ಪ್ರತಿ ವರ್ಷ 15 ಶೇ. ದಷ್ಟು ಹೆಚ್ಚಳವಾಗುವುದು ಪಿಂಚಣಿ : ಸರ್ಕಾರದ ಘೋಷಣೆ

Pension News Update: ಪಿಂಚಣಿ ಜುಲೈ ತಿಂಗಳಲ್ಲಿ 5% ಮತ್ತು ಜನವರಿಯಲ್ಲಿ 10% ಹೆಚ್ಚಾಗುತ್ತದೆ. ಅಂದರೆ, ಇದರ ಪ್ರಕಾರ, ನೌಕರರ ಪಿಂಚಣಿ ಪ್ರತಿ ವರ್ಷ ಶೇಕಡಾ 15 ರಷ್ಟು ಹೆಚ್ಚಾಗುತ್ತದೆ. 

Written by - Ranjitha R K | Last Updated : Jul 28, 2023, 03:41 PM IST
  • Pension News Update: ಪಿಂಚಣಿ ಜುಲೈ ತಿಂಗಳಲ್ಲಿ 5% ಮತ್ತು ಜನವರಿಯಲ್ಲಿ 10% ಹೆಚ್ಚಾಗುತ್ತದೆ. ಅಂದರೆ, ಇದರ ಪ್ರಕಾರ, ನೌಕರರ ಪಿಂಚಣಿ ಪ್ರತಿ ವರ್ಷ ಶೇಕಡಾ 15 ರಷ್ಟು ಹೆಚ್ಚಾಗುತ್ತದೆ.
ಪ್ರತಿ ವರ್ಷ 15 ಶೇ. ದಷ್ಟು ಹೆಚ್ಚಳವಾಗುವುದು ಪಿಂಚಣಿ :  ಸರ್ಕಾರದ ಘೋಷಣೆ  title=

Pension News Update : ಕೇಂದ್ರ ಮತ್ತು ರಾಜ್ಯ ಸರ್ಕಾರ ಲಕ್ಷಗಟ್ಟಲೆ ಪಿಂಚಣಿದಾರರಿಗೆ ಕಾಲಕಾಲಕ್ಕೆ ಅನೇಕ ಉಡುಗೊರೆಗಳನ್ನು ನೀಡುತ್ತಿದೆ. ಇದೀಗ ರಾಜ್ಯ ಸರ್ಕಾರ ಪಿಂಚಣಿದಾರರಿಗೆ ಮತ್ತೊಂದು ಗುಡ್ ನ್ಯೂಸ್ ಹೇಳಿದೆ. ಇನ್ನು ಮುಂದೆ ನಿಮ್ಮ ಪಿಂಚಣಿಯನ್ನು ವರ್ಷಕ್ಕೆ ಎರಡು ಬಾರಿ ಹೆಚ್ಚಿಸಲಾಗುವುದು. ಪಿಂಚಣಿ ಜುಲೈ ತಿಂಗಳಲ್ಲಿ 5% ಮತ್ತು ಜನವರಿಯಲ್ಲಿ 10% ಹೆಚ್ಚಾಗುತ್ತದೆ. ಅಂದರೆ, ಇದರ ಪ್ರಕಾರ, ನೌಕರರ ಪಿಂಚಣಿ ಪ್ರತಿ ವರ್ಷ ಶೇಕಡಾ 15 ರಷ್ಟು ಹೆಚ್ಚಾಗುತ್ತದೆ. 

ಹೊಸ ಕಾನೂನು ಜಾರಿಗೆ : 
ರಾಜಸ್ಥಾನ ಸರ್ಕಾರವು ಕನಿಷ್ಠ ಆದಾಯ ಖಾತರಿ ಕಾಯ್ದೆಯನ್ನು ಜಾರಿಗೆ ತಂದಿದೆ. ಈ ಕಾನೂನನ್ನು ಜಾರಿಗೆ ತಂದ ದೇಶದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ರಾಜಸ್ಥಾನ ಪಾತ್ರವಾಗಿದೆ. ಈ ಖಾತರಿ ಕಾನೂನಿನ ಮೂಲಕ ಪ್ರತಿ ವರ್ಷ ಪಿಂಚಣಿ ಹೆಚ್ಚಾಗುತ್ತದೆ. ಇದರೊಂದಿಗೆ ಸಾಮಾಜಿಕ ಭದ್ರತೆಯ ಪಿಂಚಣಿಯನ್ನೂ ಖಾತರಿಪಡಿಸಲಾಗುವುದು. 

