ನಿಮ್ಮ ವ್ಯವಹಾರವನ್ನು ಪ್ರಾರಂಭಿಸಲು ಸರ್ಕಾರದಿಂದ ಈ ರೀತಿ ಪಡೆಯಿರಿ ಸಹಾಯ

ಪ್ರಧಾನಿ ಕಿಸಾನ್ ಸಮ್ಮನ್ ನಿಧಿ ಯೋಜನೆಯ (PMKSY) ಎಲ್ಲಾ ಫಲಾನುಭವಿಗಳಿಗೆ ಕೃಷಿಗಾಗಿ ಅಗ್ಗದ ಸಾಲವನ್ನು ನೀಡಲು ಸರ್ಕಾರ ಯೋಜಿಸಿದೆ. ಯಾವುದೇ ರೈತನು ಹಣದ ಕೊರತೆಯಿಂದ ಬೇಸಾಯವನ್ನು ನಿಲ್ಲಿಸಬಾರದು ಎಂಬುದು ಇದರ ಉದ್ದೇಶ. ಪ್ರಧಾನಿ ನರೇಂದ್ರ ಮೋದಿ ಅವರು ಈ ವರ್ಷ ಪ್ರಧಾನಿ-ಕಿಸಾನ್ ಯೋಜನೆಯ ಎಲ್ಲಾ ಫಲಾನುಭವಿಗಳಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ) ನೀಡಲು ಪ್ರಾರಂಭಿಸಿದ್ದಾರೆ.  

Written by - Yashaswini V | Last Updated : Nov 26, 2020, 03:03 PM IST
  • ಕೇಂದ್ರ ಸರ್ಕಾರ ಆತ್ಮ ನಿರ್ಭಾರ್ ಭಾರತ್ ಅಭಿಯಾನದ ಅಡಿಯಲ್ಲಿ ಹಲವಾರು ಯೋಜನೆಗಳನ್ನು ಪ್ರಕಟಿಸಿದೆ.
  • ಪಿಎಂಎಂವೈ ಅಡಿಯಲ್ಲಿ ಸಣ್ಣ ಉದ್ಯಮಿಗಳು ಮತ್ತು ಅಂಗಡಿಯವರಿಗೆ ಮೂರು ಹಂತಗಳಲ್ಲಿ ಸಾಲ ಸೌಲಭ್ಯವನ್ನು ನೀಡಲಾಗುತ್ತದೆ.
  • ಬೀದಿ ಬದಿಗಳಲ್ಲಿ ವ್ಯಾಪಾರ ಮಾಡುವುದರಿಂದ ಹಿಡಿದು ಸ್ವಂತ ಅಂಗಡಿಗಳು ಅಥವಾ ಕಾರ್ಖಾನೆಗಳು ಮತ್ತು ಮೀನುಗಾರಿಕೆಗಳವರೆಗೆ ಯಾವುದೇ ರೀತಿಯ ವ್ಯವಹಾರವನ್ನು ಪ್ರಾರಂಭಿಸಲು ಸರ್ಕಾರದಿಂದ ಸಹಾಯ ದೊರೆಯಲಿದೆ.
ನಿಮ್ಮ ವ್ಯವಹಾರವನ್ನು ಪ್ರಾರಂಭಿಸಲು ಸರ್ಕಾರದಿಂದ ಈ ರೀತಿ ಪಡೆಯಿರಿ ಸಹಾಯ title=
File Image

