ನಾನು ರಾಮನಗರದ ಅತಿಥಿ ಅಲ್ಲ, ರಾಮನಗರದ ಮನೆ ಮಗ- ಎಚ್ಡಿಕೆ

ಎರಡೂ ಕ್ಷೇತ್ರಗಳಲ್ಲೂ ನಾನು ಚುನಾವಣೆಗೆ ಸ್ಪರ್ಧೆ ಮಾಡಿರುವುದರ ಉದ್ದೇಶ, ರಾಮನಗರ-ಚನ್ನಪಟ್ಟಣ ಎರಡೂ ಕ್ಷೇತ್ರಗಳನ್ನು ಅವಳಿ ನಗರವನ್ನಾಗಿಸಿ ಕೈಗಾರಿಕೆಗಳನ್ನು ತಂದು ಅಭಿವೃದ್ಧಿ ಮಾಡುವುದು- ಎಚ್.ಡಿ. ಕುಮಾರಸ್ವಾಮಿ

Last Updated : Apr 20, 2018, 06:12 PM IST
ನಾನು ರಾಮನಗರದ ಅತಿಥಿ ಅಲ್ಲ, ರಾಮನಗರದ ಮನೆ ಮಗ- ಎಚ್ಡಿಕೆ title=

ರಾಮನಗರ/ಚನ್ನಪಟ್ಟಣ: ಚನ್ನಪಟ್ಟಣ ಹಾಗೂ ರಾಮನಗರ ವಿಧಾನಸಭಾ ಕ್ಷೇತ್ರಗಳ ಜೆಡಿಎಸ್ ಅಭ್ಯರ್ಥಿಯಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಶುಕ್ರವಾರ ನಾಮಪತ್ರ ಸಲ್ಲಿಸಿದರು. ಎರಡೂ ಕ್ಷೇತ್ರಗಳಲ್ಲೂ ನಾನು ಚುನಾವಣೆಗೆ ಸ್ಪರ್ಧೆ ಮಾಡಿರುವುದರ ಉದ್ದೇಶ, ರಾಮನಗರ-ಚನ್ನಪಟ್ಟಣ ಎರಡೂ ಕ್ಷೇತ್ರಗಳನ್ನು ಅವಳಿ ನಗರವನ್ನಾಗಿಸಿ ಕೈಗಾರಿಕೆಗಳನ್ನು ತಂದು ಅಭಿವೃದ್ಧಿ ಮಾಡುವುದು ಎಂದು ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ಪಕ್ಷದ ಕಾರ್ಯಕರ್ತರ ಒತ್ತಾಯದ ಮೇಲೆ ರಾಮನಗರ ವಿಧಾನಸಭಾ ಕ್ಷೇತ್ರದ ಜೊತೆ ಚನ್ನಪಟ್ಟಣದಲ್ಲಿ ಕೂಡಾ ನಾಮಪತ್ರ ಸಲ್ಲಿಸುತ್ತಿದ್ದೇನೆ ಎಂದ ಎಚ್ಡಿಕೆ ರಾಜ್ಯದ ಜನರ ನಾಡಿಮಿಡಿತ ದ ಪ್ರಕಾರ ಜೆಡಿಎಸ್ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸದಿಂದ ನುಡಿದರು. 

ನಾನು ಯಾರಿಗೂ ತಲೆಬಾಗೊಲ್ಲ. ನನ್ನನ್ನ ಬೆಳೆಸಿದ ಜನತೆಗೆ ತಲೆಬಾಗ್ತೀನಿ ಅಷ್ಟೆ. ರಾಮನಗರದ‌ ಜನ ನನ್ನನ್ನ ಬೆಳೆಸಿ ಅತ್ಯುನ್ನತ ಸ್ಥಾನ ಕಲ್ಪಿಸಿದ್ದೀರಿ. ಈ ಚುನಾವಣೆಯಲ್ಲೂ ನನಗೆ ನೀವುಗಳು ಹೆಚ್ಚಿನ ರೀತಿಯಲ್ಲಿ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದ  ಎಚ್.ಡಿ. ಕುಮಾರಸ್ವಾಮಿ ನಾನು ರಾಮನಗರದ ಅತಿಥಿ ಅಲ್ಲ, ರಾಮನಗರದ ಮನೆ ಮಗ ಎಂದರು.

Trending News