ಇದನ್ನೂ ಓದಿ : ನಿಮ್ಮ ಬಳಿಯೂ ಸ್ಟಾರ್ ಮಾರ್ಕ್ ಇರುವ 500 ನೋಟು ! RBI ಹೊರಡಿಸಿದೆ ಬಹು ದೊಡ್ಡ ನಿರ್ಧಾರ

2 ಕಂತುಗಳಲ್ಲಿ ಹೆಚ್ಚಳ : 
ರಾಜ್ಯ ಸರ್ಕಾರ ನೌಕರರ ಪಿಂಚಣಿಯನ್ನು ಪ್ರತಿ ವರ್ಷ 2 ಕಂತುಗಳಲ್ಲಿ ಹೆಚ್ಚಿಸುವುದಾಗಿ ತಿಳಿಸಿದೆ. ಜುಲೈ ತಿಂಗಳಲ್ಲಿ ಪಿಂಚಣಿಯಲ್ಲಿ ಶೇ 5ರಷ್ಟು ಮತ್ತು ಜನವರಿಯಲ್ಲಿ ಶೇ 10ರಷ್ಟು ಹೆಚ್ಚಳವಾಗಲಿದೆ. ಪಿಂಚಣಿ ಪಡೆದ ಒಂದು ವರ್ಷದ ನಂತರವೇ ಪಿಂಚಣಿದಾರರು ಹೆಚ್ಚಳವನ್ನು ಪಡೆಯುತ್ತಾರೆ. ಅಂದರೆ, ಅನುಮೋದನೆಯ ದಿನಾಂಕದಿಂದ 1 ವರ್ಷದ ನಂತರ ಮಾತ್ರ ಶೇಕಡಾ 15 ರಷ್ಟು ಹೆಚ್ಚಳವನ್ನು ಮಾಡಲಾಗುತ್ತದೆ.

125 ದಿನಗಳ ಕಾಲ ಕೆಲಸ ಮಾಡಬೇಕು :
ಇದರ ಜೊತೆಗೆ ಎಂಎನ್‌ಆರ್‌ಇಜಿಎ ಅಡಿಯಲ್ಲಿ ಹೆಚ್ಚುವರಿ ಉದ್ಯೋಗವೂ ಸಿಗಲಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಇನ್ನು ಮುಂದೆ 25 ದಿನಗಳ ಹೆಚ್ಚುವರಿ ಉದ್ಯೋಗ ದೊರೆಯಲಿದೆ. ಹೌದು, ಈಗ ನೀವು 125 ದಿನಗಳ ಕಾಲ ಕೆಲಸ ಮಾಡಲು ಸಾಧ್ಯವಾಗುತ್ತದೆ. 

ಕನಿಷ್ಠ ಆದಾಯ ಖಾತ್ರಿ ಕಾಯಿದೆಯ ಮೇಲೆ ನಿಗಾ ಇಡಲು ಮಂಡಳಿ  ರಚನೆ : 
ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಸಲಹಾ ಮಂಡಳಿಯನ್ನು ರಚಿಸಲಾಗಿದ್ದು, ಅವರು ಈ ಯೋಜನೆಯನ್ನು ಕಾಲಕಾಲಕ್ಕೆ ಮೇಲ್ವಿಚಾರಣೆ ಮಾಡುತ್ತಾರೆ. ಇದರಲ್ಲಿ ಗ್ರಾಮೀಣಾಭಿವೃದ್ಧಿ-ಪಂಚಾಯತಿ ರಾಜ್ ಕಾರ್ಯದರ್ಶಿ, ಸಾಮಾಜಿಕ ನ್ಯಾಯ ಸಬಲೀಕರಣ ಇಲಾಖೆ ಕಾರ್ಯದರ್ಶಿ, ಯೋಜನಾ ಇಲಾಖೆ ಕಾರ್ಯದರ್ಶಿ, ಹಣಕಾಸು ಇಲಾಖೆ ಕಾರ್ಯದರ್ಶಿ, ಸ್ವ-ಸರ್ಕಾರ ಇಲಾಖೆ ಕಾರ್ಯದರ್ಶಿಗಳನ್ನು ಸದಸ್ಯರನ್ನಾಗಿ ಮಾಡಲಾಗಿದೆ.

ಸರ್ಕಾರದ ಮೇಲೆ 2500 ಕೋಟಿ ಹೊರೆ  : 
ಇದರೊಂದಿಗೆ ಕನಿಷ್ಠ ಆದಾಯ ಖಾತ್ರಿ ಯೋಜನೆ ಜಾರಿಯಾದ ನಂತರ ರಾಜ್ಯ ಸರ್ಕಾರಕ್ಕೆ 2500 ಕೋಟಿ ರೂ.ವರೆಗೆ ಹೆಚ್ಚುವರಿ ಹೊರೆ ಬೀಳಲಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News