ನವದೆಹಲಿ:  ಕೊರೊನಾ ಸಾಂಕ್ರಾಮಿಕ ಯುಗದಲ್ಲಿ ಉದ್ಯೋಗ ಕಳೆದುಕೊಂಡು ಪರದಾಡುತ್ತಿರುವವರಿಗೆ ಹಾಗೂ ಸ್ವಂತ ಉದ್ಯಮವನ್ನು ಪ್ರಾರಂಭಿಸಲು ಯೋಜಿಸುತ್ತಿರುವವರಿಗೆ ಕೇಂದ್ರ ಸರ್ಕಾರ ಆತ್ಮ ನಿರ್ಭಾರ್ ಭಾರತ್ ಅಭಿಯಾನದ ಅಡಿಯಲ್ಲಿ ಹಲವಾರು ಯೋಜನೆಗಳನ್ನು ಪ್ರಕಟಿಸಿದೆ. ಈ ಯೋಜನೆಗಳ ಮೂಲಕ ಜನರು ಸರ್ಕಾರದ ಸಹಾಯದಿಂದ ತಮ್ಮ ವ್ಯವಹಾರವನ್ನು ಪ್ರಾರಂಭಿಸಬಹುದು. ಬೀದಿ ಬದಿಗಳಲ್ಲಿ ವ್ಯಾಪಾರ ಮಾಡುವುದರಿಂದ ಹಿಡಿದು ಸ್ವಂತ ಅಂಗಡಿಗಳು ಅಥವಾ ಕಾರ್ಖಾನೆಗಳು ಮತ್ತು ಮೀನುಗಾರಿಕೆಗಳವರೆಗೆ ಯಾವುದೇ ರೀತಿಯ ವ್ಯವಹಾರವನ್ನು ಪ್ರಾರಂಭಿಸಲು ಸರ್ಕಾರದಿಂದ ಸಹಾಯ ದೊರೆಯಲಿದೆ.  ಇಂದು ನಾವು ಅಂತಹ ಕೆಲವು ಯೋಜನೆಗಳ ಬಗ್ಗೆ ಹೇಳಲಿದ್ದೇವೆ.

ಕಿಸಾನ್ ಕ್ರೆಡಿಟ್ ಕಾರ್ಡ್ (ಕೆಸಿಸಿ):
ರೈತರಿಗಾಗಿ (Farmers) ಸರ್ಕಾರ ಕೃಷಿಗೆ ಸಾಲ ವ್ಯವಸ್ಥೆ ಮಾಡಿದೆ. ಕಿಸಾನ್ ಕ್ರೆಡಿಟ್ ಕಾರ್ಡ್ (Kisan Credit Card) ಮೂಲಕ ಈ ಸಾಲವನ್ನು ಪಡೆಯಬಹುದು. ಅದರ ಮೇಲೆ ಅವರು ಕಡಿಮೆ ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. 1.60 ಲಕ್ಷ ರೂ. ಸಾಲಕ್ಕೆ ಯಾವುದೇ ಮೇಲಾಧಾರ ಅಗತ್ಯವಿಲ್ಲ. ಒಂದು ವರ್ಷ ಅಥವಾ ಪಾವತಿ ದಿನಾಂಕದವರೆಗೆ ನೀವು ಸಾಲವನ್ನು 7% ಸರಳ ಬಡ್ಡಿಯೊಂದಿಗೆ ಪಾವತಿಸಬೇಕು. ಮೂರು ಲಕ್ಷ ರೂಪಾಯಿಗಳವರೆಗೆ ಸಾಲದ ಮೇಲೆ 2% ಬಡ್ಡಿಗೆ ರಿಯಾಯಿತಿ ಇದೆ.

ನೀವು ನಿಮ್ಮ ಸಾಲವನ್ನು ಸಮಯಕ್ಕೆ ಸರಿಯಾಗಿ ಪಾವತಿಸಿದರೆ ಬಡ್ಡಿಗೆ ಹೆಚ್ಚುವರಿ 3 ಪ್ರತಿಶತದಷ್ಟು ರಿಯಾಯಿತಿ ಇರುತ್ತದೆ. ಒಂದೊಮ್ಮೆ ಸರಿಯಾದ ಸಮಯಕ್ಕೆ ಬಾಕಿ ಪಾವತಿಸದೇ ಇದ್ದರೆ ನೀವು ಬಡ್ಡಿಯನ್ನು ಪಾವತಿಸಬೇಕಾಗುತ್ತದೆ. ಎಲ್ಲಾ ರೀತಿಯ ಕೆಸಿಸಿ ಸಾಲಗಳು ಅಧಿಸೂಚಿತ ಬೆಳೆಗೆ ಕೃಷಿ ವಿಮೆಯನ್ನು ಒದಗಿಸುತ್ತವೆ. ಕೆಸಿಸಿಯಲ್ಲಿ ಉಳಿದ ಮೊತ್ತಕ್ಕೆ ಉಳಿತಾಯ ಬ್ಯಾಂಕ್ ದರದಲ್ಲಿ ಬಡ್ಡಿ ಪಾವತಿಸಲಾಗುತ್ತದೆ.

