ಹಳ್ಳಿ ಹಕ್ಕಿ ವಿಶ್ವನಾಥ್ ಗೆ ಗಾಳ ಹಾಕಿದ ಬಿಜೆಪಿ

    

Last Updated : May 18, 2018, 02:12 PM IST
ಹಳ್ಳಿ ಹಕ್ಕಿ ವಿಶ್ವನಾಥ್ ಗೆ ಗಾಳ ಹಾಕಿದ ಬಿಜೆಪಿ title=
Photo courtesy: Facebook

ಬೆಂಗಳೂರು:  ಜೆಡಿಎಸ್ ನ ಹಿರಿಯ ಶಾಸಕ ಎಚ್ ವಿಶ್ವನಾಥಗೆ ಬಿಜೆಪಿಯು ಆಪರೇಷನ್ ಕಮಲದ ಮೂಲಕ ಗಾಳ ಹಾಕಿದೆ. ಇಂತಹ ಸುದ್ದಿಯೊಂದನ್ನು ಈಗ ಶಾಸಕ ವಿಶ್ವನಾಥ್ ಮಗ ಪೂರ್ವಜ ತಮ್ಮ ಫೇಸ್ ಬುಕ್ ಖಾತೆ ಮೂಲಕ ಈ ವಿಷಯವನ್ನು ತಿಳಿಸಿದ್ದಾರೆ.

ಬಿಜೆಪಿಯುವ ಸದನದಲ್ಲಿ ಬಹುಮತವನ್ನು ಸಾಬೀತುಪಡಿಸಬೇಕಾಗಿರುವುದರಿಂದ ಅದು ಕುದುರೆ ವ್ಯಾಪಾರಕ್ಕೆ ಕೈ  ಹಾಕಿದೆ ಎಂದು ಈಗಾಗಲೇ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಬಿಜೆಪಿಗೆ ಆರೋಪಿಸಿವೆ. ಅದರ ಭಾಗವಾಗಿ ಈಗ ಪೂರ್ವಜ್ ವಿಶ್ವನಾಥ್  ಫೇಸ್ ಬುಕ್ ನಲ್ಲಿ " ನೀವು ಕುದುರೆ ವ್ಯಾಪಾರ ಮತ್ತು ಕುದುರೆಯನ್ನು ಕೊಂಡುಕೊಳ್ಳುವುದು  ಎ.ಎಚ್.ವಿಶ್ವನಾಥ್ ರ ಬಳಿ ನಡೆಯುವುದಿಲ್ಲ..ನಾವು ಸಮರ್ಪಣಾ ಮನೋಭಾವದ ಕಾರ್ಯಕರ್ತರೆ ಹೊರತು ಅವಕಾಶವಾದಿಗಳಲ್ಲ.. ನೀವು ನಂಬುತ್ತಿರಾ  ತಂದೆಯ ಮೇಲೆ ಪ್ರಭಾವ ಬೀರಲು  ನನಗೆ ಕರೆಗಳು ಬರುತ್ತಿವೆ  ಎಂದು ಅವರು ಬರೆದುಕೊಂಡಿದ್ದಾರೆ.

ಬಿಜೆಪಿಯು ಈಗ ನಾಳೆ ಸಾಯಂಕಾಲದ ಒಳಗೆ ಬಹುಮತ ಸಾಬೀತುಪಡಿಸಬೇಕಾಗಿರುವುದರಿಂದ ಅನ್ಯ ಪಕ್ಷದ ಶಾಸಕರಿಗೆ ಗಾಳ ಹಾಕಲು ಪ್ರಯತ್ನಿಸುತ್ತಿವೆ ಎಂದು ತಿಳಿದು ಬಂದಿದೆ.

Trending News