಗೆ ಹೋಗಿ ವಿಚಾರಿಸಿರುವುದು ನೀವು ಕೂಡ ಮಾಡಿರಬಹುದು.

ಇದನ್ನೂ ಓದಿ : Income Tax : ಆದಾಯ ತೆರಿಗೆ ಉಳಿಸಲು ಇಲ್ಲಿದೆ ಸೂಪರ್‌ಹಿಟ್ ಮಾರ್ಗಗಳು!

ಬ್ಯಾಂಕ್ ಪ್ರತಿ ವರ್ಷ ಈ ಹಣ ಕಡಿತಗೊಳಿಸುತ್ತದೆ

ಈ ಬಗ್ಗೆ ಬ್ಯಾಂಕ್ ಕಡೆಯಿಂದ ಮಾಹಿತಿ ನೀಡಿದ್ದು, ಈ ಹಣವನ್ನು ಎಸ್‌ಬಿಐನಿಂದ ಗ್ರಾಹಕರ ಖಾತೆಯಿಂದ ಡೆಬಿಟ್ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಬ್ಯಾಂಕ್ ಈ ಹಣವನ್ನು ನಿರ್ವಹಣೆ ಶುಲ್ಕವಾಗಿ ತೆಗೆದುಕೊಳ್ಳುತ್ತಿದೆ. ಈ ಹಣವನ್ನು ವರ್ಷಕ್ಕೊಮ್ಮೆ ಮಾತ್ರ ಬ್ಯಾಂಕಿನಿಂದ ತೆಗೆದುಕೊಳ್ಳಲಾಗುತ್ತದೆ. ಈ ಕುರಿತು ಟ್ವೀಟ್ ಮಾಡುವ ಮೂಲಕ ಬ್ಯಾಂಕ್ ಮಾಹಿತಿ ನೀಡಿದೆ.

ಶೇ.18 ರಷ್ಟು ಜಿಎಸ್‌ಟಿ

ಈ ಹಣವನ್ನು ಬ್ಯಾಂಕಿನಿಂದ ಶುಲ್ಕವಾಗಿ ಕಡಿತಗೊಳಿಸಲಾಗುತ್ತದೆ. ಬ್ಯಾಂಕ್ ನೀಡಿದ ಡೆಬಿಟ್ ಕಾರ್ಡ್‌ಗೆ, ಗ್ರಾಹಕರಿಂದ ವಾರ್ಷಿಕ 125 ರೂ. ಇದಕ್ಕೆ ಶೇಕಡಾ 18 ರ ದರದಲ್ಲಿ ಜಿಎಸ್‌ಟಿ ಸೇರಿಸಲಾಗುತ್ತದೆ, ನಂತರ ಈ ಮೊತ್ತವು 147.50 ರೂ ಆಗುತ್ತದೆ.

ಕಾರ್ಡ್ ಬದಲಾಯಿಸಿದರೂ ಹಣ ಪಾವತಿಸಬೇಕು

ಇದಲ್ಲದೆ, ಯಾವುದೇ ಗ್ರಾಹಕರು ತಮ್ಮ ಡೆಬಿಟ್ ಕಾರ್ಡ್ ಅನ್ನು ಬದಲಾಯಿಸಲು ಬಯಸಿದರೆ, ಅದಕ್ಕಾಗಿ ಅವರು ಜಿಎಸ್ಟಿ ಶುಲ್ಕದೊಂದಿಗೆ ಬ್ಯಾಂಕ್ ಗೆ 300 ರೂ. ಪಾವತಿಸಬೇಕಾಗುತ್ತದೆ.

ಇದನ್ನೂ ಓದಿ : Old Pension : ಹಳೆಯ ಪಿಂಚಣಿ ಕುರಿತು ಮಹತ್ವದ ಮಾಹಿತಿ ಬಹಿರಂಗಪಡಿಸಿದ ರಘುರಾಮ್ ರಾಜನ್!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News