PM Kisan: ಮುಂದಿನ ತಿಂಗಳು ಯಾವ ರೈತರಿಗೆ ಸಿಗಲಿದೆ 2000ರೂ., ನಿಮ್ಮ ಹೆಸರನ್ನು ಹೀಗೆ ಪರಿಶೀಲಿಸಿ

ಪಿಎಂ ಸ್ವಾನಿಧಿ ಯೋಜನೆ (PM SVANidhi Scheme):
ಕೊರೊನಾವೈರಸ್‌ನಿಂದಾಗಿ ದೇಶದಲ್ಲಿ ಲಾಕ್‌ಡೌನ್‌ ಜಾರಿಗೆ ಬಂದಾಗಿನಿಂದ ಬೀದಿ ಬದಿ ವ್ಯಾಪಾರಿಗಳ ಬೆನ್ನನ್ನು ಮುರಿದಂತಾಗಿದೆ. ಅಂತಹ ಪರಿಸ್ಥಿತಿಯಲ್ಲಿ ಜನರಿಗೆ ಸಹಾಯ ಮಾಡಲು ಮೋದಿ ಸರ್ಕಾರ ಸ್ವಾನಿಧಿ ಯೋಜನೆಯನ್ನು ಪ್ರಾರಂಭಿಸಿದೆ. ಕರೋನಾ ಬಿಕ್ಕಟ್ಟಿನ ಮಧ್ಯೆ ಜನರು ಈ ಯೋಜನೆಯ ಲಾಭವನ್ನು ದೊಡ್ಡ ಪ್ರಮಾಣದಲ್ಲಿ ಪಡೆದುಕೊಳ್ಳುತ್ತಿದ್ದಾರೆ. ಸ್ವ ಉದ್ಯೋಗ/ಸ್ವ ವ್ಯವಹಾರ ಪ್ರಾರಂಭಿಸಲು ನಿಮಗೆ ಬಂಡವಾಳದ ಕೊರತೆ ಇದ್ದರೆ ಯಾವುದೇ ಖಾತರಿ ಇಲ್ಲದೆ ನೀವು ಪಿಎಂ ಸ್ವಾನಿಧಿ ಯೋಜನೆ (PM SVANidhi Scheme) ಯಡಿ 10,000 ರೂ.ವರೆಗೆ ಸಾಲವನ್ನು ತೆಗೆದುಕೊಳ್ಳಬಹುದು. ನಿಮ್ಮ ಹತ್ತಿರದ ಬ್ಯಾಂಕ್‌ಗೆ ಹೋಗಿ 10 ಸಾವಿರ ರೂಪಾಯಿಗಳ ಸಾಲವನ್ನು ತೆಗೆದುಕೊಳ್ಳುವ ಮೂಲಕ ನೀವು ವ್ಯವಹಾರವನ್ನು ಪ್ರಾರಂಭಿಸಬಹುದು. ಈ ಯೋಜನೆಯ ಉದ್ದೇಶ ಕೇವಲ ಸಾಲ ನೀಡುವುದು ಮಾತ್ರವಲ್ಲ, ಬೀದಿ ಬದಿ ವ್ಯಾಪಾರಿಗಳ ಒಟ್ಟಾರೆ ಅಭಿವೃದ್ಧಿ ಮತ್ತು ಆರ್ಥಿಕ ಉನ್ನತಿಯ ಹಿನ್ನೆಲೆಯಲ್ಲಿ ಇದನ್ನು ನೋಡಬೇಕು ಎಂದು ಪಿಎಂ ಮೋದಿ ಹೇಳುತ್ತಾರೆ. 

ಪ್ರಧಾನಮಂತ್ರಿ ಮುದ್ರಾ ಯೋಜನೆ:
ದೇಶದ ನುರಿತ ಯುವಕರು ಮತ್ತು ಸಣ್ಣ ಉದ್ಯಮಿಗಳಿಗೆ ತಮ್ಮ ವ್ಯವಹಾರವನ್ನು ಹೆಚ್ಚಿಸಲು ಮೋದಿ ಸರ್ಕಾರ ಪ್ರಧಾನ್ ಮಂತ್ರಿ ಮುದ್ರ ಯೋಜನೆ (PMMY) ಅನ್ನು ಪ್ರಾರಂಭಿಸಿತು. ಬ್ಯಾಂಕುಗಳ ನಿಯಮಗಳನ್ನು ಪೂರೈಸದ ಕಾರಣ ಸಾಲ ಪಡೆಯಲು ಸಾಧ್ಯವಾಗದವರಿಗೆ ವ್ಯವಹಾರ ಪ್ರಾರಂಭಿಸಲು ಈ ಯೋಜನೆ ಹೆಚ್ಚು ಉಪಯುಕ್ತವಾಗಿದೆ. ಪ್ರಧಾನ್ ಮಂತ್ರಿ ಮುದ್ರಾ ಯೋಜನೆ (ಪಿಎಂಎಂವೈ) ಅಡಿಯಲ್ಲಿ, ಕಾಟೇಜ್ ಉದ್ಯಮವನ್ನು ಹೊಂದಿರುವ ಅಥವಾ ಪಾಲುದಾರಿಕೆ ದಾಖಲೆಗಳನ್ನು ಹೊಂದಿರುವ ಪ್ರತಿಯೊಬ್ಬ ವ್ಯಕ್ತಿಯು ಸಾಲವನ್ನು ತೆಗೆದುಕೊಳ್ಳಬಹುದು.

PM Kisan Samman Nidhi: ನಿಮ್ಮ ಖಾತೆಗೆ 6000 ರೂ. ಬರದಿದ್ದರೆ ಇಲ್ಲಿ ದೂರು ನೀಡಿ

ಪಿಎಂಎಂವೈ ಅಡಿಯಲ್ಲಿ ಸಣ್ಣ ಉದ್ಯಮಿಗಳು ಮತ್ತು ಅಂಗಡಿಯವರಿಗೆ ಮೂರು ಹಂತಗಳಲ್ಲಿ ಸಾಲ ಸೌಲಭ್ಯವನ್ನು ನೀಡಲಾಗುತ್ತದೆ.

  • ಶಿಶು ಸಾಲ ಯೋಜನೆ: ಈ ಯೋಜನೆಯಡಿ  50,000 ರೂ.ವರೆಗೆ ಸಾಲ ತೆಗೆದುಕೊಳ್ಳಬಹುದು.
  • ಕಿಶೋರ್ ಸಾಲ ಯೋಜನೆ: ಈ ಯೋಜನೆಯಲ್ಲಿನ ಸಾಲದ ಮೊತ್ತವು 50,000 ರೂ.ಗಳಿಂದ 5 ಲಕ್ಷ ರೂ.
  • ತರುಣ್ ಸಾಲ ಯೋಜನೆ: ಇದರ ಅಡಿಯಲ್ಲಿ 5 ಲಕ್ಷದಿಂದ 10 ಲಕ್ಷ ರೂ.ವರೆಗೆ ಸಾಲ ನೀಡಲಾಗುತ್ತದೆ.

ಮೀನು ಸಾಕಣೆಯನ್ನು ಉತ್ತೇಜಿಸಲಾಗುತ್ತಿದೆ:


ಇದಲ್ಲದೆ ಸರ್ಕಾರವು ಮೀನು ಸಂಸ್ಕರಣೆಯನ್ನು ಉತ್ತೇಜಿಸುತ್ತಿದೆ. ಮೀನಿನ ಸಂಸ್ಕರಣೆ ಅಥವಾ ಮೀನು ವ್ಯಾಪಾರ ಮಾಡಲು ಬಯಸುವವರಿಗೆ ಕೂಡ ಕೆಸಿಸಿ ಕಾರ್ಡ್ ಸಿಗುತ್ತದೆ. 18 ರಿಂದ 75 ವರ್ಷ ವಯಸ್ಸಿನವರು ಇದಕ್ಕಾಗಿ ಅರ್ಜಿ ಸಲ್ಲಿಸಲು ಸಾಧ್ಯವಾಗುತ್ತದೆ. ಆದಾಗ್ಯೂ ಈ ಕಾರ್ಡ್ 60 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಅನ್ವಯಿಸುವುದಿಲ್ಲ. ಆದರೆ ಇದಕ್ಕೆ ಸಹ-ಅರ್ಜಿದಾರರ ಅಗತ್ಯವಿರುತ್ತದೆ, ಅವರು 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿರಬೇಕು ಎಂಬುದನ್ನು ನೆನಪಿನಲ್ಲಿಡಿ.

Trending News